Narendra Modi: ಪ್ರಯಾಗ್ರಾಜ್ ಕುಂಭಮೇಳದಲ್ಲಿ ತ್ರಿವೇಣಿ ಸಂಗಮದಲ್ಲಿ ಮಿಂದ ಪ್ರಧಾನಿ ನರೇಂದ್ರ ಮೋದಿ - ನೇರ ಪ್ರಸಾರ ನೋಡಿ
- ಪ್ರಧಾನಿ ನರೇಂದ್ರ ಮೋದಿ ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಪ್ರಯಾಗ್ ರಾಜ್ ಗೆ ಭೇಟಿ ಕೊಟ್ಟ ಪ್ರಧಾನಿ ಮೋದಿ ಸಂಗಮದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಮಿಂದೆದ್ದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಬುಧವಾರ ಬೆಳಿಗ್ಗೆ 10 ಗಂಟೆಗೆ ಪ್ರಯಾಗ್ರಾಜ್ ತಲುಪಿದರು. ಬೆಳಿಗ್ಗೆ 11 ಗಂಟೆ ಸುಮಾರಿಗೆ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ಗಂಗಾ ಮಾತೆಯನ್ನು ಪೂಜಿಸಿದ್ದಾರೆ. ವಿಮಾನ ನಿಲ್ದಾಣದಿಂದ 10:30 ಕ್ಕೆ ಡಿಪಿಎಸ್ ಹೆಲಿಪ್ಯಾಡ್ ತಲುಪಿ ಅಲ್ಲಿಂದ ರಸ್ತೆ ಮೂಲಕ 10:45 ಕ್ಕೆ ಅರೈಲ್ ಘಾಟ್ ತಲುಪಿದರು. ಪ್ರಧಾನಿ ಹತ್ತು ಗಂಟೆಗೆ ಸ್ನಾನಕ್ಕಾಗಿ ದೋಣಿಯಲ್ಲಿ ಸಂಗಮ್ಗೆ ಹೋಗಿದ್ದಾರೆ. ತ್ರಿವೇಣಿಯಲ್ಲಿ ಸ್ನಾನ ಮಾಡಿ 11.30 ರವರೆಗೆ ಪೂಜೆ ಸಲ್ಲಿಸಿದ ನಂತರ, ಅವರು 11:45 ಕ್ಕೆ ದೋಣಿಯ ಮೂಲಕ ಅರೈಲ್ ಘಾಟ್ ತಲುಪುತ್ತಾರೆ. ಅಲ್ಲಿಂದ ಅವರು 12 ಗಂಟೆಗೆ ಡಿಪಿಎಸ್ ಹೆಲಿಪ್ಯಾಡ್ ಮತ್ತು 12:25 ಕ್ಕೆ ಬಮ್ರೌಲಿ ವಿಮಾನ ನಿಲ್ದಾಣವನ್ನು ತಲುಪಲಿದ್ದಾರೆ. ಅವರು ಆರು ವರ್ಷಗಳ ನಂತರ ಮಹಾ ಕುಂಭದಲ್ಲಿ ಸ್ನಾನ ಮಾಡಲು ಮತ್ತೆ ಬಂದಿದ್ದಾರೆ. ಇದಕ್ಕೂ ಮೊದಲು, ಫೆಬ್ರವರಿ 24 ರಂದು 2019 ರ ಕುಂಭಮೇಳದ ಸಮಯದಲ್ಲಿ, ಅವರು ಗಂಗಾ ಸ್ನಾನ ಮಾಡಿ ನೈರ್ಮಲ್ಯ ಕಾರ್ಮಿಕರ ಪಾದಗಳನ್ನು ತೊಳೆದಿದ್ದರು.
- ಪ್ರಧಾನಿ ನರೇಂದ್ರ ಮೋದಿ ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಪ್ರಯಾಗ್ ರಾಜ್ ಗೆ ಭೇಟಿ ಕೊಟ್ಟ ಪ್ರಧಾನಿ ಮೋದಿ ಸಂಗಮದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಮಿಂದೆದ್ದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಬುಧವಾರ ಬೆಳಿಗ್ಗೆ 10 ಗಂಟೆಗೆ ಪ್ರಯಾಗ್ರಾಜ್ ತಲುಪಿದರು. ಬೆಳಿಗ್ಗೆ 11 ಗಂಟೆ ಸುಮಾರಿಗೆ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ಗಂಗಾ ಮಾತೆಯನ್ನು ಪೂಜಿಸಿದ್ದಾರೆ. ವಿಮಾನ ನಿಲ್ದಾಣದಿಂದ 10:30 ಕ್ಕೆ ಡಿಪಿಎಸ್ ಹೆಲಿಪ್ಯಾಡ್ ತಲುಪಿ ಅಲ್ಲಿಂದ ರಸ್ತೆ ಮೂಲಕ 10:45 ಕ್ಕೆ ಅರೈಲ್ ಘಾಟ್ ತಲುಪಿದರು. ಪ್ರಧಾನಿ ಹತ್ತು ಗಂಟೆಗೆ ಸ್ನಾನಕ್ಕಾಗಿ ದೋಣಿಯಲ್ಲಿ ಸಂಗಮ್ಗೆ ಹೋಗಿದ್ದಾರೆ. ತ್ರಿವೇಣಿಯಲ್ಲಿ ಸ್ನಾನ ಮಾಡಿ 11.30 ರವರೆಗೆ ಪೂಜೆ ಸಲ್ಲಿಸಿದ ನಂತರ, ಅವರು 11:45 ಕ್ಕೆ ದೋಣಿಯ ಮೂಲಕ ಅರೈಲ್ ಘಾಟ್ ತಲುಪುತ್ತಾರೆ. ಅಲ್ಲಿಂದ ಅವರು 12 ಗಂಟೆಗೆ ಡಿಪಿಎಸ್ ಹೆಲಿಪ್ಯಾಡ್ ಮತ್ತು 12:25 ಕ್ಕೆ ಬಮ್ರೌಲಿ ವಿಮಾನ ನಿಲ್ದಾಣವನ್ನು ತಲುಪಲಿದ್ದಾರೆ. ಅವರು ಆರು ವರ್ಷಗಳ ನಂತರ ಮಹಾ ಕುಂಭದಲ್ಲಿ ಸ್ನಾನ ಮಾಡಲು ಮತ್ತೆ ಬಂದಿದ್ದಾರೆ. ಇದಕ್ಕೂ ಮೊದಲು, ಫೆಬ್ರವರಿ 24 ರಂದು 2019 ರ ಕುಂಭಮೇಳದ ಸಮಯದಲ್ಲಿ, ಅವರು ಗಂಗಾ ಸ್ನಾನ ಮಾಡಿ ನೈರ್ಮಲ್ಯ ಕಾರ್ಮಿಕರ ಪಾದಗಳನ್ನು ತೊಳೆದಿದ್ದರು.