ಕನ್ನಡ ಸುದ್ದಿ  /  ಮನರಂಜನೆ  /  ಸಮುದ್ರ ತೀರ ಶುಚಿಗೊಳಿಸಿದ ಅಕ್ಷಯ್‌ ಕುಮಾರ್;‌ ನಾಟಕ ಸಾಕು, ಫೋಟೋ ತೆಗೆದಾಯ್ತು, ನೀವಿನ್ನು ಹೊರಡಿ ಎಂದ ನೆಟ್ಟಿಗರು

ಸಮುದ್ರ ತೀರ ಶುಚಿಗೊಳಿಸಿದ ಅಕ್ಷಯ್‌ ಕುಮಾರ್;‌ ನಾಟಕ ಸಾಕು, ಫೋಟೋ ತೆಗೆದಾಯ್ತು, ನೀವಿನ್ನು ಹೊರಡಿ ಎಂದ ನೆಟ್ಟಿಗರು

Oct 01, 2023 06:42 PM IST

ಸಮುದ್ರ ತೀರ ಶುಚಿಗೊಳಿಸಿದ ಅಕ್ಷಯ್‌ ಕುಮಾರ್;‌ ನಿಮ್ಮ ನಾಟಕ ಸಾಕು, ಫೋಟೋ ತೆಗೆದಾಯ್ತು, ನೀವಿನ್ನು ಹೊರಡಿ ಎಂದ ನೆಟ್ಟಿಗರು

    • ನಟ ಅಕ್ಷಯ್‌ ಕುಮಾರ್‌ ಸದ್ಯ ಸಿನಿಮಾ ಶೂಟಿಂಗ್‌ ನಿಮಿತ್ತ ವಿದೇಶದಲ್ಲಿದ್ದಾರೆ. ಪ್ರಧಾನಿ ಮೋದಿ ಕರೆಯಂತೆ, ಅಲ್ಲಿನ ಸಮುದ್ರದ ತೀರ ಶುಚಿಗೊಳಿಸಿ ಸ್ವಚ್ಛತಾ ಅಭಿಯಾನಕ್ಕೆ ಸಾಥ್‌ ನೀಡಿದ್ದಾರೆ. 
ಸಮುದ್ರ ತೀರ ಶುಚಿಗೊಳಿಸಿದ ಅಕ್ಷಯ್‌ ಕುಮಾರ್;‌ ನಿಮ್ಮ ನಾಟಕ ಸಾಕು, ಫೋಟೋ ತೆಗೆದಾಯ್ತು, ನೀವಿನ್ನು ಹೊರಡಿ ಎಂದ ನೆಟ್ಟಿಗರು
ಸಮುದ್ರ ತೀರ ಶುಚಿಗೊಳಿಸಿದ ಅಕ್ಷಯ್‌ ಕುಮಾರ್;‌ ನಿಮ್ಮ ನಾಟಕ ಸಾಕು, ಫೋಟೋ ತೆಗೆದಾಯ್ತು, ನೀವಿನ್ನು ಹೊರಡಿ ಎಂದ ನೆಟ್ಟಿಗರು

Akshay Kumar: ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಇತ್ತೀಚಿನ ಕೆಲ ವರ್ಷಗಳಿಂದ ಸಿನಿಮಾ ಗೆಲುವಿನ ಹುಡುಕಾಟದಲ್ಲಿದ್ದಾರೆ. ಸಾಲು ಸಾಲು ಸೋಲಿನಿಂದ ಕಂಗೆಟ್ಟು ಹೋಗಿದ್ದಾರೆ. ಈ ಹಿಂದೆ ಅಕ್ಷಯ್‌ ಕುಮಾರ್‌ ಸಿನಿಮಾ ಎಂದರೆ, ಏನಿಲ್ಲ ಅಂದರೂ 100 ಕೋಟಿ ಗಳಿಕೆಗೆ ಕೊರತೆಯಿಲ್ಲ ಅನ್ನೋ ಮಾತಿತ್ತು. ಆದರೆ, ಇತ್ತೀಚಿನ ಕೆಲ ವರ್ಷಗಳಿಂದ ಬಾಕ್ಸ್‌ ಆಫೀಸ್‌ನಲ್ಲಿ ಅವರ ಸಿನಿಮಾಗಳು ಕಲೆಕ್ಷನ್‌ ಮಾಡಲು ಪರದಾಡುತ್ತಿವೆ. ಆಗಾಗ ಟ್ರೋಲ್‌ಗೂ ಆಹಾರವಾಗುತ್ತಿರುತ್ತಾರೆ. ಈಗ ಮತ್ತೊಮ್ಮೆ ಟ್ರೋಲ್‌ ಆಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಅವಳು ಕೊನೆಗೂ ತಾಯಿ ಆದಳು, ಆರು ಪುಟಾಣಿಗಳೂ ಮಡಿಲು ಸೇರಿದವು; ಮೈಸೂರಿಗೆ ಓಡೋಡಿ ಬಂದು ಸಿಹಿ ಸುದ್ದಿ ಕೊಟ್ಟ ರಕ್ಷಿತ್‌ ಶೆಟ್ಟಿ

Explainer: 4 ತಿಂಗಳಲ್ಲಿ ಮಲಯಾಳಂ ಚಿತ್ರರಂಗ ಗಳಿಸಿದ್ದು 1000 ಕೋಟಿ, ಕನ್ನಡ ಚಿತ್ರರಂಗ 100 ಕೋಟಿನೂ ದಾಟಿಲ್ವಲ್ಲ ಗುರೂ! ಹಿಂಗಾದ್ರೆ ಹೆಂಗೇ?

ಕನ್ನಡ ಕಿರುತೆರೆಯಲ್ಲಿ ಮರ್ಯಾದಾ ಪುರುಷೋತ್ತಮನ ಜೀವನಗಾಥೆ; ಶ್ರೀಮದ್‌ ರಾಮಾಯಣ ಮಹಾಕಾವ್ಯ ಎಲ್ಲಿ, ಯಾವಾಗಿನಿಂದ ಶುರು?

Blink OTT: ಭಾರತದ ಒಟಿಟಿಯಲ್ಲೂ ಬಿಡುಗಡೆಯಾಯ್ತು ಬ್ಲಿಂಕ್‌ ಸಿನಿಮಾ; ದೀಕ್ಷಿತ್‌ ಶೆಟ್ಟಿ‌ ನಟನೆಯ ಸಿನಿಮಾಕ್ಕೆ ಒಟಿಟಿ ವೀಕ್ಷಕರಿಂದ ಬಹುಪರಾಕ್‌

ಅಕ್ಟೋಬರ್‌ 2ರಂದು ಗಾಂಧಿ ಜಯಂತಿ. ಅದಕ್ಕೂ ಮುನ್ನಾದಿನವಾದ ಇಂದು (ಅ. 1) ಸ್ವಚ್ಛತಾ ಅಭಿಯಾನದ ಅಂಗವಾಗಿ ಅಕ್ಷಯ್‌ ಕುಮಾರ್‌ ವಿಶೇಷ ಫೋಟೋವೊಂದನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಕೈಯಲ್ಲಿ ಪೊರಕೆ ಹಿಡಿದು, ಸಮುದ್ರ ತೀರವನ್ನು ಸ್ವಚ್ಛಗೊಳಿಸುವ ಪೋಟೋ ಹಂಚಿಕೊಂಡಿದ್ದಾರೆ. ಈ ಮೂಲಕ ಸ್ವಚ್ಛತಾ ಅಭಿಯಾನಕ್ಕೆ ಕೈ ಜೋಡಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಇದೀಗ ಈ ಫೋಟೋ ನೋಡಿದ ನೆಟ್ಟಿಗ ಬಗೆಬಗೆ ಕಾಮೆಂಟ್‌ ಮೂಲಕ ಟ್ರೋಲ್‌ ಮಾಡುತ್ತಿದ್ದಾನೆ.

ವಿದೇಶದಿಂದಲೇ ಅಭಿಯಾನ

ಸ್ವಚ್ಛತೆ ಎನ್ನುವುದು ಕೇವಲ ಭೌತಿಕ ಸ್ಪೇಸ್‌ ಅಲ್ಲ, ಅದು ನಮ್ಮೆಲ್ಲರ ಮನಸ್ಸಿನ ಸ್ಥಿತಿ. ದೇಶದಿಂದ ಹೊರಗಿರುವ ನನಗೆ ಸ್ವಚ್ಛತಾ ಅಭಿಯಾನಕ್ಕೆ ಗೌರವ ಸಲ್ಲಿಸುವುದನ್ನು ತಡೆಯಲಾಗಲಿಲ್ಲ. ಹಾಗಾಗಿ ನೀವು ಎಲ್ಲಿದ್ದರೂ, ನಿಮ್ಮ ಜಾಗವನ್ನು ಮತ್ತು ಮನಸ್ಸನ್ನು ಸ್ವಚ್ಛವಾಗಿಟ್ಟುಕೊಳ್ಳಿ ಎಂದು ನಾನು ಈ ಮೂಲಕ ಹೇಳುತ್ತೇನೆ #SwachhataHiSeva ಎಂದು ಸಿನಿಮಾ ಶೂಟಿಂಗ್‌ ನಿಮಿತ್ತ ವಿದೇಶದಲ್ಲಿದ್ದರೂ, ಅಲ್ಲಿಂದಲೇ ಈ ಪೋಸ್ಟ್‌ ಹಂಚಿಕೊಂಡಿದ್ದಾರೆ.

ರಜಿನಿಕಾಂತ್‌ ಸಾಥ್

ಮನ್ ಕಿ ಬಾತ್‌ನ ಇತ್ತೀಚಿನ ಸಂಚಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ವಿಚಾರವನ್ನು ಹೇಳಿಕೊಂಡಿದ್ದರು. ಅಕ್ಟೋಬರ್ 1ರಂದು ಎಲ್ಲಾ ನಾಗರಿಕರಿಕರು ಸ್ವಚ್ಛತೆಗಾಗಿ ಒಂದು ಗಂಟೆ ಶ್ರಮದಾನ ಮಾಡಿ ಎಂದು ಮನವಿ ಮಾಡಿದ್ದರು. ಇದು ಸ್ವಚ್ಛಾಂಜಲಿಯಾಗಲಿದೆ ಎಂದಿದ್ದರು. ಮೋದಿ ಅವರ ಈ ಮಾತನ್ನು ಒಪ್ಪಿದ ಅಕ್ಷಯ್‌ ಕುಮಾರ್‌ ಇದೀಗ ಸ್ವಚ್ಛತಾ ಅಭಿಯಾನದ ಫೋಟೋ ಶೇರ್‌ ಮಾಡಿದ್ದಾರೆ. ಅದೇ ರೀತಿ ಸೂಪರ್‌ಸ್ಟಾರ್‌ ರಜಿನಿಕಾಂತ್‌ ಸಹ ಈ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದರು.

ನೆಟ್ಟಿಗ ವಲಯದಲ್ಲಿ ಟ್ರೋಲ್‌

ನಟ ಅಕ್ಷಯ್‌ ಹೀಗೆ ಫೋಟೋ ಶೇರ್‌ ಮಾಡುತ್ತಿದ್ದಂತೆ, ಸಾಲು ಸಾಲು ಕಾಮೆಂಟ್‌ಗಳು ಈ ಫೋಟೋಕ್ಕೆ ಸಂದಾಯವಾಗಿವೆ. ಮೆಚ್ಚುಗೆ ಜತೆಗೆ ಟೀಕೆಗಳೂ ಮೂಡಿವೆ. ಇವ ಅದಷ್ಟು ನಾಟಕ ಮಾಡ್ತಾನೆ. ಮನೆ, ಗಲ್ಲಿ, ಊರು ಇದ್ಯಾವುದೂ ಸಿಗಲಿಲ್ಲವೇ ನಿಮಗೆ ಎಂದರೆ, ಸಾಕು ಮಾಡಿ ಸರ್‌, ಫೋಟೋ ತೆಗೆದಾಯ್ತು.. ಇನ್ನು ಕೆಲವರು ನಿಮ್ಮ ಕೆಲಸಕ್ಕೆ ನಮ್ಮ ಮೆಚ್ಚುಗೆ ಸದಾ ಇದ್ದೇ ಇದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ಕೆಲವರು ಅಕ್ಷಯ್‌ ಕುಮಾರ್‌ ಅವರೇ ಮುಂದಿನ ಪಿಎಂ ಎಂದೂ ಆಡಿಕೊಳ್ಳುತ್ತಿದ್ದಾರೆ.

ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ