Rakhi Sawant: ತನ್ನ ಜೀವನದ ಕಥೆಗೆ ನಾಯಕಿಯಾದ ರಾಖಿ; ಪೊಲೀಸ್ ಪಾತ್ರದಲ್ಲಿ ಮಿಂಚಲಿದ್ದಾರೆ ಡ್ರಾಮಾ ಕ್ವೀನ್
ವಿವಾದಗಳ ಮೂಲಕವೇ ಸುದ್ದಿಯಲ್ಲಿರುವ ನಟಿ ರಾಖಿ ಸಾವಂತ್ ಇದೀಗ ಹೊಸ ಸಿನಿಮಾ ಘೋಷಿಸಿದ್ದಾರೆ. ಚಿತ್ರಕ್ಕೆ ರೌಡಿ ರಾಖಿ ಎಂಬ ಶೀರ್ಷಿಕೆ ಸಹ ಅಂತಿಮವಾಗಿದೆ.
Rakhi Sawant: ವಿವಾದಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್, ಇದೀಗ ಮತ್ತೆ ಹೊಸ ಸುದ್ದಿಯ ಜತೆಗೆ ಮುನ್ನೆಲೆಗೆ ಬಂದಿದ್ದಾರೆ. ಅಂದರೆ, ಪತಿ ಆದಿಲ್ ಖಾನ್ ದುರಾನಿ ಅವರನ್ನು ಜೈಲಿಗೆ ಕಳುಹಿಸಿದ ಬಳಿಕ ರಾಖಿ ಈಗ ನಟನೆಯತ್ತ ಗಮನ ಹರಿಸಿದ್ದಾರೆ. ರಾಖಿಯ ಸಹೋದರ ರಾಕೇಶ್ ಸಾವಂತ್ ನಿರ್ದೇಶನ ಮಾಡುತ್ತಿರುವ ಸಿನಿಮಾದತ್ತ ಮುಖ ಮಾಡಿದ್ದಾರೆ. ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ರಾಖಿ ಕಾಣಿಸಿಕೊಳ್ಳಲಿರುವುದು ವಿಶೇಷ!
ಈ ಸಿನಿಮಾ ಘೋಷಣೆಗೂ ಮೊದಲು ದುಬೈನಲ್ಲಿ ನಟನಾ ಅಕಾಡೆಮಿಯನ್ನು ತೆರೆದ, ರಾಖಿ ಅದಾದ ಬಳಿಕ ಮ್ಯೂಸಿಕ್ ವೀಡಿಯೊ ಚಿತ್ರೀಕರಣದಲ್ಲಿಯೂ ತೊಡಗಿಸಿಕೊಂಡರು. ಈಗ ರಾಕೇಶ್ ಸಾವಂತ್ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಖಾಕಿ ಧರಿಸಿ ಪೋಸ್ ನೀಡಿದ್ದಾರೆ. ರಾಖಿ ಸಾವಂತ್ ಅವರ ಇತ್ತೀಚಿನ ವಿವಾದಗಳನ್ನೇ ಆಧರಿಸಿ ಸಿನಿಮಾ ಮಾಡುತ್ತಿಲ್ಲ. ಈ ಸಿನಿಮಾಕ್ಕೂ, ರಾಖಿ ಜೀವನದಲ್ಲಿ ಘಟಿಸಿದ ಘಟನಾವಳಿಗೂ ಯಾವುದೇ ಸಂಬಂಧವಿಲ್ಲ ಎಂಬ ಮಾತು ಕೇಳಿಬರುತ್ತಿದೆಯಾದರೂ, ಮತ್ತೊಂದೆಡೆ ತಮ್ಮ ಜೀವನದಲ್ಲಿ ನಡೆದ ಕೆಲವು ವಿಷಯಗಳನ್ನೇ ಈ ಚಿತ್ರ ಆಧರಿಸಿದೆ ಎಂದೂ ಹೇಳಲಾಗುತ್ತಿದೆ.
ರೌಡಿ ರಾಖಿ ಸಿನಿಮಾ ಫಸ್ಟ್ ಲುಕ್ ರಿಲೀಸ್..
ರಾಖಿ ಸಾವಂತ್ ನಟಿಸಲಿರುವ ಸಿನಿಮಾದ ಶೀರ್ಷಿಕೆ ಸಹ ರಿವೀಲ್ ಆಗಿದೆ. ಚಿತ್ರಕ್ಕೆ ರೌಡಿ ರಾಖಿ ಎಂಬ ಟೈಟಲ್ ಇಡಲಾಗಿದ್ದು, ಪೊಲೀಸ್ ಸಮವಸ್ತ್ರದಲ್ಲಿ ಎದುರಾಗಿದ್ದಾರೆ. ರಾಕೇಶ್ ಸಾವಂತ್ ನಿರ್ದೇಶನದ ಈ ಸಿನಿಮಾವನ್ನು ಗೌರವ್ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಸಹ ಶುರುವಾಗಿದೆ ಎಂದು ಹೇಳಲಾಗುತ್ತಿದ್ದು, ಶೀಘ್ರದಲ್ಲಿ ಇನ್ನುಳಿದ ಅಪ್ಡೇಟ್ ಮಾಹಿತಿ ಹೊರಬೀಳಲಿದೆ.
ಇದು ಆದಿಲ್ ಕಥೆಯಲ್ಲ..
ಈಗಾಗಲೇ ನಟಿ ರಾಖಿ ಸಾವಂತ್ ಪತಿ ಆದಿಲ್ ಖಾನ್ ಮೈಸೂರು ಪೊಲೀಸರ ವಶದಲ್ಲಿದ್ದಾರೆ. ರಾಖಿ ಸಾವಂತ್ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಇರಾನಿ ಯುವತಿಯನ್ನು ಅತ್ಯಾಚಾರ ಮಾಡಿದ್ದ ಆರೋಪ ಎದುರಿಸುತ್ತಿರುವ ಆದಿಲ್ನನ್ನು ಮೈಸೂರು ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗಿತ್ತು. ಈಗ ಈ ಸಿನಿಮಾ ಮಾಹಿತಿ ಹೊರಬೀಳುತ್ತಿದ್ದಂತೆ, ರೌಡಿ ರಾಖಿ ಚಿತ್ರದ ನಿರ್ದೇಶಕ ರಾಕೇಶ್ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
"ಈ ಸಿನಿಮಾ ಆದಿಲ್ ಖಾನ್ಗೆ ಯಾವುದೇ ಸಂಬಂಧವಿಲ್ಲ. ಇಲ್ಲಿ ನಾಯಕಿ ದೊಡ್ಡ ಉದ್ದೇಶವೊಂದಕ್ಕೆ ಹೋರಾಡುವ ಪೊಲೀಸ್ ಅಧಿಕಾರಿ. ಕಮರ್ಷಿಯಲ್ ಅಂಶಗಳನ್ನು ಆಧರಿಸಿ ಈ ಚಿತ್ರ ಮೂಡಿಬರಲಿದೆ" ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಉತ್ತರಿಸಿದ್ದಾರೆ.
ಇದನ್ನೂ ಓದಿ
Kichcha Sudeep: ‘ಬಿ’ಗಿಯಾಗ್ ಕೂತ್ಕೋಳಿ ‘ರಂ’ಪಾಟ ಶುರುವಾಗಕ್ ಸ್ವಲ್ಪ ಸಮಯ ಬೇಕು ‘ಬಾ’ಡೂಟದ್ ಜೊತೆ ಬರ್ತೀವಿ; ಇದು ಕಿಚ್ಚನ ಸಿನಿಮಾ ಅಪ್ಡೇಟ್
ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆ ಆಗಿ ಹತ್ರತ್ರ 8 ತಿಂಗಳಾಗುತ್ತ ಬಂತು. ಅಲ್ಲಿಂದ ಇಲ್ಲಿಯವರೆಗೂ ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಯಾವ ಸಿನಿಮಾದಲ್ಲಿ ಸುದೀಪ್ ನಟಿಸಲಿದ್ದಾರೆ? ಆ ಸಿನಿಮಾ ನಿರ್ದೇಶಕರು ಯಾರು? ನಿರ್ಮಾಣ ಸಂಸ್ಥೆ ಯಾವುದು? ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿರಲಿಲ್ಲ. ಆದರೆ, ರೋಣನ ಸೂತ್ರಧಾರಿ ಅನೂಪ್ ಭಂಡಾರಿ ಜತೆಗೇ ಸುದೀಪ್ ಸಿನಿಮಾ ಮಾಡಲಿದ್ದಾರೆ ಎಂಬ ಟಾಕ್ ಮಾತ್ರ ಗಾಂಧಿನಗರದಲ್ಲಿ ಜೋರಾಗಿತ್ತು. ಅದೀಗ ನಿಜವಾಗಿದೆ. ‘ಬಿಲ್ಲ ರಂಗ ಬಾಷಾ’ ಸಿನಿಮಾ ಶೀಘ್ರದಲ್ಲಿ ಸೆಟ್ಟೇರಲಿದೆ!