ಕನ್ನಡ ಸುದ್ದಿ  /  ಕರ್ನಾಟಕ  /  World Cancer Day: ಇಂದು ವಿಶ್ವ ಕ್ಯಾನ್ಸರ್‌ ದಿನ; ಕ್ಯಾನ್ಸರ್‌ ಕಾರಕಗಳ ವಿವರ, ಆರೋಗ್ಯಕರ ಜೀವನಕ್ಕೆ ಸೂತ್ರಗಳೇನು? ಇಲ್ಲಿದೆ ವಿವರ

World Cancer Day: ಇಂದು ವಿಶ್ವ ಕ್ಯಾನ್ಸರ್‌ ದಿನ; ಕ್ಯಾನ್ಸರ್‌ ಕಾರಕಗಳ ವಿವರ, ಆರೋಗ್ಯಕರ ಜೀವನಕ್ಕೆ ಸೂತ್ರಗಳೇನು? ಇಲ್ಲಿದೆ ವಿವರ

HT Kannada Desk HT Kannada

Feb 04, 2023 02:51 PM IST

ವಿಶ್ವ ಕ್ಯಾನ್ಸರ್‌ ದಿನ (ಸಾಂಕೇತಿಕ ಚಿತ್ರ)

  • World Cancer Day: ವಿಶ್ವ ಆರೋಗ್ಯ ಸಂಸ್ಥೆ (WHO) ವರದಿ 2022ರ ಪ್ರಕಾರ, ಸಾಂಕ್ರಾಮಿಕವಲ್ಲದ ರೋಗಗಳು (NCD) ವಾರ್ಷಿಕವಾಗಿ 41 ದಶಲಕ್ಷ ಸಾವುಗಳಿಗೆ ಕಾರಣವಾಗಿದೆ. ಇದು ಪ್ರಪಂಚದಾದ್ಯಂತ ಶೇಕಡ 74 ಸಾವುಗಳಿಗೆ ಸಮನಾಗಿದೆ. ಹಾಗಾಗಿ, ನಮ್ಮ ದೇಶ/ರಾಜ್ಯದಲ್ಲಿ ಸಾಂಕ್ರಾಮಿಕವಲ್ಲದ ಕಾಯಿಲೆಗಳು ನಿರ್ದಿಷ್ಟವಾಗಿ ಕ್ಯಾನ್ಸರ್ ಕಾಯಿಲೆ ಹರಡುವುದನ್ನು ತಡೆಯಲು ಏನು ಮಾಡಬೇಕು?

ವಿಶ್ವ ಕ್ಯಾನ್ಸರ್‌ ದಿನ (ಸಾಂಕೇತಿಕ ಚಿತ್ರ)
ವಿಶ್ವ ಕ್ಯಾನ್ಸರ್‌ ದಿನ (ಸಾಂಕೇತಿಕ ಚಿತ್ರ) (unsplash)

ಇಂದು ವಿಶ್ವ ಕ್ಯಾನ್ಸರ್‌ ದಿನ (World Cancer Day). ಕ್ಯಾನ್ಸರ್‌ ರೋಗದ ಕುರಿತು ಜನಜಾಗೃತಿ ಮೂಡಿಸುವುದು ಈ ದಿನಾಚರಣೆಯ ಉದ್ದೇಶ. ಕಳೆದ ಒಂದು ದಶಕದಲ್ಲಿ ಸಾಂಕ್ರಾಮಿಕವಲ್ಲದ ರೋಗಗಳಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿ. ವಿಶ್ವ ಆರೋಗ್ಯ ಸಂಸ್ಥೆ (WHO) ವರದಿ 2022ರ ಪ್ರಕಾರ, ಸಾಂಕ್ರಾಮಿಕವಲ್ಲದ ರೋಗಗಳು (NCD) ವಾರ್ಷಿಕವಾಗಿ 41 ದಶಲಕ್ಷ ಸಾವುಗಳಿಗೆ ಕಾರಣವಾಗಿದೆ. ಇದು ಪ್ರಪಂಚದಾದ್ಯಂತ ಶೇಕಡ 74 ಸಾವುಗಳಿಗೆ ಸಮನಾಗಿದೆ. ಈ ಅಕಾಲಿಕ ಮರಣಗಳಲ್ಲಿ ಶೇಕಡ 86 ಮಧ್ಯಮ ಮತ್ತು ಕಡಿಮೆ ಆದಾಯ ಹೊಂದಿದ ದೇಶಗಳಲ್ಲಿ ಸಂಭವಿಸುತ್ತಿವೆ. ಹಾಗಾಗಿ, ನಮ್ಮ ದೇಶ/ರಾಜ್ಯದಲ್ಲಿ ಸಾಂಕ್ರಾಮಿಕವಲ್ಲದ ಕಾಯಿಲೆಗಳು ನಿರ್ದಿಷ್ಟವಾಗಿ ಕ್ಯಾನ್ಸರ್ ಕಾಯಿಲೆ ಹರಡುವುದನ್ನು ತಡೆಯಲು ಏನು ಮಾಡಬೇಕು?

ಟ್ರೆಂಡಿಂಗ್​ ಸುದ್ದಿ

Bangalore News: ಬೆಂಗಳೂರಿನ ಪ್ರತಿಷ್ಠಿತ ಜೈನ್ ಹೆರಿಟೇಜ್ ಶಾಲೆಗೆ ಹುಸಿ ಬಾಂಬ್ ಬೆದರಿಕೆ ಸಂದೇಶ; ಆತಂಕದ ವಾತಾವರಣ

Mangalore News: ಮಂಗಳೂರು ನಗರಕ್ಕೆ ಬೇಕಿವೆ ತಂಗುದಾಣಗಳು, ಬಸ್‌ಗೆ ಕಾಯುವವರ ಸಂಕಟ ಕೇಳೋರು ಯಾರು

Indian Railways: ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಬೀದರ್‌ನ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ, ಯಾವ ರೈಲು, ಎಲ್ಲಿಯವರೆಗೆ

Bangalore News: ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯಲ್ಲಿ ವೇಗವಾಗಿ ವಾಹನ ಚಾಲನೆ ಮಾಡಿದರೆ ದಂಡ ಕಟ್ಟ ಬೇಕಾದೀತು, ಹುಷಾರು

ಸಾರ್ವಜನಿಕರಿಗೆ ರೋಗಗಳ ಬಗ್ಗೆ ಸೂಕ್ತ ತಿಳಿವಳಿಕೆ ನೀಡುವುದು ಮತ್ತು ಸೂಕ್ತ ಸಮಯಕ್ಕೆ ಸರಳವಾದ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ವೆಚ್ಚ ಪರಿಣಾಮಕಾರಿ ರೀತಿಯಲ್ಲಿ ಅನೇಕ ಅಮೂಲ್ಯ ಜೀವಗಳನ್ನು ಉಳಿಸಬಹುದು ಎಂದು ಇತ್ತೀಚೆಗೆ ಕೋವಿಡ್ ನಿರ್ವಹಣೆಯಿಂದ ಸಾಬೀತಾಗಿದೆ.

ಅರಿವಿರಲಿ (Be Aware) - ಮೊದಲನೆಯದಾಗಿ, ನಾವು ಇಂತಹ ಪ್ರಕರಣಗಳನ್ನು ಆಳವಾಗಿ ಅಧ್ಯಯನ ಮಾಡಿರುವ ಆಂಕೊಲಾಜಿಸ್ಟ್‌ಗಳು ಮತ್ತು ಇತರ ವೈದ್ಯಕೀಯ ವೃತ್ತಿಪರರಿಂದ ಸೂಕ್ತ ತಿಳಿವಳಿಕೆಯನ್ನು ಪಡೆಯಬೇಕು. ಅದರಂತೆ ನಮ್ಮ ಆಹಾರ ಪದ್ಧತಿ ಹಾಗೂ ಜೀವನ ಶೈಲಿಯಲ್ಲಿ ಸರಳವಾದ ಬದಲಾವಣೆಗಳನ್ನು ಮಾಡುವ ಮೂಲಕ ಅಂತಹ ಕಾಯಿಲೆಗಳನ್ನು ಹೇಗೆ ತಡೆಯುವುದು ಎಂಬುದರ ಕುರಿತು ಸಲಹೆ ನೀಡಬಹುದಾಗಿದೆ.

ನಾವೆಲ್ಲಿ ತಪ್ಪು ಮಾಡುತ್ತಿದ್ದೇವೆ? ಮಾನವನ ಜೀವಕೋಶಗಳಲ್ಲಿ, ಕೃತಕ ರಾಸಾಯನಿಕಗಳು, ಪ್ರತಿಕ್ರಿಯೆಯನ್ನು ಉಂಟುಮಾಡುವುದರ ಮೂಲಕ ಆನುವಂಶಿಕ ರೂಪಾಂತರಗಳಿಗೆ ಮುಖ್ಯ ಕಾರಣವಾಗಿದ್ದು, ಕ್ಯಾನ್ಸರ್ ಕೋಶಗಳನ್ನು ಉಂಟುಮಾಡುತ್ತವೆ. ಹಾಗಾದರೆ ಏನು ತಪ್ಪಿಸಬೇಕು?

ಹೆಚ್ಚಿನ ದೇಹದ ದ್ರವ್ಯರಾಶಿ ಸೂಚಿ(BMI), ಕಡಿಮೆ ಹಣ್ಣು ಮತ್ತು ತರಕಾರಿ ಸೇವನೆ, ದೈಹಿಕ ಚಟುವಟಿಕೆಯ ಕೊರತೆ, ತಂಬಾಕು ಸೇವನೆ ಮತ್ತು ಮದ್ಯಪಾನ ಸೇರಿದಂತೆ 5 ಪುಮುಖ ವರ್ತನೆಯಿಂದ ಸುಮಾರು ಮೂರನೇ ಒಂದು ಭಾಗದಷ್ಟು ಕ್ಯಾನ್ಸರ್ ಸಾವುಗಳು ಉಂಟಾಗುತ್ತಿವೆ.

ತಂಬಾಕು ಕಾರಣ ಯಾಕೆ?

ತಂಬಾಕು ಕ್ಯಾನ್ಸರ್‌ಗೆ ಪ್ರಮುಖ ಅಪಾಯಕಾರಿ ಅಂಶವಾಗಿದೆ. ಕ್ಯಾನ್ಸರ್ ತಡೆಗಟ್ಟಲು ಉತ್ತಮ ಮಾರ್ಗವೆಂದರೆ ತಂಬಾಕಿನಿಂದ ದೂರವಿರುವುದು, ಅಥವಾ ಅದನ್ನು ಬಳಸುವುದನ್ನು ನಿಲ್ಲಿಸುವುದು. ಯುವಕರು ಕಿಕ್ ಹೊಂದುವ ಕುತೂಹಲದಿಂದ ಸ್ನೇಹಿತರ ಪ್ರಭಾವವಲಯಕ್ಕೆ ಸಿಲುಕಿ ತಂಬಾಕು ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ. ಆದರೆ ನಂತರ ಅದನ್ನು ತ್ಯಜಿಸಲು ಕಷ್ಟವಾಗುತ್ತದೆ. ವ್ಯಸನ ಮುಕ್ತರಾಗಲು ನೆರವು ಬಯಸುವವರಿಗಾಗಿ ಸರ್ಕಾರ ವ್ಯಸನ ಮುಕ್ತ ಸೆಂಟರ್‌ಗಳನ್ನು ಶುರುಮಾಡಿದೆ. ಸಹಾಯವಾಣಿ ಸಂಖ್ಯೆ- 155265.

ಮದ್ಯಪಾನ ಸೇವನೆಯು ಸಹ ಸ್ತನ ಕಲೋನ್, ಶ್ಯಾಸಕೋಶ, ಮೂತ್ರಪಿಂಡ ಮತ್ತು ಯಕೃತ್ತಿನ ಕಾನ್ಸರ್ ಸೇರಿದಂತೆ ವಿವಿಧ ರೀತಿಯ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.

ಆರೋಗ್ಯಕರ ಆಹಾರ ಸೇವಿಸಿ

ಆರೋಗ್ಯಕರ ಆಹಾರದಿಂದ ಕಾನ್ಸರ್ ತಡೆಗಟ್ಟಲು ಸಾಧ್ಯ ವಿಲ್ಲದಿದ್ದರೂ ಇದು ಖಂಡಿತವಾಗಿ ಅದರ ಅಪಾಯವನ್ನು ಕಡಿಮೆ ಮಾಡುತ್ತದೆ. ತಾಜಾ ಹಣ್ಣುಗಳು, ಸ್ಥಳೀಯ ತರಕಾರಿ ಮತ್ತು ಇತರ ಸಸ್ಯ ಮೂಲಗಳ ಆಹಾರ ಸೇವನೆ ನಿಮ್ಮ ಆಹಾರ ಪದ್ಧತಿಯಾಗಲಿ. ಕಡಿಮೆ ಕ್ಯಾಲೋರಿ ಹೊಂದಿರುವ ಆಹಾರವನ್ನು ಆರಿಸುವುದರಿಂದ ನೀವು ಹಗುರ ತೂಕವನ್ನು ಹೊಂದಲು ಮತ್ತು ತೆಳ್ಳಗಾಗಲು ಸಹಕಾರಿ. ಪ್ರಾಣಿ ಮೂಲಗಳಿಂದ ಸಂಸ್ಕರಿಸಿದ ಸಕ್ಕರೆ ಮತ್ತು ಕೊಬ್ಬು ಸೇವನೆಗೆ ಕಡಿವಾಣ ಹಾಕಿ.

ದೇಹದ ಆರೋಗ್ಯಕರ ತೂಕದ ನಿರ್ವಹಣೆ ಮಾಡಿ, ದೈಹಿಕವಾಗಿ ಸಕ್ರಿಯರಾಗಿರಿ :

ದೈಹಿಕ ಚಟುವಟಿಕೆಯು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಹಾಗೂ ಸ್ತನ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಪ್ರತಿದಿನ ನಡೆಯಲು ಹೋಗಿ ಹಾಗೂ ಯೋಗ ಮತ್ತು ಪ್ರಾಣಾಯಾಮವನ್ನು ನಿಯಮಿತವಾಗಿ ಮಾಡಿ.

ಚರ್ಮದ ಕ್ಯಾನ್ಸರ್‌ಗೆ ವಿಕಿರಣ ಕಾರಣ

ಚರ್ಮದ ಕ್ಯಾನ್ಸರ್ ಒಂದು ಅತ್ಯಂತ ಸಾಮಾನ್ಯ ರೀತಿಯ ಕ್ಯಾನ್ಸರ್ ಆಗಿದ್ದು ಅದನ್ನು ತಡೆಗಟ್ಟಬಹುದಾಗಿದೆ. ಚರ್ಮವು ಎಲ್ಲ ವಿಧದ ಅಯಾನೀಕರಿಸುವ (ionozing) ವಿಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ಲ್ಯೂಕೇಮಿಯಾ ಮತ್ತು ವಿವಿಧ ಘನ ಗೆಡ್ಡೆಗಳು ಸೇರಿದಂತೆ ವಿವಿಧ ಕ್ಯಾನ್ಸರ್‍ಗಳ ಅಪಾಯವನ್ನು ಹೆಚ್ಚಿಸುತ್ತದೆ. ನಡು ಮಧ್ಯಾಹ್ನದ ಸೂರ್ಯನ ಕಿರಣಗಳಿಂದ ದೂರವಿರಿ.

ಪರಿಸರ ಮಾಲಿನ್ಯ

ಅಂದಾಜಿನ ಪ್ರಕಾರ, ಹೊರಾಂಗಣ ವಾಯು ಮಾಲಿನ್ಯವು 2016 ರಲ್ಲಿ ವಿಶ್ವಾದ್ಯಂತ 4.2 ಮಿಲಿಯನ್ ಅಕಾಲಿಕ ಮರಣಗಳಿಗೆ ಕಾರಣವಾಗಿದ್ದು, ಅದರಲ್ಲಿ 6% ಶ್ವಾಸಕೋಶದ ಕ್ಯಾನ್ಸರ್ ಕಾರಣದ ಸಾವುಗಳಾಗಿವೆ. ಹೆಚ್ಚುವರಿಯಾಗಿ, ಘನ ಇಂಧನಗಳು ಮತ್ತು ಸೀಮೆ ಎಣ್ಣೆಗಳಿಂದ ಅಡುಗೆ ಮಾಡುವುದರಿಂದ ಉಂಟಾಗುವ ಒಳಾಂಗಣ ವಾಯು ಮಾಲಿನ್ಯದಿಂದ ಸುಮಾರು 4 ಮಿಲಿಯನ್ ಜನರು ಅನಾರೋಗ್ಯಕ್ಕೆ ತುತ್ತಾಗಿ ಅಕಾಲಿಕ ಸಾವು ಕಂಡಿದ್ದಾರೆ.

ವೈರಲ್‌ ಸೋಂಕು ತಡೆಯಲು ಲಸಿಕೆ ಹಾಕಿಸಿ

ಕೆಲವು ವೈರಲ್ ಸೋಂಕುಗಳಿಂದ ರಕ್ಷಿಸುವ ಮೂಲಕ ಕ್ಯಾನ್ಸರ್ ಅನ್ನು ತಡೆಯಬಹುದು. ಇದರ ವಿರುದ್ಧ ಲಸಿಕೆ ಪಡೆಯುವುದರ ಕುರಿತು ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸಿ. ಹೆಪಟೈಟಿಸ್ ಬಿ, ಹೆಪಟೈಟಿಸ್ ಬಿ ಯಕೃತ್ತಿನ ಕ್ಯಾನ್ಸರ್ ಬೆಳವಣಿಗೆಯ ಅಪಾಯವನ್ನು ಹೆಚ್ಚಿಸಬಹುದು.

ಹ್ಯೂಮನ್ ಪ್ಯಾಪಿಲೋಮವೈರಸ್ (HPV), HPV ಒಂದು ಲೈಂಗಿಕವಾಗಿ ಹರಡುವ ವೈರಸ್ ಆಗಿದ್ದು, ಇದು ಗರ್ಭಕಂಠದ ಕ್ಯಾನ್ಸರ್ ಮತ್ತು ಇತರ ಜನನಾಂಗದ ಕ್ಯಾನ್ಸರ್‌ಗಳಿಗೆ ಮತ್ತು ತಲೆ ಮತ್ತು ಕತ್ತಿನ ಸ್ಕ್ಯಾಮಸ್ ಸೆಲ್ ಕ್ಯಾನ್ಸರ್‌ಗಳಿಗೆ ಕಾರಣವಾಗಬಹುದು.

ಸ್ಕ್ರೀನಿಂಗ್ ಪರೀಕ್ಷೆ (Screening Tests)

ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ಮತ್ತು ಬಾಯಿಯ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿ ಕಂಡುಹಿಡಿಯಬಹುದು. 21 ರಿಂದ 65 ವರ್ಷ ವಯಸ್ಸಿನ ವಿವಾಹಿತ ಮಹಿಳೆಯರು ಪ್ರತಿ ಮೂರು ವರ್ಷಗಳಿಗೊಮ್ಮೆ ಪ್ರಾಪ್ ಪರೀಕ್ಷೆಯನ್ನು ಮಾಡಬಹುದು. 40 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಪ್ರತಿ 3 ವರ್ಷಗಳಿಗೊಮ್ಮೆ ಮಾಮೊಗ್ರಫಿಗೆ ಒಳಗಾಗಬಹುದು. ಯಾವುದೇ ಮೌಖಿಕ ಗಾಯಗಳು ಅಥವಾ ತೇಪೆಗಳನ್ನು ನೋಡಲು ಸ್ವಯಂ ಮೌಖಿಕ ಪರೀಕ್ಷೆಯನ್ನು ಮಾಡಬಹುದು.

ಆರೋಗ್ಯ ಕಾಪಾಡುವುದಕ್ಕೆ ಕ್ಯಾನ್ಸರ್‌ ತಡೆಯಲು ಹೀಗೆ ಮಾಡಿದರೆ ಅನುಕೂಲ..

  • ರೈತರು ಸಾವಯವ ಪದಾರ್ಥಗಳಿಗೆ ಕೀಟನಾಶಕ, ರಾಸಾಯನಿಕ ಬಳಸಬಾರದು
  • ಮಾರಾಟಗಾರರು ತರಕಾರಿಗೆ ಬಣ್ಣ ಹಾಕುವುದನ್ನು ನಿಲ್ಲಿಸಬೇಕು.
  • ನಮ್ಮದೇ ನಾಡಿನ, ದೇಶದ ದೇಸಿ ತಳಿಯ ಹಸುಗಳ ಹಾಲನ್ನು ಸೇವಿಸುವುದು (ಎ-2 ಹಾಲು).
  • ನಮ್ಮ ಚಹಾ ಅಂಗಡಿಗಳು ಮತ್ತು ಚಹಾ ಪ್ರಿಯರಿಂದ ಪ್ಲಾಸ್ಟಿಕ್- ಲೇಪಿತ ಕಪ್ ಗಳನ್ನು ಬಳಸುವುದನ್ನು ನಿಲ್ಲಿಸುವುದು.
  • ಬೆಲ್ಲವನ್ನು ಕೆಮಿಕಲ್ ಬಳಸಿ ಬೀಚಿಂಗ್ ಮಾಡುವ ಬದಲು ಹಾಗೆಯೇ ಬಿಡಬೇಕು.
  • ಮೈಕ್ರೋ ಓವನ್‍ಗಳಲ್ಲಿ ಆಹಾರವನ್ನು ಬಿಸಿ ಮಾಡುವುದನ್ನು ನಿಲ್ಲಿಸಿ, ತಾಜಾ ಆಹಾರವನ್ನು ಸೇವಿಸುವುದು.
  • ಯೋಗ, ಪ್ರಾಣಾಯಾಮ ಮತ್ತು ಧ್ಯಾನವನ್ನು ಪ್ರತಿದಿನ ಅಭ್ಯಾಸ ಮಾಡಿ ನಿಮ್ಮ ದೇಹ ಮತ್ತು ಮನಸ್ಸನ್ನು ಆರೋಗ್ಯಕರವಾಗಿ ಮತ್ತು ರೋಗವನ್ನು ದೂರವಿಡಲು ಸಾಧ್ಯವಾಗುತ್ತದೆ.
  • ದೀರ್ಘಕಾಲದ ಜೀವನ ಮುಖ್ಯವಲ್ಲ, ಆರೋಗ್ಯಕರ ಮತ್ತು ಸಂತೋಷವಾದ ಜೀವನ ಅಗತ್ಯ. ಕಷ್ಟಪಟ್ಟು ದುಡಿದ ಹಣವು ಔಷಧಿಗಳು, ಆಸ್ಪತ್ರೆಗಳು ಮತ್ತು ಖಿನ್ನತೆಗಳಿಗೆ ಖರ್ಚು ವಿನಿಯೋಗವಾಗಬಾರದು.
  • ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಅದರ ಆರಂಭಿಕ ಪತ್ತೆಯ ಮಹತ್ವದ ಕುರಿತು ಅರಿವು ಮೂಡಿಸಬೇಕು.

(ಡಿಐಪಿಆರ್‌ ಲೇಖನ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ