ಕನ್ನಡ ಸುದ್ದಿ  /  ಮನರಂಜನೆ  /  ‘ಒಂದು ಸನ್ನೆ ಒಂದು ಮಾತು’ ಸಿನಿಮಾ ಮೂಲಕ ನಾಯಕಿಯಾದ ಅಸಿಸ್ಟಂಟ್‌ ಡೈರೆಕ್ಟರ್‌ ಯಶಸ್ವಿನಿ ನಾಚಪ್ಪ

‘ಒಂದು ಸನ್ನೆ ಒಂದು ಮಾತು’ ಸಿನಿಮಾ ಮೂಲಕ ನಾಯಕಿಯಾದ ಅಸಿಸ್ಟಂಟ್‌ ಡೈರೆಕ್ಟರ್‌ ಯಶಸ್ವಿನಿ ನಾಚಪ್ಪ

Dec 16, 2023 02:47 PM IST

‘ಒಂದು ಸನ್ನೆ ಒಂದು ಮಾತು’ ಸಿನಿಮಾ ಮೂಲಕ ನಾಯಕಿಯಾದ ಅಸಿಸ್ಟಂಟ್‌ ಡೈರೆಕ್ಟರ್‌ ಯಶಸ್ವಿನಿ ನಾಚಪ್ಪ

    • ಅನೇಕ ಚಿತ್ರಗಳಲ್ಲಿ ನಿರ್ದೇಶನ ತಂಡದಲ್ಲಿ ಕೆಲಸ ಮಾಡಿದ ಅನುಭವದ ಜೊತೆಗೆ ಹಲವಾರು ಚಿತ್ರಗಳಿಗೆ ಡಬ್ಬಿಂಗ್ ಕಲಾವಿದೆಯಾಗಿ ಕಾರ್ಯ ನಿರ್ವಹಿಸಿದವರು ಯಶಸ್ವಿನಿ ನಾಚಪ್ಪ. ಇದೀಗ ಇದೇ ಯುವತಿ ನಟಿಯಾಗಿ ಚಂದನವನ ಪ್ರವೇಶ ಪಡೆದಿದ್ದಾರೆ. ಚಿತ್ರಕ್ಕೆ ಒಂದು ಸನ್ನೆ ಒಂದು ಮಾತು ಎಂದು ಹೆಸರಿಡಲಾಗಿದೆ.
‘ಒಂದು ಸನ್ನೆ ಒಂದು ಮಾತು’ ಸಿನಿಮಾ ಮೂಲಕ ನಾಯಕಿಯಾದ ಅಸಿಸ್ಟಂಟ್‌ ಡೈರೆಕ್ಟರ್‌ ಯಶಸ್ವಿನಿ ನಾಚಪ್ಪ
‘ಒಂದು ಸನ್ನೆ ಒಂದು ಮಾತು’ ಸಿನಿಮಾ ಮೂಲಕ ನಾಯಕಿಯಾದ ಅಸಿಸ್ಟಂಟ್‌ ಡೈರೆಕ್ಟರ್‌ ಯಶಸ್ವಿನಿ ನಾಚಪ್ಪ

Yashaswini Nachappa: ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗರಾಜ್ ಭಟ್ ಜೋಡಿಯ ಸೂಪರ್ ಹಿಟ್ ಸಿನಿಮಾ ಮುಗುಳುನಗೆಯಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ ಪ್ರತಿಭೆ ಯಶಸ್ವಿನಿ ನಾಚಪ್ಪ, ಇತ್ತೀಚೆಗಷ್ಟೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಸುಗಳಿಗೆಯಲ್ಲಿಯೇ ಈ ಕೊಡಗಿವ ಕುವರಿ ‘ಒಂದು ಸನ್ನೆ ಒಂದು ಮಾತು’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಭರತ್‌ ಬೋಪಣ್ಣ ಜತೆಗೆ ‘ಸಾವಿರ ಗುಂಗಲಿ’ ಒಲವಿನ ಸವಾರಿ ಹೊರಟ ಬೃಂದಾ ಆಚಾರ್ಯ; ಇಲ್ಲಿದೆ ನೋಡಿ ಹೊಸ ಆಲ್ಬಂ ಹಾಡು

QPL 2024: ಕ್ವೀನ್ಸ್‌ ಪ್ರೀಮಿಯರ್‌ ಲೀಗ್‌ ಶುರು; ಬ್ಯಾಟು ಬಾಲು ಹಿಡಿದು ಕ್ರಿಕೆಟ್ ಆಡಲು ಹೊರಟ ಕಿರುತೆರೆ, ಹಿರಿತೆರೆ ಹೆಣ್ಮಕ್ಕಳು

ಸೀತಾ ರಾಮ ಸೀರಿಯಲ್‌ ದೃಶ್ಯದಲ್ಲಿ ಹೆಲ್ಮೆಟ್‌ ಧರಿಸದೇ ಪ್ರಯಾಣ; ನಟಿ ವೈಷ್ಣವಿ ಗೌಡಗೆ ದಂಡ ವಿಧಿಸಿದ ಟ್ರಾಫಿಕ್‌ ಪೊಲೀಸರು

Pavitra Jayaram: ಭೀಕರ ರಸ್ತೆ ಅಪಘಾತದಲ್ಲಿ ಜೀ ಕನ್ನಡದ ತ್ರಿನಯನಿ ಧಾರಾವಾಹಿ ನಟಿ ಪವಿತ್ರಾ ಜಯರಾಂ ಸಾವು

ಅನೇಕ ಚಿತ್ರಗಳಲ್ಲಿ ನಿರ್ದೇಶನ ತಂಡದಲ್ಲಿ ಕೆಲಸ ಮಾಡಿದ ಅನುಭವದ ಜೊತೆಗೆ ಹಲವಾರು ಚಿತ್ರಗಳಿಗೆ ಡಬ್ಬಿಂಗ್ ಕಲಾವಿದೆಯಾಗಿ ಕಾರ್ಯ ನಿರ್ವಹಿಸಿದವರು ಯಶಸ್ವಿನಿ ನಾಚಪ್ಪ. ಮೂಲತಃ ರಂಗಭೂಮಿಯ ನಂಟಿರುವ ಈ ಪ್ರತಿಭೆ ಇತ್ತೀಚಿನ ದಿನಗಳಲ್ಲಿ ಬಂದಂತಹ ಹೊಸ ಕಲಾವಿದರಿಗೆ ನಟನೆಯಲ್ಲಿ ಟ್ರೇನಿಂಗ್ ಮಾಡಿದ ಅನುಭವವನ್ನೂ ಕೂಡ ಇವರಿಗೆ.

ಟಗರು ಪಲ್ಯ ಸಿನಿಮಾ ಮೂಲಕ ನಾಯಕಿಯಾದ ಅಮೃತಾ ಪ್ರೇಮ್, ಪದವಿ ಪೂರ್ವ ಮೂಲಕ ನಾಯಕನಾದ ಪೃಥ್ವಿ ಶ್ಯಾಮನೂರ್, ಅಂಜಲಿ, ಯಶಾ ಶಿವಕುಮಾರ್ ಹಾಗೂ ಅರ್ಜುನ್ ಗೌಡ ಸೇರಿದಂತೆ ಒಂದಷ್ಟು ಯುವ ಸಿನಿಮೋತ್ಸಾಹಿಗಳಿಗೆ ನಟನೆಯ ತರಬೇತಿ ನೀಡಿದವರು ಯಶಸ್ವಿನಿ ನಾಚಪ್ಪ. ಈಗ ಇದೇ ಯಶಸ್ವಿನಿ ಸಿನಿಮಾ ನಟನೆಗೂ ಇಳಿಯಲು ಸಿದ್ಧರಾಗಿದ್ದಾರೆ.

ಅಭಿನಯ ಫ್ಲಸ್ ನಿರ್ದೇಶನದ ಅನುಭವ ಹೊಂದಿರುವ ಯಶಸ್ವಿನಿ, ನಾಯಕಿಯಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಹಾಗೆ ನೋಡಿದ್ರೆ ಕೊಡಗಿಗೂ ಹಾಗೂ ಕನ್ನಡ ಚಿತ್ರರಂಗಕ್ಕೂ ಅವಿನಾಭಾವ ಸಂಬಂಧವಿದೆ. ನಾಯಕಿಯರ ಕೊಡುಗೆಯಲ್ಲಂತೂ ಕೊಡಗಿನ ಪಾತ್ರ ಬಹಳ ದೊಡ್ಡದು. ಆ ಸಾಲಿನಲ್ಲೀಗ ಯಶಸ್ವಿನಿ ನಾಚಪ್ಪ ಹೊಸ ಸೇರ್ಪಡೆ.

ಅಂದಹಾಗೇ ಥ್ರೀ ಮಂಕೀಸ್ ಶೋ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ‘ಒಂದು ಸನ್ನೆ ಒಂದು ಮಾತು’ ಚಿತ್ರಕ್ಕೆ ಸಂತೋಷ್ ಬಾಗಲಕೋಟಿ ಆಕ್ಷನ್ ಕಟ್ ಹೇಳಿದ್ದಾರೆ. ವಿವೇಕ ಚಕ್ರವರ್ತಿ ಸಂಗೀತ, ಕಿಟ್ಟಿ ಕೌಶಿಕ್ ಛಾಯಾಗ್ರಹಣ ಹಾಗೂ ಶ್ರೀಕಾಂತ್ ಅವರ ಸಂಕಲನ ಚಿತ್ರಕ್ಕಿದೆ. ಸದ್ಯ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಯೋಗರಾಜ್ ಭಟ್ ಗರಡಿಯಲ್ಲಿ ಪಳಗಿದ ಯಶಸ್ವಿನಿ ನಾಚಪ್ಪ ಈ ನಾಯಕಿಯಾಗಿ ಬೆಳ್ಳಿಪರದೆಗೆ ಪರಿಚಿತರಾಗುತ್ತಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ