ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಹೆಂಡತಿಯನ್ನು ಭೂತ, ಪಿಶಾಚಿ ಅಂತ ಕರೆಯುವುದು ಕ್ರೌರ್ಯವಲ್ಲ; ಪಾಟ್ನಾ ಹೈಕೋರ್ಟ್ ಅಭಿಪ್ರಾಯ -Patna High Court

ಹೆಂಡತಿಯನ್ನು ಭೂತ, ಪಿಶಾಚಿ ಅಂತ ಕರೆಯುವುದು ಕ್ರೌರ್ಯವಲ್ಲ; ಪಾಟ್ನಾ ಹೈಕೋರ್ಟ್ ಅಭಿಪ್ರಾಯ -Patna High Court

Raghavendra M Y HT Kannada

Mar 30, 2024 10:10 PM IST

ಪಾಟ್ನಾ ಹೈಕೋರ್ಟ್

  • ವಿಚ್ಛೇದಿತ ದಂಪತಿ "ಕೊಳಕು ಭಾಷೆ" ಬಳಸುವುದು "ಕ್ರೌರ್ಯ"ಕ್ಕೆ ಸಮಾನವಲ್ಲ ಎಂದು ಕೌಟುಂಬಿಕ ಪ್ರಕರಣದ ವಿಚಾರಣೆಯಲ್ಲಿ ಪಾಟ್ನಾ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಪಾಟ್ನಾ ಹೈಕೋರ್ಟ್
ಪಾಟ್ನಾ ಹೈಕೋರ್ಟ್

ಪಾಟ್ನಾ (ಬಿಹಾರ): ಪರಸ್ಪರ "ಭೂತ್" (ಭೂತ) ಮತ್ತು "ಪಿಶಾಚ್" (ರಕ್ತಪಿಶಾಚಿ) ಎಂದು ವಿಚ್ಛೇದಿತ ದಂಪತಿ "ಕೊಳಕು ಭಾಷೆ" ಬಳಸುವುದು "ಕ್ರೌರ್ಯ"ಕ್ಕೆ ಸಮಾನವಲ್ಲ ಎಂದು ಪಾಟ್ನಾ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಜಾರ್ಖಂಡ್‌ನ ಬೊಕಾರೊ ನಿವಾಸಿಗಳಾದ ಸಹದೇವ್ ಗುಪ್ತಾ ಮತ್ತು ಅವರ ಪುತ್ರ ನರೇಶ್ ಕುಮಾರ್ ಗುಪ್ತಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿಬೆಕ್ ಚೌಧರಿ ಅವರಿದ್ದ ಏಕಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ನರೇಶ್ ಗುಪ್ತಾ ಅವರ ವಿಚ್ಛೇದಿತ ಪತ್ನಿ ತನ್ನ ಹುಟ್ಟೂರಾದ ನವಾಡಾದಲ್ಲಿ ಸಲ್ಲಿಸಿದ ದೂರಿನ ಮೇರೆಗೆ ಬಿಹಾರದ ನಳಂದ ಜಿಲ್ಲೆಯ ನ್ಯಾಯಾಲಯಗಳು ಹೊರಡಿಸಿದ ಆದೇಶವನ್ನು ತಂದೆ-ಮಗ ಇಬ್ಬರೂ ಪ್ರಶ್ನಿಸಿದ್ದರು.

ಟ್ರೆಂಡಿಂಗ್​ ಸುದ್ದಿ

Gold Rate Today: ಎರಡು ದಿನಗಳ ಇಳಿಕೆಯ ಬಳಿಕ ಮತ್ತೆ ಏರಿಕೆ ಕಂಡ ಚಿನ್ನದ ದರ; ಶನಿವಾರವೂ ಬೆಳ್ಳಿ ದರ ಹೆಚ್ಚಳ

ಹವಾಮಾನ ಬದಲಾವಣೆ ಎಫೆಕ್ಟ್; ತನ್ನ ಎಲ್ಲಾ ಹಿಮನದಿಗಳನ್ನು ಕಳೆದುಕೊಂಡ ಮೊದಲ ದೇಶ ವೆನೆಜುವೆಲಾ; ಏನಿದು ಬೆಳವಣಿಗೆ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು; ಚುನಾವಣಾ ಪ್ರಚಾರಕ್ಕೆ ಮಾತ್ರ ಸೀಮಿತ

2024 ರ ಮಾರುತಿ ಸುಜುಕಿ ಸ್ವಿಫ್ಟ್ ಭಾರತದಲ್ಲಿ ಬಿಡುಗಡೆ; ಕಾರಿನ ಬೆಲೆ, ಫೀಚರ್ಸ್ ಸೇರಿ ತಿಳಿಯಬೇಕಾದ 5 ಅಂಶಗಳ ವಿವರ ಇಲ್ಲಿದೆ

ಮಹಿಳೆಯರ ಪರ ವಕೀಲರ ವಾದವನ್ನು ಸ್ವೀಕರಿಸದ ಕೋರ್ಟ್

ಪಾಟ್ನಾ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯನ್ನು ವಿರೋಧಿಸಿದ ವಿಚ್ಛೇದಿತ ಮಹಿಳೆಯ ಪರ ವಕೀಲರು, "21 ನೇ ಶತಮಾನದಲ್ಲಿ ಮಹಿಳೆಯನ್ನು ಅವಳ ಅತ್ತೆ ಮಾವಂದಿರು "ಭೂತ್" ಮತ್ತು "ಪಿಶಾಚ್" ಎಂದು ಕರೆಯುತ್ತಿದ್ದರು, ಇದು "ಅಪಾರ ಕ್ರೌರ್ಯದ ಒಂದು ರೂಪ" ಎಂದು ವಾದಿಸಿದರು. ಆದರೆ ಈ ವೇಳೆ ನ್ಯಾಯಾಲಯವು "ಇಂತಹ ವಾದವನ್ನು ಸ್ವೀಕರಿಸುವ ಸ್ಥಿತಿಯಲ್ಲಿಲ್ಲ" ಎಂದು ಅಭಿಪ್ರಾಯಪಟ್ಟಿದೆ.

"ವೈವಾಹಿಕ ಸಂಬಂಧಗಳಲ್ಲಿ, ವಿಶೇಷವಾಗಿ ವಿಫಲವಾದ ವೈವಾಹಿಕ ಸಂಬಂಧಗಳಲ್ಲಿ", "ಗಂಡ ಮತ್ತು ಹೆಂಡತಿ ಇಬ್ಬರೂ" "ಕೊಳಕು ಭಾಷೆಯಿಂದ" "ಒಬ್ಬರನ್ನೊಬ್ಬರು ನಿಂದಿಸಿದ" ನಿದರ್ಶನಗಳಿವೆ. ಆದಾಗ್ಯೂ, ಅಂತಹ ಎಲ್ಲಾ ಆರೋಪಗಳು ಕ್ರೌರ್ಯದ ಪರದೆಯೊಳಗೆ ಬರುವುದಿಲ್ಲ ಎಂದು ಅದು ಹೇಳಿದೆ. "ಎಲ್ಲಾ ಆರೋಪಿಗಳಿಂದ" ಆಕೆಗೆ "ಕಿರುಕುಳ" ಮತ್ತು "ಕ್ರೂರವಾಗಿ ಚಿತ್ರಹಿಂಸೆ" ನೀಡಲಾಗಿದೆ ಎಂದು ಹೈಕೋರ್ಟ್ ಗಮನಿಸಿದೆ, ಆದರೆ "ಎರಡೂ ಅರ್ಜಿದಾರರ ವಿರುದ್ಧ ಯಾವುದೇ ನಿರ್ದಿಷ್ಟ, ವಿಶಿಷ್ಟ ಆರೋಪಗಳಿಲ್ಲ" ಎಂದು ಹೈಕೋರ್ಟ್ ತಿಳಿಸಿದೆ. ಕೆಳ ನ್ಯಾಯಾಲಯಗಳು ನೀಡಿದ ತೀರ್ಪುಗಳನ್ನು ರದ್ದುಗೊಳಿಸಲಾಗಿದೆ.

ವರದಕ್ಷಿಣೆಯಾಗಿ ಕಾರು ನೀಡುವಂತೆ ಒತ್ತಾಯಿಸಲು ದೈಹಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆ 1994 ರಲ್ಲಿ ಪತಿ ಮತ್ತು ಮಾವನ ವಿರುದ್ಧ ಪ್ರಕರಣ ದಾಖಲಿಸಿದ್ದರು. ನಂತರ ತಂದೆ-ಮಗನ ಕೋರಿಕೆ ಮೇರೆಗೆ ಪ್ರಕರಣವನ್ನು ನವಾಡಾದಿಂದ ನಳಂದಕ್ಕೆ ವರ್ಗಾಯಿಸಲಾಯಿತು, ಅವರಿಗೆ 2008 ರಲ್ಲಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಒಂದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ್ದರು. ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಇವರ ಮನವಿಯನ್ನು 10 ವರ್ಷಗಳ ನಂತರ ತಿರಸ್ಕರಿಸಲಾಯಿತು. ಈ ನಡುವೆ ದಂಪತಿಗೆ ಜಾರ್ಖಂಡ್ ಹೈಕೋರ್ಟ್ ವಿಚ್ಛೇದನ ನೀಡಿತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ