ಜೀವನದಿ ಕಾವೇರಮ್ಮನಿಗೆ ಜೂ. ಅಂಬಿಯ ವಿಶೇಷ ಪೂಜೆ VIDEO
Sep 30, 2023 08:07 PM IST
- ಕರ್ನಾಟಕದಲ್ಲಿ ಕಾವೇರಿ ನೀರು ಹಂಚಿಕೆ ವಿಚಾರ ಪ್ರತಿಭಟನೆಯ ಹಾದಿ ಹಿಡಿದಿದೆ. ಈ ನಡುವೆ ಚಿತ್ರೋದ್ಯಮವೂ ಈ ಹೋರಾಟಕ್ಕೆ ಕೈ ಜೋಡಿಸಿ ಕಾವೇರಿ ನಮ್ಮದು ಎಂದು ಗಟ್ಟಿಯಾಗಿ ಹೇಳಿದೆ. ಹೀಗಿರುವಾಗಲೇ ನಟ ಅಭಿಷೇಕ್ ಅಂಬರೀಶ್ ನೇರವಾಗಿ ಕಾವೇರಮ್ಮನ ದರ್ಶನ ಪಡೆದಿದ್ದಾರೆ. ಬರಗಾಲದಿಂದ ಬಳಲುತ್ತಿರುವ ರೈತರಿಗಾಗಿ, ಕಾವೇರಿ ಸಮಸ್ಯೆಯು ಬಗೆಹರಿದು ನಮ್ಮ ಕಾವೇರಿ ಹೋರಾಟಗಾರರ ಹೋರಾಟಕ್ಕೆ ಜಯ ಸಿಗಲೆಂದು, ರಾಜ್ಯದಲ್ಲಿ ಇನ್ನು ಹೆಚ್ಚು ಹೆಚ್ಚು ಮಳೆಯಾಗಲೆಂದು ಆಶಿಸಿ ಅಭಿಷೇಕ್ ಅಂಬರೀಶ್ ಮತ್ತು ಪತ್ನಿ ಅವಿವಾ ಅಭಿಷೇಕ್ ನೇರವಾಗಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಗೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದ್ದಾರೆ.