logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Priyanka Kumar: ‘ಪಡ್ಡೆಹುಲಿ’ ಬಲೆಗೆ ಬಿದ್ದ ಪ್ರಿಯಾಂಕಾ!; ಶ್ರೇಯಸ್ ಮಂಜು ಹೊಸ ಚಿತ್ರಕ್ಕೆ ನಾಯಕಿ ಫಿಕ್ಸ್..‌

Priyanka Kumar: ‘ಪಡ್ಡೆಹುಲಿ’ ಬಲೆಗೆ ಬಿದ್ದ ಪ್ರಿಯಾಂಕಾ!; ಶ್ರೇಯಸ್ ಮಂಜು ಹೊಸ ಚಿತ್ರಕ್ಕೆ ನಾಯಕಿ ಫಿಕ್ಸ್..‌

Mar 29, 2023 08:29 AM IST

Shreyas Manju New Movie: ‘ವಿಷ್ಣು ಪ್ರಿಯ’ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿರುವ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್, ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮಧು ಗೌಡ ಗಂಗೂರು ನಿರ್ದೇಶನದ ಈ ಚಿತ್ರಕ್ಕೆ ಇದೀಗ ನಾಯಕಿಯೂ ಅಂತಿಮವಾಗಿದೆ. ಗ್ಲಾಮರ್‌ ಗೊಂಬೆ ಪ್ರಿಯಾಂಕಾ ಕುಮಾರ್‌ ಶ್ರೇಯಸ್‌ಗೆ ಜೋಡಿಯಾಗಿದ್ದಾರೆ.

Shreyas Manju New Movie: ‘ವಿಷ್ಣು ಪ್ರಿಯ’ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿರುವ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್, ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮಧು ಗೌಡ ಗಂಗೂರು ನಿರ್ದೇಶನದ ಈ ಚಿತ್ರಕ್ಕೆ ಇದೀಗ ನಾಯಕಿಯೂ ಅಂತಿಮವಾಗಿದೆ. ಗ್ಲಾಮರ್‌ ಗೊಂಬೆ ಪ್ರಿಯಾಂಕಾ ಕುಮಾರ್‌ ಶ್ರೇಯಸ್‌ಗೆ ಜೋಡಿಯಾಗಿದ್ದಾರೆ.
ರಾಣ ಸಿನಿಮಾ ಬಳಿಕ ಶ್ರೇಯಸ್‌ ಮಂಜು ಇದೀಗ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಕಾತರದಲ್ಲಿದ್ದಾರೆ. (instagram/ Priyanka Kumar)
(1 / 6)
ರಾಣ ಸಿನಿಮಾ ಬಳಿಕ ಶ್ರೇಯಸ್‌ ಮಂಜು ಇದೀಗ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಕಾತರದಲ್ಲಿದ್ದಾರೆ. (instagram/ Priyanka Kumar)
ದುರ್ಗ, ನೀಲಿ ಧಾರಾವಾಹಿ ಸೇರಿ ಒಂದಷ್ಟು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವವಿರುವ ಮಧು ಗೌಡ ಗಂಗೂರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. (instagram/ Priyanka Kumar)
(2 / 6)
ದುರ್ಗ, ನೀಲಿ ಧಾರಾವಾಹಿ ಸೇರಿ ಒಂದಷ್ಟು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವವಿರುವ ಮಧು ಗೌಡ ಗಂಗೂರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. (instagram/ Priyanka Kumar)
ಮಾಸ್ ಹಾಗೂ ಕಾಲೇಜ್ ಲವ್ ಸ್ಟೋರಿ ಕಥಾಹಂದರವಿರುವ ಈ ಚಿತ್ರಕ್ಕೆ ಇದೀಗ ನಾಯಕಿ ಫಿಕ್ಸ್‌ ಆಗಿದ್ದು, ಪ್ರಿಯಾಂಕಾ ಕುಮಾರ್ ಮೊದಲ ಸಲ ಶ್ರೇಯಸ್‌ಗೆ ಜೋಡಿಯಾಗುತ್ತಿದ್ದಾರೆ. (instagram/ Priyanka Kumar)
(3 / 6)
ಮಾಸ್ ಹಾಗೂ ಕಾಲೇಜ್ ಲವ್ ಸ್ಟೋರಿ ಕಥಾಹಂದರವಿರುವ ಈ ಚಿತ್ರಕ್ಕೆ ಇದೀಗ ನಾಯಕಿ ಫಿಕ್ಸ್‌ ಆಗಿದ್ದು, ಪ್ರಿಯಾಂಕಾ ಕುಮಾರ್ ಮೊದಲ ಸಲ ಶ್ರೇಯಸ್‌ಗೆ ಜೋಡಿಯಾಗುತ್ತಿದ್ದಾರೆ. (instagram/ Priyanka Kumar)
ಅಭಿಷೇಕ್ ಅಂಬರೀಷ್ ನಟನೆಯ ಬ್ಯಾಡ್ ಮ್ಯಾನರ್ಸ್ ಹಾಗೂ ಅದ್ಧೂರಿ ಲವರ್ ಸಿನಿಮಾದಲ್ಲಿಯೂ ಪ್ರಿಯಾಂಕಾ ನಾಯಕಿಯಾಗಿ ನಟಿಸಿದ್ದಾರೆ. (instagram/ Priyanka Kumar)
(4 / 6)
ಅಭಿಷೇಕ್ ಅಂಬರೀಷ್ ನಟನೆಯ ಬ್ಯಾಡ್ ಮ್ಯಾನರ್ಸ್ ಹಾಗೂ ಅದ್ಧೂರಿ ಲವರ್ ಸಿನಿಮಾದಲ್ಲಿಯೂ ಪ್ರಿಯಾಂಕಾ ನಾಯಕಿಯಾಗಿ ನಟಿಸಿದ್ದಾರೆ. (instagram/ Priyanka Kumar)
ಏಷ್ಯಾನೆಟ್ ಮೂವೀ ಬ್ಯಾನರ್‌ನಲ್ಲಿ ಆರ್ ಸಂತೋಷ್ ಕುಮಾರ್ ಚಿತ್ರ ನಿರ್ಮಾಣ ಮಾಡ್ತಿದ್ದು, ಅರ್ಜುನ್ ಜನ್ಯ ಸಂಗೀತ, ಗಗನ್ ಗೌಡ ಛಾಯಾಗ್ರಹಣ, ರವಿವರ್ಮಾ ಸಾಹಸ, ರಾಜೇಶ್ ಸಾಲುಂಡಿ ಸಂಭಾಷಣೆ ಚಿತ್ರಕ್ಕಿದೆ. (instagram/ Priyanka Kumar)
(5 / 6)
ಏಷ್ಯಾನೆಟ್ ಮೂವೀ ಬ್ಯಾನರ್‌ನಲ್ಲಿ ಆರ್ ಸಂತೋಷ್ ಕುಮಾರ್ ಚಿತ್ರ ನಿರ್ಮಾಣ ಮಾಡ್ತಿದ್ದು, ಅರ್ಜುನ್ ಜನ್ಯ ಸಂಗೀತ, ಗಗನ್ ಗೌಡ ಛಾಯಾಗ್ರಹಣ, ರವಿವರ್ಮಾ ಸಾಹಸ, ರಾಜೇಶ್ ಸಾಲುಂಡಿ ಸಂಭಾಷಣೆ ಚಿತ್ರಕ್ಕಿದೆ. (instagram/ Priyanka Kumar)
ಇದೇ 31ಕ್ಕೆ ಮುಹೂರ್ತ ನೆರವೇರಲಿದ್ದು, ಏಪ್ರಿಲ್ ತಿಂಗಳಿಂದ ಚಿತ್ರೀಕರಣ ಶುರುವಾಗಲಿದೆ. ಬೆಂಗಳೂರು, ಕೊಡಗು, ಚಿಕ್ಕಮಗಳೂರು, ಕೇರಳದಲ್ಲಿ ಶೂಟಿಂಗ್ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. (instagram/ Priyanka Kumar)
(6 / 6)
ಇದೇ 31ಕ್ಕೆ ಮುಹೂರ್ತ ನೆರವೇರಲಿದ್ದು, ಏಪ್ರಿಲ್ ತಿಂಗಳಿಂದ ಚಿತ್ರೀಕರಣ ಶುರುವಾಗಲಿದೆ. ಬೆಂಗಳೂರು, ಕೊಡಗು, ಚಿಕ್ಕಮಗಳೂರು, ಕೇರಳದಲ್ಲಿ ಶೂಟಿಂಗ್ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. (instagram/ Priyanka Kumar)

    ಹಂಚಿಕೊಳ್ಳಲು ಲೇಖನಗಳು