ಕನ್ನಡ ಸುದ್ದಿ  /  ಮನರಂಜನೆ  /  Friday Release: ಗರಡಿ ಸಿನಿಮಾ ನಾಳೆ ಬಿಡುಗಡೆ; ದರ್ಶನ್‌ ಪಾತ್ರದ ಹೆಸರು ಶಂಕರ, ಗಾಬರಿ ಆನಂದ ಮುಲಮುಲ ಅಂದ್ರು ಯೋಗರಾಜ್‌ ಭಟ್ರು

Friday Release: ಗರಡಿ ಸಿನಿಮಾ ನಾಳೆ ಬಿಡುಗಡೆ; ದರ್ಶನ್‌ ಪಾತ್ರದ ಹೆಸರು ಶಂಕರ, ಗಾಬರಿ ಆನಂದ ಮುಲಮುಲ ಅಂದ್ರು ಯೋಗರಾಜ್‌ ಭಟ್ರು

Praveen Chandra B HT Kannada

Nov 09, 2023 12:09 PM IST

Friday Release: ಗರಡಿ ಸಿನಿಮಾ ನಾಳೆ ಬಿಡುಗಡೆ; ದರ್ಶನ್‌ ಪಾತ್ರದ ಹೆಸರು ಶಂಕರ

    • Garadi Movie Release: ಈ ದೀಪಾವಳಿ ಹಬ್ಬದ ವೇಳೆಗೆ ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಲು ಬಯಸುವ ಕನ್ನಡಿಗರಿಗಾಗಿ ಬಹುನಿರೀಕ್ಷಿತ ಗರಡಿ ಸಿನಿಮಾ ನವೆಂಬರ್‌ 10ರಂದು ಬಿಡುಗಡೆಯಾಗುತ್ತಿದೆ. ಯೋಗರಾಜ್‌ ಭಟ್‌ ನಿರ್ದೇಶನದ ಗರಡಿ ಚಿತ್ರದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರು ಶಂಕರ್‌ ಆಗಿ ಕಾಣಿಸಿಕೊಂಡಿದ್ದಾರೆ.  ತೇಜಸ್‌ ಸೂರ್ಯ ಈ ಚಿತ್ರದ ನಾಯಕ ನಟ. 
Friday Release: ಗರಡಿ ಸಿನಿಮಾ ನಾಳೆ ಬಿಡುಗಡೆ; ದರ್ಶನ್‌ ಪಾತ್ರದ ಹೆಸರು ಶಂಕರ
Friday Release: ಗರಡಿ ಸಿನಿಮಾ ನಾಳೆ ಬಿಡುಗಡೆ; ದರ್ಶನ್‌ ಪಾತ್ರದ ಹೆಸರು ಶಂಕರ

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಗರಡಿ ಚಿತ್ರವು ನಾಳೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇಂದು ಶಂಕ್ರಣ್ಣನ ಹುಟ್ಟು ಹಬ್ಬ. ಗರಡಿಯಲ್ಲಿ ದರ್ಶನ್‌ ಸರ್‌ ಹೆಸರು ಶಂಕರ. ನಾಳೆ ಗರಡಿ ರಿಲೀಸು. ಹೀಗೆಲ್ಲ ಏನೇನೋ ವಿಶೇಷಗಳು. ಚೂರು ಆನಂದ.. ಚೂರು ಗಾಬರಿ.. ಒಂದಿಷ್ಟು ಮುಲಮುಲ ಎಂದು ಗರಡಿ ಸಿನಿಮಾ ಬಿಡುಗಡೆ ಸಂದರ್ಭದ ಭಾವನೆಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಯೋಗರಾಜ್‌ ಭಟ್‌ ಹಂಚಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಡಾಲಿ ಧನಂಜಯ್‌ ನಟನೆಯ ಕೋಟಿ ಸಿನಿಮಾದ ಮೊದಲ ಹಾಡು ಬಿಡುಗಡೆ; ಬಾಯಿಗೆ ಬಾರದೆ ಮಾತು ಹಾಡನ್ನು ಕೇಳೋಣ ಬನ್ನಿ

ಅಪಘಾತದಲ್ಲಿ ಮೃತಪಟ್ಟ ಪವಿತ್ರಾ ಜಯರಾಮ್‌ ನೆನೆದು ಪತಿ ಚಂದ್ರಕಾಂತ್‌ ಭಾವುಕ ಬರಹ; ಚಂದು ಅಣ್ಣನ ಅಳು ನೋಡಲಾಗುತ್ತಿಲ್ಲ ಎದ್ದು ಬಾ ಅಕ್ಕ

ಟರ್ಬೊ ಟ್ರೇಲರ್‌ ಬಿಡುಗಡೆ: ಮಮ್ಮುಟ್ಟಿ ಜತೆ ರಾಜ್‌ ಬಿ ಶೆಟ್ಟಿ ನಟಿಸಿರುವ ಪ್ಯಾನ್‌ ಇಂಡಿಯಾ ಚಿತ್ರ ಮುಂದಿನ ವಾರ ರಿಲೀಸ್‌

ಸೀತಾರಾಮ ನಟಿ ವೈಷ್ಣವಿ ಗೌಡಗೆ ಟ್ರಾಫಿಕ್‌ ಫೈನ್‌; ಅಮೃತಧಾರೆ ಜೀವನ್‌ ಸೇರಿದಂತೆ ಹೆಲ್ಮೆಟ್‌ ಧರಿಸದೆ ನಟಿಸಿರೋ ಕಲಾವಿದರನ್ನು ಎಚ್ಚರಿಸಿ

ದೀಪಾವಳಿ ಹಬ್ಬದ ಸಂಭ್ರಮ ಹೆಚ್ಚಿಸಲಿದೆಯೇ ಗರಡಿ

ದೀಪಾವಳಿ ಹಬ್ಬದ ಸಮಯದಲ್ಲಿ ಮೊದಲೆಲ್ಲ ಹಲವು ಪ್ರಮುಖ ಸಿನಿಮಾಗಳು ಬಿಡುಗಡೆಯಾಗುತ್ತಿದ್ದವು. ಈ ಬಾರಿ ಪ್ರಮುಖ ಸಿನಿಮಾಗಳು ಇಲ್ಲ ಎನ್ನುವ ಸ್ಥಾನವನ್ನು ಗರಡಿ ಆಕ್ರಮಿಸಿಕೊಂಡಿದೆ. ಯೋಗರಾಜ್‌ ಭಟ್‌ ಸಿನಿಮಾದಲ್ಲಿ ಏನೋ ಇರುತ್ತದೆ ಎನ್ನುವ ನಿರೀಕ್ಷೆ ಸಾಮಾನ್ಯ. ಇದೇ ಸಂದರ್ಭದಲ್ಲಿ ಈ ಚಿತ್ರದಲ್ಲಿ ದರ್ಶನ್‌ ಕೂಡ ನಟಿಸಿರುವುದು ಸಾಕಷ್ಟು ಪ್ರೇಕ್ಷಕರ ಕುತೂಹಲ ಕೆರಳಿಸಿದೆ. ಸೂರ್ಯ ಎಂಬ ಯುವಕ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಎಂಟ್ರಿ ನೀಡುತ್ತಿದ್ದಾರೆ.

ಹಾಡುಗಳು ಸೂಪರ್‌

ಈಗಾಗಲೇ ಬಿಡುಗಡೆಯಾಗಿರುವ ಗರಡಿ ಚಿತ್ರದ ಹಾಡುಗಳು ಸಿನಿಪ್ರೇಕ್ಷಕರ ಗಮನ ಸೆಳೆದಿದೆ. ಜತೆಗೆ, ಟ್ರೈಲರ್‌, ಟೀಸರ್‌ಗಳೂ ಭರ್ಜರಿಯಾಗಿವೆ. ಕನ್ನಡ ನಾಡಿನ ಸೊಗಡು ಚಿತ್ರದಲ್ಲಿ ತುಂಬಿಕೊಂಡಿರುವುದು ಗೊತ್ತಾಗುತ್ತಿದೆ. ಕುಸ್ತಿ ಅಖಾಡ, ಕುಸ್ತಿ ಪಟುಗಳ ಕಥೆಯೂ ಚಿತ್ರದಲ್ಲಿ ಇರಲಿದೆ. ಜತೆಗೆ ಒಂದು ಪ್ರೇಮಕಥೆ, ಅಪರಾಧ, ಪೊಲೀಸ್‌... ಹೀಗೆ ಚಿತ್ರದಲ್ಲಿ ಇನ್ನೂ ಏನೇನೋ ಇರುವ ಸೂಚನೆಯನ್ನು ಟ್ರೈಲರ್‌ ಈಗಾಗಲೇ ನೀಡಿದೆ.

ನಟ ಸೂರ್ಯ ನಾಯಕ ನಟ

ಈ ಚಿತ್ರದಲ್ಲಿ ಕುಸ್ತಿಪಟುವಾಗಿ ಯಶಸ್‌ ಸೂರ್ಯ ನಟಿಸಿದ್ದಾರೆ. ಈ ಚಿತ್ರವು ಅವರಿಗೆ ಯಶಸ್ಸು ನೀಡಿದರೆ ಮುಂದಿನ ದಿನಗಳಲ್ಲಿ ಸೂರ್ಯ ನಟನೆಯ ಇನ್ನಷ್ಟು ಕನ್ನಡ ಚಿತ್ರಗಳನ್ನು ನೋಡಬಹುದು. ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಕೂಡ ಕಾಣಿಸಿಕೊಂಡಿದ್ದಾರೆ. ಗರಡಿ ಚಿತ್ರದಲ್ಲಿ ನಟ ಯಶಸ್‌ ಸೂರ್ಯನಿಗೆ ನಾಯಕಿಯಾಗಿ ಸೋನಾಲ್‌ ಮಾಂಟೆರೊ ಇದ್ದಾರೆ. ಬಿ.ಸಿ. ಪಾಟೀಲ್‌ ನಟನೆಯ ಝಲಕ್‌ ಈಗಾಗಲೇ ಟ್ರೈಲರ್‌ನಲ್ಲಿ ಕಾಣಿಸಿಕೊಂಡಿದೆ. ರವಿಶಂಕರ್‌, ಬಲ ರಾಜವಾಡಿ, ಚೆಲುವ ರಾಜು, ರಾಘವೇಂದ್ರ, ಸೂರಜ್‌ ಬೇಲೂರು, ಕಾಮಿಡಿ ಕಿಲಾಡಿಯ ನಯನ, ತ್ರಿವೇಣಿ, ರವಿಚೇತನ್‌, ತೇಜಸ್ವಿನಿ ಪ್ರಕಾಸ್‌ ಮುಂತಾದವರು ತಾರಾಗಣದಲ್ಲಿದ್ದಾರೆ.

ಇತ್ತೀಚೆಗೆ ರಾಣೆಬೆನ್ನೂರಿನಲ್ಲಿ ಗರಡಿ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿತ್ತು. ಗರಡಿ ಚಿತ್ರದ ಟ್ರೈಲರ್‌ ಅನ್ನು ನಟ ದರ್ಶನ್‌ ಅವರು ಬಿಡುಗಡೆ ಮಾಡಲಿದ್ದಾರೆ ಎಂದು ಆಂಕರ್‌ ಅನುಶ್ರೀ ನಿರೂಪಣೆ ಮಾಡಿದಾಗ ನಟ ದರ್ಶನ್‌ "ನಮ್ಮ ಸಿನಿಮಾದ ಟ್ರೈಲರ್‌ ನಾವೇ ಬಿಡುಗಡೆ ಮಾಡಿದರೆ ಹೇಗೆ, ಸೌಮ್ಯ ವೇದಿಕೆ ಮೇಲೆ ಬಾರಮ್ಮ" ಎಂದು ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ ಸೌಮ್ಯರನ್ನು ನಟ ದರ್ಶನ್‌ ವೇದಿಕೆಗೆ ಆಹ್ವಾನಿಸಿದರು. ವೇದಿಕೆಗೆ ಸೌಮ್ಯರನ್ನು ಕೈ ಹಿಡಿದು ಆಹ್ವಾನಿಸಿದ ನಟ ದರ್ಶನ್‌ "ಪ್ಲೇ ಮಾಡು ಚಿನ್ನ" ಎಂದು ಟ್ರೈಲರ್‌ ಲಾಂಚ್‌ ಮಾಡಿಸಿದರು. ಈ ಮೂಲಕ ಜನ ಸಾಮಾನ್ಯರಿಂದಲೇ ಟ್ರೈಲರ್‌ ಬಿಡುಗಡೆ ಮಾಡಿಸಿದ್ರು.

ಸೌಮ್ಯ ಫಿಲಂಸ್‌ ಹಾಗೂ ಕೌರವ ಪ್ರೊಡಕ್ಷನ್‌ ಹೌಸ್‌ ಲಾಂಛನದಲ್ಲಿ ವನಜಾ ಪಾಟೀಲ್‌ ನಿರ್ಮಿಸಿದ ಗರಡಿ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಸುರೇಶ್‌ ಸಂಕಲನ, ನಿರಂಜನ್‌ ಬಾಬು ಛಾಯಾಗ್ರಹಣ ಇರುವ ಈ ಚಿತ್ರದ ವಿತರಣಾ ಹಕ್ಕನ್ನು ರಿಲಯೆನ್ಸ್‌ ಎಂಟರ್‌ಟೇನ್‌ಮೆಂಟ್‌ ಪಡೆದಿದೆ. ಸೃಷ್ಟಿ ಪಾಟೀಲ್‌ ಅವರು ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಸೂರ್ಯ ನಾಯಕನಟನಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಸೋನಾಲ್‌ ಮೊಂತೆರೊ, ಬಿ.ಸಿ.ಪಾಟೀಲ್, ರವಿಶಂಕರ್, ಧರ್ಮಣ್ಣ, ಸುಜಯ್ ಬೇಲೂರು, ರಾಘವೇಂದ್ರ, ಚೆಲುವರಾಜ್, ತೇಜಸ್ವಿನಿ ಪ್ರಕಾಶ್, ನಯನ ಸೇರಿದಂತೆ ಹಲವು ಕಲಾವಿದದರು ಈ ಚಿತ್ರದಲ್ಲಿದ್ದಾರೆ. ನಾಳೆ ಕರ್ನಾಟಕದ್ಯಾಂತ ಗರಡಿ ಚಿತ್ರ ಬಿಡುಗಡೆಯಾಗುತ್ತಿದ್ದು, ಸಿನಿರಸಿಕರಿಲ್ಲಿ ಹಬ್ಬದ ಸಂಭ್ರಮ ಉಂಟು ಮಾಡಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ