logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಜಮೀನು ಹಕ್ಕು ಪತ್ರ ಕೊಟ್ಟಿದ್ದೀನಿ ಅಂತ ಪ್ರಮಾಣ ಮಾಡಿ ದೀಪ ಹಚ್ಚುತ್ತೇನೆ;ಪ್ರದೀಪ್ ಗೆ ಮಾಜಿ ಸಚಿವ ಸುಧಾಕರ್ ಸವಾಲು

ಜಮೀನು ಹಕ್ಕು ಪತ್ರ ಕೊಟ್ಟಿದ್ದೀನಿ ಅಂತ ಪ್ರಮಾಣ ಮಾಡಿ ದೀಪ ಹಚ್ಚುತ್ತೇನೆ;ಪ್ರದೀಪ್ ಗೆ ಮಾಜಿ ಸಚಿವ ಸುಧಾಕರ್ ಸವಾಲು

Jul 03, 2023 04:50 PM IST

  • ಮಾಜಿ ಸಚಿವ ಡಾ ಕೆ ಸುಧಾಕರ್, ಹಾಲಿ ಶಾಸಕ ಪ್ರದೀಪ್ ಈಶ್ವರ್ ಗೆ ಆಣೆ ಪ್ರಮಾಣದ ಸವಾಲು ಹಾಕಿದ್ದಾರೆ. ಸುಧಾಕರ್ ಕೊಟ್ಟಿದ್ದು ನಕಲಿ ಜಮೀನು ದಾಖಲೆ ಎಂದು ಹೇಳಿರುವ ಪ್ರದೀಪ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸುಧಾಕರ್, ನಾನು ಕೊಟ್ಟಿರುವ ದಾಖಲೆಗಳು ಸತ್ಯ. ಇದನ್ನ ಪ್ರಮಾಣೀಕರಿಸಲು ಶ್ರೀ ಭೋಗನಂದಿಶ್ವರ ದೇವಾಲಯಕ್ಕೆ ಹೋಗಿ ನಾನೇ ದೀಪ ಹಚ್ಚುತ್ತೇನೆ ಎಂದು ಸವಾಲು ಹಾಕಿದ್ದಾರೆ. ನಿವೇಶನಗಳೇ ಆಗೇ ಇಲ್ಲ ಅನ್ನೋ ಹಾಗೆ ಬಡವರ ಆಸೆಗೆ ತಣ್ಣೀರು ಎರಚುವ ಕೆಲಸ ಮಾಡ್ತಿದ್ದಾರೆ. ಆದರೆ ಶಾಸಕರಾದ ಮೇಲೆ ಅಭಿವೃದ್ಧಿಕೆಲಸ ಮಾಡುತ್ತಾರೆ ಎಂದು ಭಾವಿಸಿದ್ದೆ. ಆದರೆ ಪ್ರದೀಪ್ ಈಶ್ವರ್ ಸಿನಿಮಾ ಡೈಲಾಗ್ ಗಳನ್ನ ಹೊಡೆಯುತ್ತಿದ್ದಾರೆ ಎಂದು ಸುಧಾಕರ್ ಟೀಕಿಸಿದ್ದಾರೆ.