logo
ಕನ್ನಡ ಸುದ್ದಿ  /  ಮನರಂಜನೆ  /  Kantara 2: ಕಾಂತಾರ ಎರಡನೇ ಭಾಗಕ್ಕೆ ನಟ್ಟಿಲ್ ಪಂಜುರ್ಲಿ ದೈವದ ಅಭಯ; ನೇಮೋತ್ಸವದಲ್ಲಿ ರಿಷಬ್‌ ಶೆಟ್ಟಿಗೆ ಸಿಕ್ತು ಆಶೀರ್ವಾದ

Kantara 2: ಕಾಂತಾರ ಎರಡನೇ ಭಾಗಕ್ಕೆ ನಟ್ಟಿಲ್ ಪಂಜುರ್ಲಿ ದೈವದ ಅಭಯ; ನೇಮೋತ್ಸವದಲ್ಲಿ ರಿಷಬ್‌ ಶೆಟ್ಟಿಗೆ ಸಿಕ್ತು ಆಶೀರ್ವಾದ

Apr 29, 2023 01:51 PM IST

ಕಾಂತಾರ ಎರಡನೇ ಭಾಗಕ್ಕೆ ನಟ್ಟಿಲ್ ಪಂಜುರ್ಲಿ ದೈವದ ಅಭಯ; ನೇಮೋತ್ಸವದಲ್ಲಿ ರಿಷಬ್‌ ಶೆಟ್ಟಿಗೆ ಸಿಕ್ತು ಆಶೀರ್ವಾದ

    • Kantara 2: ಬಂಟ್ವಾಳದ ಮುತ್ತೂರು ಶ್ರೀ ನಟ್ಟಿಲ ಪಂಜುರ್ಲಿ ದೈವದ ನೇಮೋತ್ಸವದಲ್ಲಿ ನಟ ರಿಷಬ್‌ ಶೆಟ್ಟಿ ಭಾಗವಹಿಸಿ ಕಾಂತಾರ 2 ಚಿತ್ರದ ಬಗ್ಗೆ ದೈವದ ಪೂರ್ಣ ಅಭಯ ಪಡೆದುಕೊಂಡಿದ್ದಾರೆ. 
ಕಾಂತಾರ ಎರಡನೇ ಭಾಗಕ್ಕೆ ನಟ್ಟಿಲ್ ಪಂಜುರ್ಲಿ ದೈವದ ಅಭಯ; ನೇಮೋತ್ಸವದಲ್ಲಿ ರಿಷಬ್‌ ಶೆಟ್ಟಿಗೆ ಸಿಕ್ತು ಆಶೀರ್ವಾದ
ಕಾಂತಾರ ಎರಡನೇ ಭಾಗಕ್ಕೆ ನಟ್ಟಿಲ್ ಪಂಜುರ್ಲಿ ದೈವದ ಅಭಯ; ನೇಮೋತ್ಸವದಲ್ಲಿ ರಿಷಬ್‌ ಶೆಟ್ಟಿಗೆ ಸಿಕ್ತು ಆಶೀರ್ವಾದ

ಮಂಗಳೂರು: ಕಾಂತಾರ ಸಿನಿಮಾ ಮೂಲಕ ಕರುನಾಡಿನ ಸಿನಿಮಾ ಪ್ರೇಕ್ಷಕರನ್ನಷ್ಟೇ ಅಲ್ಲದೆ, ಭಾರತದ ಸಿನಿಮಾ ಮಂದಿಯ ಗಮನ ಸೆಳೆದವರು ರಿಷಬ್‌ ಶೆಟ್ಟಿ. ಇದೀಗ ಸದ್ದಿಲ್ಲದೆ ಕಾಂತಾರ 2ರ ಕೆಲಸದಲ್ಲಿ ಅವರು ನಿರತರಾಗಿದ್ದಾರೆ. ಸ್ಕ್ರಿಪ್ಟಿಂಗ್‌ ಕೆಲಸಗಳಲ್ಲಿ ತೊಡಗಿಸಿಕೊಂಡು, ಇನ್ನೇನು ಶೀಘ್ರದಲ್ಲಿ ಚಿತ್ರೀಕರಣಕ್ಕೂ ಚಾಲನೆ ನೀಡುವ ಉತ್ಸಾಹದಲ್ಲಿದ್ದಾರೆ. ಈ ನಡುವೆಯೇ ಮುತ್ತೂರು ಶ್ರೀ ನಟ್ಟಿಲ ಪಂಜುರ್ಲಿ ದೈವದ ನೇಮೋತ್ಸವದಲ್ಲಿ ರಿಷಬ್‌ ಶೆಟ್ಟಿ ಭಾಗವಹಿಸಿದ್ದಾರೆ. ಈ ವೇಳೆ ಎರಡನೇ ಭಾಗದ ಸಿನಿಮಾಕ್ಕೆ ಪಂಜುರ್ಲಿ ದೈವ ಪೂರ್ಣ ಅಭಯ ನೀಡಿದ್ದು ವಿಶೇಷ.

ಟ್ರೆಂಡಿಂಗ್​ ಸುದ್ದಿ

ಮತ್ತಷ್ಟು ಹಿರಿದಾಯ್ತು ಕಣ್ಣಪ್ಪ ಸಿನಿಮಾ ತಾರಾಬಳಗ; ಅಕ್ಷಯ್‌ ಕುಮಾರ್‌, ಪ್ರಭಾಸ್‌ ಬಳಿಕ ಕಾಜಲ್‌ ಅಗರ್ವಾಲ್ ಎಂಟ್ರಿ

Aadujeevitham OTT: ಪೃಥ್ವಿರಾಜ್‌ ಸುಕುಮಾರನ್‌ ನಟನೆಯ ಆಡುಜೀವಿತಂ ಸಿನಿಮಾವನ್ನು ಮನೆಯಲ್ಲೇ ನೋಡಿ, ಇಲ್ಲಿದೆ ಒಟಿಟಿ ಬಿಡುಗಡೆ ವಿವರ

ಬ್ಲಿಂಕ್ ಸಿನಿಮಾ ನಿರ್ದೇಶಕ ಶ್ರೀನಿಧಿ ಕನ್ನಡ ಚಿತ್ರರಂಗಕ್ಕೆ ಸಿಕ್ಕಿರುವ ಕ್ರಿಸ್ಟೋಫರ್ ನೋಲನ್, ಸಂಜೀವ್ ಜಾಗೀರ್ದರ್ ಎಡಿಟಿಂಗ್‌ ಸೂಪರ್‌

ನಟಿ ಪವಿತ್ರಾ ಜಯರಾಮ್‌ಗೆ ನನ್ನ ಗಂಡ ಆರನೇಯವನು; ಅಕ್ರಮ ಸಂಬಂಧದ ಬಗ್ಗೆ ಮೌನ ಮುರಿದ ಮೃತ ಚಂದ್ರಕಾಂತ್‌ ಪತ್ನಿ ಶಿಲ್ಪಾ

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪ ಬಂಟ್ವಾಳ ತಾಲೂಕಿನ ಮುತ್ತೂರಿನಲ್ಲಿ ನಡೆದ ನಟ್ಟಿಲ್ ಪಂಜುರ್ಲಿ ದೈವದ ನೇಮೋತ್ಸವ ನೆರವೇರಿಸಲಾಗಿತ್ತು. ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಸಹ ನೇಮೋತ್ಸವದಲ್ಲಿದ್ದರು. ಈ ವೇಳೆ ಕಾಂತಾರ ಸಿನಿಮಾದ ಪ್ರೀಕ್ವೆಲ್ ನಿರ್ಮಾಣಕ್ಕೆ ಮುಂದಾಗಿರುವ ರಿಷಬ್ ಮತ್ತು ತಂಡ, ದೈವದ ಅಭಯ ಕೇಳುವ ಉದ್ದೇಶದಿಂದ ನಟ್ಟಿಲ್ ಪಂಜುರ್ಲಿ ನೇಮೋತ್ಸವದಲ್ಲಿ ಭಾಗವಹಿಸಿತ್ತು ಎನ್ನಲಾಗಿದೆ.

ಕಾಂತಾರ 2 ಸಿನಿಮಾ ನಿರ್ಮಾಣದ ಉದ್ದೇಶದಿಂದ ಪಂಜುರ್ಲಿ ದೈವದ ನೇಮದಲ್ಲಿ ಅಭಯ ಪಡೆದು ಮುಂದಿನ ಸಿನಿಮಾ ಮಾಡಲು ಮುಂದಾಗಿರುವ ರಿಷಬ್, ಈ ಹಿಂದೆ ಕಾಂತಾರ ಮಾಡುವ ವೇಳೆಯೂ ಪಂಜುರ್ಲಿ ದೈವದ ಅಭಯ ಪಡೆದುಕೊಂಡಿದ್ದರು. ಸಿನಿಮಾ ಗೆದ್ದ ಬಳಿಕ ಅದ್ದೂರಿ ಭೂತಕೋಲ ನೇಮೋತ್ಸವವನ್ನೂ ಆಯೋಜಿಸಿದ್ದರು.

ದೈವ ನರ್ತಕ ಮುಖೇಶ್ ಬಂದಲೆ ಸಹಕಾರ

ಈ ಹಿಂದೆ ಕಾಂತಾರ ಸಿನಿಮಾ ಶುರುವಾಗುವಾಗ ದೈವ ನರ್ತಕ ಮುಖೇಶ್ ಬಂದಲೆ ಅವರೇ ಕಾಂತಾರ ಸಿನಿಮಾದ ಹಿಂದೆ ನಿಂತು ಸಹಕರಿಸಿದ್ದರು. ದೈವಾರಾಧನೆಗೆ ಎಲ್ಲಿಯೂ ಚ್ಯುತಿ ಬರದಂತೆ ಅಚ್ಚುಕಟ್ಟಾಗಿ ಕರಾವಳಿ ಸೊಗಡಿನ ವಿಶಿಷ್ಟ ಆಚರಣೆಯನ್ನು ಬೆಳ್ಳಿತೆರೆ ಮೇಲೆ ಪ್ರಸ್ತುತಪಡಿಸಿದ್ದರು. ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದ ಸಿನಿಮಾ ಪ್ರೇಮಿಗಳು ಚಿತ್ರ ಮೆಚ್ಚಿ ಸಂಪ್ರದಾಯ, ಆಚರಣೆ ಬಗ್ಗೆಯೂ ಅಚ್ಚರಿ ವ್ಯಕ್ತಪಡಿಸಿದ್ದರು. ಈಗ ದೈವ ನರ್ತಕ ಮುಖೇಶ್‌ ಅವರ ಮುತ್ತೂರು ನಟ್ಟೆಲ್ ಪಂಜುರ್ಲಿ ದೈವದ ನೇಮೋತ್ಸವಕ್ಕೆ ರಿಷಬ್‌ ಆಗಮಿಸಿ ದೈವದ ಅಭಯ ಪಡೆದುಕೊಂಡರು. ಪಂಜುರ್ಲಿ ಗಗ್ಗರ ಸೇವೆಯ ವೇಳೆ ರಿಷಬ್ ಶೆಟ್ಟಿ ಜತೆ ಬಂಟ್ವಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ರಾಜೇಶ್ ನಾಯ್ಕ್ ಅವರ ಕೈ ಹಿಡಿದು ದೈವ ಅಭಯ ನೀಡಿದೆ. ಹೀಗೆ ಅಭಯ ನೀಡುತ್ತಿದ್ದ ವಿಡಿಯೋ ಸಹ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಯುಗಾದಿ ದಿನವೇ ಶುರುವಾಗಿದ್ದ ಸಿನಿಮಾ ಕೆಲಸ

‘ಕಾಂತಾರ’ ಸಿನಿಮಾದ ಯಶಸ್ಸಿನ ಬಳಿಕ ಆ ಚಿತ್ರದ ಪ್ರೀಕ್ವೆಲ್‌ ಆಗುತ್ತಿರುವುದು ಅಧಿಕೃತವಾಗಿದೆ. ತೆರೆಹಿಂದೆ ಆ ಚಿತ್ರದ ಕೆಲಸಗಳಲ್ಲಿ ರಿಷಬ್‌ ಶೆಟ್ಟಿ ಮತ್ತವರ ತಂಡ ಬಿಜಿಯಾಗಿದೆ. ಯುಗಾದಿ ಹಬ್ಬದ ದಿನದಂದೇ ಪ್ರೀಕ್ವೆಲ್‌ನ ಕೆಲಸಗಳು ಶುರುವಾಗಿವೆ ಎಂದು ರಿಷಬ್‌ ಶೆಟ್ಟಿ ಘೋಷಿಸಿದ್ದರು. ಬರವಣಿಗೆಯ ಆದಿ.. ಎಂದು ರಿಷಬ್‌ ಕ್ಯಾಪ್ಷನ್‌ ನೀಡಿ ಹೊಸ ಪೋಸ್ಟ್‌ವೊಂದನ್ನು ಹಂಚಿಕೊಂಡರೆ, ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್, "ಯುಗಾದಿ ಮತ್ತು ಹೊಸ ವರ್ಷದ ಈ ಶುಭ ಸಂದರ್ಭದಲ್ಲಿ, ಕಾಂತಾರ ಚಿತ್ರದ ಎರಡನೇ ಭಾಗದ ಬರವಣಿಗೆ ಪ್ರಾರಂಭವಾಗಿದೆ ಎಂದು ಘೋಷಿಸಲು ಸಂತಸವಾಗುತ್ತಿದೆ. ಪ್ರಕೃತಿಯೊಂದಿಗಿನ ನಮ್ಮ ಸಂಬಂಧವನ್ನು ಪ್ರದರ್ಶಿಸುವ ಮತ್ತೊಂದು ಆಕರ್ಷಕ ಕಥೆಯನ್ನು ನಿಮ್ಮ ಮುಂದೆ ತರಲು ಉತ್ಸುಕರಾಗಿದ್ದೇವೆ. ಹೆಚ್ಚಿನ ಅಪ್‌ಡೇಟ್‌ಗಾಗಿ ಕಾಯುತ್ತಿರಿ" ಎಂದಿತ್ತು.

(ವರದಿ: ಹರೀಶ್ ಮಾಂಬಾಡಿ‌, ಮಂಗಳೂರು)

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ