ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Electoral Bonds: ಭಾರತದ ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್ ಮಾಹಿತಿ ಹಸ್ತಾಂತರಿಸಿದ ಎಸ್‌ಬಿಐ, ಶೀಘ್ರವೇ ಬಹಿರಂಗ

Electoral Bonds: ಭಾರತದ ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್ ಮಾಹಿತಿ ಹಸ್ತಾಂತರಿಸಿದ ಎಸ್‌ಬಿಐ, ಶೀಘ್ರವೇ ಬಹಿರಂಗ

Umesh Kumar S HT Kannada

Mar 13, 2024 10:05 AM IST

ಎಸ್‌ಬಿಐ ಸಾಂಕೇತಿಕ ಚಿತ್ರ (ಎಡ ಚಿತ್ರ); ಭಾರತ ಸುಪ್ರೀಂ ಕೋರ್ಟ್‌ (ಬಲ ಚಿತ್ರ)

  • ಲೋಕಸಭೆ ಚುನಾವಣೆ 2024 ಸನ್ನಿಹಿತವಾಗಿರುವಾಗಲೇ ಚುನಾವಣಾ ಬಾಂಡ್ ವಿಚಾರ ಹೆಚ್ಚು ಚರ್ಚೆಗೆ ಒಳಗಾಗಿದೆ. ಚುನಾವಣಾ ಬಾಂಡ್ ವಿತರಿಸುತ್ತಿದ್ದ ಏಕೈಕ ಬ್ಯಾಂಕ್ ಎಸ್‌ಬಿಐ, ತನ್ನ ಬಳಿ ಇರುವ ಎಲ್ಲ ವಿವರಗಳನ್ನು ನಿನ್ನೆ (ಮಾರ್ಚ್ 12) ಚುನಾವಣಾ ಆಯೋಗಕ್ಕೆ ಹಸ್ತಾಂತರಿಸಿದೆ. ಸಾರ್ವಜನಿಕವಾಗಿ ಇದು ಯಾವಾಗ ಲಭ್ಯವಾಗಲಿದೆ- ಇಲ್ಲಿದೆ ಮಾಹಿತಿ. 

ಎಸ್‌ಬಿಐ ಸಾಂಕೇತಿಕ ಚಿತ್ರ (ಎಡ ಚಿತ್ರ); ಭಾರತ ಸುಪ್ರೀಂ ಕೋರ್ಟ್‌ (ಬಲ ಚಿತ್ರ)
ಎಸ್‌ಬಿಐ ಸಾಂಕೇತಿಕ ಚಿತ್ರ (ಎಡ ಚಿತ್ರ); ಭಾರತ ಸುಪ್ರೀಂ ಕೋರ್ಟ್‌ (ಬಲ ಚಿತ್ರ)

ನವದೆಹಲಿ: ಸುಪ್ರೀಂ ಕೋರ್ಟ್ ಆದೇಶದ ಅನುಸಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮಾರ್ಚ್ 12 ರಂದು ಚುನಾವಣಾ ಬಾಂಡ್‌ಗಳ ಎಲ್ಲ ದತ್ತಾಂಶವನ್ನು ಭಾರತದ ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ದೇಶದ ಅತಿದೊಡ್ಡ ಸಾಲದಾತ ಬ್ಯಾಂಕ್‌ ಈ ಹಿಂದೆ ಚುನಾವಣಾ ಬಾಂಡ್‌ಗಳ ವಿವರ ಬಹಿರಂಗಗೊಳಿಸುವುದಕ್ಕೆ ಜೂನ್‌ 30ರ ತನಕ ಕಾಲಾವಕಾಶ ಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿತ್ತು. ಆದರೆ, ಕೋರ್ಟ್ ಅದಕ್ಕೆ ಅವಕಾಶ ನೀಡದೇ ಒಂದೇ ದಿನದ ಕಾಲಾವಕಾಶ ನೀಡಿತ್ತು.

ಟ್ರೆಂಡಿಂಗ್​ ಸುದ್ದಿ

Sushil Kumar Modi: ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅನಾರೋಗ್ಯದಿಂದ ವಿಧಿವಶ; ಗಣ್ಯರ ಕಂಬನಿ

Mumbai Dust Storm 2024: ಮುಂಬೈನಲ್ಲಿ ಭಾರೀ ಗಾಳಿಗೆ ಹೋರ್ಡಿಂಗ್‌ ಕುಸಿದು ನಾಲ್ವರ ಸಾವು, ಹಲವರ ಸ್ಥಿತಿ ಗಂಭೀರ, ಹೇಗಿತ್ತು ಸನ್ನಿವೇಶ

ಅಡ್ಡ ಬಂದ ಕೋತಿ ತಪ್ಪಿಸಲು ಹೋಗಿ ಅಪಘಾತ, ಬ್ಯಾಂಕ್‌ ಅಧಿಕಾರಿ,ಸಿಬ್ಬಂದಿ ಸೇರಿ ಮೂವರ ದುರ್ಮರಣ

4ನೇ ಹಂತದ ಲೋಕಸಭೆ ಚುನಾವಣೆ; ಬೆಳಗ್ಗೆ 11ರ ವರೆಗೆ ಶೇ 25 ರಷ್ಟು ಮತದಾನ, ಈವರೆಗೆ ತಿಳಿಯಬೇಕಾದ 10 ಅಂಗಳಿವು

ಚುನಾವಣಾ ಬಾಂಡ್‌ಗಳ ಯೋಜನೆ 2018ರಲ್ಲಿ ಆರಂಭವಾಗಿದ್ದು, ಅಂದಿನಿಂದ ಎಸ್‌ಬಿಐ 30 ಕಂತುಗಳಲ್ಲಿ ಬಾಂಡ್‌ ಬಿಡುಗಡೆಮಾಡಿತ್ತು. ಅವುಗಳ ಮೌಲ್ಯ 16,518 ಕೋಟಿ ರೂಪಾಯಿ ಎಂದು ವರದಿ ಹೇಳಿದೆ.

ಮಾರ್ಚ್ 12 ರಂದು ವ್ಯವಹಾರದ ಸಮಯದ ಅಂತ್ಯದ ವೇಳೆಗೆ ರಾಜಕೀಯ ಪಕ್ಷಗಳು ನಗದೀಕರಿಸಿದ ಚುನಾವಣಾ ಬಾಂಡ್‌ಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ಬಹಿರಂಗಪಡಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಎಸ್‌ಬಿಐಗೆ ನಿರ್ದೇಶನ ನೀಡಿತ್ತು.

ಚುನಾವಣಾ ಬಾಂಡ್ ಅಸಾಂವಿಧಾನಿಕ ಯೋಜನೆ; ಸುಪ್ರೀಂ ಕೋರ್ಟ್‌ ಪಂಚ ಪೀಠದ ತೀರ್ಪು

ಭಾರತದ ಸರ್ವೋಚ್ಚ ನ್ಯಾಯಾಲಯದ ಐದು ನ್ಯಾಯಾಧೀಶರ ಪೀಠವು ಐತಿಹಾಸಿಕ ತೀರ್ಪಿನಲ್ಲಿ, ವಿವಾದಾತ್ಮಕ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿತ್ತು. ಇದನ್ನು 'ಅಸಾಂವಿಧಾನಿಕ' ಎಂದು ಬಣ್ಣಿಸಿದೆ.

ಈ ಚುನಾವಣಾ ಬಾಂಡ್‌ ಯೋಜನೆಯನ್ನು ಮುಚ್ಚಲು ಆದೇಶಿಸಿದ ಸುಪ್ರೀಂ ಕೋರ್ಟ್, ಏಪ್ರಿಲ್ 12, 2019 ರಿಂದ ಇಲ್ಲಿಯವರೆಗೆ ಖರೀದಿಸಿದ ಚುನಾವಣಾ ಬಾಂಡ್‌ಗಳ ವಿವರಗಳನ್ನು ಮಾರ್ಚ್ 6 ರೊಳಗೆ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಭಾರತೀಯ ಸ್ಟೇಟ್ ಬ್ಯಾಂಕ್‌ಗೆ ನಿರ್ದೇಶನ ನೀಡಿತ್ತು.

ವಿಶೇಷವೆಂದರೆ, ಕೇಂದ್ರದ ಚುನಾವಣಾ ಬಾಂಡ್ ಯೋಜನೆಯಡಿ ಅನಾಮಧೇಯ ರಾಜಕೀಯ ನಿಧಿಯನ್ನು ಅನುಮತಿಸುವ ಏಕೈಕ ಅಧಿಕೃತ ಹಣಕಾಸು ಸಂಸ್ಥೆ ಎಸ್‌ಬಿಐ ಆಗಿದೆ.

ಇದಲ್ಲದೆ, ಮಾರ್ಚ್ 15 ರಂದು ಸಂಜೆ 5 ಗಂಟೆಯೊಳಗೆ ಬ್ಯಾಂಕ್ ಹಂಚಿಕೊಂಡ ಮಾಹಿತಿಯನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.

ಚುನಾವಣಾ ಬಾಂಡ್‌ಗಳ ಮಾಹಿತಿಯನ್ನು ಕ್ರೋಡೀಕರಿಸಬೇಕಾದರೆ ಸಣ್ಣ ಸಣ್ಣ ಮಾಹಿತಿಯನ್ನೂ ಒಗ್ಗೂಡಿಸಬೇಕಾಗಿದೆ. ಇದು ಸ್ವಲ್ಪ ಸಮಯ ಹಿಡಿಯುವ ಪ್ರಕ್ರಿಯೆಯಾದ ಕಾರಣ ಮಾಹಿತಿ ಸಲ್ಲಿಸುವುದಕ್ಕೆ ಜೂನ್ ತಿಂಗಳ ತನಕ ಕಾಲಾವಕಾಶ ಕೋರಿತ್ತು.

ಸುಪ್ರೀಂಕೋರ್ಟ್ ತೀರ್ಪಿಗೆ ಮೆಚ್ಚುಗೆ ವ್ಯಕ್ತಪಡಿಸಿದ ವಿಪಕ್ಷ, ಕಾರ್ಪೊರೇಟ್ ಕಂಪನಿಗಳಿಗೆ ಆತಂಕ

ಸುಪ್ರೀಂ ಕೋರ್ಟ್ ತೀರ್ಪನ್ನು ಶ್ಲಾಘಿಸಿದ ವಿರೋಧ ಪಕ್ಷದ ನಾಯಕರು, ಮಾರ್ಚ್ 11 ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಜಾರಿಗೆ ತಂದಿರುವುದು ಚುನಾವಣಾ ಬಾಂಡ್ ಯೋಜನೆಯಿಂದ ದೇಶದ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವಾಗಿದೆ ಎಂದು ಟೀಕಿಸಿದ್ದಾರೆ.

ಏತನ್ಮಧ್ಯೆ, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (ಎಸ್ಸಿಬಿಎ) ಮುಖ್ಯಸ್ಥ ಆದಿಶ್ ಸಿ ಅಗರ್ವಾಲ್ ಅವರು ಚುನಾವಣಾ ಬಾಂಡ್ ಯೋಜನೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ರಾಷ್ಟ್ರಪತಿಗಳ ಉಲ್ಲೇಖವನ್ನು ಕೋರುವಂತೆ ಅಧ್ಯಕ್ಷ ದ್ರೌಪದಿ ಮುರ್ಮು ಅವರನ್ನು ಕೇಳಿದ್ದಾರೆ.

"ವಿವಿಧ ರಾಜಕೀಯ ಪಕ್ಷಗಳಿಗೆ ಕೊಡುಗೆ ನೀಡಿದ ಕಾರ್ಪೊರೇಟ್‌ ಕಂಪನಿಗಳ ಹೆಸರುಗಳನ್ನು ಪ್ರತ್ಯೇಕಿಸಿ ಬಹಿರಂಗಪಡಿಸುವುದು ಕಾರ್ಪೊರೇಟ್‌ ಕಂಪನಿಗಳನ್ನು ಬಲಿಪಶುವಾಗುವಂತೆ ಮಾಡುತ್ತದೆ. ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಮರುಪರಿಶೀಲಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು" ಎಂದು ಅಗರವಾಲ್‌ ಅಧ್ಯಕ್ಷ ಮುರ್ಮು ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ