ಸ್ವಪ್ನಶಾಸ್ತ್ರದ ಪ್ರಕಾರ ಕೆಲವು ವಿಚಾರಗಳನ್ನು ಕನಸಿನಲ್ಲಿ ಕಾಣುವುದು ಶುಭವಲ್ಲ. ಇದು ಅಶುಭದ ಸಂಕೇತವಾಗಿದೆ.
ಈ ರೀತಿ ಕನಸು ಬಿದ್ದರೆ ಅಹಿತಕರ ಘಟನೆ ನಡೆಯಬಹುದು ಎಂಬುದರ ಮುನ್ಸೂಚನೆಯಾಗಿದೆ. ಅಂತಹ ಕನಸುಗಳು ಯಾವುವು ನೋಡಿ.
ಮರದ ಕೊಂಬೆಯನ್ನು ಕತ್ತರಿಸುವುದು: ಈ ರೀತಿ ಕನಸು ಬಿದ್ದರೆ ಭವಿಷ್ಯದಲ್ಲಿ ನೀವು ದೊಡ್ಡ ತೊಂದರೆಗೆ ಸಿಲುಕಲಿದ್ದೀರಿ, ನಿಮ್ಮ ಕುಟುಂಬ ಸದಸ್ಯರು ಅನಾರೋಗ್ಯಕ್ಕೆ ಒಳಗಾಗುತ್ತಾರೆ ಎಂಬುದರ ಸೂಚಕವಾಗಿದೆ.
ಪ್ರೇತಗಳನ್ನು ನೋಡುವುದು: ಕನಸಿನಲ್ಲಿ ಪ್ರೇತಗಳನ್ನ ನೋಡುವುದು ಕೂಡ ಅಪಾಯಕಾರಿ ಕನಸು. ಇದು ಅನಾರೋಗ್ಯವನ್ನು ಸೂಚಿಸುತ್ತದೆ.
ಹಾಡುವ ಮಹಿಳೆ: ನೀವು ಕನಸಿನಲ್ಲಿ ಹಾಡುತ್ತಿರುವ ಮಹಿಳೆಯನ್ನು ಕಂಡರೆ ಅದು ಅಪಶಕುನ. ಇದರಿಂದ ದೊಡ್ಡ ರಸ್ತೆ ಅಪಘಾತ ಉಂಟಾಗಬಹುದು.
ನಾಗಸಾಧುಗಳು: ಕನಸಿನಲ್ಲಿ ನಾಗಸಾಧುಗಳನ್ನು ಕಾಣುವುದು ಕೂಡ ಅಶುಭ ಎಂದು ಪರಿಗಣಿಸಲಾಗಿದೆ. ಇದು ಆರ್ಥಿಕ ನಷ್ಟದ ಸೂಚನೆಯಾಗಿದೆ.
ಕಪ್ಪು ಬೆಕ್ಕು: ಕನಸಿನಲ್ಲಿ ಕಪ್ಪು ಬೆಕ್ಕು ಕಂಡರೆ ಅಶುಭದ ಸೂಚನೆಯಾಗಿದೆ. ಇದರಿಂದ ನೀವು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು.
ಮುಚ್ಚಿದ ಬಾಗಿಲು: ಕನಸಿನಲ್ಲಿ ಮುಚ್ಚಿದ ಬಾಗಿಲು ಕಂಡರೆ ವೃತ್ತಿಜೀವನದಲ್ಲಿ ತೊಂದರೆ ಎದುರಾಗುತ್ತದೆ ಎಂದು ಅರ್ಥ.
ನಿಮ್ಮ ಕೂದಲನ್ನು ನೀವೇ ಕತ್ತರಿಸಿಕೊಳ್ಳುವುದು: ಇದು ಕೂಡ ಅಶುಭದ ಸಂಕೇತ. ಇದು ಆರ್ಥಿಕ ನಷ್ಟವನ್ನು ಸೂಚಿಸುವ ಕನಸಾಗಿದೆ.
ಜಾತಕದಲ್ಲಿ ಸೂರ್ಯ ದುರ್ಬಲದಿಂದ ಆಗುವ ಪರಿಣಾಮ ಮತ್ತು ಪರಿಹಾರಗಳಿವು