ಕನ್ನಡ ಸುದ್ದಿ  /  ಮನರಂಜನೆ  /  Abhishek Ambareesh: ಅವಿವಾ ಬಿದ್ದಪ್ಪ ಜೊತೆ ಚಳಿ ಚಳಿ ಡ್ಯೂಯೆಟ್‌ ಹಾಡಿದ ಯಂಗ್‌ ರೆಬೆಲ್‌ ಸ್ಟಾರ್‌; ಅಂಬರೀಶ್‌ ಸಿನಿಮಾ ಹಾಡುಗಳ ರೀಕ್ರಿಯೇಟ್

Abhishek Ambareesh: ಅವಿವಾ ಬಿದ್ದಪ್ಪ ಜೊತೆ ಚಳಿ ಚಳಿ ಡ್ಯೂಯೆಟ್‌ ಹಾಡಿದ ಯಂಗ್‌ ರೆಬೆಲ್‌ ಸ್ಟಾರ್‌; ಅಂಬರೀಶ್‌ ಸಿನಿಮಾ ಹಾಡುಗಳ ರೀಕ್ರಿಯೇಟ್

ಒಲವಿನ ಉಡುಗೊರೆ ಸಿನಿಮಾದ ಟೈಟಲ್‌ ಹಾಡು, ಚಕ್ರವ್ಯೂಹ ಸಿನಿಮಾದ ಚಳಿ ಚಳಿ ತಾಳೆನು.. ಮಂಡ್ಯದ ಗಂಡು ಚಿತ್ರದ ಟೈಟಲ್‌ ಹಾಡು, ಅಂಬಿ ನಿಂಗ್‌ ವಯಸ್ಸಾಯ್ತೋ ಸಿನಿಮಾದ ಜಲೀಲಾ.. ಹಾಡುಗಳನ್ನು ಈ ವಿಡಿಯೋದಲ್ಲಿ ರೀ ಕ್ರಿಯೇಟ್‌ ಮಾಡಲಾಗಿದೆ.

ಅಂಬರೀಶ್‌ ಸಿನಿಮಾ ಹಾಡುಗಳ ರೀ ಕ್ರಿಯೇಟ್
ಅಂಬರೀಶ್‌ ಸಿನಿಮಾ ಹಾಡುಗಳ ರೀ ಕ್ರಿಯೇಟ್

ಇಂದು (ಮೇ 29) ರೆಬೆಲ್‌ ಸ್ಟಾರ್‌ ಅಂಬರೀಶ್‌ 71ನೇ ಹುಟ್ಟುಹಬ್ಬ. ಅಭಿಮಾನಿಗಳು, ಸಿನಿ ಗಣ್ಯರು ತಮ್ಮ ಸೋಷಿಯಲ್‌ ಮೀಡಿಯಾ ಮೂಲಕ ಕಲಿಯುಗ ಕರ್ಣನನ್ನು ನೆನೆದಿದ್ದಾರೆ. ಈ ವಿಶೇಷ ದಿನದಂದು ಅಂಬರೀಶ್‌ ಪುತ್ರ ಅಭಿಷೇಕ್‌, ತಂದೆಯ ಸಿನಿಮಾ ಹಾಡುಗಳ ದೃಶ್ಯಗಳನ್ನು ರೀ ಕ್ರಿಯೇಟ್‌ ಮಾಡಿದ್ದು ಈ ವಿಡಿಯೋ ವೈರಲ್‌ ಆಗುತ್ತಿದೆ.

ಅಭಿಷೇಕ್‌ಗೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ಖ್ಯಾತ ಫ್ಯಾಷನ್‌ ಡಿಸೈನರ್‌ ಪ್ರಸಾದ್‌ ಬಿದ್ದಪ್ಪ ಅವರ ಪುತ್ರಿ ಅವಿವಾ ಬಿದ್ದಪ್ಪ ಅವರೊಂದಿಗೆ ನಿಶ್ಚಿತಾರ್ಥ ನೆರವೇರಿತ್ತು. ಈ ಜೋಡಿ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ. ಈ ನಡುವೆ ಅವಿವಾ ಹಾಗೂ ಅಭಿಷೇಕ್‌ ಇಬ್ಬರೂ ಜೊತೆ ಸೇರಿ ಅಂಬರೀಶ್‌ ಅವರ ಕೆಲವೊಂದು ಸಿನಿಮಾಗಳ ಜನಪ್ರಿಯ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಒಲವಿನ ಉಡುಗೊರೆ ಸಿನಿಮಾದ ಟೈಟಲ್‌ ಹಾಡು, ಚಕ್ರವ್ಯೂಹ ಸಿನಿಮಾದ ಚಳಿ ಚಳಿ ತಾಳೆನು.. ಮಂಡ್ಯದ ಗಂಡು ಚಿತ್ರದ ಟೈಟಲ್‌ ಹಾಡು, ಅಂಬಿ ನಿಂಗ್‌ ವಯಸ್ಸಾಯ್ತೋ ಸಿನಿಮಾದ ಜಲೀಲಾ.. ಹಾಡುಗಳನ್ನು ಈ ವಿಡಿಯೋದಲ್ಲಿ ರೀ ಕ್ರಿಯೇಟ್‌ ಮಾಡಲಾಗಿದೆ. ಕೆಆರ್‌ಜಿ ಕನೆಕ್ಟ್ಸ್‌ ಈ ವಿಡಿಯೋ ರೀ ಕ್ರಿಯೇಟ್‌ ಮಾಡಿದ್ದು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ. ಕೆಲವೇ ನಿಮಿಷಗಳಲ್ಲಿ ವಿಡಿಯೋ ಹೆಚ್ಚು ವ್ಯೂವ್ಸ್‌ ಪಡೆದಿದೆ.

ಅಭಿಷೇಕ್‌ ಅಂಬರೀಶ್‌ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಸದ್ಯಕ್ಕೆ ಅವರು ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಚಿತ್ರದಲ್ಲಿ ಅಭಿಷೇಕ್‌ ಜೊತೆ ರಚಿತಾ ರಾಮ್‌ ನಾಯಕಿಯಾಗಿ ನಟಿಸಿದ್ದು ದುನಿಯಾ ಸೂರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜೊತೆಗೆ ‘ಕಾಳಿ‘ ಸಿನಿಮಾ ಚಿತ್ರೀಕರಣದಲ್ಲಿ ಕೂಡಾ ಯಂಗ್‌ ರೆಬೆಲ್‌ ಸ್ಟಾರ್‌ ಬ್ಯುಸಿ ಇದ್ದಾರೆ. ಈ ಚಿತ್ರದಲ್ಲಿ ಅಭಿಷೇಕ್‌ಗೆ ಸಪ್ತಮಿ ಗೌಡ ನಾಯಕಿಯಾಗಿ ನಟಿಸುತ್ತಿದ್ದಾರೆ.

ರೆಬೆಲ್‌ ಸ್ಟಾರ್‌ ಕುರಿತಾದ ಮತ್ತಷ್ಟು ಸುದ್ದಿಗಳು

ಅಂಬರೀಶ್‌ಗೆ ಗಾಂಚಲಿ ಇತ್ತು, ಭಯ ಹುಟ್ಟಿಸಲು ಒಂದು ಪ್ಲಾನ್‌ ಮಾಡಿದ್ದೆ, ಅಂಬಿ ಜೊತೆಗಿನ ಒಡನಾಟ ನೆನೆದ ಜೈ ಜಗದೀಶ್‌; ವಿಡಿಯೋ

ಮೇ 29 ರೆಬೆಲ್‌ ಸ್ಟಾರ್‌ ಅಂಬರೀಶ್‌ ಹುಟ್ಟುಹಬ್ಬ. ಇದೇ ವೇಳೆ ಜೈ ಜಗದೀಶ್‌ ಭಾನುವಾರದ ಸಂಚಿಕೆಯಲ್ಲಿ ತಮ್ಮ ಹಾಗೂ ಅಂಬರೀಶ್‌ ನಡುವಿನ ಒಡನಾಟವನ್ನು ನೆನಪಿಸಿಕೊಂಡರು. ''ನಾನು ಪೈಲೆಟ್‌ ಆಗಬೇಕು ಎಂದುಕೊಂಡಿದ್ದೆ. ಆದರೆ ಆಕ್ಟರ್‌ ಆದೆ, ಜಕ್ಕೂರು ಫ್ಲೈಯಿಂಗ್‌ ಸ್ಕೂಲ್‌ನಲ್ಲಿ ಪೈಲೆಟ್‌ ತರಬೇತಿ ಪಡೆದಿದ್ದೇನೆ. ಅಂಬರೀಶ್‌ ಹಾಗೂ ನಾನು ಮೈಸೂರಿನಲ್ಲಿ ಸಾಕಷ್ಟು ಸಮಯ ಕಳೆದಿದ್ದೇವೆ. ಪೂರ್ತಿ ಸ್ಟೋರಿ ಓದಲು ಈ ಲಿಂಕ್‌ ಒತ್ತಿ.

ಎಂದಿಗೂ ದುಡ್ಡು ಎಣಿಸದೆ ಜೇಬಿನಿಂದ ಹಣ ತೆಗೆದು ಕಷ್ಟದಲ್ಲಿದ್ದವರಿಗೆ ನೀಡುತ್ತಿದ್ದ ಕಲಿಯುಗ ಕರ್ಣ ಅಂಬರೀಶ್‌

ಅಂಬರೀಶ್‌, ಕಲಿಯುಗ ಕರ್ಣ ಎಂದೇ ಹೆಸರಾಗಿದ್ದರು. ಚಿತ್ರರಂಗದಲ್ಲಿ, ವೈಯಕ್ತಿಕ ಜೀವನದಲ್ಲಿ, ರಾಜಕೀಯ ಜೀವನದಲ್ಲೇ ಆಗಲಿ, ಯಾರೊಂದಿಗೂ ಶತ್ರುತ್ವ ಕಟ್ಟಿಕೊಳ್ಳದೆ ಎಲ್ಲರೊಂದಿಗೆ ಪ್ರೀತಿಯಿಂದ ಬೆರೆಯುತ್ತಿದ್ದ ಅಜಾತ ಶತ್ರು ಅವರು. ಕಷ್ಟ ಎಂದು ಬರುತ್ತಿದ್ದವರಿಗೆ ಹಿಂದು ಮುಂದು ಯೋಚಿಸದೆ ಸಹಾಯ ಮಾಡುವ ಗುಣ ಅವರಿಗೆ ಇತ್ತು, ಅದೇ ಕಾರಣದಿಂದ ಅಂಬರೀಶ್‌ಗೆ ಕಲಿಯುಗ ಕರ್ಣ ಎಂದು ಎಲ್ಲರೂ ಕರೆಯುತ್ತಿದ್ದರು. ರೆಬೆಲ್‌ ಸ್ಟಾರ್‌ ಫೋಟೋಗಳನ್ನು ನೋಡಲು ಈ ಲಿಂಕ್‌ ಕ್ಲಿಕ್‌ ಮಾಡಿ.

IPL_Entry_Point