logo
ಕನ್ನಡ ಸುದ್ದಿ  /  ಮನರಂಜನೆ  /  Kollywood News: ತಿರುಪತಿಗೆ ತೆರಳಿ ದೇವರಿಗೆ ಮುಡಿ ಅರ್ಪಿಸಿದ ತಮಿಳು ನಟ ಧನುಷ್, ಹೊಸ ಸ್ಟೈಲ್‌ ನೋಡಿ ಫ್ಯಾನ್ಸ್‌ ಫುಲ್ ಕನ್ಫ್ಯೂಸ್‌; ವಿಡಿಯೋ

Kollywood News: ತಿರುಪತಿಗೆ ತೆರಳಿ ದೇವರಿಗೆ ಮುಡಿ ಅರ್ಪಿಸಿದ ತಮಿಳು ನಟ ಧನುಷ್, ಹೊಸ ಸ್ಟೈಲ್‌ ನೋಡಿ ಫ್ಯಾನ್ಸ್‌ ಫುಲ್ ಕನ್ಫ್ಯೂಸ್‌; ವಿಡಿಯೋ

Rakshitha Sowmya HT Kannada

Jul 04, 2023 07:00 AM IST

ತಿರುಪತಿಯಲ್ಲಿ ಮುಡಿ ಕೊಟ್ಟ ಧನುಷ್

  • ಧನುಷ್‌ ಜೊತೆಗೆ ತಂದೆ ಕಸ್ತೂರಿ ರಾಜಾ ತಾಯಿ ವಿಜಯಲಕ್ಷ್ಮಿ ಮಕ್ಕಳಾದ ಯಾತ್ರಾ ಹಾಗೂ ಲಿಂಗ ಕೂಡಾ ತಿರುಪತಿಗೆ ತೆರಳಿ ವೆಂಕಟೇಶ್ವರ ದರ್ಶನ ಪಡೆದರು. ತಮ್ಮನ್ನು ಯಾರೂ ಕಂಡುಹಿಡಿಯಬಾರದು ಎಂಬ ಕಾರಣಕ್ಕೆ ಧನುಷ್‌ ಒಂದು ಕ್ಯಾಪ್‌ ಮಾಸ್ಕ್‌ ಧರಿಸಿದ್ದಾರೆ.

ತಿರುಪತಿಯಲ್ಲಿ ಮುಡಿ ಕೊಟ್ಟ ಧನುಷ್
ತಿರುಪತಿಯಲ್ಲಿ ಮುಡಿ ಕೊಟ್ಟ ಧನುಷ್ (PC: Twitter)

ಕಾಲಿವುಡ್‌ ನಟ ಧನುಷ್‌ ಇತ್ತೀಚೆಗೆ ಬಹಳ ಸುದ್ದಿಯಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ಧನುಷ್‌ ಉದ್ದ ತಲೆ ಕೂದಲು , ಗಡ್ಡ ಬಿಟ್ಟು ಅಭಿಮಾನಿಗಳಿಗೆ ದರ್ಶನ ನೀಡಿದ್ದರು. ಅವರನ್ನು ನೋಡಿದವರು ಧನುಷ್‌ ಬಾಬಾ ರಾಮ್‌ದೇವ್‌ನಂತೆ ಕಾಣುತ್ತಿದ್ದಾರೆ ಎಂದು ರೇಗಿಸಿದ್ದರು. ಇದೀಗ ಅವರು ತಲೆ ಮುಡಿ ಕೊಡಿಸಿ ಮತ್ತೆ ಫ್ಯಾನ್ಸ್‌ ಕನ್ಫ್ಯೂಸ್‌ ಆಗುವಂತೆ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಹಿಂದಿ ಚಿತ್ರರಂಗ ಫೇಕ್‌, ನಾನು ಅಲ್ಲಿರಲಾರೆ; ಲೋಕಸಭಾ ಚುನಾವಣೆ ಬಳಿಕ ಬಾಲಿವುಡ್‌ಗೆ ಗುಡ್‌ಬೈ ಹೇಳ್ತಾರಂತೆ ಕಂಗನಾ ರಣಾವತ್‌

ಸಂಭವಾಮಿ ಯುಗೇಯುಗೇ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆ; ಥ್ರಿಲ್ಲರ್, ಆಕ್ಷನ್, ಲವ್, ಸೆಂಟಿಮೆಂಟ್ ಗ್ಯಾರಂಟಿ

ಕಲರ್ಸ್‌ ಕನ್ನಡದ ನಿನಗಾಗಿ ಧಾರಾವಾಹಿ ಪ್ರಸಾರ ದಿನಾಂಕ ಪ್ರಕಟ; ದಿವ್ಯ ಉರುಡುಗ ನಟನೆಯ ಈ ಸೀರಿಯಲ್‌ ಕುರಿತು ಇಲ್ಲಿದೆ ಸಂಪೂರ್ಣ ವಿವರ

Blink Movie: ಬ್ಲಿಂಕ್‌ ಸಿನಿಮಾದ ಕುರಿತು ಮುಗಿಯದ ವಿಮರ್ಶೆ; ತೆಲುಗು, ತಮಿಳು, ಮಲಯಾಳಂ, ಹಿಂದಿಗೂ ಡಬ್‌ ಆಗುತ್ತಂತೆ ಬ್ಲಿಂಕ್‌

ಧನುಷ್‌ ಇತ್ತೀಚೆಗೆ ಆಂಧ್ರಪ್ರದೇಶದ ತಿರುಪತಿಗೆ ತಮ್ಮ ಕುಟುಂಬದೊಂದಿಗೆ ಭೇಟಿ ನೀಡಿದ್ದರು. ಈ ವೇಳೆ ಅವರು ದೇವರಿಗೆ ಮುಡಿ ಅರ್ಪಿಸಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು ಧನುಷ್‌ ಹೊಸ ಲುಕ್‌ ನೋಡಿ ಅಭಿಮಾನಿಗಳು ಗೊಂದಲದಲ್ಲಿದ್ದಾರೆ. ಧನುಷ್‌ಗೆ ಏನಾದರೂ ಹರಕೆ ಇತ್ತಾ, ಅಥವಾ ತಮ್ಮ ಮುಂದಿನ ಸಿನಿಮಾಗಾಗಿ ರೆಡಿ ಆಗಲು ದೇವರ ಸನ್ನಿಧಿಯಲ್ಲಿ ಮುಡಿ ಕೊಟ್ಟಿದ್ದಾರಾ ಎಂದು ತಮ್ಮ ತಮ್ಮಲ್ಲೇ ಚರ್ಚಿಸುತ್ತಿದ್ದಾರೆ.

ಧನುಷ್‌ ಜೊತೆಗೆ ತಂದೆ ಕಸ್ತೂರಿ ರಾಜಾ ತಾಯಿ ವಿಜಯಲಕ್ಷ್ಮಿ ಮಕ್ಕಳಾದ ಯಾತ್ರಾ ಹಾಗೂ ಲಿಂಗ ಕೂಡಾ ತಿರುಪತಿಗೆ ತೆರಳಿ ವೆಂಕಟೇಶ್ವರ ದರ್ಶನ ಪಡೆದರು. ತಮ್ಮನ್ನು ಯಾರೂ ಕಂಡುಹಿಡಿಯಬಾರದು ಎಂಬ ಕಾರಣಕ್ಕೆ ಧನುಷ್‌ ಒಂದು ಕ್ಯಾಪ್‌ ಮಾಸ್ಕ್‌ ಧರಿಸಿದ್ದಾರೆ. ಧನುಷ್‌ ನೋಡಿದವರು ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಹರಸಾಹಸ ಪಟ್ಟರು. ಆದರೆ ಸಾಧ್ಯವಾಗಲಿಲ್ಲ. ನಟನ ವಿಡಿಯೋ ಮಾಡುವ ಭರದಲ್ಲಿ ಕೆಳಗೆ ಬೀಳುವ ಕ್ಯಾಮರಾ ಮ್ಯಾನ್‌ ಒಬ್ಬರನ್ನು ಮೇಲೆತ್ತಲು ಧನುಷ್‌ ಸಹಾಯ ಮಾಡಿದ್ದನ್ನು ವಿಡಿಯೋದಲ್ಲಿ ನೋಡಬಹುದು.

ಧನುಷ್‌ ಅಭಿನಯದ 'ಕ್ಯಾಪ್ಟನ್‌ ಮಿಲ್ಲರ್‌' ಸಿನಿಮಾ ಶೂಟಿಂಗ್‌ ಮುಗಿದಿದೆ. ಆ ಚಿತ್ರಕ್ಕಾಗಿ ಉದ್ದ ಕೂದಲು, ಗಡ್ಡ ಬಿಟ್ಟಿದ್ದ ಧನುಷ್‌ ಈಗ ದೇವರಿಗೆ ಕೂದಲು ಅರ್ಪಿಸಿದ್ದಾರೆ. ಇತ್ತೀಚೆಗೆ ಚಿತ್ರತಂಡ ಕ್ಯಾಪ್ಟನ್‌ ಮಿಲ್ಲರ್‌ ಫಸ್ಟ್‌ ಲುಕ್‌ ರಿಲೀಸ್‌ ಮಾಡಿತ್ತು. ಇದೊಂದು 1930 ಅವಧಿಯಲ್ಲಿ ನಡೆಯುವ ಕಥೆ ಆಗಿದ್ದು ಚಿತ್ರವನ್ನು ಅರುಣ್‌ ಮತೇಶ್ವರನ್‌ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಜಿವಿ ಪ್ರಕಾಶ್‌ ಸಂಗೀತ ನೀಡುತ್ತಿದ್ದಾರೆ. ಚಿತ್ರದಲ್ಲಿ ಧನುಷ್‌ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ಸಿನಿಮಾದಲ್ಲಿ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌, ಪ್ರಿಯಾಂಕ ಮೋಹನ್‌, ನಿವೇದಿತಾ ಸತೀಶ್‌, ಜಾನ್‌ ಕೊಕ್ಕೆನ್‌ ಹಾಗೂ ಇನ್ನಿತರರು ನಟಿಸಿದ್ದಾರೆ. ಸಿನಿಮಾ ಶೀಘ್ರದಲ್ಲೇ ತೆರೆ ಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳು

ನಾಲ್ಕನೇ ಬಾರಿಗೆ ಒಂದಾದ ಅಲ್ಲು ಅರ್ಜುನ್‌ ತ್ರಿವಿಕ್ರಮ್‌; ಮತ್ತೊಂದು ಬ್ಲಾಕ್‌ ಬಸ್ಟರ್‌ ಹಿಟ್‌ಗೆ ರೆಡಿಯಾದ ಟಾಲಿವುಡ್‌ ಜೋಡಿ

ತೆಲುಗಿನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಸದ್ಯಕ್ಕೆ ಪುಷ್ಪ-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಪ್ರಾಜೆಕ್ಟ್ ಹೊರತು ಪಡಿಸಿ ಸ್ಟೈಲಿಷ್‌ ಸ್ಟಾರ್‌ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಒಪ್ಪಿಕೊಂಡಿದ್ದಾರೆ. ಟೀ ಸೀರಿಸ್ ನಿರ್ಮಾಣ ಸಂಸ್ಥೆ ಈ ಹೊಸ ಚಿತ್ರವನ್ನು ತಯಾರಿಸುತ್ತಿದೆ. ಅನಿಮಲ್ ಸಿನಿಮಾ ಖ್ಯಾತಿಯ ಸಂದೀಪ್ ರೆಡ್ಡಿ ವಂಗ ನಿರ್ದೇಶನದಲ್ಲಿ ಈ ಸಿನಿಮಾ ತಯಾರಾಗಲಿದೆ. ಇದರ ನಡುವೆ ಅಲ್ಲು ಅರ್ಜುನ್‌ ಮತ್ತೊಂದು ಹೊಸ ಸಿನಿಮಾಗೆ ಸಹಿ ಹಾಕಿದ್ದಾರೆ. ಅಲ್ಲು ಅರ್ಜುನ್‌ ಸಿನಿಮಾಗಳ ಬಗ್ಗೆ ತಿಳಿಯಲು ಈ ಲಿಂಕ್‌ ಒತ್ತಿ.

ಕುರುಕ್ಷೇತ್ರ ಭೀಮ ಪಾತ್ರಧಾರಿ ಮಗಳ ಚಿಕಿತ್ಸೆಗೆ ಹಣದ ಸಹಾಯ ಮಾಡಿದ ದರ್ಶನ್‌; ಕನ್ನಡದಲ್ಲೇ ಧನ್ಯವಾದ ಹೇಳಿದ ಡ್ಯಾನಿಶ್

ಚಿತ್ರರಂಗದ ಅನೇಕ ಸ್ಟಾರ್‌ ನಟ ನಟಿಯರು ತಮ್ಮ ಸಹ ನಟರಿಗೆ, ಬಡವರಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಕೂಡಾ ಲೆಕ್ಕವಿಲ್ಲದಷ್ಟು ಜನರಿಗೆ ಹೆಲ್ಪ್‌ ಮಾಡಿದ್ದಾರೆ. ಇದೀಗ ಅವರು ತಮ್ಮ ಸಹನಟ ಡ್ಯಾನಿಶ್‌ ಅಖ್ತರ್‌ ಮಗಳ ಚಿಕಿತ್ಸೆಗೂ ಸಹಾಯ ಮಾಡಿದ್ದು ದಾಸನ ಕಾರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೂರ್ತಿ ಸ್ಟೋರಿಗೆ ಈ ಲಿಂಕ್‌ ಒತ್ತಿ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ