ಕನ್ನಡ ಸುದ್ದಿ  /  ಮನರಂಜನೆ  /  Rishab Shetty: ‘ಕುಗ್ಗಬೇಡ, ಭಯಪಡಬೇಡ, ಮುನ್ನುಗ್ಗು ನಿನ್ನ ಜತೆ ನಾನಿದ್ದೇನೆ!’ ದೈವದ ಮೊರೆ ಹೋದ ರಿಷಬ್‌ ಶೆಟ್ಟಿಗೆ ಸಿಕ್ತು ಅನುಗ್ರಹ

Rishab Shetty: ‘ಕುಗ್ಗಬೇಡ, ಭಯಪಡಬೇಡ, ಮುನ್ನುಗ್ಗು ನಿನ್ನ ಜತೆ ನಾನಿದ್ದೇನೆ!’ ದೈವದ ಮೊರೆ ಹೋದ ರಿಷಬ್‌ ಶೆಟ್ಟಿಗೆ ಸಿಕ್ತು ಅನುಗ್ರಹ

Jan 08, 2024 03:59 PM IST

Rishab Shetty: ‘ಕುಗ್ಗಬೇಡ, ಭಯಪಡಬೇಡ, ಮುನ್ನುಗ್ಗು ನಿನ್ನ ಜತೆ ನಾನಿದ್ದೇನೆ!’ ದೈವದ ಮೊರೆ ಹೋದ ರಿಷಬ್‌ ಶೆಟ್ಟಿಗೆ ಸಿಕ್ತು ಅನುಗ್ರಹ

    • ಕಾಂತಾರ ಚಿತ್ರದ ಎರಡನೇ ಭಾಗದ ಚಿತ್ರೀಕರಣದ ನಡುವೆಯೇ, ನಟ, ನಿರ್ದೇಶಕ ರಿಷಬ್ ಶೆಟ್ಟಿ ತುಳುನಾಡಿನ ದೈವದ ಮುಂದೆ ತಲೆಯೊಡ್ಡಿದ್ದಾರೆ. ಚಿತ್ರದ ವಿಚಾರದಲ್ಲಿ ಪರ- ವಿರೋಧ ಚರ್ಚೆ ಕೇಳಿಬಂದ ಬೆನ್ನಲ್ಲೇ ದೈವದ ಬಳಿ ಚಿತ್ರಕ್ಕೆ ಅನುವು ಕೇಳಿದ್ದಾರೆ ರಿಷಬ್‌ ಶೆಟ್ಟಿ.
Rishab Shetty: ‘ಕುಗ್ಗಬೇಡ, ಭಯಪಡಬೇಡ, ಮುನ್ನುಗ್ಗು ನಿನ್ನ ಜತೆ ನಾನಿದ್ದೇನೆ!’ ದೈವದ ಮೊರೆ ಹೋದ ರಿಷಬ್‌ ಶೆಟ್ಟಿಗೆ ಸಿಕ್ತು ಅನುಗ್ರಹ
Rishab Shetty: ‘ಕುಗ್ಗಬೇಡ, ಭಯಪಡಬೇಡ, ಮುನ್ನುಗ್ಗು ನಿನ್ನ ಜತೆ ನಾನಿದ್ದೇನೆ!’ ದೈವದ ಮೊರೆ ಹೋದ ರಿಷಬ್‌ ಶೆಟ್ಟಿಗೆ ಸಿಕ್ತು ಅನುಗ್ರಹ

Rishab Shetty: ಕಾಂತಾರ ಸಿನಿಮಾ ಮಾಡುವಾಗ, ಆ ಚಿತ್ರ ಕೈಗೆತ್ತಿಕೊಳ್ಳುವುದಕ್ಕೂ ಮುನ್ನ ಚಿತ್ರ ನಿರ್ಮಾಣದ ವಿಚಾರವನ್ನು ದೈವದ ಬಳಿ ಇಟ್ಟಿದ್ದರು ರಿಷಬ್‌ ಶೆಟ್ಟಿ. ಆವತ್ತು ದೈವದ ಆಶೀರ್ವಾದವೂ ಸಿಕ್ಕಿತ್ತು. ಅದರಂತೆ ಕರ್ನಾಟಕ ಮಾತ್ರವಲ್ಲ ಇಡೀ ದೇಶವೇ ಕಾಂತಾರ ಚಿತ್ರವನ್ನು ಹೊತ್ತು ಮೆರೆಸಿತ್ತು. ಇದೀಗ, ಎರಡನೇ ಭಾಗದ ಚಿತ್ರೀಕರಣದ ವೇಳೆ ಮತ್ತೆ ದೈವದ ಮೊರೆ ಹೋಗಿದ್ದಾರೆ ರಿಷಬ್‌. ಈ ಸಲ ದೈವದ ಉತ್ತರ ಏನಿತ್ತು? ಮುಂದೆ ಓದಿ.

ಟ್ರೆಂಡಿಂಗ್​ ಸುದ್ದಿ

ಎಂಡೊಮೆಟ್ರಿಯೋಸಿಸ್ ಶಸ್ತ್ರಚಿಕಿತ್ಸೆಗೆ ಒಳಗಾದ ನಟಿ ಶಮಿತಾ ಶೆಟ್ಟಿ; ಏನಿದು ಕಾಯಿಲೆ? ಮಹಿಳೆಯರೇ ಎಚ್ಚರವಹಿಸಿ ಎಂದ ಶಿಲ್ಪಾ ಶೆಟ್ಟಿ ಸಹೋದರಿ

ಶಿವಶರಣ ಮೋಳಿಗೆ ಮಾರಯ್ಯ ಸಿನಿಮಾಕ್ಕೆ ಕೊಪ್ಪಳ ಶ್ರೀಗವಿ ಸಿದ್ದೇಶ್ವರ ಮಠದ ಶ್ರೀಗಳಿಂದ ಚಾಲನೆ, ಶರಣ ತತ್ತ್ವಕ್ಕೆ ಮನಸೋತ ಕಾಶ್ಮೀರದ ರಾಜನ ಕಥೆ

ರಣಬೀರ್‌ ಕಪೂರ್‌ ನಟನೆಯ ರಾಮಾಯಣದ ಬಜೆಟ್‌ ಬರೋಬ್ಬರಿ 835 ಕೋಟಿ ರೂ.; ಈ ಸಿನಿಮಾ ಬಿಡುಗಡೆ ಯಾವಾಗ? ಇಲ್ಲಿದೆ ವಿವರ

ಸಂಗೀತಾ ಶೃಂಗೇರಿಗೆ ಹುಟ್ಟುಹಬ್ಬದ ಸಂಭ್ರಮ; ಡ್ರೋನ್‌ ಪ್ರತಾಪ್‌ಗೆ ರಾಖಿ ಕಟ್ಟಿ ಕಾಲಿಗೆ ಬಿದ್ದು ನಮಸ್ಕರಿಸಿದ 777 ಚಾರ್ಲಿ ಚೆಲುವೆ

ಪ್ಯಾನ್ ಇಂಡಿಯಾ ಸಿನಿಮಾ ಆಗಿ ದೇಶಾದ್ಯಂತ ಗಮನಸೆಳೆದ ಕಾಂತಾರ ಚಿತ್ರದ ಎರಡನೇ ಭಾಗ ಚಿತ್ರೀಕರಣ ಹಂತದಲ್ಲಿದೆ. ಇದರ ನಡುವಲ್ಲೇ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ತುಳುನಾಡಿನ ದೈವದ ಮುಂದೆ ತಲೆಯೊಡ್ಡಿದ್ದಾರೆ. ಚಿತ್ರದ ವಿಚಾರದಲ್ಲಿ ಪರ- ವಿರೋಧ ಚರ್ಚೆ ಇರುವಾಗಲೇ ರಿಷಬ್ ಶೆಟ್ಟಿ ದೈವದಲ್ಲಿ ಚಿತ್ರಕ್ಕೆ ಅನುವು ಕೇಳಿರುವುದು ಕುತೂಹಲ ಮೂಡಿಸಿದೆ.

ಕಾಂತಾರ ಚಿತ್ರದ ಎರಡನೇ ಭಾಗ ಕೆಲವರ ವಿರೋಧ ನಡುವೆಯೇ ಭಾರೀ ಕುತೂಹಲ ಮೂಡಿಸಿದೆ. ಇತ್ತೀಚೆಗೆ ಟೀಸರ್ ಬಂದಾಗಲೇ ಅನಾದಿ ಕಾಲದ ಚಿತ್ರಣವೇ ಚಿತ್ರದ ಕಥಾವಸ್ತು ಎನ್ನುವ ಮಾತು ಕೇಳಿಬಂದಿತ್ತು. ಈ ನಡುವೆ, ಚಿತ್ರೀಕರಣ ಬಿಟ್ಟು ಇನ್ನಾವುದೇ ಕೆಲಸಕ್ಕೂ ಹೊರ ಬರುವುದೇ ಇಲ್ಲ ಎಂದಿದ್ದ ನಟ, ನಿರ್ದೇಶಕ ರಿಷಬ್ ಶೆಟ್ಟಿ ದಿಢೀರ್ ಆಗಿ ದೈವದ ಮುಂದೆ ಕಾಣಿಸಿಕೊಂಡಿದ್ದಾರೆ. ‌ಇತ್ತೀಚೆಗೆ ಮಂಗಳೂರಿನ ಗುರುಪುರ ಮಠದ ವಾರ್ಷಿಕ ಉತ್ಸವದಲ್ಲಿ ಮೈಸಂದಾಯ ಮತ್ತು ಪಂಜುರ್ಲಿ ದೈವದ ಕೋಲದ ಸಂದರ್ಭದಲ್ಲಿ ದೈವದ ಅಭಯ ಕೋರಿ ಆಶೀರ್ವಾದ ಕೇಳಿದ್ದಾರೆ.

ಮಧ್ಯರಾತ್ರಿ ವೇಳೆ ನಡೆದ ಮೈಸಂದಾಯ ದೈವದ ಕೋಲ ಮತ್ತು ನಸುಕಿನಲ್ಲಿ ನಡೆದ ಪಂಜುರ್ಲಿ ದೈವದ ಕೋಲ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಬಂದು ಕಾಂತಾರ ಸಿನಿಮಾದ ಬಗ್ಗೆ ಕೆಲವು ಪ್ರಾರ್ಥನೆ ಮಾಡಿದ್ದಾರೆ. ಕಾಂತಾರ ಚಿತ್ರದ ಎರಡನೇ ಭಾಗದಲ್ಲಿ 12ನೇ ಶತಮಾನದ ಐತಿಹ್ಯಗಳನ್ನು ಕತೆಯಾಗಿ ತೋರಿಸುತ್ತಿದ್ದಾರೆ ಎನ್ನಲಾಗುತ್ತಿದ್ದು, ಚಿತ್ರೀಕರಣ ಸಂದರ್ಭ ಯಾವುದೇ ಅಡ್ಡಿ ಆಗದಿರಲಿ ಎಂದು ರಿಷಬ್ ಶೆಟ್ಟಿ ದೈವಗಳ ಮುಂದೆ ಪ್ರಾರ್ಥಿಸಿದ್ದಾರೆ. ಇದೇ ವೇಳೆ, ತುಳುನಾಡಿನ ಕಾರಣಿಕ ದೈವಗಳು ಚಿತ್ರದ ವಿಚಾರದಲ್ಲಿ ಯಾವುದೇ ಭಯ ಪಟ್ಟುಕೊಳ್ಳುವುದು ಬೇಡ ಎಂದು ಅಭಯ ನೀಡಿದೆ.

ಕಾಂತಾರ ಚಿತ್ರ ಹಿಟ್ ಆಗಿದ್ದರಿಂದ ಕರಾವಳಿಯ ದೈವಗಳ ಕಾರಣಿಕ, ತುಳುನಾಡಿನ ವಿಶಿಷ್ಟ ಸಂಸ್ಕೃತಿ ಜಗತ್ತಿನ ಗಮನಸೆಳೆದಿತ್ತು. ಇದೇ ಕಾರಣಕ್ಕೆ ರಾಜ್ಯದ ಹೊರಗಿನವರೂ ದೈವಗಳ ಬಗ್ಗೆ ಆಕರ್ಷಿತರಾಗಿದ್ದಾರೆ. ಇದೀಗ ಚಿತ್ರದ ಎರಡನೇ ಭಾಗದಲ್ಲಿ ಅನಾದಿ ಕಾಲದ ಸನ್ನಿವೇಶಗಳ ಚಿತ್ರೀಕರಣದ ಮಧ್ಯೆಯೇ ಸ್ವತಃ ನಟಿಸಿ, ನಿರ್ದೇಶನದ ಹೊಣೆ ಹೊತ್ತಿರುವ ರಿಷಬ್ ಶೆಟ್ಟಿ ದೈವ ಬಳಿ ಬಂದು ಆಶೀರ್ವಾದ ಕೋರಿದ್ದು ಕುತೂಹಲ ಮೂಡಿಸಿದೆ. ಈ ಹಿಂದೆ ಕಾಂತಾರ ಚಿತ್ರದ ಯಶಸ್ಸಿಗಾಗಿ ಪಂಜುರ್ಲಿ ದೈವಕ್ಕೆ ಕೋಲದ ಹರಕೆ ತೀರಿಸಿದ್ದ ರಿಷಬ್ ಶೆಟ್ಟಿ, ಈ ಬಾರಿ ಸದ್ದಿಲ್ಲದೆ ಅಪರಾತ್ರಿಯಲ್ಲಿ ಬಂದು ದೈವಗಳ ಮುಂದೆ ಕಾಣಿಸಿಕೊಂಡು ಹಿಂದಕ್ಕೆ ತೆರಳಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ