Ramanagar : ವಿದೇಶ ಪ್ರವಾಸಕ್ಕೆ ಹೋದಾಗ ಏನಾದರೂ ಹೆಚ್ಚುಕಮ್ಮಿ ಆದರೆ ನೂರಾರು ಕೋಟಿ ಆಸ್ತಿಯನ್ನ ಸಾಮಾಜಿಕ ಕಾರ್ಯಕ್ಕೆ ಬಳಸುವಂತೆ ವಿಲ್
- ವಿದೇಶ ಪ್ರವಾಸಕ್ಕೆ ತೆರಳುವ ಮುನ್ನ ನೂರಾರು ಕೋಟಿ ಮೌಲ್ಯದ ಇಡೀ ಆಸ್ತಿಯನ್ನ ರಾಮನಗರದ ಕುಟುಂಬ ವಿಲ್ ಮಾಡಿಸಿಟ್ಟಿದೆ. ರಾಮನಗರದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಟಿ ಜಿ ನರಸಿಂಹಮೂರ್ತಿ ಮತ್ತು ಕುಟುಂಬ ಈ ರೀತಿಯ ಮರಣ ಶಾಸನ ಪತ್ರ ಮಾಡಿಟ್ಟು ವಿದೇಶ ಪ್ರಯಾಣಕ್ಕೆ ಹೋಗಿದೆ. ವಿದೇಶಿ ಪ್ರವಾಸದ ವೇಳೆ ಇಡೀ ಕುಟುಂಬಕ್ಕೆ ಏನಾದರೂ ಅವಘಡ ಸಂಭವಿಸಿ, ಜೀವಂತವಾಗಿ ಇಲ್ಲದಿದ್ದರೆ ಎಂಬ ಆತಂಕದಲ್ಲಿ ಈ ವಿಲ್ ಬರೆಸಲಾಗಿದೆ. ಇತ್ತೀಚೆಗೆ ನೇಪಾಳದಲ್ಲಿ ನಡೆದ ವಿಮಾನ ದುರಂತದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಸ್ವಯಾರ್ಜಿತ ಆಸ್ತಿ, ಬ್ಯಾಂಕ್ ನಲ್ಲಿ ಇರುವ ಹಣ, ಕಟ್ಟಡಗಳು, ಜಮೀನುಗಳು, ಬ್ಯಾಂಕ್ ನಲ್ಲಿ ಇರುವ ಠೇವಣಿ, ನಿವೇಶನ, ಆಭರಣಗಳನ್ನ ಸಾಮಾಜಿಕ ಉತ್ತಮ ಕಾರ್ಯಕ್ಕೆ ವಿನಿಯೋಗ ಆಗಬೇಕು ಎಂದು ವಿಲ್ ಬರೆಸಲಾಗಿದೆ. ಸದ್ಯ ಮೇ 27 ರಿಂದ ರಷ್ಯಾ ಪ್ರವಾಸಕ್ಕೆ ಹೋಗಿರೋ ಕುಟುಂಬ ಈಗ ಫ್ರಾನ್ಸ್ ತಲುಪಿದೆ.