ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mysore Dasara: ವಿಜಯದಶಮಿ: ಅರಮನೆಯಲ್ಲಿ ಯದುವೀರ್‌ ಒಡೆಯರ್‌ ಶಮೀ ಪೂಜೆ ಹೀಗಿತ್ತು

Mysore Dasara: ವಿಜಯದಶಮಿ: ಅರಮನೆಯಲ್ಲಿ ಯದುವೀರ್‌ ಒಡೆಯರ್‌ ಶಮೀ ಪೂಜೆ ಹೀಗಿತ್ತು

Oct 24, 2023 02:19 PM IST

mysuru vijaya dashami ದಸರಾ ಎಂದರೆ ಅದು ವಿಜಯದಶಮಿಯೂ ಹೌದು. ವಿಜಯ ಸಾಧಿಸಿದ ಸಂಕೇತವಾಗಿ ವಿಜಯದಶಮಿಯನ್ನು ಆಚರಿಸುವುದು ಸಂಪ್ರದಾಯ. ಮೈಸೂರು ಅರಮನೆಯಲ್ಲಿ ರಾಜವಂಶಸ್ಥರು ವಿಜಯದಶಮಿಯನ್ನು ಶಮೀಪೂಜೆಯೊಂದಿಗೆ ನೆರವೇರಿಸುತ್ತಾರೆ. ಈ ಬಾರಿ ಯದುವೀರ್‌ ಒಡೆಯರ್‌ ಹಾಗೂ ರಾಜವಂಶಸ್ಥ ಪರಿವಾರದವರೂ ಸಂಭ್ರಮದಿಂದಲೇ ಬನ್ನಿ ಪೂಜೆ ನೆರವೇರಿಸಿದರು. ಈ ಕ್ಷಣಗಳು ಹೀಗಿದ್ದವು.

  • mysuru vijaya dashami ದಸರಾ ಎಂದರೆ ಅದು ವಿಜಯದಶಮಿಯೂ ಹೌದು. ವಿಜಯ ಸಾಧಿಸಿದ ಸಂಕೇತವಾಗಿ ವಿಜಯದಶಮಿಯನ್ನು ಆಚರಿಸುವುದು ಸಂಪ್ರದಾಯ. ಮೈಸೂರು ಅರಮನೆಯಲ್ಲಿ ರಾಜವಂಶಸ್ಥರು ವಿಜಯದಶಮಿಯನ್ನು ಶಮೀಪೂಜೆಯೊಂದಿಗೆ ನೆರವೇರಿಸುತ್ತಾರೆ. ಈ ಬಾರಿ ಯದುವೀರ್‌ ಒಡೆಯರ್‌ ಹಾಗೂ ರಾಜವಂಶಸ್ಥ ಪರಿವಾರದವರೂ ಸಂಭ್ರಮದಿಂದಲೇ ಬನ್ನಿ ಪೂಜೆ ನೆರವೇರಿಸಿದರು. ಈ ಕ್ಷಣಗಳು ಹೀಗಿದ್ದವು.
ಮೈಸೂರು ಅರಮನೆ ಆವರಣದಲ್ಲಿ ವಿಜಯದಶಮಿ ಸಡಗರ. ಅರಮನೆಯ ಆನೆಗಳು ಶಮೀ ಪೂಜೆಗೂ ಮುನ್ನ ಪೂಜೆಗೆ ಹೊರಟವು. ಈ ವೇಳೆ ಯದುವೀರ್‌ ಅವರು ಮೆರವಣಿಗೆಯಲ್ಲಿ ಆಗಮಿಸಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು.
(1 / 5)
ಮೈಸೂರು ಅರಮನೆ ಆವರಣದಲ್ಲಿ ವಿಜಯದಶಮಿ ಸಡಗರ. ಅರಮನೆಯ ಆನೆಗಳು ಶಮೀ ಪೂಜೆಗೂ ಮುನ್ನ ಪೂಜೆಗೆ ಹೊರಟವು. ಈ ವೇಳೆ ಯದುವೀರ್‌ ಅವರು ಮೆರವಣಿಗೆಯಲ್ಲಿ ಆಗಮಿಸಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು.
ಮೈಸೂರಿನಲ್ಲಿ ಪಲ್ಲಕ್ಕಿಯೊಂದಿಗೆ ವಿಜಯದಶಮಿಯ ಮಹತ್ವದ ಪೂಜೆಯಾದ ಶಮೀ ಪೂಜೆಗೆ ಸಾಂಪ್ರದಾಯಿಕ ಧಿರಿಸಿನೊಂದಿಗೆ ರಾಜವಂಶಸ್ಥ ಯದುವೀರ್‌ ಒಡೆಯರ್‌ ಅವರು ಹೊರಟರು. ಮಂಗಳವಾರ ಮಧ್ಯಾಹ್ನ ಅರಮನೆ ಅಂಗಳದಲ್ಲಿ ವೈಭವದ ಚಟುವಟಿಕೆಗಳು ಜರುಗಿದವು.
(2 / 5)
ಮೈಸೂರಿನಲ್ಲಿ ಪಲ್ಲಕ್ಕಿಯೊಂದಿಗೆ ವಿಜಯದಶಮಿಯ ಮಹತ್ವದ ಪೂಜೆಯಾದ ಶಮೀ ಪೂಜೆಗೆ ಸಾಂಪ್ರದಾಯಿಕ ಧಿರಿಸಿನೊಂದಿಗೆ ರಾಜವಂಶಸ್ಥ ಯದುವೀರ್‌ ಒಡೆಯರ್‌ ಅವರು ಹೊರಟರು. ಮಂಗಳವಾರ ಮಧ್ಯಾಹ್ನ ಅರಮನೆ ಅಂಗಳದಲ್ಲಿ ವೈಭವದ ಚಟುವಟಿಕೆಗಳು ಜರುಗಿದವು.
ಮೈಸೂರಿನ ಅರಮನೆ ಆವರಣದಲ್ಲಿರುವ ಬನ್ನಿ ಮರದ ಬಳಿ ಆಗಮಿಸಿದ ಯದುವೀರ್‌ ಒಡೆಯರ್‌ ಅವರು ಅಲ್ಲಿವಿಜಯದಶಮಿ ಪೂಜಾ ವಿಧಿ ವಿಧಾನಗಳನ್ನು ಪೂರ್ಣಗೊಳಿಸಿದರು.
(3 / 5)
ಮೈಸೂರಿನ ಅರಮನೆ ಆವರಣದಲ್ಲಿರುವ ಬನ್ನಿ ಮರದ ಬಳಿ ಆಗಮಿಸಿದ ಯದುವೀರ್‌ ಒಡೆಯರ್‌ ಅವರು ಅಲ್ಲಿವಿಜಯದಶಮಿ ಪೂಜಾ ವಿಧಿ ವಿಧಾನಗಳನ್ನು ಪೂರ್ಣಗೊಳಿಸಿದರು.
ಮೈಸೂರು ಅರಮನೆ ಆವರಣದಲ್ಲಿ ಶಮೀ ಪೂಜೆ ವೇಳೆ ಪೂಜಾ ವಿಧಿ ವಿಧಾನಗಳನ್ನು ಪೂರೈಸಿದ ರಾಜವಂಶಸ್ಥ ಯದುವೀರ್‌ ಒಡೆಯರ್‌.
(4 / 5)
ಮೈಸೂರು ಅರಮನೆ ಆವರಣದಲ್ಲಿ ಶಮೀ ಪೂಜೆ ವೇಳೆ ಪೂಜಾ ವಿಧಿ ವಿಧಾನಗಳನ್ನು ಪೂರೈಸಿದ ರಾಜವಂಶಸ್ಥ ಯದುವೀರ್‌ ಒಡೆಯರ್‌.
ಮೈಸೂರಿನ ಅರಮನೆ ಆವರಣದಲ್ಲಿ ಸಂಪ್ರದಾಯದಂತೆಯೇ ಮೆರವಣಿಗೆಯಲ್ಲಿ ಆಗಮಿಸಿ ಶಮೀ ಪೂಜೆ ಸಲ್ಲಿಸಿದ ರಾಜವಂಶಸ್ಥ ಯದುವೀರ್‌ ಒಡೆಯರ್‌ ಅವರು ಭುವನೇಶ್ವರಿ ದೇಗುಲದಲ್ಲಿ ಪೂಜೆ ಸಲ್ಲಿಸಿ ಹೊರ ಬಂದರು.
(5 / 5)
ಮೈಸೂರಿನ ಅರಮನೆ ಆವರಣದಲ್ಲಿ ಸಂಪ್ರದಾಯದಂತೆಯೇ ಮೆರವಣಿಗೆಯಲ್ಲಿ ಆಗಮಿಸಿ ಶಮೀ ಪೂಜೆ ಸಲ್ಲಿಸಿದ ರಾಜವಂಶಸ್ಥ ಯದುವೀರ್‌ ಒಡೆಯರ್‌ ಅವರು ಭುವನೇಶ್ವರಿ ದೇಗುಲದಲ್ಲಿ ಪೂಜೆ ಸಲ್ಲಿಸಿ ಹೊರ ಬಂದರು.

    ಹಂಚಿಕೊಳ್ಳಲು ಲೇಖನಗಳು