Appu Express Ambulance: ‘ಥ್ಯಾಂಕ್ಯು ಯಶ್..ನಿಮ್ಮ ಧಾರಾಳತನಕ್ಕೆ’
Mar 26, 2023 11:52 AM IST
ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ದೈಹಿಕವಾಗಿ ನಮ್ಮ ನಡುವೆ ಇಲ್ಲ. ಆದರೆ, ಅವರು ಬಿಟ್ಟು ಹೋದ ಮಾನವೀಯ ಮೌಲ್ಯಗಳನ್ನು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ನಟ ಪ್ರಕಾಶ್ ರಾಜ್, ಹೊಸ ಕಾರ್ಯಕ್ಕೆ ಕಳೆದ ವರ್ಷ ಮುನ್ನುಡಿ ಬರೆದಿದ್ದರು. ಅದುವೇ ಅಪ್ಪು ಎಕ್ಸ್ಪ್ರೆಸ್ ಆಂಬುಲೆನ್ಸ್. ಕಳೆದ ವರ್ಷದ ಆಗಸ್ಟ್ನಲ್ಲಿ ಮೈಸೂರಿನಲ್ಲಿ ಮೊದಲ ಅಪ್ಪು ಎಕ್ಸ್ಪ್ರೆಸ್ ಆಂಬುಲೆನ್ಸ್ ವಾಹನ ರಸ್ತೆಗಿಳಿದಿತ್ತು. ಇದೀಗ ಒಂದಲ್ಲ ಎರಡಲ್ಲ ಐದು ಆಂಬುಲೆನ್ಸ್ಗಳು ರಾಜ್ಯದ ಐದು ಜಿಲ್ಲೆಗಳಲ್ಲಿ ಕಾರ್ಯಾರಂಭ ಮಾಡಲು ಸಜ್ಜಾಗಿವೆ.