Pallavi Joshi Injured: ಸಪ್ತಮಿ ಗೌಡ ನಾಯಕಿಯಾಗಿ ನಟಿಸುತ್ತಿರುವ ಹಿಂದಿ ಚಿತ್ರದ ಶೂಟಿಂಗ್ನಲ್ಲಿ ಅವಘಡ..ಪಲ್ಲವಿ ಜೋಶಿಗೆ ಗಾಯ
Jan 17, 2023 11:31 AM IST
ವಿವೇಕ್ ರಂಜನ್ ಅಗ್ನಿಹೋತ್ರಿ, ಪಲ್ಲವಿ ಜೋಶಿ
- ಚಿತ್ರೀಕರಣಕ್ಕೆ ಬರುವ ಸಮಯದಲ್ಲಿ ಪಲ್ಲವಿ ಜೋಶಿ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ. ಗಂಭೀರ ಸಮಸ್ಯೆ ಅಲ್ಲದಿದ್ದರೂ ಪತ್ನಿಯ ಮೇಲಿನ ಕಾಳಜಿಗಾಗಿ ವಿವೇಕ್ ರಂಜನ್ ಅಗ್ನಿಹೋತ್ರಿ ಸದ್ಯಕ್ಕೆ ಚಿತ್ರೀಕರಣ ಸ್ಥಗಿತಗೊಳಿಸಿದ್ದು ಪತ್ನಿ ಜೊತೆ ಆಸ್ಪತ್ರೆಯಲ್ಲಿದ್ದಾರೆ ಎನ್ನಲಾಗಿದೆ.
'ದಿ ಕಾಶ್ಮೀರ್ ಫೈಲ್ಸ್' ನಂತ ಚಿತ್ರವನ್ನು ನಿರ್ದೇಶಿಸಿ ಸೆನ್ಸೇಶನ್ ಸೃಷ್ಟಿಸಿದ್ದ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಈಗ 'ದಿ ವ್ಯಾಕ್ಸಿನ್ ವಾರ್' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಕೆಲವು ದಿನಗಳ ಹಿಂದೆ ವಿವೇಕ್, ಹೊಸ ಸಿನಿಮಾ ಘೋಷಿಸಿ ಗಮನ ಸೆಳೆದಿದ್ದರು. ಇದೀಗ ಸಿನಿಮಾ ಚಿತ್ರೀಕರಣ ಆರಂಭವಾಗಿದ್ದು ಶೂಟಿಂಗ್ ವೇಳೆ ವಿವೇಕ್ ಪತ್ನಿ, ನಟಿ ಪಲ್ಲವಿ ಜೋಶಿಗೆ ಗಾಯವಾಗಿದೆ.
ಚಿತ್ರೀಕರಣದ ವೇಳೆ ನಡೆದ ಅವಘಡದಿಂದ ನಟಿ ಪಲ್ಲವಿ ಜೋಶಿಗೆ ಗಾಯವಾಗಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಸದ್ಯಕ್ಕೆ ಕೆಲವು ದಿನಗಳ ಕಾಲ ಚಿತ್ರೀಕರಣ ಸ್ಥಗಿತಗೊಂಡಿದೆ. ಈಗಾಗಲೇ ಚಿತ್ರದ ಮೊದಲ ಹಂತದ ಶೂಟಿಂಗ್ ಮುಗಿದಿದೆ. ಮುತ್ತಿನ ನಗರಿ ಹೈದರಾಬಾದ್ನಲ್ಲಿ ಎರಡನೇ ಹಂತದ ಶೂಟಿಂಗ್ ಸಾಗುತ್ತಿದೆ. ಆದರೆ ಚಿತ್ರೀಕರಣಕ್ಕೆ ಬರುವ ಸಮಯದಲ್ಲಿ ಪಲ್ಲವಿ ಜೋಶಿ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ. ಗಂಭೀರ ಸಮಸ್ಯೆ ಅಲ್ಲದಿದ್ದರೂ ಪತ್ನಿಯ ಮೇಲಿನ ಕಾಳಜಿಗಾಗಿ ವಿವೇಕ್ ರಂಜನ್ ಅಗ್ನಿಹೋತ್ರಿ ಸದ್ಯಕ್ಕೆ ಚಿತ್ರೀಕರಣ ಸ್ಥಗಿತಗೊಳಿಸಿದ್ದು ಪತ್ನಿ ಜೊತೆ ಆಸ್ಪತ್ರೆಯಲ್ಲಿದ್ದಾರೆ ಎನ್ನಲಾಗಿದೆ.
ಈ ಚಿತ್ರದಲ್ಲಿ ಕನ್ನಡತಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸುತ್ತಿರುವುದು ವಿಶೇಷ. ಇತ್ತೀಚೆಗಷ್ಟೇ ಸಪ್ತಮಿ ಗೌಡ, ತಾವು ಈ ಚಿತ್ರದ ನಾಯಕಿಯಾಗಿ ನಟಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ನಿರ್ದೇಶಕ ವಿವೇಕ್ ಕೂಡಾ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಸಪ್ತಮಿಗೆ ವೆಲ್ ಕಮ್ ಹೇಳಿದ್ದರು. ಎರಡನೇ ಹಂತದ ಚಿತ್ರೀಕರಣದಲ್ಲಿ ಸಪ್ತಮಿ ಗೌಡ ಭಾಗವಹಿಸಬೇಕಿತ್ತು. ಆದರೆ ಚಿತ್ರೀಕರಣ ಸ್ಥಗಿತಗೊಂಡ ಕಾರಣ ಸಪ್ತಮಿ ಶೂಟಿಂಗ್ನಲ್ಲಿ ಭಾಗಿಯಾಗಿಲ್ಲ. ಚಿತ್ರದಲ್ಲಿ ಪಲ್ಲವಿ ಜೋಶಿ ಹಾಗೂ ಸಪ್ತಮಿ ಗೌಡ ಇಬ್ಬರೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಾನಾ ಪಾಟೇಕರ್ ಹಾಗೂ ಅನುಪಮ್ ಖೇರ್ ಕೂಡಾ ಚಿತ್ರದಲ್ಲಿ ನಟಿಸಿದ್ದಾರೆ ಎನ್ನಲಾಗಿದೆ.
ಕೊರೊನಾ ಸಮಯದಲ್ಲಿ ಜನರು ವ್ಯಾಕ್ಸಿನ್ಗಾಗಿ ಪಟ್ಟ ಕಷ್ಟ ಹಾಗೂ ಅದರ ಹಿಂದಿನ ಅಸಲಿ ಕಥೆಯನ್ನು ಈ ಚಿತ್ರದಲ್ಲಿ ಹೇಳಲು ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಪ್ರಯತ್ನಿಸಿದ್ದಾರಂತೆ. 'ದಿ ವ್ಯಾಕ್ಸಿನ್ ವಾರ್' ಸಿನಿಮಾಗೂ ಮುನ್ನವೇ ವಿವೇಕ್ ರಂಜನ್ ಅಗ್ನಿಹೋತ್ರಿ 'ದಿ ಡೆಲ್ಲಿ ಫೈಲ್ಸ್' ಎಂಬ ಮತ್ತೊಂದು ಚಿತ್ರವನ್ನು ಘೋಷಿಸಿದ್ದರು. ಸದ್ಯಕ್ಕೆ ಈ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.
ಮತ್ತಷ್ಟು ಮನರಂಜನೆ ಸುದ್ದಿಗಳು
ದಯವಿಟ್ಟು ಆ ಬಿಸ್ಕೆಟ್ ಜಾಹೀರಾತಿನಲ್ಲಿ ನಟಿಸುವುದನ್ನು ನಿಲ್ಲಿಸಿ...ಬಿಗ್ ಬಿಗೆ ಪತ್ರ ಬರೆದ NAPI
''ಅಮಿತಾಬ್ ಬಚ್ಚನ್ ನಟಿಸುತ್ತಿರುವ ಬಿಸ್ಕೆಟ್ ಜಾಹೀರಾತು ನಿಜಕ್ಕೂ ಮೋಸದಾಯಕ. ಆ ಬಿಸ್ಕೆಟ್ಗಳಲ್ಲಿ ಸಕ್ಕರೆ, ಕೊಬ್ಬು ಮತ್ತು ಸೋಡಿಯಂ ಮಟ್ಟ ಹೆಚ್ಚಾಗಿದೆ. ಈ ಬಿಸ್ಕೆಟ್ ಕಂಪನಿಗಳು ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳನ್ನು ಪೂರೈಸುತ್ತಿಲ್ಲ . ಕಳೆದ ವರ್ಷ ಡಿಸೆಂಬರ್ನಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ದೂರದರ್ಶನ ಕಾರ್ಯಕ್ರಮವೊಂದರಲ್ಲಿ ಅಮಿತಾಬ್ ಬಚ್ಚನ್, ಅದೇ ಬಿಸ್ಕೆಟನ್ನು ಅನುಮೋದಿಸಲು ಆಯ್ಕೆ ಮಾಡಿದ್ದಾರೆ ಎಂದು ತಿಳಿದು ನನಗೆ ಆಘಾತ ಮತ್ತು ಆಶ್ಚರ್ಯ ಆಯ್ತು'' ಎಂದು ಹೇಳಿದ್ದಾರೆ. ಪೂರ್ತಿ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಮೇಡ್ ಇನ್ ಇಂಡಿಯಾʼ ಎಂದು ಹಾಡಿ ಕುಣಿದಿದ್ದ ಸುಜಾತಾ ಅಲಿಯಾಸ್ ಅಲಿಶಾ ಈಗ ಹೇಗಿದ್ದಾರೆ..ಎಲ್ಲಿದ್ದಾರೆ? ಇಲ್ಲಿವೆ ಫೋಟೋಸ್
ಅಲಿಶಾ ಚಿನಾಯಿ, ಮೂಲತ: ಗುಜರಾತಿನವರು. ತಂದೆ ತಾಯಿ ಈಕೆಗೆ ಇಟ್ಟ ಹೆಸರು ಸುಜಾತಾ. ಆದರೆ ಈಕೆ ಇಂಡಿಯನ್ ಪಾಪ್ ಗಾಯಕಿ ಆದ್ದರಿಂದ ಗಾಯನ ವೃತ್ತಿಗೆ ಬಂದ ನಂತರ ತಮ್ಮ ಹೆಸರನ್ನು ಅಲಿಶಾ ಚಿನಾಯ್ ಎಂದು ಬದಲಿಸಿಕೊಂಡರು. ಸಂಪೂರ್ಣ ಮಾಹಿತಿಗೆ ಈ ಲಿಂಕ್ ಒತ್ತಿ.