Belagavi : ಶಾಸಕ ರಾಜು ಕಾಗೆ ವಿರುದ್ಧ ಕಿರುಕುಳ ಆರೋಪ ; ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಇಡೀ ಗ್ರಾಮಕ್ಕೆ ಮೈಕ್ ನಲ್ಲಿ ಅನೌನ್ಸ್..!
- ಬೆಳಗಾವಿ ಜಿಲ್ಲೆ ಕಾಗವಾಡ ಶಾಸಕ ರಾಜು ಕಾಗೆ ವಿರುದ್ಧ ಕಿರುಕುಳ ಆರೋಪ ಕೇಳಿ ಬಂದಿದೆ. ಶಾಸಕರ ಕಿರುಕುಳದಿಂದ ತಾವು ನೊಂದಿದ್ದು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಶಿರಗುಪ್ಪಿ ಗ್ರಾಂ ಪಂ ಸದಸ್ಯ ರಾಮಗೌಡ ಪಾಟೀಲ್ ಮೈಕ್ ನಲ್ಲಿ ಅನೌನ್ಸ್ ಮಾಡಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದ್ದಕ್ಕೆ ರಾಜು ಕಾಗೆ ಕಿರುಕುಳ ನೀಡುತ್ತಿದ್ದಾರೆ. ಇದು ಗ್ರಾಮಸ್ಥರಿಗೂ ಅರ್ಥಆಗಬೇಕು ಎಂದು ಇಡೀ ಊರಿಗೆ ಕೇಳುವಂತೆ ಮೈಕ್ ಅಳವಡಿಸಿ ರಾಮಗೌಡ ಪಾಟೀಲ್ ಅನೌನ್ಸ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮಗೌಡ ಪಾಟೀಲ್ ಅವರನ್ನ ವಶಕ್ಕೆ ಪಡೆದ ಪೊಲೀಸರು, ಅಥಣಿಯ ಡಿಎಸ್ಪಿ ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.