ಕನ್ನಡ ಸುದ್ದಿ  /  ಮನರಂಜನೆ  /  Cobra Review: ಇಂದು ತೆರೆ ಕಂಡ ವಿಕ್ರಮ್‌-ಶ್ರೀನಿಧಿ ಶೆಟ್ಟಿ ನಟನೆಯ 'ಕೋಬ್ರಾ' ಚಿತ್ರದ ಬಗ್ಗೆ ಸಿನಿಪ್ರಿಯರು ಹೇಳಿದ್ದಿಷ್ಟು..!

Cobra Review: ಇಂದು ತೆರೆ ಕಂಡ ವಿಕ್ರಮ್‌-ಶ್ರೀನಿಧಿ ಶೆಟ್ಟಿ ನಟನೆಯ 'ಕೋಬ್ರಾ' ಚಿತ್ರದ ಬಗ್ಗೆ ಸಿನಿಪ್ರಿಯರು ಹೇಳಿದ್ದಿಷ್ಟು..!

HT Kannada Desk HT Kannada

Aug 31, 2022 11:45 AM IST

ಕೋಬ್ರಾ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ

    • ಚಿಯಾನ್‌ ವಿಕ್ರಮ್‌ ಸುಮಾರು 3 ವರ್ಷಗಳ ನಂತರ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಕೋಬ್ರಾ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ಸಿನಿಮಾ ನೋಡಿದ ಪ್ರೇಕ್ಷಕರು ನಾನಾ ರೀತಿಯಲ್ಲಿ ಕಮೆಂಟ್‌ ಮಾಡಿದ್ದಾರೆ.
ಕೋಬ್ರಾ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ
ಕೋಬ್ರಾ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ

ಚಿಯಾನ್‌ ವಿಕ್ರಮ್‌ ಹಾಗೂ ಶ್ರೀನಿಧಿ ಶೆಟ್ಟಿ ನಟನೆಯ 'ಕೋಬ್ರಾ' ಸಿನಿಮಾ ತೆರೆ ಕಂಡಿದೆ. ಸಾಮಾನ್ಯವಾಗಿ ಪ್ರತಿ ಶುಕ್ರವಾರ ಅಥವಾ ಗುರುವಾರ ಸಿನಿಮಾಗಳು ತೆರೆ ಕಾಣುತ್ತವೆ. ಆದರೆ ಗಣೇಶ ಹಬ್ಬದ ವಿಶೇಷವಾಗಿ ಇಂದು ಈ ಸಿನಿಮಾವನ್ನು ಬಿಡುಗಡೆ ಮಾಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

QPL 2024: ಕ್ವೀನ್ಸ್‌ ಪ್ರೀಮಿಯರ್‌ ಲೀಗ್‌ ಶುರು; ಬ್ಯಾಟು ಬಾಲು ಹಿಡಿದು ಕ್ರಿಕೆಟ್ ಆಡಲು ಹೊರಟ ಕಿರುತೆರೆ, ಹಿರಿತೆರೆ ಹೆಣ್ಮಕ್ಕಳು

ಸೀತಾ ರಾಮ ಸೀರಿಯಲ್‌ ದೃಶ್ಯದಲ್ಲಿ ಹೆಲ್ಮೆಟ್‌ ಧರಿಸದೇ ಪ್ರಯಾಣ; ನಟಿ ವೈಷ್ಣವಿ ಗೌಡಗೆ ದಂಡ ವಿಧಿಸಿದ ಟ್ರಾಫಿಕ್‌ ಪೊಲೀಸರು

Pavitra Jayaram: ಭೀಕರ ರಸ್ತೆ ಅಪಘಾತದಲ್ಲಿ ಜೀ ಕನ್ನಡದ ತ್ರಿನಯನಿ ಧಾರಾವಾಹಿ ನಟಿ ಪವಿತ್ರಾ ಜಯರಾಂ ಸಾವು

ಗೌರಿ ಚಿತ್ರದಿಂದ ಹೊರಬಂತು ‘ಒಳ್ಳೆ ಟೈಮ್‌ ಬರುತ್ತೆ’ ಹಾಡು; ಚಂದನ್‌ ಶೆಟ್ಟಿ ಕಂಠಕ್ಕೆ ಸಮರ್ಜಿತ್‌ ಲಂಕೇಶ್‌ ಡಾನ್ಸ್‌

ಚಿಯಾನ್‌ ವಿಕ್ರಮ್‌ ಸುಮಾರು 3 ವರ್ಷಗಳ ನಂತರ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಕೋಬ್ರಾ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ಸಿನಿಮಾ ನೋಡಿದ ಪ್ರೇಕ್ಷಕರು ನಾನಾ ರೀತಿಯಲ್ಲಿ ಕಮೆಂಟ್‌ ಮಾಡಿದ್ದಾರೆ. ಸಿನಿಮಾದ ಕಥೆ, ಹಾಡುಗಳು, ವಿಕ್ರಮ್‌ ಆಕ್ಟಿಂಗ್‌ ಬಹಳ ಚೆನ್ನಾಗಿದೆ ಎಂದರೆ ಕೆಲವರು ಚಿತ್ರದಲ್ಲಿ ಶ್ರೀನಿಧಿ ಹಾಗೂ ವಿಕ್ರಮ್‌ ಲವ್‌ ಸೀನ್‌ಗಳು ಬೋರ್‌ ಎನಿಸುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು, ವಿಕ್ರಮ್‌ಗಾಗಿ ಈ ಸಿನಿಮಾ ನೋಡಿದೆವು. ಅವರ ನಟನೆ ಬಿಟ್ಟು ಬೇರೇನೂ ಚೆನ್ನಾಗಿಲ್ಲ. ಕೆಜಿಎಫ್‌ ಖ್ಯಾತಿಯ ಶ್ರೀನಿಧಿ ಶೆಟ್ಟಿಗೆ ಚಿತ್ರದಲ್ಲಿ ಏನೂ ಕೆಲಸ ಇಲ್ಲ ಎಂದರೆ, ಸಿನಿಮಾ ಖಂಡಿತ್‌ ಹಿಟ್‌ ಆಗುತ್ತದೆ. ಒಂದೊಂದು ಸೀನ್‌ ಕೂಡಾ ಬಹ್ ಅದ್ಭುತವಾಗಿದೆ ಎಂದು ಕೆಲವರು ಕಮೆಂಟ್‌ ಮಾಡುತ್ತಿದ್ದಾರೆ. ಕೆಲವರು ಕ್ರಿಕೆಟಿಗ ಇರ್ಫಾನ್‌ ಪಠಾಣ್‌ ನೋಡಿ ಖುಷಿ ಪಟ್ಟಿದ್ದಾರೆ. ಒಟ್ಟಿನಲ್ಲಿ ಚಿತ್ರಕ್ಕೆ ಪಾಸಿಟಿವ್‌ಗಿಂತ ನೆಗೆಟಿವ್‌ ಕಮೆಂಟ್‌ಗಳೇ ಹೆಚ್ಚು ಎನ್ನಬಹುದು.

ಕೋಬ್ರಾ ಚಿತ್ರವನ್ನು ಸೆವೆನ್‌ ಸ್ರೀನ್‌ ಸ್ಟುಡಿಯೋ ಬ್ಯಾನರ್‌ ಅಡಿ ಅಜಯ್‌ ಜ್ಞಾನಮುತ್ತು ಕಥೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರದ ಹಾಡುಗಳಿಗೆ ಎ.ಆರ್‌.ರೆಹಮಾನ್‌ ಸಂಗೀತ ನೀಡಿದ್ದಾರೆ. ವಿಕ್ರಮ್‌, ಶ್ರೀನಿಧಿ ಶೆಟ್ಟಿ ಜೊತೆಗೆ ರವಿಕುಮಾರ್‌, ರೋಬೋ ಶಂಕರ್‌, ಮೀನಾಕ್ಷಿ ಗೋವಿಂದರಾಜನ್‌, ಜಾನ್‌ ವಿಜಯ್‌, ಮಿಯಾ ಜಾರ್ಜ್‌, ರೇಣುಕಾ ಹಾಗೂ ಇನ್ನಿತರರು ನಟಿಸಿದ್ದಾರೆ.

ಕನ್ನಡ ನಿರ್ದೇಶಕನ ಜೊತೆ ಸಿನಿಮಾ ಮಾಡಲಿದ್ದಾರಂತೆ ಚಿಯಾನ್‌ ವಿಕ್ರಮ್‌

ಕಳೆದ ವಾರ ನಟ ವಿಕ್ರಮ್‌ ಕೋಬ್ರಾ ಚಿತ್ರದ ಪ್ರಮೋಷನ್‌ಗಾಗಿ ಬೆಂಗಳೂರಿಗೆ ಬಂದಿದ್ದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಲೂಸಿಯಾ ಹಾಗೂ ಯೂಟರ್ನ್‌ ಸಿನಿಮಾ ಖ್ಯಾತಿಯ ನಿರ್ದೇಶಕ ಪವನ್‌ ಕುಮಾರ್‌ ಅವರೊಂದಿಗೆ ಸಿನಿಮಾ ಮಾಡುವುದಾಗಿ ಹೇಳಿ ಅಚ್ಚರಿ ಮೂಡಿಸಿದ್ದರು. ಪವನ್ ಹೇಳಿದ ಕಥೆ ಇಷ್ಟವಾಗಿದ್ದು ಅವರ ಜೊತೆ ಸಿನಿಮಾ ಮಾಡುತ್ತೇನೆ" ಎಂದು ತಿಳಿಸಿದರು. ಈ ಮೂಲಕ ಚಿಯಾನ್‌ ವಿಕ್ರಮ್‌ ಕನ್ನಡಕ್ಕೆ ಆಗಮಿಸುವುದು ಕನ್ಫರ್ಮ್‌ ಆಗಿದೆ. ಬಹುಭಾಷೆಗಳಲ್ಲಿ ಮೂಡಿ ಬರಲಿರುವ ಈ ಸಿನಿಮಾ ಬಗ್ಗೆ ನಿರ್ಮಾಪಕರು ಶೀಘ್ರದಲ್ಲಿ ಅಧಿಕೃತ ಘೋಷಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ನಿರ್ದೇಶಕ ಪವನ್‌, ವಿಕ್ರಮ್‌ಗೆ ಹೇಳಿದ್ದು ದ್ವಿತ್ವ ಸಿನಿಮಾ ಕಥೆ ಇರಬಹುದಾ..?

ಪುನೀತ್‌ ನಿಧನದ ನಂತರ 'ದ್ವಿತ್ವ' ಚಿತ್ರದಲ್ಲಿ ಅವರ ಬದಲಿಗೆ ಯಾರು ನಟಿಸುತ್ತಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಕಾಡುತ್ತಿತ್ತು. ಈ ಸಿನಿಮಾಗೆ ಪುನೀತ್‌ ಬಿಟ್ಟು ಬೇರೆ ಯಾವ ನಟ ಕೂಡಾ ಹೊಂದುವುದಿಲ್ಲ. ಅವರನ್ನೇ ಮನಸ್ಸಿನಲ್ಲಿಟ್ಟುಕೊಂಡು ಬರೆದ ಕಥೆ ಇದು ಎಂದು ಪುನೀತ್‌ ನಿಧನರಾದ ನಂತರ ಪವನ್‌ ಕುಮಾರ್‌ ಹೇಳಿದ್ದರು. ಆದರೆ ಇದೀಗ, ಈ ಸಿನಿಮಾದಲ್ಲಿ ವಿಕ್ರಮ್‌ ನಟಿಸಬಹುದು ಎನ್ನಲಾಗುತ್ತಿದೆ. ಇತ್ತೀಚೆಗೆ ಮಲಯಾಳಂ ನಟ ಫಹಾದ್ ಫಾಸಿಲ್ ಹೆಸರು ಕೇಳಿಬಂದಿತ್ತು. ಇದೀಗ ತಮಿಳು ನಟ ಚಿಯಾನ್‌ ವಿಕ್ರಮ್‌ ಹೆಸರು ಕೇಳಿ ಬರುತ್ತಿದೆ.

ನಿರ್ದೇಶಕ ಪವನ್‌ ಕುಮಾರ್‌, ನಟ ವಿಕ್ರಮ್‌ಗೆ ಪುನೀತ್‌ ಅಭಿನಯಿಸಬೇಕಿದ್ದ 'ದ್ವಿತ್ವ' ಕಥೆಯನ್ನೇ ಹೇಳಿದ್ರಾ...? ಪುನೀತ್‌ ಬದಲಿಗೆ 'ದ್ವಿತ್ವ' ಚಿತ್ರದಲ್ಲಿ ವಿಕ್ರಮ್‌ ನಟಿಸುತ್ತಿದ್ದಾರಾ ಎಂಬ ಅನುಮಾನ ಕಾಡುತ್ತಿದೆ. ಒಟ್ಟಿನಲ್ಲಿ ಎಲ್ಲವೂ ಅಧಿಕೃತವಾಗಿ ಘೋಷಣೆ ಆಗುವರೆಗೂ ಈ ರೀತಿಯ ಚರ್ಚೆ ನಡೆಯುತ್ತಲೇ ಇರುತ್ತದೆ.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ