ಕಲರ್ಸ್‌ ಕನ್ನಡದ ಯಜಮಾನ ಹೊಸ ಸೀರಿಯಲ್‌ಗೆ ಇನ್‌ಸ್ಟಾಗ್ರಾಂ ಇನ್‌ಪ್ಲುಯೆನ್ಸರ್‌ ಮಧುಶ್ರೀ ಭೈರಪ್ಪ ನಾಯಕಿ

By Manjunath B Kotagunasi
Jan 13, 2025

Hindustan Times
Kannada

ಕಲರ್ಸ್‌ ಕನ್ನಡದಲ್ಲಿ ಯಜಮಾನ ಹೆಸರಿನ ಹೊಸ ಧಾರಾವಾಹಿ ಶುರುವಾಗ್ತಿದೆ

ಭಾನುವಾರ (ಜ. 12) ಯಜಮಾನ ಸೀರಿಯಲ್‌ನ ಮೊದಲ ಪ್ರೋಮೋ ಬಿಡುಗಡೆ ಆಗಿದೆ

ಹಿರಿಯ ನಟಿ ಶ್ರುತಿ, ನಟಿ ಸಪ್ತಮಿ ಗೌಡ ಹೊಸ ಯಜಮಾನ ಸೀರಿಯಲ್‌ ನಿರೂಪಣೆ ಮಾಡಿದ್ದಾರೆ

ಶ್ರೀಮಂತಿಕೆಯ ದರ್ಪ, ಬಡವನ ಶ್ರಮ ಈ ಕಾನ್ಸೆಪ್ಟ್‌ನಲ್ಲಿ ಯಜಮಾನ ಧಾರಾವಾಹಿ ಮೂಡಿಬರಲಿದೆ

ಸೀರಿಯಲ್‌ನಲ್ಲಿ ಆಗರ್ಭ ಶ್ರೀಮಂತೆಯಾಗಿ ಮಧುಶ್ರೀ ಭೈರಪ್ಪ ಕಾಣಿಸಿಕೊಂಡಿದ್ದಾರೆ. ಅವರ ದರ್ಪ ಹೇಗಿರಲಿದೆ ಎಂಬ ಝಲಕ್‌ ಪ್ರೋಮೋದಲ್ಲಿ ಕಂಡಿದೆ

ಗಂಡಸರನ್ನ ದ್ವೇಷಿಸೋ ಜಾನ್ಸಿ ಪಾತ್ರದಲ್ಲಿ ಮಧುಶ್ರೀ ನಟಿಸುತ್ತಿದ್ದಾರೆ. ಖಡಕ್‌ ಗತ್ತಿನ ಪಾತ್ರ ಇದಾಗಿದ್ದು,  ರಗಡ್‌ ಆಗಿಯೇ ಕಂಡಿದ್ದಾರೆ ಮಧುಶ್ರೀ

ಡೆಲಿವರಿ ಬಾಯ್‌ ಆಗಿ ಹರ್ಷ ಬಿಎಸ್‌ ನಾಯಕನಾಗಿ ಯಜಮಾನ ಧಾರಾವಾಹಿಯಲ್ಲಿದ್ದಾರೆ.

ಸದ್ಯ ಯಜಮಾನ ಸೀರಿಯಲ್‌ ಮೊದಲ ಪ್ರೋಮೋ ಬಿಡುಗಡೆ ಆಗಿದ್ದು, ಕುತೂಹಲ ಮೂಡಿಸಿದೆ

ಸದ್ಯ ಬಿಗ್‌ ಬಾಸ್‌ ಕನ್ನಡ 11 ಕೊನೇ ಹಂತಕ್ಕೆ ಬಂದಿದ್ದು, ಶೋ ಮುಗಿದ ಬಳಿಕ ಈ ಸೀರಿಯಲ್‌ ಪ್ರಸಾರ ಆರಂಭಿಸುವ  ಸಾಧ್ಯತೆ ಇದೆ

ರಾತ್ರಿ ಹೊತ್ತು ಜೀರ್ಣಕ್ರಿಯೆ ಸುಧಾರಿಸುವ ಆಹಾರಗಳು 

PEXELS