logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Forest News: ಕರ್ನಾಟಕ ಅರಣ್ಯ ಇಲಾಖೆ ಶಿಬಿರದಲ್ಲಿ ಆನೆಗಳ ನಿರಂತರ ಸಾವು, ಕೇಳೋರಿಲ್ಲ ಯಾರು Photos

Forest News: ಕರ್ನಾಟಕ ಅರಣ್ಯ ಇಲಾಖೆ ಶಿಬಿರದಲ್ಲಿ ಆನೆಗಳ ನಿರಂತರ ಸಾವು, ಕೇಳೋರಿಲ್ಲ ಯಾರು photos

Apr 10, 2024 09:10 PM IST

ಕರ್ನಾಟಕದ ಶಿಬಿರಗಳಲ್ಲಿ ಆನೆಗಳು ನಿರಂತರವಾಗಿ ಸಾಯುತ್ತಿವೆ. 12 ತಿಂಗಳಲ್ಲಿ ನಾಗರಹೊಳೆಯಲ್ಲಿ ಐದು ಆನೆ ಸಾವನ್ನಪ್ಪಿರುವುದು ಆತಂಕಕಾರಿ. ಶಿಬಿರದ ಆನೆಗಳ ಆರೋಗ್ಯ ಸ್ಥಿತಿ ನಿಯಮಿತವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿಲ್ಲ. ಶಿಬಿರದಲ್ಲಿ ಸರಿಯಾದ ವೈದ್ಯಕೀಯ ಮೂಲಸೌಕರ್ಯಗಳಿಲ್ಲಎಂಬ ಆರೋಪಗಳಿವೆ. ಈ ಕುರಿತು ಪರಿಸರ ಹೋರಾಟಗಾರ ಜೋಸೆಫ್‌ ಹೂವರ್‌ ದೂರು ಕೂಡ ನೀಡಿದ್ದಾರೆ.

  • ಕರ್ನಾಟಕದ ಶಿಬಿರಗಳಲ್ಲಿ ಆನೆಗಳು ನಿರಂತರವಾಗಿ ಸಾಯುತ್ತಿವೆ. 12 ತಿಂಗಳಲ್ಲಿ ನಾಗರಹೊಳೆಯಲ್ಲಿ ಐದು ಆನೆ ಸಾವನ್ನಪ್ಪಿರುವುದು ಆತಂಕಕಾರಿ. ಶಿಬಿರದ ಆನೆಗಳ ಆರೋಗ್ಯ ಸ್ಥಿತಿ ನಿಯಮಿತವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿಲ್ಲ. ಶಿಬಿರದಲ್ಲಿ ಸರಿಯಾದ ವೈದ್ಯಕೀಯ ಮೂಲಸೌಕರ್ಯಗಳಿಲ್ಲಎಂಬ ಆರೋಪಗಳಿವೆ. ಈ ಕುರಿತು ಪರಿಸರ ಹೋರಾಟಗಾರ ಜೋಸೆಫ್‌ ಹೂವರ್‌ ದೂರು ಕೂಡ ನೀಡಿದ್ದಾರೆ.
ನಾಗರಹೊಳೆಯ ಮತ್ತೀಗೋಡು ಆನೆ ಶಿಬಿರದಲ್ಲಿದ್ದ ಅಂಬಾರಿ ಹೊತ್ತ ಬಲರಾಮ ಆನೆ ಮೇಯಲು ಹೋಗಲು ಗುಂಡೇಟು ತಿಂದು ನಂತರ ಮೃತಪಟ್ಟಿತ್ತು.
(1 / 8)
ನಾಗರಹೊಳೆಯ ಮತ್ತೀಗೋಡು ಆನೆ ಶಿಬಿರದಲ್ಲಿದ್ದ ಅಂಬಾರಿ ಹೊತ್ತ ಬಲರಾಮ ಆನೆ ಮೇಯಲು ಹೋಗಲು ಗುಂಡೇಟು ತಿಂದು ನಂತರ ಮೃತಪಟ್ಟಿತ್ತು.
ನಾಗರಹೊಳೆಯ ಬಳ್ಳೆ ಆನೆ ಶಿಬಿರದಲ್ಲಿದ್ದ ಅಂಬಾರಿ ಹೊತ್ತ ಅರ್ಜುನ ಆನೆ ಹಾಸನ ಯಸಳೂರು ಬಳಿ ಆನೆ ಸೆರೆ ಕಾರ್ಯಾಚರಣೆಗೆ ಹೋದಾಗ ಜೀವ ಕಳೆದುಕೊಂಡಿತು.
(2 / 8)
ನಾಗರಹೊಳೆಯ ಬಳ್ಳೆ ಆನೆ ಶಿಬಿರದಲ್ಲಿದ್ದ ಅಂಬಾರಿ ಹೊತ್ತ ಅರ್ಜುನ ಆನೆ ಹಾಸನ ಯಸಳೂರು ಬಳಿ ಆನೆ ಸೆರೆ ಕಾರ್ಯಾಚರಣೆಗೆ ಹೋದಾಗ ಜೀವ ಕಳೆದುಕೊಂಡಿತು.
ವಾರದ ಹಿಂದೆಯಷ್ಟೇ ನಾಗರಹೊಳೆಯ ಬಳ್ಳೆ ಶಿಬಿರದಲ್ಲಿದ್ದ ಕುಮಾರಸ್ವಾಮಿ ಎಂಬ ಆನೆ ಕಾಣೆಯಾಗಿ ಶವವಾಗಿ ಪತ್ತೆಯಾಗಿತ್ತು. ಆನೆ ಕಾಣೆಯಾದರೂ ಅಧಿಕಾರಿ, ಸಿಬ್ಬಂದಿ ತಲೆ ಕೆಡಿಸಿಕೊಂಡಿರಲಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿದ್ದವು,
(3 / 8)
ವಾರದ ಹಿಂದೆಯಷ್ಟೇ ನಾಗರಹೊಳೆಯ ಬಳ್ಳೆ ಶಿಬಿರದಲ್ಲಿದ್ದ ಕುಮಾರಸ್ವಾಮಿ ಎಂಬ ಆನೆ ಕಾಣೆಯಾಗಿ ಶವವಾಗಿ ಪತ್ತೆಯಾಗಿತ್ತು. ಆನೆ ಕಾಣೆಯಾದರೂ ಅಧಿಕಾರಿ, ಸಿಬ್ಬಂದಿ ತಲೆ ಕೆಡಿಸಿಕೊಂಡಿರಲಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿದ್ದವು,
ನಾಗರಹೊಳೆ ಮತ್ತಿಗೋಡು ಆನೆ ಶಿಬಿರದಲ್ಲಿ ಕೃಷ್ಣ ಎನ್ನುವ ಆನೆ ಕೆಲ ದಿನಗಳ ಹಿಂದೆ ಮೃತಪಟ್ಟಿದೆ. ಈ ಆನೆಯನ್ನು ವರ್ಷದ ಹಿಂದೆಯಷ್ಟೇ ಸೆರೆ ಹಿಡಿದು ತರಲಾಗಿತ್ತು.
(4 / 8)
ನಾಗರಹೊಳೆ ಮತ್ತಿಗೋಡು ಆನೆ ಶಿಬಿರದಲ್ಲಿ ಕೃಷ್ಣ ಎನ್ನುವ ಆನೆ ಕೆಲ ದಿನಗಳ ಹಿಂದೆ ಮೃತಪಟ್ಟಿದೆ. ಈ ಆನೆಯನ್ನು ವರ್ಷದ ಹಿಂದೆಯಷ್ಟೇ ಸೆರೆ ಹಿಡಿದು ತರಲಾಗಿತ್ತು.
ಆರು ತಿಂಗಳ ಹಿಂದೆ ಸೆರೆ ಸಿಕ್ಕಿದ್ದ ವಿರಾಟ್‌ ಎನ್ನುವ ಆನೆಯೂ ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರದಲ್ಲಿ ಜೀವ ಕಳೆದುಕೊಂಡಿದೆ. ಈ ಆನೆಯ ಆರೋಗ್ಯವನ್ನು ನೋಡಿಕೊಳ್ಳುವಲ್ಲಿ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ ಆರೋಪಗಳಿವೆ. 
(5 / 8)
ಆರು ತಿಂಗಳ ಹಿಂದೆ ಸೆರೆ ಸಿಕ್ಕಿದ್ದ ವಿರಾಟ್‌ ಎನ್ನುವ ಆನೆಯೂ ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರದಲ್ಲಿ ಜೀವ ಕಳೆದುಕೊಂಡಿದೆ. ಈ ಆನೆಯ ಆರೋಗ್ಯವನ್ನು ನೋಡಿಕೊಳ್ಳುವಲ್ಲಿ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ ಆರೋಪಗಳಿವೆ. 
ದಕ್ಷಿಣ ಕನ್ನಡದಿಂದ ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರಕ್ಕೆ ತರಲಾಗಿದ್ದ ಸುಬ್ರಮಣಿ ಎನ್ನುವ  ಗಟ್ಟಿಮುಟ್ಟಾಗಿದ್ದರೂ ಕಳೆದ ವರ್ಷ ಜೀವ ಕಳೆದುಕೊಂಡಿತ್ತು.
(6 / 8)
ದಕ್ಷಿಣ ಕನ್ನಡದಿಂದ ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರಕ್ಕೆ ತರಲಾಗಿದ್ದ ಸುಬ್ರಮಣಿ ಎನ್ನುವ  ಗಟ್ಟಿಮುಟ್ಟಾಗಿದ್ದರೂ ಕಳೆದ ವರ್ಷ ಜೀವ ಕಳೆದುಕೊಂಡಿತ್ತು.
ತಮಿಳುನಾಡು ಹಾಗೂ ಕರ್ನಾಟಕ ತೀವ್ರ ಗದ್ದಲ ಮಾಡುತ್ತ ಸೆರೆ ಸಿಕ್ಕಿದ್ದ ಅಕ್ಕಿರಾಜಾ ಎನ್ನುವ ಆನೆ ಬಂಡೀಪುರದ ರಾಮಪುರ ಆನೆ ಶಿಬಿರದಲ್ಲಿ ಕಳೆದ ವರ್ಷ ಸತ್ತು ಹೋಯಿತು,. ಹಿಡಿದು ತಂದ ತಿಂಗಳೊಳಗೆ ಆನೆ ಪ್ರಾಣ ಕಳೆದುಕೊಂಡಿತು,
(7 / 8)
ತಮಿಳುನಾಡು ಹಾಗೂ ಕರ್ನಾಟಕ ತೀವ್ರ ಗದ್ದಲ ಮಾಡುತ್ತ ಸೆರೆ ಸಿಕ್ಕಿದ್ದ ಅಕ್ಕಿರಾಜಾ ಎನ್ನುವ ಆನೆ ಬಂಡೀಪುರದ ರಾಮಪುರ ಆನೆ ಶಿಬಿರದಲ್ಲಿ ಕಳೆದ ವರ್ಷ ಸತ್ತು ಹೋಯಿತು,. ಹಿಡಿದು ತಂದ ತಿಂಗಳೊಳಗೆ ಆನೆ ಪ್ರಾಣ ಕಳೆದುಕೊಂಡಿತು,
ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಅವರ ಸುಪರ್ದಿಯಲ್ಲಿದ್ದ ಗಣೇಶ ಎನ್ನುವ ಆನೆಯನ್ನು ಶಿವಮೊಗ್ಗದ ಸಕ್ರೆ ಬೈಲ್‌ ಆನೆ ಶಿಬಿರಕ್ಕೆ ತಂದರೂ ಅನಾರೋಗ್ಯದಿಂದ ಮೃತಪಟ್ಟಿತು. 
(8 / 8)
ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಅವರ ಸುಪರ್ದಿಯಲ್ಲಿದ್ದ ಗಣೇಶ ಎನ್ನುವ ಆನೆಯನ್ನು ಶಿವಮೊಗ್ಗದ ಸಕ್ರೆ ಬೈಲ್‌ ಆನೆ ಶಿಬಿರಕ್ಕೆ ತಂದರೂ ಅನಾರೋಗ್ಯದಿಂದ ಮೃತಪಟ್ಟಿತು. 

    ಹಂಚಿಕೊಳ್ಳಲು ಲೇಖನಗಳು