logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kerebete Trailer: ಗೌರಿಶಂಕರ್‌ ಕೆರೆಬೇಟೆ ಚಿತ್ರಕ್ಕೆ ಕಿಚ್ಚ ಸುದೀಪ್‌, ದಿನಕರ್‌ ತೂಗುದೀಪ ಸಾಥ್‌

Kerebete Trailer: ಗೌರಿಶಂಕರ್‌ ಕೆರೆಬೇಟೆ ಚಿತ್ರಕ್ಕೆ ಕಿಚ್ಚ ಸುದೀಪ್‌, ದಿನಕರ್‌ ತೂಗುದೀಪ ಸಾಥ್‌

Feb 18, 2024 12:50 PM IST

Kerebete Trailer: ರಾಜಹಂಸ ಸಿನಿಮಾ ಖ್ಯಾತಿಯ ನಟ ಗೌರಿಶಂಕರ್‌, ಕೆರೆಬೇಟೆ ಚಿತ್ರದ ಮೂಲಕ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದ್ದಾರೆ. ಗ್ರಾಮ್ಯ ಸೊಗಡಿನ ಚಿತ್ರದಲ್ಲಿ ಕೆರೆಬೇಟೆಯನ್ನೇ ಪ್ರಧಾನವಾಗಿಸಿಕೊಂಡು ಕಥೆ ಹೆಣೆದು, ಅಷ್ಟೇ ರೋಚಕವಾಗಿಯೇ ತೆರೆಮೇಲೆ ತರುತ್ತಿದ್ದಾರೆ. ಮಾರ್ಚ್‌ 15ರಂದು ಬಿಡುಗಡೆ ಆಗಲಿರುವ ಇದೇ ಚಿತ್ರಕ್ಕೀಗ ಕಿಚ್ಚ ಸುದೀಪ್‌ ಸಾಥ್‌ ನೀಡಿದ್ದಾರೆ.

  • Kerebete Trailer: ರಾಜಹಂಸ ಸಿನಿಮಾ ಖ್ಯಾತಿಯ ನಟ ಗೌರಿಶಂಕರ್‌, ಕೆರೆಬೇಟೆ ಚಿತ್ರದ ಮೂಲಕ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದ್ದಾರೆ. ಗ್ರಾಮ್ಯ ಸೊಗಡಿನ ಚಿತ್ರದಲ್ಲಿ ಕೆರೆಬೇಟೆಯನ್ನೇ ಪ್ರಧಾನವಾಗಿಸಿಕೊಂಡು ಕಥೆ ಹೆಣೆದು, ಅಷ್ಟೇ ರೋಚಕವಾಗಿಯೇ ತೆರೆಮೇಲೆ ತರುತ್ತಿದ್ದಾರೆ. ಮಾರ್ಚ್‌ 15ರಂದು ಬಿಡುಗಡೆ ಆಗಲಿರುವ ಇದೇ ಚಿತ್ರಕ್ಕೀಗ ಕಿಚ್ಚ ಸುದೀಪ್‌ ಸಾಥ್‌ ನೀಡಿದ್ದಾರೆ.
ಈಗಾಗಲೇ ಫಸ್ಟ್ ಲುಕ್, ಮೋಷನ್ ಪೋಸ್ಟರ್ ಮತ್ತು ಟೀಸರ್‌ ಮೂಲಕ ಸದ್ದು ಮಾಡ್ತಿದೆ ಗೌರಿಶಂಕರ್‌ ನಟನೆಯ ಕೆರೆಬೇಟೆ ಸಿನಿಮಾ. 
(1 / 9)
ಈಗಾಗಲೇ ಫಸ್ಟ್ ಲುಕ್, ಮೋಷನ್ ಪೋಸ್ಟರ್ ಮತ್ತು ಟೀಸರ್‌ ಮೂಲಕ ಸದ್ದು ಮಾಡ್ತಿದೆ ಗೌರಿಶಂಕರ್‌ ನಟನೆಯ ಕೆರೆಬೇಟೆ ಸಿನಿಮಾ. 
ಈ ಹಿಂದೆ ರಿಯಲ್‌ ಸ್ಟಾರ್‌ ಉಪೇಂದ್ರ ಅವರಿಂದ ಮಲೆನಾಡ ಗೊಂಬೆಗೆ ಮನಸೋತ ಮನೆಹಾಳ ಎಂಬ ಹಾಡು ಬಿಡುಗಡೆಯಾಗಿತ್ತು. ಇದೀಗ ಇದೇ ಸಿನಿಮಾದ ಟ್ರೇಲರ್‌ ನೋಡುವ ಸಮಯ ಬಂದಿದೆ. 
(2 / 9)
ಈ ಹಿಂದೆ ರಿಯಲ್‌ ಸ್ಟಾರ್‌ ಉಪೇಂದ್ರ ಅವರಿಂದ ಮಲೆನಾಡ ಗೊಂಬೆಗೆ ಮನಸೋತ ಮನೆಹಾಳ ಎಂಬ ಹಾಡು ಬಿಡುಗಡೆಯಾಗಿತ್ತು. ಇದೀಗ ಇದೇ ಸಿನಿಮಾದ ಟ್ರೇಲರ್‌ ನೋಡುವ ಸಮಯ ಬಂದಿದೆ. 
ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಕೆರೆಬೇಟೆ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಲಿದ್ದಾರೆ. ಫೆ. 20ರಂದು ಸಂಜೆ 7 ಗಂಟೆಗೆ A2 ಮ್ಯೂಸಿಕ್‌ನಲ್ಲಿ ಈ ಟ್ರೇಲರ್‌ ರಿಲೀಸ್‌ ಆಗಲಿದೆ.
(3 / 9)
ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಕೆರೆಬೇಟೆ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಲಿದ್ದಾರೆ. ಫೆ. 20ರಂದು ಸಂಜೆ 7 ಗಂಟೆಗೆ A2 ಮ್ಯೂಸಿಕ್‌ನಲ್ಲಿ ಈ ಟ್ರೇಲರ್‌ ರಿಲೀಸ್‌ ಆಗಲಿದೆ.
ಕಿಚ್ಚ ಸುದೀಪ್‌ ಒಂದು ಕಡೆ ಟ್ರೇಲರ್‌ ಬಿಡುಗಡೆ ಮಾಡಿಕೊಡುತ್ತಿದ್ದರೆ ಮತ್ತೊಂದು ಕಡೆ ಇದೇ ಚಿತ್ರವನ್ನು ದಿನಕರ್‌ ತೂಗುದೀಪ ಅವರು ಪ್ರಸೆಂಟ್‌ ಮಾಡಲಿದ್ದಾರೆ. ಚಿತ್ರತಂಡದ ಪಾಲಿಗಿದು ಡಬಲ್‌ ಖುಷಿ. 
(4 / 9)
ಕಿಚ್ಚ ಸುದೀಪ್‌ ಒಂದು ಕಡೆ ಟ್ರೇಲರ್‌ ಬಿಡುಗಡೆ ಮಾಡಿಕೊಡುತ್ತಿದ್ದರೆ ಮತ್ತೊಂದು ಕಡೆ ಇದೇ ಚಿತ್ರವನ್ನು ದಿನಕರ್‌ ತೂಗುದೀಪ ಅವರು ಪ್ರಸೆಂಟ್‌ ಮಾಡಲಿದ್ದಾರೆ. ಚಿತ್ರತಂಡದ ಪಾಲಿಗಿದು ಡಬಲ್‌ ಖುಷಿ. 
'ಕೆರೆಬೇಟೆ' ಸಿನಿಮಾ ನಿರ್ದೇಶಕ ರಾಜ್ ಗುರು ಸಾರಥ್ಯದಲ್ಲಿ ಮೂಡಿ ಬಂದಿದೆ. ಗೌರಿಶಂಕರ್ ನಾಯಕನಾಗಿ ನಟಿಸಿದರೆ, ಬಿಂಧು ಶಿವರಾಮ್ ನಾಯಕಿಯಾಗಿದ್ದಾರೆ. 
(5 / 9)
'ಕೆರೆಬೇಟೆ' ಸಿನಿಮಾ ನಿರ್ದೇಶಕ ರಾಜ್ ಗುರು ಸಾರಥ್ಯದಲ್ಲಿ ಮೂಡಿ ಬಂದಿದೆ. ಗೌರಿಶಂಕರ್ ನಾಯಕನಾಗಿ ನಟಿಸಿದರೆ, ಬಿಂಧು ಶಿವರಾಮ್ ನಾಯಕಿಯಾಗಿದ್ದಾರೆ. 
ಜನಮನ ಸಿನಿಮಾ ಸಂಸ್ಥೆ ಕೆರೆಬೇಟೆ ಸಿನಿಮಾ ನಿರ್ಮಾಣ ಮಾಡಿದ್ದು, ಸದ್ಯ ಪ್ರಚಾರ ಕಣಕ್ಕಿಳಿದಿರುವ ಸಿನಿಮಾ ತಂಡ, ಮಾರ್ಚ್‌ 15ರಂದು ಈ ಚಿತ್ರವನ್ನು ಚಿತ್ರಮಂದಿರಕ್ಕೆ ತರುತ್ತಿದೆ. 
(6 / 9)
ಜನಮನ ಸಿನಿಮಾ ಸಂಸ್ಥೆ ಕೆರೆಬೇಟೆ ಸಿನಿಮಾ ನಿರ್ಮಾಣ ಮಾಡಿದ್ದು, ಸದ್ಯ ಪ್ರಚಾರ ಕಣಕ್ಕಿಳಿದಿರುವ ಸಿನಿಮಾ ತಂಡ, ಮಾರ್ಚ್‌ 15ರಂದು ಈ ಚಿತ್ರವನ್ನು ಚಿತ್ರಮಂದಿರಕ್ಕೆ ತರುತ್ತಿದೆ. 
ಏನಿದು ಕೆರೆಬೇಟೆ? ಕೆರೆಬೇಟೆ ಎಂದರೆ ಮಲೆನಾಡು ಭಾಗದಲ್ಲಿ ಮೀನು ಬೇಟೆಯಾಡುವ ಒಂದು ಪದ್ಧತಿ. ಮಲೆನಾಡಿನಲ್ಲಿ ವರ್ಷಕೊಮ್ಮೆ ಕೆರೆ ಬೇಟೆಯಾಡುತ್ತಾರೆ. ಇದು ದೊಡ್ಡ ದೊಡ್ಡ ಕೆರೆಗಳಲ್ಲಿ ನಡೆಯುತ್ತದೆ. ಇದೇ ಈ ಸಿನಿಮಾದ ಮುಖ್ಯ ಎಳೆಯಾಗಿದೆ. 
(7 / 9)
ಏನಿದು ಕೆರೆಬೇಟೆ? ಕೆರೆಬೇಟೆ ಎಂದರೆ ಮಲೆನಾಡು ಭಾಗದಲ್ಲಿ ಮೀನು ಬೇಟೆಯಾಡುವ ಒಂದು ಪದ್ಧತಿ. ಮಲೆನಾಡಿನಲ್ಲಿ ವರ್ಷಕೊಮ್ಮೆ ಕೆರೆ ಬೇಟೆಯಾಡುತ್ತಾರೆ. ಇದು ದೊಡ್ಡ ದೊಡ್ಡ ಕೆರೆಗಳಲ್ಲಿ ನಡೆಯುತ್ತದೆ. ಇದೇ ಈ ಸಿನಿಮಾದ ಮುಖ್ಯ ಎಳೆಯಾಗಿದೆ. 
ಕೆರೆಬೇಟೆ ಚಿತ್ರಕ್ಕೆ ಗಗನ್ ಬಡೇರಿಯಾ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾಯಕನಾಗಿ ನಟಿಸುವುದರ ಜತೆಗೆ ಚಿತ್ರಕ್ಕೆ ಸಂಭಾಷಣೆಯನ್ನೂ ಬರೆದಿದ್ದಾರೆ ಗೌರಿಶಂಕರ್.‌ ಕೀರ್ತನ್‌ ಪೂಜಾರಿ ಕ್ಯಾಮರಾ ವರ್ಕ್‌ ಈ ಚಿತ್ರಕ್ಕಿದೆ.
(8 / 9)
ಕೆರೆಬೇಟೆ ಚಿತ್ರಕ್ಕೆ ಗಗನ್ ಬಡೇರಿಯಾ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾಯಕನಾಗಿ ನಟಿಸುವುದರ ಜತೆಗೆ ಚಿತ್ರಕ್ಕೆ ಸಂಭಾಷಣೆಯನ್ನೂ ಬರೆದಿದ್ದಾರೆ ಗೌರಿಶಂಕರ್.‌ ಕೀರ್ತನ್‌ ಪೂಜಾರಿ ಕ್ಯಾಮರಾ ವರ್ಕ್‌ ಈ ಚಿತ್ರಕ್ಕಿದೆ.
ಸಿನಿಮಾ, ಕಿರುತೆರೆ, ಒಟಿಟಿ ಕುರಿತ ಸುದ್ದಿಗಳಿಗೆ HT ಕನ್ನಡ ವೆಬ್‌ ತಾಣಕ್ಕೆ ಭೇಟಿ ನೀಡಿ
(9 / 9)
ಸಿನಿಮಾ, ಕಿರುತೆರೆ, ಒಟಿಟಿ ಕುರಿತ ಸುದ್ದಿಗಳಿಗೆ HT ಕನ್ನಡ ವೆಬ್‌ ತಾಣಕ್ಕೆ ಭೇಟಿ ನೀಡಿ

    ಹಂಚಿಕೊಳ್ಳಲು ಲೇಖನಗಳು