ಪರಭಾಷೆಗಳಲ್ಲಿ ಹೆಸರು, ಖ್ಯಾತಿ ಗಳಿಸಿ ಕನ್ನಡ ಕಿರುತೆರೆಗೆ ಮರಳಿರುವ ನಟ–ನಟಿಯರು 

By Reshma
Apr 28, 2025

Hindustan Times
Kannada

ಕನ್ನಡ ಕಿರುತೆರೆಯಲ್ಲಿ ನಟಿಸಿ, ಹೆಸರು–ಖ್ಯಾತಿ ಗಳಿಸಿದ ನಂತರ ಪರಭಾಷಾ ಕಿರುತೆರೆ ಕ್ಷೇತ್ರಕ್ಕೂ ತೆರಳಿ ಅಲ್ಲೂ ಹೆಸರು ಮಾಡಿರುವ ಹಲವು ನಟ–ನಟಿಯರಿದ್ದಾರೆ

ಪರಭಾಷೆಗಳಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದ್ದರೂ, ತಾಯ್ನೆಲದ ಮೇಲಿನ ಪ್ರೀತಿಯಿಂದ ಪುನಃ ಕನ್ನಡ ಕಿರುತೆರೆಗೆ ಮರಳಿ ಇಲ್ಲಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿರುವ ಕೆಲವು ನಟ–ನಟಿಯರ ಪರಿಚಯ ಇಲ್ಲಿದೆ

ಅನುಷಾ ಹೆಗ್ಡೆ: ರಾಧಾ ರಮಣ ಧಾರಾವಾಹಿಯ ದೀಪಿಕಾ ಪಾತ್ರದ ಮೂಲಕ ಕನ್ನಡಕ್ಕೆ ಪರಿಚಿತರಾದವರು. ನಂತರ ತೆಲುಗು, ತಮಿಳಿನಲ್ಲಿ ಖ್ಯಾತಿ ಗಳಿಸಿ ಸದ್ಯ ಉದಯ ವಾಹಿನಿಯ ಅನುಪಲ್ಲವಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ 

ಜೇಯ್‌ ಡಿಸೋಝಾ: ಮನೆದೇವ್ರು ಧಾರಾವಾಹಿಯ ಸೂರ್ಯನ ಪಾತ್ರದ ಮೂಲಕ ಖ್ಯಾತಿ ಗಳಿಸಿದ ಇವರು ತಮಿಳು, ತೆಲುಗು ಧಾರಾವಾಹಿಗಳಲ್ಲೂ ನಟಿಸುತ್ತಾರೆ. ಸದ್ಯ ಉದಯ ವಾಹಿನಿ ಸಿಂಧು ಭೈರವಿ ಧಾರಾವಾಹಿ ವಿರಾಟ್ ಪಾತ್ರದಲ್ಲಿ ನಟಿಸುತ್ತಿದ್ದಾರೆ  

ಮನೋಜ್ ಕುಮಾರ್‌: ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿಯ ನಾಯಕ ಮನೋಜ್‌ ಕುಮಾರ್ ಕನ್ನಡಕ್ಕೂ ಮೊದಲು ತೆಲುಗು ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು, ಇದೀಗ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸುತ್ತಿದ್ದಾರೆ 

ಯಶ್ವಂತ್ ಗೌಡ: ಕನ್ಯಾಕುಮಾರಿ ಧಾರಾವಾಹಿ ಮೂಲಕ ಕನ್ನಡದಲ್ಲಿ ಹೆಸರು ಮಾಡಿದ್ದ ಯಶ್ವಂತ್ ಗೌಡ ನಂತರ ತೆಲುಗು ಕಿರುತೆರೆಯತ್ತ ಮುಖ ಮಾಡುತ್ತಾರೆ. ಸದ್ಯ ಅವರು ಉದಯ ವಾಹಿನಿ ನಾತಿಚರಾಮಿ ಧಾರಾವಾಹಿ ಮೂಲಕ ಕನ್ನಡಕ್ಕೆ ಮರಳಿದ್ದಾರೆ  

ಶೋಭಾ ಶೆಟ್ಟಿ: ಕನ್ನಡದ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಖ್ಯಾತಿ ಪಡೆದವರು. ನಂತರ ತೆಲುಗು ಕಿರುತೆರೆ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಗಳಿಸಿ, ನಂತರ ಬಿಗ್‌ಬಾಸ್ ಸೀಸನ್ 11 ಮೂಲಕ ಮತ್ತೆ ಕನ್ನಡಕ್ಕೆ ಮರಳಿದ್ದಾರೆ

ಅನುಷಾ ರಾವ್: ಕಲರ್ಸ್ ಕನ್ನಡದ ಬ್ಲ್ಯಾಕ್ ರೋಸ್‌. ಇವರು ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಖ್ಯಾತಿ ಗಳಿಸಿ, ನಂತರ ತೆಲುಗು ಕಿರುತೆರೆ ರಂಗದಲ್ಲಿ ಖ್ಯಾತಿ ಗಳಿಸುತ್ತಾರೆ. ಅವರು ಸದ್ಯ ಕರಿಮಣಿಯ ಅರುಂಧತಿ ಹಾಗೂ ಬ್ಯ್ಲಾಕ್ ರೋಸ್ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ 

ದುರ್ಗಾಶ್ರೀ: ಕನ್ನಡದ ನೇತ್ರಾವತಿ ಧಾರಾವಾಹಿ ಮೂಲಕ ವೃತ್ತಿ ಆರಂಭಿಸಿದವರು. ನಂತರ ತೆಲುಗಿನಲ್ಲಿ ಖ್ಯಾತಿ ಗಳಿಸಿ, ಈಗ ಕನ್ನಡಕ್ಕೆ ಮರಳಿದ್ದಾರೆ. ಸದ್ಯ ವಧು ಧಾರಾವಾಹಿಯ ನಾಯಕಿ ವಧು ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. 

ಕಾಮರ್ಸ್ ವಿದ್ಯಾರ್ಥಿಗಳಿಗೆ ಲಕ್ಷ ಲಕ್ಷ ಸಂಬಳ ತಂದುಕೊಡುವ 5 ಅಧುನಿಕ ಕೋರ್ಸ್​ಗಳಿವು