ಮನೆಯಲ್ಲಿ ಈ 3 ವಿಗ್ರಹಗಳಿದ್ದರೆ ಹಣದ ಹೊಳೆಯೇ ಹರಿದುಬರಲಿದೆ
By Rakshitha Sowmya Apr 19, 2024
Hindustan Times Kannada
ಬಹುತೇಕ ಎಲ್ಲಾ ಹಿಂದೂಗಳ ಮನೆಯಲ್ಲಿ ದೇವರ ವಿಗ್ರಹಗಳಿರುತ್ತವೆ. ಕೆಲವರು ಅಲಂಕಾರಕ್ಕೆ ಇರಿಸಿದರೆ ಕೆಲವರು ಪೂಜಿಸುತ್ತಾರೆ.
ಆದರೆ ಈ ಮೂರೂ ಪ್ರತಿಮೆಗಳು ಮನೆಯಲ್ಲಿ ಇದ್ದರೆ ನಿಮಗೆ ಹಣಕಾಸಿನ ಸಮಸ್ಯೆಯೇ ಇರುವುದಿಲ್ಲ
ಲಕ್ಷ್ಮಿವಿಗ್ರಹ: ವಾಸ್ತುಪ್ರಕಾರ ಮನೆಯಲ್ಲಿ ಲಕ್ಷ್ಮಿಯ ವಿಗ್ರಹ ಇದ್ದರೆ ಬಹಳ ಶುಭ ಎಂದು ಪರಿಗಣಿಸಲಾಗಿದೆ
ಹಿಂದೂ ಧರ್ಮದಲ್ಲಿ ಲಕ್ಷ್ಮಿಯನ್ನು ಸಂಪತ್ತಿನ ಅಧಿದೇವತೆ ಎಂದು ನಂಬಲಾಗಿದೆ
ಲಕ್ಷ್ಮೀ ವಿಗ್ರಹ ಮನೆಯಲ್ಲಿದ್ದರೆ ಮನೆಯಲ್ಲಿ ಸಮೃದ್ಧಿ ನೆಲೆಸಿರುತ್ತದೆ ಹಾಗೂ ಹಣಕಾಸಿನ ಕೊರತೆ ಇರುವುದಿಲ್ಲ
ಕುಬೇರ ವಿಗ್ರಹ: ಲಕ್ಷ್ಮೀದೇವಿಯ ಜೊತೆಗೆ ಮನೆಯಲ್ಲಿ ಸಂಪತ್ತಿನ ದೇವರು ಕುಬೇರನ ಪ್ರತಿಮೆಯನ್ನು ಇರಿಸಿಕೊಳ್ಳುವುದು ಕೂಡಾ ಬಹಳ ಒಳ್ಳೆಯದು
ಮನೆಯಲ್ಲಿ ಕುಬೇರನ ವಿಗ್ರಹವನ್ನು ನೀವು ಈಶಾನ್ಯ ದಿಕ್ಕಿನಲ್ಲಿ ಸ್ಥಾಪಿಸಿದರೆ ನಿಮಗೆ ಆರ್ಥಿಕ ಸಮಸ್ಯೆ ಇರುವುದೇ ಇಲ್ಲ
ಲಕ್ಷ್ಮೀ, ಕುಬೇರನ ವಿಗ್ರಹ ಮಾತ್ರವಲ್ಲದೆ ಪ್ರತಿ ಹಿಂದೂಗಳ ಮನೆಯಲ್ಲಿ ಗಣೇಶನ ವಿಗ್ರಹ ಇದ್ದರೆ ಒಳಿತು
ಗಣೇಶನು ಹಣಕಾಸಿನ ಸಮಸ್ಯೆಯನ್ನು ಪರಿಹರಿಸುವುದರ ಜೊತೆಗೆ ಮನೆಯಲ್ಲಿ ಸುಖ, ಸಮೃದ್ಧಿ ತರುತ್ತಾನೆ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.