Chiyaan Vikram: ಸಿನಿಮಾ ರಿಹರ್ಸಲ್ ವೇಳೆ ಚಿಯಾನ್ ವಿಕ್ರಮ್ ಪಕ್ಕೆಲುಬು ಮುರಿತ; ತಿಂಗಳ ಕಾಲ ತಂಗಳಾನ್ ಸಿನಿಮಾ ಶೂಟಿಂಗ್ಗೆ ಬ್ರೇಕ್
May 03, 2023 01:49 PM IST
'ತಂಗಳಾನ್' ಸಿನಿಮಾ ಶೂಟಿಂಗ್ ವೇಳೆ ನಟ ವಿಕ್ರಮ್ ಪಕ್ಕೆಲುಬು ಮುರಿತ
- ಡೂಪ್ ಇಲ್ಲದೆ 'ತಂಗಳಾನ್' ಸಿನಿಮಾ ದೃಶ್ಯಗಳಿಗೆ ರಿಹರ್ಸಲ್ ಮಾಡುವ ವೇಳೆ ಹಿರಿಯ ನಟ ವಿಕ್ರಮ್ ಪಕ್ಕೆಲುಬಿಗೆ ಪೆಟ್ಟು ಬಿದ್ದಿದೆ. ಈ ವಿಚಾರವನ್ನು ವಿಕ್ರಮ್ ಅಧಿಕೃತ ಪಿಆರ್ಒ ಯುವರಾಜ್ ಟ್ವಿಟ್ಟರ್ ಮೂಲಕ ದೃಢಪಡಿಸಿದ್ದಾರೆ.
ತಮಿಳು ನಟ ಚಿಯಾನ್ ವಿಕ್ರಮ್ ಚಿತ್ರರಂಗಕ್ಕೆ ಬಂದಾಗಿನಿಂದ ಇದುವರೆಗೂ ಅದೇ ಬೇಡಿಕೆ ಉಳಿಸಿಕೊಂಡಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ವಿಕ್ರಮ್ ಈಗ ಅನಾರೋಗ್ಯದಿಂದ ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್ ಹಾಕಿದ್ದಾರೆ. ಶೂಟಿಂಗ್ ದೃಶ್ಯಗಳ ರಿಹರ್ಸಲ್ ಸಮಯದಲ್ಲಿ ವಿಕ್ರಮ್ ಪಕ್ಕೆಲುಬು ಮುರಿದಿದ್ದು ಸದ್ಯಕ್ಕೆ ಶೂಟಿಂಗ್ ನಿಲ್ಲಿಸಲಾಗಿದೆ.
ಚಿಯಾನ್ ವಿಕ್ರಮ್ ಎಷ್ಟು ಶ್ರಮಜೀವಿ ಎಂಬುದು ಅವರ ಸಿನಿಮಾಗಳಿಂದಲೇ ತಿಳಿಯುತ್ತದೆ. ಅದನ್ನು ಅವರ ಸಿನಿಮಾಗಳಲ್ಲೇ ನೋಡಬಹುದು. ಡೂಪ್ ಇಲ್ಲದೆ 'ತಂಗಳಾನ್' ಸಿನಿಮಾ ದೃಶ್ಯಗಳಿಗೆ ರಿಹರ್ಸಲ್ ಮಾಡುವ ವೇಳೆ ಹಿರಿಯ ನಟ ವಿಕ್ರಮ್ ಪಕ್ಕೆಲುಬಿಗೆ ಪೆಟ್ಟು ಬಿದ್ದಿದೆ. ಈ ವಿಚಾರವನ್ನು ವಿಕ್ರಮ್ ಅಧಿಕೃತ ಪಿಆರ್ಒ ಯುವರಾಜ್ ಟ್ವಿಟ್ಟರ್ ಮೂಲಕ ದೃಢಪಡಿಸಿದ್ದಾರೆ.
''ಪೊನ್ನಿಯಿನ್ ಸೆಲ್ವನ್ 2 ಚಿತ್ರದ ಆದಿತ್ಯ ಕರಿಕಾಳನ್ ಪಾತ್ರಕ್ಕೆ ವಿಕ್ರಮ್ ಅವರಿಗೆ ನಿಮ್ಮೆಲ್ಲರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ, ಇದಕ್ಕಾಗಿ ಧನ್ಯವಾದಗಳು. 'ತಂಗಳಾನ್' ಸಿನಿಮಾ ಶೂಟಿಂಗ್ ವೇಳೆ ವಿಕ್ರಮ್ ಅವರ ಪಕ್ಕೆಲುಬಿಕೆ ಪೆಟ್ಟು ಬಿದ್ದಿದೆ. ಈ ಕಾರಣದಿಂದ ಕೆಲವು ದಿನಗಳ ಕಾಲ ಅವರು ಶೂಟಿಂಗ್ನಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಇದೇ ರೀತಿ ಇರಲಿ. ಶೀಘ್ರದಲ್ಲೇ ವಿಕ್ರಮ್ ಗುಣಮುಖರಾಗಿ ನಿಮ್ಮೆಲ್ಲರನ್ನೂ ರಂಜಿಸಲು ಬರುತ್ತಾರೆ'' ಎಂದು ಯುವರಾಜ್ ಟ್ವೀಟ್ ಮಾಡಿದ್ದಾರೆ.
'ತಂಗಾಳನ್' ಚಿತ್ರವನ್ನು ಸ್ಟುಡಿಯೋ ಗ್ರೀನ್ ಬ್ಯಾನರ್ ಅಡಿ ನಿರ್ಮಿಸಲಾಗುತ್ತಿದ್ದು ಪಾ. ರಂಜಿತ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ನೀಡುತ್ತಿದ್ದಾರೆ. 18 ನೇ ಶತಮಾನದಲ್ಲಿ ಕೆಜಿಎಫ್ ಹೇಗಿತ್ತು ಎಂಬುದನ್ನು ರಂಜಿತ್ ಈ ಚಿತ್ರದ ಮೂಲಕ ತೋರಿಸಲು ಹೊರಟಿದ್ದಾರೆ. ಚಿತ್ರದಲ್ಲಿ ಪಶುಪತಿ, ಡೇನಿಯಲ್, ಪಾರ್ವತಿ ತಿರುವೊತ್ತು. ಮಾಳವಿಕಾ ಮೋಹನನ್ ಹಾಗೂ ಇನ್ನಿತರರು ನಟಿಸುತ್ತಿದ್ದಾರೆ.
ಮತ್ತಷ್ಟು ಮನರಂಜನೆ ಸುದ್ದಿಗಳು ಇಲ್ಲಿವೆ
ಮೂರು ಪಕ್ಷಗಳ ಚುನಾವಣೆ ಪ್ರಣಾಳಿಕೆಯಲ್ಲಿ ಚಿತ್ರರಂಗಕ್ಕೂ ಇದೆ ಸ್ಥಾನ; ಕನ್ನಡ ಚಿತ್ರರಂಗಕ್ಕೆ ದೊರೆತ ಭರವಸೆಗಳಿವು
ಚುನಾವಣೆಗೆ ಇನ್ನು ಒಂದು ವಾರವಷ್ಟೇ ಬಾಕಿ ಇದೆ. ಮೇ 7 ರಂದು ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಎಲ್ಲಾ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ನಾ ಮುಂದು ತಾ ಮುಂದು ಎಂದು ಮತ ಯಾಚನೆ ಮಾಡುತ್ತಿದ್ದಾರೆ. ಇದರ ಜೊತೆ ಜೊತೆಗೆ ಎಲ್ಲಾ ಪಕ್ಷಗಳು ತಮ್ಮ ಚುನಾವಣೆ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿವೆ. ಈ ಪ್ರಣಾಳಿಕೆಯಲ್ಲಿ ಚಿತ್ರರಂಗದ ಬಗ್ಗೆಯೂ ಕೆಲವು ಯೋಜನೆಗಳ ಭರವಸೆ ನೀಡಲಾಗಿದೆ. ಪೂರ್ತಿ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ.
ಗೌಡ್ರು ಹುಡುಗ ಹುಡುಕಿ, ಸ್ವಯಂವರ ಮಾಡಿ; ಮದುವೆ ಯಾವಾಗ ಎಂಬ ಪ್ರಶ್ನೆಗೆ ತಮಾಷೆಯಾಗಿ ಪ್ರತಿಕ್ರಿಯಿಸಿದ ನಟಿ ರಮ್ಯಾ
ರಾಜ್ಯದಲ್ಲಿ ಚುನಾವಣೆ ಪ್ರಚಾರ ಜೋರಾಗಿದೆ. ಚುನಾವಣೆಗೆ ಇನ್ನು ವಾರವಷ್ಟೇ ಬಾಕಿ ಉಳಿದಿದೆ. ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಎಲ್ಲಾ ಪಕ್ಷಗಳು ತಮ್ಮ ಸ್ಟಾರ್ ಪ್ರಚಾರಕರೊಂದಿಗೆ ಪ್ರತಿ ಜಿಲ್ಲೆ, ತಾಲೂಕು, ಊರುಗಳಿಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಈ ನಡುವೆ ಸ್ಯಾಂಡಲ್ವುಡ್ ನಟಿ ರಮ್ಯಾ ಕೂಡಾ ಕಾಂಗ್ರೆಸ್ ಪರ ಮತ ಯಾಚನೆ ಮಾಡುತ್ತಿದ್ಧಾರೆ. ಈ ವೇಳೆ ರಮ್ಯಾ ಮದುವೆ ಬಗ್ಗೆ ಪ್ರಸ್ತಾಪವಾಗಿದೆ. ಮೋಹಕತಾರೆ ಕುರಿತಾದ ಪೂರ್ತಿ ಸುದ್ದಿ ಓದಲು ಈ ಲಿಂಕ್ ಒತ್ತಿ.