logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kasaragod News: ಸೀತಾಂಗೋಳಿ ಪೆರ್ಣೆ ಭಗವತೀ ಕ್ಷೇತ್ರದಲ್ಲಿ ಕಳಿಯಾಟದ ಖುಷಿಯ ನೋಟ, ಇಲ್ಲಿವೆ ಆಕರ್ಷಕ ಚಿತ್ರಗಳು

Kasaragod News: ಸೀತಾಂಗೋಳಿ ಪೆರ್ಣೆ ಭಗವತೀ ಕ್ಷೇತ್ರದಲ್ಲಿ ಕಳಿಯಾಟದ ಖುಷಿಯ ನೋಟ, ಇಲ್ಲಿವೆ ಆಕರ್ಷಕ ಚಿತ್ರಗಳು

Mar 06, 2024 05:15 PM IST

ಕೇರಳ ಹಲವು ಸಂಸ್ಕೃತಿಗಳ ಸಂಗಮ. ಅದರಲ್ಲಿ ದೈವದ ಪೂಜೆ,ಸಂಸ್ಕೃತಿಗಳೂ ಸೇರಿವೆ. ಕಾಸರಗೋಡು ಜಿಲ್ಲೆಯಲ್ಲಿ ಸೀತಾಂಗೋಳಿಯ ಪೆರ್ಣೆಯಲ್ಲಿನ ಭಗವತೀ ಕ್ಷೇತ್ರದಲ್ಲಿ ಕಳಿಯಾಟದ ಕಳೆ ಈಗ ಜೋರಾಗಿದೆ. ಚಿತ್ರ- ಮಾಹಿತಿ: ಹರೀಶ್‌ ಮಾಂಬಾಡಿ ಮಂಗಳೂರು

  • ಕೇರಳ ಹಲವು ಸಂಸ್ಕೃತಿಗಳ ಸಂಗಮ. ಅದರಲ್ಲಿ ದೈವದ ಪೂಜೆ,ಸಂಸ್ಕೃತಿಗಳೂ ಸೇರಿವೆ. ಕಾಸರಗೋಡು ಜಿಲ್ಲೆಯಲ್ಲಿ ಸೀತಾಂಗೋಳಿಯ ಪೆರ್ಣೆಯಲ್ಲಿನ ಭಗವತೀ ಕ್ಷೇತ್ರದಲ್ಲಿ ಕಳಿಯಾಟದ ಕಳೆ ಈಗ ಜೋರಾಗಿದೆ. 
  • ಚಿತ್ರ- ಮಾಹಿತಿ: ಹರೀಶ್‌ ಮಾಂಬಾಡಿ ಮಂಗಳೂರು
ಕಾಸರಗೋಡು ಜಿಲ್ಲೆಯ ಸೀತಾಂಗೋಳಿ ಪೆರ್ಣೆ ಶ್ರೀ ಮುಚ್ಚಿಲೋಟು ಭಗವತೀ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ಆರಂಭವಾಗಿದ್ದು, ಮಾರ್ಚ್ 7ರವರೆಗೆ ನಡೆಯುತ್ತದೆ.
(1 / 6)
ಕಾಸರಗೋಡು ಜಿಲ್ಲೆಯ ಸೀತಾಂಗೋಳಿ ಪೆರ್ಣೆ ಶ್ರೀ ಮುಚ್ಚಿಲೋಟು ಭಗವತೀ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ಆರಂಭವಾಗಿದ್ದು, ಮಾರ್ಚ್ 7ರವರೆಗೆ ನಡೆಯುತ್ತದೆ.
ಕೇರಳದ ಪ್ರಧಾನ 18 ಮುಚ್ಚಿಲೋಟ್ ಕ್ಷೇತ್ರಗಳಲ್ಲಿ ಒಂದಾದ ಪೆರ್ಣೆಯಲ್ಲಿ 2004ರಲ್ಲಿ ಕಳಿಯಾಟ ನಡೆದಿತ್ತು.. ಈಗ ಮತ್ತೆ ನಡೆದಿದೆ. 
(2 / 6)
ಕೇರಳದ ಪ್ರಧಾನ 18 ಮುಚ್ಚಿಲೋಟ್ ಕ್ಷೇತ್ರಗಳಲ್ಲಿ ಒಂದಾದ ಪೆರ್ಣೆಯಲ್ಲಿ 2004ರಲ್ಲಿ ಕಳಿಯಾಟ ನಡೆದಿತ್ತು.. ಈಗ ಮತ್ತೆ ನಡೆದಿದೆ. 
ಕಳಿಯಾಟ್ ಎಂಬುದು ಕೇರಳದಲ್ಲಿ ನಡೆಯುವ ದೈವಾರಾಧನೆ. ವಿಶಿಷ್ಟವಾಗಿ ನಡೆಯುವ ಈ ಆರಾಧನೆ ಹಲವು ಪ್ರಕ್ರಿಯೆಗಳಲ್ಲಿ ನಡೆಯುತ್ತದೆ.
(3 / 6)
ಕಳಿಯಾಟ್ ಎಂಬುದು ಕೇರಳದಲ್ಲಿ ನಡೆಯುವ ದೈವಾರಾಧನೆ. ವಿಶಿಷ್ಟವಾಗಿ ನಡೆಯುವ ಈ ಆರಾಧನೆ ಹಲವು ಪ್ರಕ್ರಿಯೆಗಳಲ್ಲಿ ನಡೆಯುತ್ತದೆ.
ವಿಶೇಷವಾಗಿ ಕೇರಳದಲ್ಲಿ ನಡೆಯುವ ಕಳಿಯಾಟ ಮಹೋತ್ಸವಗಳಲ್ಲಿ ದೈವದ ಮುಖವರ್ಣಿಕೆ ಆಕರ್ಷಣೀಯವಾಗಿದ್ದು, ಅತ್ಯಂತ ವೈಶಿಷ್ಟ್ಯಪೂರ್ಣವಾಗಿರುತ್ತದೆ. 
(4 / 6)
ವಿಶೇಷವಾಗಿ ಕೇರಳದಲ್ಲಿ ನಡೆಯುವ ಕಳಿಯಾಟ ಮಹೋತ್ಸವಗಳಲ್ಲಿ ದೈವದ ಮುಖವರ್ಣಿಕೆ ಆಕರ್ಷಣೀಯವಾಗಿದ್ದು, ಅತ್ಯಂತ ವೈಶಿಷ್ಟ್ಯಪೂರ್ಣವಾಗಿರುತ್ತದೆ. 
ರಾತ್ರಿಯ ವೇಳೆ ನಡೆಯುವ ಈ ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಸೇರುತ್ತಾರೆ. ಭಕ್ತಿ ಭಾವದಿಂದ ಈ ಕಾರ್ಯಕ್ರಮಗಳು ನಡೆಯುತ್ತದೆ, ಒಂದೊಂದು ಪ್ರದೇಶದಲ್ಲಿ ಆಯಾ ಸಮಾಜಬಾಂಧವರು ತಮ್ಮ ಕಟ್ಟುಕಟ್ಟಲೆಯ ಸಂಪ್ರದಾಯದ ಪ್ರಕಾರ ದೈವದ ಸಂಪ್ರೀತಿಗೆ ಬೇಕಾದ ವಿಧಿ ವಿಧಾನಗಳನ್ನು ನೆರವೇರಿಸುತ್ತಾರೆ.
(5 / 6)
ರಾತ್ರಿಯ ವೇಳೆ ನಡೆಯುವ ಈ ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಸೇರುತ್ತಾರೆ. ಭಕ್ತಿ ಭಾವದಿಂದ ಈ ಕಾರ್ಯಕ್ರಮಗಳು ನಡೆಯುತ್ತದೆ, ಒಂದೊಂದು ಪ್ರದೇಶದಲ್ಲಿ ಆಯಾ ಸಮಾಜಬಾಂಧವರು ತಮ್ಮ ಕಟ್ಟುಕಟ್ಟಲೆಯ ಸಂಪ್ರದಾಯದ ಪ್ರಕಾರ ದೈವದ ಸಂಪ್ರೀತಿಗೆ ಬೇಕಾದ ವಿಧಿ ವಿಧಾನಗಳನ್ನು ನೆರವೇರಿಸುತ್ತಾರೆ.
ದೈವಗಳಲ್ಲಿ ವಿಷ್ಣುಮೂರ್ತಿ ( ನರಸಿಂಹ) ಹಾಗೂ ವಯನಾಡ ಕುಲವನ್ ( ತೊಂಚ್ಚಮಾರ್) ಬಹಳ ಪ್ರಸಿದ್ಧಿ. ಇಲ್ಲಿ ವಿಷ್ಣುಮೂರ್ತಿಯನ್ನು ಬಯಲುಕೋಲ, ಒತ್ತೆಕೋಲ ಹಾಗೂ ಕಳಿಯಾಟ ಎಂಬ ವಿಭಿನ್ನ ರೀತಿಯಲ್ಲಿ ಆಚರಣೆ ನಡೆಸುತ್ತಾರೆ.
(6 / 6)
ದೈವಗಳಲ್ಲಿ ವಿಷ್ಣುಮೂರ್ತಿ ( ನರಸಿಂಹ) ಹಾಗೂ ವಯನಾಡ ಕುಲವನ್ ( ತೊಂಚ್ಚಮಾರ್) ಬಹಳ ಪ್ರಸಿದ್ಧಿ. ಇಲ್ಲಿ ವಿಷ್ಣುಮೂರ್ತಿಯನ್ನು ಬಯಲುಕೋಲ, ಒತ್ತೆಕೋಲ ಹಾಗೂ ಕಳಿಯಾಟ ಎಂಬ ವಿಭಿನ್ನ ರೀತಿಯಲ್ಲಿ ಆಚರಣೆ ನಡೆಸುತ್ತಾರೆ.

    ಹಂಚಿಕೊಳ್ಳಲು ಲೇಖನಗಳು