logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Uttarakaanda: ಧಾರವಾಡದ ನುಗ್ಗಿಕೇರಿ ಹನುಮನ ಪಾದಕ್ಕೆರಗಿದ ಡಾಲಿ ಧನಂಜಯ್;‌ ಶೀಘ್ರದಲ್ಲಿ ‘ಉತ್ತರಕಾಂಡ’ ಶೂಟಿಂಗ್‌ ಶುರು Photos

Uttarakaanda: ಧಾರವಾಡದ ನುಗ್ಗಿಕೇರಿ ಹನುಮನ ಪಾದಕ್ಕೆರಗಿದ ಡಾಲಿ ಧನಂಜಯ್;‌ ಶೀಘ್ರದಲ್ಲಿ ‘ಉತ್ತರಕಾಂಡ’ ಶೂಟಿಂಗ್‌ ಶುರು PHOTOS

Mar 29, 2024 07:44 AM IST

Dharwad News: ರತ್ನನ್‌ ಪ್ರಪಂಚ ಮೂಲಕ ಹಿಟ್‌ ಕೊಟ್ಟಿದ್ದ ನಿರ್ದೇಶಕ ರೋಹಿತ್‌ ಪದಕಿ, ನಟ ಡಾಲಿ ಧನಂಜಯ್‌ ಜೋಡಿ ಈಗ ಉತ್ತರಕಾಂಡ ಸಿನಿಮಾ ಮೂಲಕ ಮತ್ತೆ ಗುದ್ದಾಂ ಗುದ್ದಿ ಶುರು ಮಾಡಿದೆ. ಟೀಸರ್‌ ಮೂಲಕವೇ ಕುತೂಹಲದ ಕಿಡಿ ಹೊತ್ತಿಸಿದ ಈ ತಂಡ ಇನ್ನೇನು ಶೀಘ್ರದಲ್ಲಿ ಶೂಟಿಂಗ್‌ಗೆ ತೆರಳಲಿದೆ. ಅದಕ್ಕೂ ಮುನ್ನ ಧಾರವಾಡದ ನುಗ್ಗಿಕೇರಿ ಹನುಮನ ದರ್ಶನ ಪಡೆದಿದೆ ಚಿತ್ರತಂಡ.

  • Dharwad News: ರತ್ನನ್‌ ಪ್ರಪಂಚ ಮೂಲಕ ಹಿಟ್‌ ಕೊಟ್ಟಿದ್ದ ನಿರ್ದೇಶಕ ರೋಹಿತ್‌ ಪದಕಿ, ನಟ ಡಾಲಿ ಧನಂಜಯ್‌ ಜೋಡಿ ಈಗ ಉತ್ತರಕಾಂಡ ಸಿನಿಮಾ ಮೂಲಕ ಮತ್ತೆ ಗುದ್ದಾಂ ಗುದ್ದಿ ಶುರು ಮಾಡಿದೆ. ಟೀಸರ್‌ ಮೂಲಕವೇ ಕುತೂಹಲದ ಕಿಡಿ ಹೊತ್ತಿಸಿದ ಈ ತಂಡ ಇನ್ನೇನು ಶೀಘ್ರದಲ್ಲಿ ಶೂಟಿಂಗ್‌ಗೆ ತೆರಳಲಿದೆ. ಅದಕ್ಕೂ ಮುನ್ನ ಧಾರವಾಡದ ನುಗ್ಗಿಕೇರಿ ಹನುಮನ ದರ್ಶನ ಪಡೆದಿದೆ ಚಿತ್ರತಂಡ.
ಡಾಲಿ ಧನಂಜಯ್‌ ನಾಯಕನಾಗಿ ನಟಿಸಲಿರುವ ಉತ್ತರಕಾಂಡ ಚಿತ್ರದ ಚಿತ್ರೀಕರಣ ಮುಂದಿನ ವಾರದಲ್ಲಿ ಆರಂಭಗೊಳ್ಳಲಿದೆ. ಈ ನಿಮಿತ್ತ ಚಿತ್ರದ ನಟ, ನಿರ್ದೇಶಕ ಮತ್ತು ನಿರ್ಮಾಪಕರು ಹನುಮನ ಆಶೀರ್ವಾದ ಪಡೆದಿದ್ದಾರೆ  
(1 / 5)
ಡಾಲಿ ಧನಂಜಯ್‌ ನಾಯಕನಾಗಿ ನಟಿಸಲಿರುವ ಉತ್ತರಕಾಂಡ ಚಿತ್ರದ ಚಿತ್ರೀಕರಣ ಮುಂದಿನ ವಾರದಲ್ಲಿ ಆರಂಭಗೊಳ್ಳಲಿದೆ. ಈ ನಿಮಿತ್ತ ಚಿತ್ರದ ನಟ, ನಿರ್ದೇಶಕ ಮತ್ತು ನಿರ್ಮಾಪಕರು ಹನುಮನ ಆಶೀರ್ವಾದ ಪಡೆದಿದ್ದಾರೆ  
ಡಾಲಿ‌ ಧನಂಜಯ್, ಉತ್ತರಕಾಂಡದ ನಿರ್ದೇಶಕ ರೋಹಿತ್ ಪದಕಿ ಮತ್ತು ನಿರ್ಮಾಪಕ ಕಾರ್ತಿಕ್ ಗೌಡ ಧಾರವಾಡ ಹೊರವಲಯದಲ್ಲಿರುವ ನುಗ್ಗಿಕೇರಿಯ ಹನುಮಂತ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.
(2 / 5)
ಡಾಲಿ‌ ಧನಂಜಯ್, ಉತ್ತರಕಾಂಡದ ನಿರ್ದೇಶಕ ರೋಹಿತ್ ಪದಕಿ ಮತ್ತು ನಿರ್ಮಾಪಕ ಕಾರ್ತಿಕ್ ಗೌಡ ಧಾರವಾಡ ಹೊರವಲಯದಲ್ಲಿರುವ ನುಗ್ಗಿಕೇರಿಯ ಹನುಮಂತ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.
ಉತ್ತರಕಾಂಡ ಒಂದು ಆಕ್ಷನ್ ಡ್ರಾಮಾ ಸಿನಿಮಾ. ಅದರಲ್ಲೂ ಉತ್ತರ ಕರ್ನಾಟಕ ಭಾಷೆಯನ್ನೇ ಪ್ರಧಾನವಾಗಿಸಿಕೊಂಡು ಈ ಸಿನಿಮಾ ಮಾಡ್ತಿದ್ದಾರೆ ರೋಹಿತ್‌ ಪದಕಿ. 
(3 / 5)
ಉತ್ತರಕಾಂಡ ಒಂದು ಆಕ್ಷನ್ ಡ್ರಾಮಾ ಸಿನಿಮಾ. ಅದರಲ್ಲೂ ಉತ್ತರ ಕರ್ನಾಟಕ ಭಾಷೆಯನ್ನೇ ಪ್ರಧಾನವಾಗಿಸಿಕೊಂಡು ಈ ಸಿನಿಮಾ ಮಾಡ್ತಿದ್ದಾರೆ ರೋಹಿತ್‌ ಪದಕಿ. 
ಈಗಾಗಲೇ ಇದೇ ಸಿನಿಮಾದ ಸಲುವಾಗಿ ಉತ್ತರ ಕರ್ನಾಟಕ ಭಾಗದವರನ್ನೇ ಆಯ್ಕೆ ಮಾಡಿಕೊಳ್ಳಲು ವಿಜಯಪುರ ಮತ್ತು ಹುಬ್ಬಳ್ಳಿಯಲ್ಲಿ ಆಡಿಷನ್‌ ಆಯೋಜಿಸಿತ್ತು. ಸಾಕಷ್ಟು ಜನ ಆಡಿಷನ್‌ ಸಹ ಕೊಟ್ಟಿದ್ದಾರೆ. 
(4 / 5)
ಈಗಾಗಲೇ ಇದೇ ಸಿನಿಮಾದ ಸಲುವಾಗಿ ಉತ್ತರ ಕರ್ನಾಟಕ ಭಾಗದವರನ್ನೇ ಆಯ್ಕೆ ಮಾಡಿಕೊಳ್ಳಲು ವಿಜಯಪುರ ಮತ್ತು ಹುಬ್ಬಳ್ಳಿಯಲ್ಲಿ ಆಡಿಷನ್‌ ಆಯೋಜಿಸಿತ್ತು. ಸಾಕಷ್ಟು ಜನ ಆಡಿಷನ್‌ ಸಹ ಕೊಟ್ಟಿದ್ದಾರೆ. 
ಈ ಸಿನಿಮಾದಲ್ಲಿ ಧನಂಜಯ್‌ ಜತೆಗೆ ಶಿವರಾಜ್ ಕುಮಾರ್ ಸಹ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೆಆರ್‌ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ‌‌ ಬರಲಿದೆ. ಇತ್ತೀಚೆಗಷ್ಟೇ ಕಾರಣಾಂತರಗಳಿಂದ ಈ ಸಿನಿಮಾದಿಂದ ರಮ್ಯಾ ಹೊರನಡೆದಿದ್ದರು. 
(5 / 5)
ಈ ಸಿನಿಮಾದಲ್ಲಿ ಧನಂಜಯ್‌ ಜತೆಗೆ ಶಿವರಾಜ್ ಕುಮಾರ್ ಸಹ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೆಆರ್‌ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ‌‌ ಬರಲಿದೆ. ಇತ್ತೀಚೆಗಷ್ಟೇ ಕಾರಣಾಂತರಗಳಿಂದ ಈ ಸಿನಿಮಾದಿಂದ ರಮ್ಯಾ ಹೊರನಡೆದಿದ್ದರು. 

    ಹಂಚಿಕೊಳ್ಳಲು ಲೇಖನಗಳು