ಕನ್ನಡ ಸುದ್ದಿ  /  ಮನರಂಜನೆ  /  ಕನ್ನಡ ರಾಜ್ಯೋತ್ಸವದಂದು ಗರಡಿ ಟ್ರೈಲರ್‌ ಬಿಡುಗಡೆ ಮಾಡ್ತಾರೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌; ನವೆಂಬರ್‌ 10ರಂದು ಗರಡಿ ನೋಡಲು ಹೊರಡಿ

ಕನ್ನಡ ರಾಜ್ಯೋತ್ಸವದಂದು ಗರಡಿ ಟ್ರೈಲರ್‌ ಬಿಡುಗಡೆ ಮಾಡ್ತಾರೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌; ನವೆಂಬರ್‌ 10ರಂದು ಗರಡಿ ನೋಡಲು ಹೊರಡಿ

Praveen Chandra B HT Kannada

Oct 22, 2023 03:56 PM IST

ಗರಡಿ ಚಿತ್ರದ ಟ್ರೈಲರ್‌ ನವೆಂಬರ್‌ 1ರಂದು ಬಿಡುಗಡೆ

    • Garadi Trailer and Film Release Date: ನವೆಂಬರ್‌ 1ರಂದು ಗರಡಿ ಚಿತ್ರದ ಟ್ರೈಲರ್‌ ಅನ್ನು ನಟ ದರ್ಶನ್‌ ಬಿಡುಗಡೆ ಮಾಡಲಿದ್ದಾರೆ. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರು ರಾಣೆಬೆನ್ನೂರಿನಲ್ಲಿ ಬಿಡುಗಡೆ ಮಾಡಲಿದ್ದಾರೆ. ಗರಡಿ ಚಲನಚಿತ್ರವು ಇದೇ ನವೆಂಬರ್‌ 10ರಂದು ಬಿಡುಗಡೆಯಾಗಲಿದೆ.
ಗರಡಿ ಚಿತ್ರದ ಟ್ರೈಲರ್‌ ನವೆಂಬರ್‌ 1ರಂದು ಬಿಡುಗಡೆ
ಗರಡಿ ಚಿತ್ರದ ಟ್ರೈಲರ್‌ ನವೆಂಬರ್‌ 1ರಂದು ಬಿಡುಗಡೆ

ಬೆಂಗಳೂರು: ಯೋಗರಾಜ್‌ ಭಟ್‌ ನಿರ್ದೇಶನದ ಬಹುನಿರೀಕ್ಷಿತ ಗರಡಿ ಚಲನಚಿತ್ರವು ಇದೇ ನವೆಂಬರ್‌ 10ರಂದು ಬಿಡುಗಡೆಯಾಗಲಿದೆ. ಇದಕ್ಕೆ ಮೊದಲು ಅಂದರೆ, ನವೆಂಬರ್‌ 1ರಂದು ಗರಡಿ ಚಿತ್ರದ ಟ್ರೈಲರ್‌ ಅನ್ನು ನಟ ದರ್ಶನ್‌ ಬಿಡುಗಡೆ ಮಾಡಲಿದ್ದಾರೆ. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರು ರಾಣೆಬೆನ್ನೂರಿನಲ್ಲಿ ಬಿಡುಗಡೆ ಮಾಡಲಿದ್ದಾರೆ. ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಯೋಗರಾಜ್‌ ಭಟ್‌ ಅಪ್‌ಡೇಟ್‌ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಭರತ್‌ ಬೋಪಣ್ಣ ಜತೆಗೆ ‘ಸಾವಿರ ಗುಂಗಲಿ’ ಒಲವಿನ ಸವಾರಿ ಹೊರಟ ಬೃಂದಾ ಆಚಾರ್ಯ; ಇಲ್ಲಿದೆ ನೋಡಿ ಹೊಸ ಆಲ್ಬಂ ಹಾಡು

QPL 2024: ಕ್ವೀನ್ಸ್‌ ಪ್ರೀಮಿಯರ್‌ ಲೀಗ್‌ ಶುರು; ಬ್ಯಾಟು ಬಾಲು ಹಿಡಿದು ಕ್ರಿಕೆಟ್ ಆಡಲು ಹೊರಟ ಕಿರುತೆರೆ, ಹಿರಿತೆರೆ ಹೆಣ್ಮಕ್ಕಳು

ಸೀತಾ ರಾಮ ಸೀರಿಯಲ್‌ ದೃಶ್ಯದಲ್ಲಿ ಹೆಲ್ಮೆಟ್‌ ಧರಿಸದೇ ಪ್ರಯಾಣ; ನಟಿ ವೈಷ್ಣವಿ ಗೌಡಗೆ ದಂಡ ವಿಧಿಸಿದ ಟ್ರಾಫಿಕ್‌ ಪೊಲೀಸರು

Pavitra Jayaram: ಭೀಕರ ರಸ್ತೆ ಅಪಘಾತದಲ್ಲಿ ಜೀ ಕನ್ನಡದ ತ್ರಿನಯನಿ ಧಾರಾವಾಹಿ ನಟಿ ಪವಿತ್ರಾ ಜಯರಾಂ ಸಾವು

ನವೆಂಬರ್‌ 1ರಂದು ಗರಡಿ ಚಿತ್ರದ ಟ್ರೈಲರ್‌ ಬಿಡುಗಡೆ

ನವೆಂಬರ್‌ 1ರಂದು ಕನ್ನಡ ರಾಜ್ಯೋತ್ಸವದ ಸಮಯದಲ್ಲಿಯೇ ಯೋಗರಾಜ್‌ ಭಟ್ಟರ ಗರಡಿ ಹಾಡಿನ ಟ್ರೈಲರ್‌ ಬಿಡುಗಡೆಯಾಗಲಿದೆ. "ನಮ್ಮ 'ಗರಡಿ' ಚಿತ್ರದ ಟ್ರೇಲರನ್ನು ಶ್ರೀಯುತ ದರ್ಶನ್ ಸರ್ ನವೆಂಬರ್ 1ರಂದು ರಾಣೆಬೆನ್ನೂರಿನಲ್ಲಿ ಬಿಡುಗಡೆ ಮಾಡಲಿದ್ದಾರೆ. ಸಿನಿಮಾ ನವಂಬರ್ 10ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿದೆ" ಎಂದು ನಿರ್ದೇಶಕ ಯೋಗರಾಜ್‌ ಭಟ್‌ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಗರಡಿ ಚಿತ್ರಕ್ಕೆ ಸಂಬಂಧಪಟ್ಟಂತೆ ವಿಶೇಷ ಜಾಹೀರಾತು ವರದಿಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡಿವೆ. ಅವುಗಳಲ್ಲಿ ಕ್ವಾರಿಯಲ್ಲಿ ಪೈಲ್ವಾನ್‌ ಹತ್ಯೆ ಎಂಬ ವರದಿಯಲ್ಲಿ ಈ ಕತೆಯ ತುಸು ಕಥೆಯೂ ಕಾಣಿಸುತ್ತದೆ. "ರಟ್ಟೆಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಯುವ ಕುಸ್ತಿ ಚಾಂಪುನ್‌ ಚಿಕ್‌ರಾಣೆ ಬರ್ಬರ ಹತ್ಯೆಗೆ ಈಡಾಗಿದ್ದು, ಇಡೀ ಊರನ್ನು ಬೆಚ್ಚಿಬೀಳಿಸಿದೆ. ರಾಣೆ ಮನತೆನದ ಪ್ರತಿಷ್ಠಡಯ ಕುಸ್ತಿಪಟು ಕೋರಾಪಿಟ್‌ ಚಿಕ್ಕರಾಣಿಯ ಶವದಹನದ ನಂತರ ಪುರಾತನ ಗರಡಿ ಮನೆಯ ಕೋರಾಪಿಡ್‌ ರಂಗಪ್ಪ ಹಾಗೂ ಗರಡಿಯ ಸಕಲ ಪೈಲ್ವಾನ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ. ಊರಿನ ಅಮಾಯಕನೆಂದೇ ಹೆಸರಾದ ಸೂರಿ ಆಲಿಯಾಸ್‌ ಗರಡಿ ಸೂರಿ ಕ್ವಾರಿಯಲ್ಲಿ ನಡೆದ ಕೊಲೆಯಲ್ಲಿ ಪಾಲ್ಗೊಂಡಿದ್ದಾನೆ ಎಂದು ಪೊಲೀಸರಿಗೆ ಅನುಮಾನ ಬಂದು ಇಡೀ ಪ್ರಕರಣ ಇನ್ನಷ್ಟು ಜಟಿಲವಾಗಿದೆ ಎಂದು ಯೋಗರಾಜ್‌ ಭಟ್‌ ತನ್ನದೇ ಶೈಲಿಯಲ್ಲಿ ವರದಿ ಬರೆದಿದ್ದಾರೆ.

ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಸರೆಗಮ ಕನ್ನಡ ಚಾನೆಲ್‌ನಲ್ಲಿ ಗರಡಿ ಸಿನಿಮಾದ ಬಡವನ ಹೃದಯ ಹಾಡು ಬಿಡುಗಡೆ ಮಾಡಲಾಗಿತ್ತು. ಇದು ಲವ್‌ ಫೈಲ್ಯೂರ್‌ ಆಗಿರುವ ನಾಯಕನ ಮನಸ್ಸಿಗೆ ಧ್ವನಿಯಾದ ಹಾಡಿನಂತೆ ಭಾಸವಾಗುತ್ತದೆ. ಲವ್‌ ಫೇಲ್‌ ಆದ ಜನರಿಗೂ ಇದು ಕನೆಕ್ಟ್‌ ಆಗಬಹುದು. ಈ ಹಾಡಿನಲ್ಲಿ ನಾಯಕ ಸೂರ್ಯ, ಹಳೆಯ ಪ್ರೀತಿಯ ನೆನಪು, ವ್ಯಥೆ, ನಾಯಕಿಯ ತುಂಟಾಟದ ನೆನಪುಗಳು ಸೇರಿದಂತೆ ಹಲವು ಅಂಶಗಳು ಕಾಣಿಸುತ್ತವೆ. ಜತೆಗೆ, ಮದನ್‌ ಅವರ ಸಿನಿಮಾಟ್ರೊಗ್ರಫಿಯೂ ಗಮನ ಸೆಳೆಯುತ್ತದೆ. ಈ ಕುರಿತ ವರದಿ ಇಲ್ಲಿದೆ ಓದಿ.

ಯೋಗರಾಜ್‌ ಭಟ್‌ ನಿರ್ದೇಶನದಲ್ಲಿ ಮೂಡಿ ಬಂದಿರುವ ಗರಡಿ ಸಿನಿಮಾದ ಮೊದಲ ಹಾಡು ಕೆಲವು ದಿನಗಳ ಹಿಂದೆ ಬಿಡುಗಡೆ ಆಗಿತ್ತು. ಆ ಹಾಡಿನಲ್ಲಿ ಕೊಂಚ ಗ್ಲಾಮರಸ್‌ ಅವತಾರದಲ್ಲಿಯೇ ಸೊಂಟ ಬಳುಕಿಸಿದ್ದಾರೆ ನಿಶ್ವಿಕಾ. ಕೌರವ ಪ್ರೊಡಕ್ಷನ್ ಹೌಸ್ ಬ್ಯಾನರ್‌ನಲ್ಲಿ ವನಜಾ ಪಾಟೀಲ್ ನಿರ್ಮಿಸಿರುವ, ಗರಡಿ ಚಿತ್ರದ ಮೊದಲ ಹಾಡು ಹೊಡಿರೆಲೆ ಹಲಗಿ.. ಲಿರಿಕಲ್ ವಿಡಿಯೋ ಇತ್ತೀಚಿಗೆ ಬಿಡುಗಡೆಯಾಯಿತು. ವಿ. ಹರಿಕೃಷ್ಣ ಸಂಗೀತ ನೀಡಿರುವ, ಯೋಗರಾಜ್ ಭಟ್ ಅವರೇ ಸಾಹಿತ್ಯ ಬರೆದಿರುವ ಈ ಹಾಡನ್ನು ಉತ್ತರ ಕರ್ನಾಟಕದ ಪ್ರತಿಭೆ ಮೇಘನಾ ಹಳಿಯಾಳ್ ಹಾಡಿದ್ದಾರೆ. ಈ ವರದಿ ಇಲ್ಲಿದೆ.

ಕೆಲವು ದಿನಗಳ ಹಿಂದೆ ಗರಡಿ ಸಿನಿಮಾದ ಟೈಟಲ್‌ ಟ್ರ್ಯಾಕ್‌ ಬಿಡುಗಡೆ ಮಾಡಲಾಗಿತ್ತು. ಗರಡಿ ಸಿನಿಮಾದ ಈ ಟೈಟಲ್‌ ಟ್ರ್ಯಾಕ್‌ "ಏನೇ ಬರಲಿ ರಟ್ಟೆ ತಟ್ಟು ತೊಡೆಯ ತಟ್ಟು ಹಾಕು ಪಟ್ಟು" ಎಂದು ಆರಂಭವಾಗುತ್ತದೆ. ವಿ ಹರಿಕೃಷ್ಣ ಸಂಗೀತ ಸಂಯೋಜನೆಯ ಈ ಹಾಡಿನ ಸಾಹಿತ್ಯದ ಜತೆಗೆ ಮ್ಯೂಸಿಕ್‌ ಕೂಡ ಮಾಸ್‌ ಪ್ರೇಕ್ಷಕರಿಗೆ ಇಷ್ಟವಾಗುವಂತೆ ಇದೆ. ಈ ಟೈಟಲ್‌ ಟ್ರ್ಯಾಕ್‌ನಲ್ಲಿ ಕಲಾವಿದರ ದಂಡೇ ಇದ್ದು, ನಾಯಕ ಸೂರ್ಯನ ಗತ್ತು ಕೂಡ ಇಷ್ಟವಾಗುತ್ತದೆ. ಡಿ ಡಿ ಡಿ ಡಿ ಗರಡಿ ಹಾಡು ಮೋಡಿ ಮಾಡುವಂತೆ ಇದ್ದು, ಹಾಡಿನ ದೃಶ್ಯವೈಭವ ಕೂಡ ಇಷ್ಟವಾಗುತ್ತದೆ. ಹಿರಿಯ ನಟ ಬಿಸಿ ಪಾಟೀಲ್‌ ಈ ಟೈಟಲ್‌ ಟ್ರ್ಯಾಕ್‌ನಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ