logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ashok Gehlot: ಪೈಲಟ್‌ರನ್ನು 'ಗದ್ದಾರ್‌' ಎಂದ ಗೆಹ್ಲೋಟ್:‌ ಕಾಂಗ್ರೆಸ್‌ ಪ್ರತಿಕ್ರಿಯೆ ಹೀಗಿತ್ತು..!

Ashok Gehlot: ಪೈಲಟ್‌ರನ್ನು 'ಗದ್ದಾರ್‌' ಎಂದ ಗೆಹ್ಲೋಟ್:‌ ಕಾಂಗ್ರೆಸ್‌ ಪ್ರತಿಕ್ರಿಯೆ ಹೀಗಿತ್ತು..!

Nov 25, 2022 01:31 PM IST

ನವದೆಹಲಿ: ಖಾಸಗಿ ಸುದ್ದಿವಾಹನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು, ತಮ್ಮ ಪ್ರತಿಸ್ಪರ್ಧಿ ಸಚಿನ್‌ ಪೈಲಟ್‌ ಅವರನ್ನು 'ಗದ್ದಾರ್‌'(ದ್ರೋಹಿ) ಎಂದು ಕರೆದಿದ್ದಾರೆ. ಗೆಹ್ಲೋಟ್‌ ಅವರ ಈ ಹೇಳಿಕೆ ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದು, ಈ ಕುರಿತು ಕಾಂಗ್ರೆಸ್‌ ತಣ್ಣಗಿನ ಪ್ರತಿಕ್ರಿಯೆ ನೀಡಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ..

  • ನವದೆಹಲಿ: ಖಾಸಗಿ ಸುದ್ದಿವಾಹನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು, ತಮ್ಮ ಪ್ರತಿಸ್ಪರ್ಧಿ ಸಚಿನ್‌ ಪೈಲಟ್‌ ಅವರನ್ನು 'ಗದ್ದಾರ್‌'(ದ್ರೋಹಿ) ಎಂದು ಕರೆದಿದ್ದಾರೆ. ಗೆಹ್ಲೋಟ್‌ ಅವರ ಈ ಹೇಳಿಕೆ ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದು, ಈ ಕುರಿತು ಕಾಂಗ್ರೆಸ್‌ ತಣ್ಣಗಿನ ಪ್ರತಿಕ್ರಿಯೆ ನೀಡಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ..
ಖಾಸಗಿ ಸುದ್ದಿವಾಹನಿಯೊಂದಕ್ಕೆ ನೀಡಿದ ಸಂದರ್ಶದಲ್ಲಿ ಮಾತನಾಡಿದ ಅಶೋಕ್‌ ಗೆಹ್ಲೋಟ್‌, ಸಚೊನ್‌ ಪೈಲಟ್‌ ಅವರು ರಾಜಸ್ಥಾನ ಕಾಂಗ್ರೆಸ್‌ ಪಾಲಿಗೆ ಓರ್ವ 'ಗದ್ದಾರ್‌'(ದ್ರೋಹಿ) ಇದ್ದ ಹಾಗೆ ಎಂದು ಹೇಳಿದ್ದರು. (ಸಂಗ್ರಹ ಚಿತ್ರ)
(1 / 5)
ಖಾಸಗಿ ಸುದ್ದಿವಾಹನಿಯೊಂದಕ್ಕೆ ನೀಡಿದ ಸಂದರ್ಶದಲ್ಲಿ ಮಾತನಾಡಿದ ಅಶೋಕ್‌ ಗೆಹ್ಲೋಟ್‌, ಸಚೊನ್‌ ಪೈಲಟ್‌ ಅವರು ರಾಜಸ್ಥಾನ ಕಾಂಗ್ರೆಸ್‌ ಪಾಲಿಗೆ ಓರ್ವ 'ಗದ್ದಾರ್‌'(ದ್ರೋಹಿ) ಇದ್ದ ಹಾಗೆ ಎಂದು ಹೇಳಿದ್ದರು. (ಸಂಗ್ರಹ ಚಿತ್ರ)(HT_PRINT)
ಗೆಹ್ಲೋಟ್‌ ಅವರ 'ಗದ್ದಾರ್‌'(ದ್ರೋಹಿ) ಹೇಳಿಕೆ ಸಚಿನ್‌ ಪೈಲಟ್‌ ಅವರ ಆಕ್ರೋಶಕ್ಕೆ ಕಾರಣವಾಗಿದ್ದು, ತಮ್ಮ ರಾಜಕೀಯ ಲಾಭಕ್ಕಾಗಿ ನನ್ನ ತೇಜೋವಧೆ ಮಾಡಿರುವ ಅಶೋಕ್‌ ಗೆಹ್ಲೋಟ್‌ ಈ ಕೂಡಲೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. (ಸಂಗ್ರಹ ಚಿತ್ರ)
(2 / 5)
ಗೆಹ್ಲೋಟ್‌ ಅವರ 'ಗದ್ದಾರ್‌'(ದ್ರೋಹಿ) ಹೇಳಿಕೆ ಸಚಿನ್‌ ಪೈಲಟ್‌ ಅವರ ಆಕ್ರೋಶಕ್ಕೆ ಕಾರಣವಾಗಿದ್ದು, ತಮ್ಮ ರಾಜಕೀಯ ಲಾಭಕ್ಕಾಗಿ ನನ್ನ ತೇಜೋವಧೆ ಮಾಡಿರುವ ಅಶೋಕ್‌ ಗೆಹ್ಲೋಟ್‌ ಈ ಕೂಡಲೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. (ಸಂಗ್ರಹ ಚಿತ್ರ)(HT_PRINT)
ಇನ್ನು ಅಶೋಕ್‌ ಗೆಹ್ಲೋಟ್‌ ಅವರ 'ಗದ್ದಾರ್‌'(ದ್ರೋಹಿ) ಹೇಳಿಕೆ ಕಾಂಗ್ರೆಸ್‌ಗೆ ತೀವ್ರ ಮುಜುಗರ ತಂದಿದ್ದು, ಗೆಹ್ಲೋಟ್‌ ಹೇಳಿಕೆ ಅನಿರೀಕ್ಷಿತ ಮತ್ತು ಆಶ್ಚರ್ಯಕರ ಎಂದು ಹೇಳಿದೆ. (ಸಂಗ್ರಹ ಚಿತ್ರ)
(3 / 5)
ಇನ್ನು ಅಶೋಕ್‌ ಗೆಹ್ಲೋಟ್‌ ಅವರ 'ಗದ್ದಾರ್‌'(ದ್ರೋಹಿ) ಹೇಳಿಕೆ ಕಾಂಗ್ರೆಸ್‌ಗೆ ತೀವ್ರ ಮುಜುಗರ ತಂದಿದ್ದು, ಗೆಹ್ಲೋಟ್‌ ಹೇಳಿಕೆ ಅನಿರೀಕ್ಷಿತ ಮತ್ತು ಆಶ್ಚರ್ಯಕರ ಎಂದು ಹೇಳಿದೆ. (ಸಂಗ್ರಹ ಚಿತ್ರ)(HT_PRINT)
ಈ ಕುರಿತು ಮಾತನಾಡಿರುವ ಕಾಂಗ್ರೆಸ್‌ ಹಿರಿಯ ನಾಯಕ ಜೈರಾಮ್‌ ರಮೇಶ್‌, ರಾಜಸ್ಥಾನ ಕಾಂಗ್ರೆಸ್‌ಗೆ ಅಶೋಕ್‌ ಗೆಹ್ಲೋಟ್‌ ಅವರಂತ ಹಿರಿಯ ಮತ್ತು ಸಚಿನ್‌ ಪೈಲಟ್‌ ಅವರಂತ ಯುವ ನಾಯಕರ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ. (ಸಂಗ್ರಹ ಚಿತ್ರ)
(4 / 5)
ಈ ಕುರಿತು ಮಾತನಾಡಿರುವ ಕಾಂಗ್ರೆಸ್‌ ಹಿರಿಯ ನಾಯಕ ಜೈರಾಮ್‌ ರಮೇಶ್‌, ರಾಜಸ್ಥಾನ ಕಾಂಗ್ರೆಸ್‌ಗೆ ಅಶೋಕ್‌ ಗೆಹ್ಲೋಟ್‌ ಅವರಂತ ಹಿರಿಯ ಮತ್ತು ಸಚಿನ್‌ ಪೈಲಟ್‌ ಅವರಂತ ಯುವ ನಾಯಕರ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ. (ಸಂಗ್ರಹ ಚಿತ್ರ)(HT_PRINT)
ರಾಜಸ್ಥಾನ ಬಿಕ್ಕಟ್ಟಿನ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದ್ದುಮ ಬಿಕ್ಕಟ್ಟು ಪರಿಹಾರ ಸೂತ್ರವನ್ನು ಕಂಡುಹಿಡಿಯುವ ವಿಶ್ವಾಸವಿದೆ ಎಂದು ಇದೇ ವೇಳೆ ಜೈರಾಮ್‌ ರಮೇಶ್‌ ಭರವಸೆ ವ್ಯಕ್ತಪಡಿಸಿದ್ದಾರೆ. (ಸಂಗ್ರಹ ಚಿತ್ರ)
(5 / 5)
ರಾಜಸ್ಥಾನ ಬಿಕ್ಕಟ್ಟಿನ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದ್ದುಮ ಬಿಕ್ಕಟ್ಟು ಪರಿಹಾರ ಸೂತ್ರವನ್ನು ಕಂಡುಹಿಡಿಯುವ ವಿಶ್ವಾಸವಿದೆ ಎಂದು ಇದೇ ವೇಳೆ ಜೈರಾಮ್‌ ರಮೇಶ್‌ ಭರವಸೆ ವ್ಯಕ್ತಪಡಿಸಿದ್ದಾರೆ. (ಸಂಗ್ರಹ ಚಿತ್ರ)(HT_PRINT)

    ಹಂಚಿಕೊಳ್ಳಲು ಲೇಖನಗಳು