ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯನ್ನು ಭಾರತದ ಬ್ಯಾಂಕಿಂಗ್ನ ತೊಟ್ಟಿಲು ಎಂದು ಕರೆಯಲಾಗುತ್ತದೆ.
ಇದಕ್ಕೆ ಕಾರಣ ದೇಶದ ಪ್ರಮುಖ ಬ್ಯಾಂಕುಗಳಲ್ಲಿ 7 ಬ್ಯಾಂಕುಗಳು ಕರಾವಳಿ ಜಿಲ್ಲೆಗಳಲ್ಲಿ ಹುಟ್ಟಿಕೊಂಡವು ಎಂಬುದು ವಿಶೇಷ.
ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ವಿಜಯಾ ಬ್ಯಾಂಕ್, ಕರ್ನಾಟಕ ಬ್ಯಾಂಕ್, ವೈಶ್ಯ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಈ ಪ್ರದೇಶದಲ್ಲಿ ಹುಟ್ಟಿಕೊಂಡವು.
ಮೇಲಿನ ಬ್ಯಾಂಕ್ಗಳ ಪಟ್ಟಿಯಲ್ಲಿ ಮೊದಲ 5 ಬ್ಯಾಂಕುಗಳು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸ್ಥಾಪನೆಯಾದವು. ಪ್ರತಿ 500 ವ್ಯಕ್ತಿಗಳಿಗೆ ಒಂದು ಶಾಖೆಯನ್ನು ತೆರೆಯಲಾಗಿತ್ತು.
1880 ಮತ್ತು 1935ರ ನಡುವೆ ಕರಾವಳಿ ಕರ್ನಾಟಕದಲ್ಲಿ 22 ಬ್ಯಾಂಕುಗಳನ್ನು ಸ್ಥಾಪಿಸಲಾಯಿತು. ಅವುಗಳಲ್ಲಿ ಒಂಬತ್ತು ಮಂಗಳೂರು ನಗರದಲ್ಲಿವೆ.
ಕರಾವಳಿ ಪ್ರದೇಶದಲ್ಲಿ ಬ್ಯಾಂಕಿಂಗ್ನ ಉಗಮ 1868ರಲ್ಲಿ ಶುರುವಾಯಿತು. ತೋಟದ ಉತ್ಪಾದನೆಯನ್ನು ರಫ್ತು ಮಾಡುವ ಬ್ರಿಟಿಷ್ ಕಂಪನಿಗಳ ಅಗತ್ಯ ಪೂರೈಸಲು ಪ್ರೆಸಿಡೆನ್ಸಿ ಬ್ಯಾಂಕ್ ಆಫ್ ಮದ್ರಾಸ್ ಒಂದು ಶಾಖೆಯನ್ನು ತೆರೆಯಿತು.
1912ರಲ್ಲಿ ಭಾರತೀಯ ಸಹಕಾರ ಸಂಘಗಳ ಕಾಯಿದೆಯಿಂದ ಬಹಳಷ್ಟು ಸಹಕಾರ ಸಂಘಗಳು ಸ್ಥಾಪನೆಗೊಂಡವು. 1905ರ ಸ್ವದೇಶಿ ಆಂದೋಲನದ ಅಂಗವಾಗಿ ಕರ್ನಾಟಕ ಬ್ಯಾಂಕನ್ನು ರಚಿಸಲಾಯಿತು.
ಭಾರತದ ಸ್ವಾತಂತ್ರ್ಯ ಚಳವಳಿ ಕೂಡಾ ಒಂದು ಪ್ರಮುಖ ಪಾತ್ರ ವಹಿಸಿದೆ. ಈ ಬ್ಯಾಂಕುಗಳು ಮೊದಮೊದಲು ಕೇವಲ ವ್ಯವಸಾಯ ಕ್ಷೇತ್ರಕ್ಕೆ ಸೀಮಿತವಾಗಿತ್ತು. ನಂತರ ಇತರ ಆರ್ಥಿಕ ವಲಯಗಳಿಗೂ ಹಬ್ಬಿಕೊಂಡಿತು.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕೆನರಾ ಬ್ಯಾಂಕ್, ವಿಜಯಾ ಬ್ಯಾಂಕ್ ಮತ್ತು ವೈಶ್ಯ ಬ್ಯಾಂಕ್ಗಳು ಬೆಂಗಳೂರಿನಲ್ಲಿ ತಮ್ಮ ಪ್ರಧಾನ ಕಚೇರಿಯನ್ನು ಹೊಂದಿವೆ.
ಕಾರ್ಪೊರೇಷನ್ ಬ್ಯಾಂಕ್ ಮತ್ತು ಕರ್ನಾಟಕ ಬ್ಯಾಂಕ್ ಮುಖ್ಯ ಕಚೇರಿ ಮಂಗಳೂರಿನಲ್ಲಿ ಹಾಗೂ ಸಿಂಡಿಕೇಟ್ ಬ್ಯಾಂಕ್ ಮುಖ್ಯ ಕಚೇರಿ ಮಣಿಪಾಲದಲ್ಲಿದೆ.