ಕನ್ನಡ ಸುದ್ದಿ  /  ಕ್ರಿಕೆಟ್  /  ಮೊದಲು ಲಕ್ನೋ ತಂಡಕ್ಕೆ ಐಪಿಎಲ್ ಪ್ರಶಸ್ತಿ ಗೆಲ್ಲು; ಟಿ20 ವಿಶ್ವಕಪ್​ ತಂಡದ ಭಾಗವಾಗಲು ಕೆಎಲ್ ರಾಹುಲ್​ಗೆ ಗಿಲ್ಲಿ ಟಿಪ್ಸ್

ಮೊದಲು ಲಕ್ನೋ ತಂಡಕ್ಕೆ ಐಪಿಎಲ್ ಪ್ರಶಸ್ತಿ ಗೆಲ್ಲು; ಟಿ20 ವಿಶ್ವಕಪ್​ ತಂಡದ ಭಾಗವಾಗಲು ಕೆಎಲ್ ರಾಹುಲ್​ಗೆ ಗಿಲ್ಲಿ ಟಿಪ್ಸ್

Prasanna Kumar P N HT Kannada

Apr 20, 2024 09:27 AM IST

ಟಿ20 ವಿಶ್ವಕಪ್​ ತಂಡದ ಭಾಗವಾಗಲು ಕೆಎಲ್ ರಾಹುಲ್​ಗೆ ಆ್ಯಡಂ ಗಿಲ್​ಕ್ರಿಸ್ಟ್ ಟಿಪ್ಸ್

    • Adam Gilchrist on KL Rahul : ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಟಿ20 ವಿಶ್ವಕಪ್ ಭಾರತ ತಂಡದ ಭಾಗವಾಗಲು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆ್ಯಡಂ ಗಿಲ್​ಕ್ರಿಸ್ಟ್​ ಸಲಹೆ ನೀಡಿದ್ದಾರೆ.
ಟಿ20 ವಿಶ್ವಕಪ್​ ತಂಡದ ಭಾಗವಾಗಲು ಕೆಎಲ್ ರಾಹುಲ್​ಗೆ ಆ್ಯಡಂ ಗಿಲ್​ಕ್ರಿಸ್ಟ್ ಟಿಪ್ಸ್
ಟಿ20 ವಿಶ್ವಕಪ್​ ತಂಡದ ಭಾಗವಾಗಲು ಕೆಎಲ್ ರಾಹುಲ್​ಗೆ ಆ್ಯಡಂ ಗಿಲ್​ಕ್ರಿಸ್ಟ್ ಟಿಪ್ಸ್

ದಿನಗಳು ಕಳೆದಂತೆ ಟಿ20 ವಿಶ್ವಕಪ್ ಟೂರ್ನಿಗೆ (T20 World Cup 2024) ತಂಡದ ಆಯ್ಕೆಯ ಬಗ್ಗೆ ಚರ್ಚೆ ಹೆಚ್ಚು ತೀವ್ರಗೊಳ್ಳುತ್ತಿದೆ. ಐಪಿಎಲ್ 2024 ಋತುವಿನ ಪ್ರತಿಯೊಂದು ಪಂದ್ಯದ ನಂತರ ಹೊಸದೊಂದು ಚರ್ಚೆಗಳು ಉದ್ಭವಗೊಳ್ಳುತ್ತಿದೆ. ಉತ್ತಮ ಪ್ರದರ್ಶನ ನೀಡಿದ ಆಟಗಾರರೆಲ್ಲರನ್ನೂ ಟಿ20 ವಿಶ್ವಕಪ್​ ತಂಡಕ್ಕೆ ಸೇರಿಸಬೇಕೆಂಬ ಕೂಗು ಕೇಳಿ ಬರುತ್ತಿದೆ. ಅದರಲ್ಲೂ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಅಥವಾ ಇಲ್ಲದಿರುವ ಭಾರತೀಯ ಆಟಗಾರರ ಸಾಮರ್ಥ್ಯದ ಬಗ್ಗೆ ಡಿಸ್ಕಷನ್ ನಡೆಯುತ್ತಿವೆ.

ಟ್ರೆಂಡಿಂಗ್​ ಸುದ್ದಿ

ಟಿ20 ವಿಶ್ವಕಪ್‌ಗೆ ಬಲಿಷ್ಠ ಬಾಂಗ್ಲಾದೇಶ ತಂಡ ಪ್ರಕಟ; ಶಾಂಟೊ ನಾಯಕ, ಶಕೀಬ್ ಅಲ್ ಹಸನ್‌ಗೆ ಸ್ಥಾನ

ಕಾಲಕ್ಕೆ ತಕ್ಕಂತೆ ಅಪ್ಡೇಟ್‌ ಆಗ್ಬೇಕು, ಕ್ರೀಡೆಯಲ್ಲಿ ವಿಕಸನ ಅಗತ್ಯ; ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ರವಿ ಶಾಸ್ತ್ರಿ ಬೆಂಬಲ

ಐಪಿಎಲ್ ಪ್ಲೇಆಫ್ ರೇಸ್‌ನಿಂದ ಗುಜರಾತ್ ಔಟ್; ಸಿಎಸ್‌ಕೆ ಅಥವಾ ಆರ್‌ಸಿಬಿ, ಮಳೆಯಿಂದ ಲಾಭ ಯಾರಿಗೆ?

ಐಪಿಎಲ್‌ ತೊರೆದು ತವರಿಗೆ ಮರಳಿದ ವಿಲ್ ಜ್ಯಾಕ್ಸ್, ಬಟ್ಲರ್; ಪ್ಲೇಆಫ್‌ಗೂ ಮುನ್ನ ಆರ್‌ಸಿಬಿ-ರಾಜಸ್ಥಾನಕ್ಕೆ ಭಾರಿ ಹೊಡೆತ

ಎಲ್ಲದಕ್ಕಿಂತ ಹೆಚ್ಚಾಗಿ ವಿಕೆಟ್ ಕೀಪರ್​ ಆಯ್ಕೆ ಕುರಿತು ಬಿಸಿಸಿಐ ಗೊಂದಲಕ್ಕೆ ಸಿಲುಕಿದೆ. ಏಕೆಂದರೆ ಒಬ್ಬರಲ್ಲ, ಇಬ್ಬರಲ್ಲ ಆರು ವಿಕೆಟ್​ ಕೀಪರ್ಸ್ ವಿಶ್ವಕಪ್​​ ಟಿಕೆಟ್​ಗೆ ಪೈಪೋಟಿ ನಡೆಸುತ್ತಿದ್ದಾರೆ. ಆದರೆ ಮೊದಲ ಆದ್ಯತೆ ರಿಷಭ್ ಪಂತ್​​ಗೆ (Rishabh Pant) ಸಿಗಲಿದ್ದು, ಸಂಜು ಸ್ಯಾಮ್ಸನ್ (Sanju Samson) ಬ್ಯಾಕಪ್ ಆಗಲಿದ್ದಾರೆ ಎಂಬ ಟಾಕ್ ಇದೆ. ಹಾಗಾಗಿ ಕೆಎಲ್ ರಾಹುಲ್ (KL Rahul) ಅವರು ಅವಕಾಶ ಪಡೆಯುವ ಕುರಿತು ಅನಿಶ್ಚಿತ ಸ್ಥಿತಿಗಳು ಕಾಡುತ್ತಿದೆ. ಬಹುತೇಕ ಅವರು ಸ್ಥಾನ ಪಡೆಯುವ ಸಾಧ್ಯತೆ ತೀರಾ ಕಡಿಮೆ ಎಂಬ ಮಾತುಗಳಿವೆ.

ಈ ಎಲ್ಲದರ ಮಧ್ಯೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆ್ಯಡಂ ಗಿಲ್​ಕ್ರಿಸ್ಟ್ (Adam Gilchrist)​ ಅವರು ಕೆಎಲ್ ರಾಹುಲ್​ಗೆ ಸರಳ ಪರಿಹಾರ ನೀಡಿದ್ದಾರೆ. ರಾಹುಲ್ ಟಿ20 ವಿಶ್ವಕಪ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬೇಕೆಂದರೆ, ಅವರು ಐಪಿಎಲ್​ನಲ್ಲಿ ಮೊದಲು ಪ್ರಶಸ್ತಿ ಗೆಲ್ಲಬೇಕು ಎಂದು ಹೇಳಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಎಲ್ಎಸ್​ಜಿಯ ತವರು ಪಂದ್ಯ ಪ್ರಾರಂಭಕ್ಕೂ ಮುನ್ನ ಕ್ರಿಕ್​ಬಜ್​​ನೊಂದಿಗೆ ಮಾತನಾಡಿದ ಗಿಲ್​ಕ್ರಿಸ್ಟ್​, ಕನ್ನಡಿಗ ಕೆಎಲ್ ವಿಶ್ವಕಪ್​ಗೆ ಸ್ಥಾನ ಪಡೆಯುವ ಸಾಧ್ಯತೆಗಳ ಬಗ್ಗೆ ಹೇಳಿದ್ದಾರೆ. 

ರಾಹುಲ್​ಗೆ ಸಲಹೆ ನೀಡಿದ ಆ್ಯಡಂ ಗಿಲ್​ಕ್ರಿಸ್ಟ್

ರಾಹುಲ್ ನಡೆಯುತ್ತಿರುವ ಚರ್ಚೆಗಳನ್ನು ಬದಿಗೆ ಸರಿಸಬೇಕು. ಮೊದಲು ಲಕ್ನೋ ಸೂಪರ್ ಜೈಂಟ್ಸ್​​ಗೆ ಐಪಿಎಲ್​ ಪ್ರಶಸ್ತಿ ಗೆಲ್ಲುವತ್ತ ಗಮನ ಹರಿಸಬೇಕು. ಹಾಗೆಯೇ ಅತ್ಯುತ್ತಮ ಆಟಗಾರನಾಗುವತ್ತ ಫೋಕಸ್ ಮಾಡಬೇಕು. ನಿಮ್ಮ ಪ್ರದರ್ಶನ ಉತ್ತಮವಾದಷ್ಟೂ ಐಸಿಸಿ ಈವೆಂಟ್ ಗೆ ಟಿಕೆಟ್ ಖಾತರಿಯಾಗುತ್ತದೆ ಎಂದು ಹೇಳಿದ್ದಾರೆ. ಆದರೆ ಟಿ20 ವಿಶ್ವಕಪ್ ಕುರಿತಂತೆ ನಡೆಯುತ್ತಿರುವ ಚರ್ಚೆಗಳಿಗೆ ಕಿವಿಗೊಡಬಾರದು ಎಂದು ಸಲಹೆ ನೀಡಿದ್ದಾರೆ ಆಸೀಸ್ ಮಾಜಿ ಕ್ರಿಕೆಟಿಗ.

ಐಪಿಎಲ್​ ಟೂರ್ನಿಯಲ್ಲಿ ಪ್ರದರ್ಶನದ ಕುರಿತು ನೋಡುತ್ತಾ, ಅದಕ್ಕೆ ತಕ್ಕಂತೆ ಚರ್ಚೆಗಳು ಮುಂದುವರೆಯುವುದು ಸಹಜ. ವಿಶ್ವಕಪ್​​ ತಂಡಕ್ಕೆ ಯಾರು ಆಯ್ಕೆ ಆಗುತ್ತಾರೆ, ಯಾರು ಆಗುವುದಿಲ್ಲ ಎಂಬ ಡಿಬೇಟ್​ಗಳಿಂದ ದೂರವಾಗಬೇಕು. ರಾಹುಲ್ ವಿಶ್ವಕಪ್​ಗೆ ಹೇಗೆ ಪ್ರವೇಶಿಸುತ್ತಾರೆ ಎಂಬುದಕ್ಕೆ ಅವರ ಪ್ರದರ್ಶನವೇ ಉತ್ತರವಾಗಲಿದೆ. ಟೂರ್ನಿಯಲ್ಲಿ ಇತರರಿಗಿಂತ ಉತ್ತಮ ಕೆಲಸ ಮಾಡಬೇಕಾಗಿದೆ. ಆಗ ಟಿ20 ಸಮರಕ್ಕೆ ಯುಎಸ್​ಎ ವಿಮಾನ ಹತ್ತು ಖಚಿತ ಎಂದು ಅವರು ಹೇಳಿದ್ದಾರೆ.

ಏಪ್ರಿಲ್​ ಅಂತ್ಯದ ವೇಳೆ ಭಾರತ ತಂಡ ಪ್ರಕಟ

ಏಪ್ರಿಲ್ ಅಂತ್ಯದ ವೇಳೆಗೆ ಬಿಸಿಸಿಐ 15 ಸದಸ್ಯರ ವಿಶ್ವಕಪ್ ತಂಡವನ್ನು ಪ್ರಕಟಿಸುವ ಸಾಧ್ಯತೆಯಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ನಿಗದಿಪಡಿಸಿರುವಂತೆ ವಿಶ್ವಕಪ್​​​ಗೆ ತಂಡಗಳನ್ನು ಸಲ್ಲಿಸಲು ಮೇ 1 ಕೊನೆಯ ದಿನಾಂಕವಾಗಿದೆ. ಮೇ 25ರೊಳಗೆ ತಂಡಗಳನ್ನು ಬದಲಿಸಲು ಅವಕಾಶ ನೀಡಲಾಗಿದೆ. ಮೇ 26ರಕ್ಕೆ ಐಪಿಎಲ್ ಮುಕ್ತಾಯವಾಗಲಿದ್ದು, ಜೂನ್ 1ರಿಂದ ಟಿ20 ವಿಶ್ವಕಪ್ ಪ್ರಾರಂಭವಾಗಲಿದೆ. ಜೂನ್ 5ರಿಂದ ಟೀಮ್ ಇಂಡಿಯಾ, ಐರ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲು ಸಜ್ಜಾಗಿದೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ