ಮಳೆಗಾಲದಲ್ಲಿ ಈ 7 ಆಹಾರಗಳಿಂದ ದೂರ ಇರಿ

By Reshma
Jun 27, 2024

Hindustan Times
Kannada

ಮಳೆಗಾಲವು ಭೂಮಿಗೆ ತಂಪು ನೀಡಿದರೂ, ಇಳೆಯಲ್ಲಿರುವ ಕೊಳೆಯನ್ನೆಲ್ಲಾ ಕೊಚ್ಚಿಕೊಂಡು ಹೋದರೂ ಸಸ್ಯವರ್ಗವನ್ನು ಕಲುಷಿತಗೊಳಿಸುತ್ತದೆ. ಆದ್ದರಿಂದ ಮಳೆಗಾಳದಲ್ಲಿ ನಾವು ತಿನ್ನುವ ಆಹಾರದ ಬಗ್ಗೆ ಸಾಕಷ್ಟು ಜಾಗೃತೆ ವಹಿಸಬೇಕು. ಮಳೆಗಾಲದಲ್ಲಿ ತಿನ್ನಬಾರದಂತಹ ಕೆಲವು ಆಹಾರಗಳಿವು. 

ಕಾರ್ಬೋನೇಟ್‌ ಅಂಶ ಇರುವ ಪಾನೀಯಗಳನ್ನು ಮಳೆಗಾಲದಲ್ಲಿ ಕುಡಿಯಬಾರದು, ಇದು ನಿರ್ಜಲೀಕರಣ ಉಂಟು ಮಾಡಿ, ಜೀರ್ಣಾಂಶ ವ್ಯವಸ್ಥೆಯನ್ನು ದುರ್ಬಲಗೊಳಿಸಬಹುದು. 

ಮಜ್ಜಿಗೆಯಲ್ಲಿ ದೇಹವನ್ನು ತಂಪು ಮಾಡುವ ಅಂಶವಿದ್ದು, ಇದು ಶೀತ ಸಂಬಂಧಿ ಕಾಯಿಲೆಗಳು ಹೆಚ್ಚಲು ಕಾರಣವಾಗಬಹುದು. ಅದಕ್ಕಾಗಿ ಮಳೆಗಾಲಕ್ಕೆ ಮಜ್ಜಿಗೆ ಒಳ್ಳೆಯದಲ್ಲ. 

ಮಳೆಗಾಲದ ವಾತಾವರಣಕ್ಕೆ ಕರಿದ ಆಹಾರಗಳು ಹೆಚ್ಚು ಇಷ್ಟವಾಗುತ್ತವೆ. ಆದರೆ ಇವನ್ನು ಅತಿಯಾಗಿ ತಿನ್ನುವುದರಿಂದ ಜೀರ್ಣಕ್ರಿಯೆ ಸಮಸ್ಯೆ ಕಾಣಿಸಬಹುದು. ಅದರಲ್ಲೂ ಹೊರಗಡೆಯಿಂದ ತಪ್ಪಿಯೂ ಕರಿದ ಆಹಾರ ಸೇವಿಸಬಾರದು. 

ಮಳೆಗಾಲದಲ್ಲಿ ಪಾಲಕ್‌, ಎಲೆಕೋಸು, ಕೊತ್ತಂಬರಿ ಸೊಪ್ಪಿನಿಂದ ಹೂಕೋಸುವಿನಂತಹ ಸೊಪ್ಪಿನ ತರಕಾರಿ ಸೇವನೆಗೆ ಒಳ್ಳೆಯದಲ್ಲ. 

ಅಣಬೆ ಬಹುತೇಕರಿಗೆ ಇಷ್ಟ. ಆದರೆ ಇದು ನೀರಿನ ಮೇಲ್ಮೈ ಮೇಲೆ ಬೆಳೆಯುವ ಕಾರಣ ಇದು ಹಲವು ರೋಗಗಳನ್ನು ಹರಡಬಹುದು. ಹಾಗಾಗಿ ಮಳೆಗಾಲದಲ್ಲಿ ಅಣಬೆ ಕೂಡ ಒಳ್ಳೆಯದಲ್ಲ. 

ಮಾನ್ಸೂನ್‌ ಋತುವಿನಲ್ಲಿ ನೀರಿನಲ್ಲಿ ಬ್ಯಾಕ್ಟೀರಿಯಾ ಮತ್ತು ರೋಗಕಾರಕಗಳು ಸಮುದ್ರಾಹಾರವನ್ನು ಕಲುಷಿತಗೊಳಿಸಬಹುದು. ಹಾಗಾಗಿ ಮೀನು, ಸಿಗಡಿಯಂತಹ ಆಹಾರ ಸೇವಿಸದೇ ಇರುವುದು ಉತ್ತಮ. 

ಮಳೆಗಾಲದಲ್ಲಿ ಹಸಿ ಪದಾರ್ಥಗಳನ್ನು ಸೇವಿಸುವುದು ಕೂಡ ಆರೋಗ್ಯಕ್ಕೆ ಉಳಿತಲ್ಲ.

ವಿಶ್ವದ ಅತ್ಯಂತ ಹಳೆಯ ನಗರಗಳು

ಇಂದಿಗೂ ಜನವಸತಿ ಇರುವ 5 ಪ್ರಾಚೀನ ನಗರಗಳಿವು

UNSPLASH, HOW STUFF WORKS