ಕನ್ನಡ ಸುದ್ದಿ  /  ಮನರಂಜನೆ  /  Upendra Movie With Shivanna: ಮತ್ತೆ ಒಂದಾಗಲಿದೆ ‘ಓಂ’ ಜೋಡಿ; ಶಿವಣ್ಣನಿಗೆ ಶೀಘ್ರದಲ್ಲಿ ಆ್ಯಕ್ಷನ್- ಕಟ್ ಹೇಳಲಿದ್ದಾರೆ ಉಪೇಂದ್ರ

Upendra Movie with Shivanna: ಮತ್ತೆ ಒಂದಾಗಲಿದೆ ‘ಓಂ’ ಜೋಡಿ; ಶಿವಣ್ಣನಿಗೆ ಶೀಘ್ರದಲ್ಲಿ ಆ್ಯಕ್ಷನ್- ಕಟ್ ಹೇಳಲಿದ್ದಾರೆ ಉಪೇಂದ್ರ

HT Kannada Desk HT Kannada

Feb 27, 2023 03:14 PM IST

ಮತ್ತೆ ಒಂದಾಗಲಿದೆ ‘ಓಂ’ ಜೋಡಿ; ಶಿವಣ್ಣನಿಗೆ ಶೀಘ್ರದಲ್ಲಿ ಆ್ಯಕ್ಷನ್- ಕಟ್ ಹೇಳಲಿದ್ದಾರೆ ಉಪೇಂದ್ರ

    • ಉಪೇಂದ್ರ ನಿರ್ದೇಶನದಲ್ಲಿ ಮತ್ತೊಂದು ಸಿನಿಮಾ ಲೈನ್‌ಅಪ್‌ನಲ್ಲಿದೆ. ವಿಶೇಷ ಏನೆಂದರೆ ಈ ಚಿತ್ರದಲ್ಲಿ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ನಟಿಸಲಿದ್ದಾರಂತೆ. 
ಮತ್ತೆ ಒಂದಾಗಲಿದೆ ‘ಓಂ’ ಜೋಡಿ; ಶಿವಣ್ಣನಿಗೆ ಶೀಘ್ರದಲ್ಲಿ ಆ್ಯಕ್ಷನ್- ಕಟ್ ಹೇಳಲಿದ್ದಾರೆ ಉಪೇಂದ್ರ
ಮತ್ತೆ ಒಂದಾಗಲಿದೆ ‘ಓಂ’ ಜೋಡಿ; ಶಿವಣ್ಣನಿಗೆ ಶೀಘ್ರದಲ್ಲಿ ಆ್ಯಕ್ಷನ್- ಕಟ್ ಹೇಳಲಿದ್ದಾರೆ ಉಪೇಂದ್ರ

Upendra on Shivanna: ಸ್ಯಾಂಡಲ್‌ವುಡ್‌ ನಟ ಶಿವರಾಜ್‌ಕುಮಾರ್‌ ಮತ್ತು ರಿಯಲ್‌ ಸ್ಟಾರ್‌ ಉಪೇಂದ್ರ ಮತ್ತೆ ತೆರೆಮೇಲೆ ಕಮಾಲ್‌ ಮಾಡುವ ಸೂಚನೆ ಸಿಕ್ಕಿದೆ. ಓಂ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಲೆಗೆ ಭಾಷ್ಯ ಬರೆದಿದ್ದ ಈ ಜೋಡಿ ಇದೀಗ ಮತ್ತೆ ಒಂದಾಗುವ ಸುಳಿವು ಸಿಕ್ಕಿದೆ. ಅಂದರೆ, ಈ ವಿಚಾರವನ್ನು ಸ್ವತಃ ಉಪೇಂದ್ರ ಹೇಳಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸಂಗೀತಾ ಶೃಂಗೇರಿಗೆ ಹುಟ್ಟುಹಬ್ಬದ ಸಂಭ್ರಮ; ಡ್ರೋನ್‌ ಪ್ರತಾಪ್‌ಗೆ ರಾಖಿ ಕಟ್ಟಿ ಕಾಲಿಗೆ ಬಿದ್ದು ನಮಸ್ಕರಿಸಿದ 777 ಚಾರ್ಲಿ ಚೆಲುವೆ

ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಜತೆ ಕಿಶನ್‌ ಬಿಳಗಲಿ ನೀರಾಟ; ಯಾಕೆ ಗುರು ನಮ್‌ ಹೊಟ್ಟೆ ಉರಿಸ್ತಿಯಾ ಅಂದ್ರು ಫ್ಯಾನ್ಸ್‌

ರೌಡಿಗಳಿಂದ ಪಾರ್ಥನಿಗೆ ಪೆಟ್ಟು, ಜೈದೇವ್‌ ಮೇಲೆ ಶಕುಂತಲಾಗೆ ಸಿಟ್ಟು; ಗೌತಮ್‌-ಭೂಮಿಕಾರಿಗೆ ಚಿಕ್ಕಮಗಳೂರಿನಲ್ಲಿ ಹನಿಮೂನ್‌, ಅಮೃತಧಾರೆ ಸ್ಟೋರಿ

Brundavana Serial: ಪುಷ್ಪಾಳ ಚಿಂತೆಗೆ ಕಾರಣವಾಗಿದೆ ಭಾರ್ಗವಿ ಮಾತು; ಸತ್ಯಮೂರ್ತಿ ಕೈಯಲ್ಲಿ ಸಿಕ್ಕಿ ಬಿದ್ರು ಸಹನಾ-ಆಕಾಶ್‌

ಆರ್‌. ಚಂದ್ರು ನಿರ್ದೇಶನದಲ್ಲಿ ಮೂಡಿಬಂದಿರುವ ಕಬ್ಜ ಸಿನಿಮಾ ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ಟೀಸರ್‌, ಹಾಡುಗಳ ಮೂಲಕ ಈಗಾಗಲೇ ಸದ್ದು ಮಾಡಿರುವ ಈ ಸಿನಿಮಾ ಮಾರ್ಚ್‌ 16ರಂದು ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಹೀಗಿರುವಾಗಲೇ ಇದೇ ಚಿತ್ರದ ಇನ್ನೊಂದು ಹಾಡಿನ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗಷ್ಟೇ ಶಿಡ್ಲಘಟ್ಟದಲ್ಲಿ ನಡೆದಿತ್ತು. ಆ ಕಾರ್ಯಕ್ರಮದಲ್ಲಿ ಶಿವಣ್ಣ ಮತ್ತು ಉಪೇಂದ್ರ ಅವರ ಸಂಗಮವಾಗಿತ್ತು.

ಶಿಡ್ಲಘಟ್ಟದ ಜೂನಿಯರ್ ಕಾಲೇಜ್ ನೆಹರು ಮೈದಾನದಲ್ಲಿ ನಡೆದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಶಿವರಾಜ್‌ಕುಮಾರ್, ಗೀತಾ ಶಿವರಾಜ್‌ಕುಮಾರ್, ಆರೋಗ್ಯ ಸಚಿವ ಕೆ. ಸುಧಾಕರ್, ಸ್ಥಳೀಯ ಶಾಸಕ ಮುನಿಯಪ್ಪ, ರಾಮಚಂದ್ರ ಗೌಡ, ಹೆಚ್.ಎಂ. ರೇವಣ್ಣ, ವಿತರಕ ಆನಂದ್ ಪಂಡಿತ್ ಸೇರಿ ಅನೇಕ ಗಣ್ಯರು ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಶಿವಣ್ಣನ ಜತೆಗೆ ಸಿನಿಮಾ ಮಾಡುವ ವಿಚಾರವನ್ನು ಉಪೇಂದ್ರ ಹೇಳಿಕೊಂಡಿದ್ದಾರೆ.

ಅಪ್ಪು ಜತೆ ಸಿನಿಮಾ ಕನಸಾಗಿಯೇ ಉಳಿಯಿತು..

‘ಆದಷ್ಟು ಬೇಗ ಶಿವಣ್ಣನ ಜತೆ ಸಿನಿಮಾ ಮಾಡುತ್ತೇನೆ. ಅಪ್ಪುಗೆ ಆ್ಯಕ್ಷನ್- ಕಟ್ ಹೇಳುವ ಆಸೆ ಇತ್ತು. ಅದು ಈಡೇರಲಿಲ್ಲ. "ಕಬ್ಜ" ಬಗ್ಗೆ ಹೇಳುವುದಾದರೆ, ಇಂದಿನ ಹೀರೋ ಸಂಗೀತ ನಿರ್ದೇಶಕ ರವಿ ಬಸ್ರೂರ್. ಈ ಚಿತ್ರದಲ್ಲಿ ಅವರು ಮಾಸ್, ಕ್ಲಾಸಿಕ್ ಹಾಗೂ ಮೆಲೋಡಿ ಗೀತೆಗಳನ್ನು ಕೊಟ್ಟಿದ್ದಾರೆ. ಚಂದ್ರು ಈ ಸಿನಿಮಾ ಮೂಲಕ ಪ್ರತಿಯೊಬ್ಬರ ಹೃದಯ ಕಬ್ಜ ಮಾಡಲಿದ್ದಾರೆ. ಚಿತ್ರದಲ್ಲಿ ತುಂಬಾ ಅದ್ಭುತಗಳಿವೆ. ಪ್ರೇಕ್ಷಕರಿಗೆ ನಿಜಕ್ಕೂ ಇದು ಹಬ್ಬ. ಚಂದ್ರು ಕಥೆಯನ್ನು ಎಲ್ಲೂ ಬಿಟ್ಟು ಕೊಟ್ಟಿಲ್ಲ. ಕಥೆಯೇ ಚಿತ್ರದ ಹೈಲೈಟ್ ಎನ್ನಬಹುದು’ ಎಂದರು.

ಉಪ್ಪಿ ಜತೆ ಕೆಲಸ ಮಾಡುವುದೇ ಖುಷಿ..

ಬಳಿಕ ಮಾತನಾಡಿದ ಶಿವರಾಜಕುಮಾರ್, "ನಾನು ಉಪೇಂದ್ರ ಅಭಿಮಾನಿ. ಅವರು ‘ಓಂ’ ಸಿನಿಮಾ ಮೂಲಕ ಇಡೀ ಭಾರತಕ್ಕೆ ರೌಡಿಸಂ ಚಿತ್ರ ನೀಡಿದವರು. ಅವರ ಜೊತೆ ಕೆಲಸ ಮಾಡುವುದೇ ಖುಷಿ. ಆರ್.ಚಂದ್ರು ಕೂಡ ಅದ್ಭುತವಾದ ಸಿನಿಮಾಗಳನ್ನು ನೀಡುತ್ತಾ ಬರುತ್ತಿದ್ದಾರೆ’ ಎಂದು ತಂಡಕ್ಕೆ ಶುಭ ಹಾರೈಸಿ ಓಂ ಸಿನಿಮಾ ಡೈಲಾಗ್ ಹೇಳಿ ಕಬ್ಜದ ಚುಮ್ ಚುಮ್ ಗೀತೆಗೆ ಹೆಜ್ಜೆ ಹಾಕಿದರು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ