ನರಸಿಂಹ ಜಯಂತಿ ದಿನ ಈ ಮಂತ್ರಗಳನ್ನು ಪಠಿಸಿದರೆ ಸಿಗುವ ಫಲಗಳಿವು

By Raghavendra M Y
May 08, 2025

Hindustan Times
Kannada

ಹಿಂದೂ ಧರ್ಮದಲ್ಲಿ ನರಸಿಂಹ ಜಯಂತಿಗೆ ವಿಶೇಷ ಮಹತ್ವವಿದೆ. ನರಸಿಂಹ ಜಯಂತಿ ಹಬ್ಬವನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಚತುರ್ದರ್ಶಿ ದಿನ ಆಚರಿಸಲಾಗುತ್ತೆ

2025 ರಲ್ಲಿ ನರಸಿಂಹ ಜಯಂತಿಯನ್ನು ಮೇ 11ರ ಭಾನುವಾರ ಆಚರಿಸಲಾಗುತ್ತೆ. ಶಾಸ್ತ್ರಗಳ ಪ್ರಕಾರ, ವಿಷ್ಣು ಧರ್ಮವನ್ನು ರಕ್ಷಿಸಲು ನರಸಿಂಹನಾಗಿ ಆವತರಿಸಿ ಹಿರಣ್ಯಕಶಿಪುವನ್ನು ಕೊಂದನು

ವಿಷ್ಣುವಿನ ನರಸಿಂಹ ಅವತಾರವನ್ನು ಅತ್ಯಂತ ಉಗ್ರ ಮತ್ತು ಮಾರಕವೆಂದು ಪರಿಗಣಿಸಲಾಗಿದೆ. ಈ ಅವತಾರದಲ್ಲಿ ಶ್ರೀ ಹರಿಯು ಮನುಷ್ಯನ ದೇಹ ಮತ್ತು ಸಿಂಹದ ರೂಪವನ್ನು ಹೊಂದಿದ್ದನು

ನರಸಿಂಹ ಜಯಂತಿ ದಿನ ಕೆಲವು ವಿಶೇಷ ಕಾರ್ಯಗಳನ್ನು ಮಾಡುವುದರಿಂದ ಮಾಟಮಂತ್ರ, ದುಷ್ಟ ಶಕ್ತಿಗಳಿಂದ ಪರಿಹಾರ ಸಿಗುತ್ತದೆ. ಈ ಬಗ್ಗೆ ತಿಳಿಯೋಣ

ನರಸಿಂಹ ಜಯಂತಿಯ ವಿಶೇಷ ದಿನದಂದು ಬೆಳಗಿನ ಸ್ನಾನದ ನಂತರ ಓಂ ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಂ ಮಂತ್ರವನ್ನು 108 ಬಾರಿ ಪಠಿಸಿ. ಈ ಮಂತ್ರ ದುಷ್ಟ ಶಕ್ತಿಗಳಿಂದ ರಕ್ಷಿಸುತ್ತೆ 

ನರಸಿಂಹ ಜಯಂತಿ ದಿನ ಪೂಜಾ ಸ್ಥಳದಲ್ಲಿ ನರಸಿಂಹ ಯಂತ್ರವನ್ನು ಸ್ಥಾಪಿಸಿ. ರೋಲಿ, ಶ್ರೀಗಂಧ, ಹೂವುಗಳನ್ನು ಅರ್ಪಿಸಿ. ಹೀಗೆ ಮಾಡಿದರೆ ಮಾಟಮಂತ್ರದಿಂದ ರಕ್ಷಿಸುತ್ತದೆ

ಈ ವಿಶೇಷ ದಿನದಂದು ಸೂರ್ಯಾಸ್ತದ ಸಮಯದಲ್ಲಿ ಹನುಮಾನ್ ಚಾಲೀಸವನ್ನು 11 ಬಾರಿ ಪಠಿಸಿ. ಇದು ನಕಾರಾತ್ಮಕ ಶಕ್ತಿಗಳನ್ನುಓಡಿಸುತ್ತದೆ

ನರಸಿಂಹ ಜಯಂತಿ ದಿನದಂದು ಬಡವರಿಗೆ ಕಪ್ಪು ಕಂಬಳಿ, ಎಳ್ಳು ಅಥವಾ ಬೆಲ್ಲವನ್ನು ದಾನ ಮಾಡಿ. ಇದು ಗ್ರಹ ದೋಷಗಳು ಮತ್ತು ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡುತ್ತೆ

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆ ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ

ಮುದ್ದಾದ ಕಂದನಿಗೆ ಎನ್ ಅಕ್ಷರದಿಂದ ಇಡಬಹುದಾದ ಹೆಸರುಗಳಿವು