logo
ಕನ್ನಡ ಸುದ್ದಿ  /  ಮನರಂಜನೆ  /  Sanjay Dutt Injured: ಕೆ.ಡಿ ಸಾಹಸ ದೃಶ್ಯಗಳ ಶೂಟಿಂಗ್‌ ವೇಳೆ ಅವಘಡ... ಸಂಜಯ್‌ ದತ್‌ಗೆ ಗಾಯ

Sanjay Dutt Injured: ಕೆ.ಡಿ ಸಾಹಸ ದೃಶ್ಯಗಳ ಶೂಟಿಂಗ್‌ ವೇಳೆ ಅವಘಡ... ಸಂಜಯ್‌ ದತ್‌ಗೆ ಗಾಯ

Rakshitha Sowmya HT Kannada

Apr 12, 2023 05:31 PM IST

ಕೆ.ಡಿ ಸೆಟ್‌ನಲ್ಲಿ ಸಂಜಯ್‌ ದತ್‌ಗೆ ಗಾಯ

    • ಸದ್ಯಕ್ಕೆ ಶೂಟಿಂಗ್‌ ನಿಲ್ಲಿಸಲಾಗಿದ್ದು, ಸಂಜಯ್‌ ದತ್‌ ಗುಣಮುಖರಾಗಿ ವಾಪಸ್‌ ಬರುತ್ತಿದ್ದಂತೆ ಅವರ ಭಾಗದ ಚಿತ್ರೀಕರಣವನ್ನು ಮತ್ತೆ ಮುಂದುವರೆಸುವುದಾಗಿ ನಿರ್ದೇಶಕ ಪ್ರೇಮ್‌ ಮಾಹಿತಿ ನೀಡಿದ್ದಾರೆ.
ಕೆ.ಡಿ ಸೆಟ್‌ನಲ್ಲಿ ಸಂಜಯ್‌ ದತ್‌ಗೆ ಗಾಯ
ಕೆ.ಡಿ ಸೆಟ್‌ನಲ್ಲಿ ಸಂಜಯ್‌ ದತ್‌ಗೆ ಗಾಯ

ಧ್ರುವ ಸರ್ಜಾ ಅಭಿನಯದ ಕೆ.ಡಿ ಚಿತ್ರದ ಮೂಲಕ ಬಾಲಿವುಡ್‌ ನಟ ಸಂಜಯ್‌ ದತ್‌ ಮತ್ತೆ ಕನ್ನಡ ಸಿನಿಮಾಗೆ ವಾಪಸ್‌ ಬಂದಿದ್ದಾರೆ. ಬೆಂಗಳೂರಿನಲ್ಲಿ ಸಿನಿಮಾ ಆಕ್ಷನ್‌ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದ್ದು ಶೂಟಿಂಗ್‌ ವೇಳೆ ಸಂಜಯ್‌ ದತ್‌ಗೆ ಗಾಯವಾಗಿದೆ. ಬಾಂಬ್‌ ಬ್ಲಾಸ್ಟ್‌ ದೃಶ್ಯವೊಂದರ ಚಿತ್ರೀಕರಣದ ವೇಳೆ ಈ ಅಪಘಾತ ಸಂಭವಿಸಿದೆ.

ಟ್ರೆಂಡಿಂಗ್​ ಸುದ್ದಿ

Amruthadhaare: ರೌಡಿಗಳ ಕೈಯಿಂದ ಮಲ್ಲಿಯನ್ನು ಬಚಾವ್‌ ಮಾಡಿದ್ಲು ಮಹಿಮಾ; ಡುಮ್ಮ ಸರ್‌ ಟೈಟಾದ್ರು, ಐ ಅಂದ್ರು, ಲವ್‌ ಯು ಹೇಳ್ತಾರ

ಬರಲಿದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಯೋಪಿಕ್‌; ಮೋದಿ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಬಾಹುಬಲಿಯ ಕಟ್ಟಪ್ಪ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ಪ್ರೇಮ್‌ ಕೆ.ಡಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸದ್ಯಕ್ಕೆ ಮಾಗಡಿ ರೋಡ್‌ನಲ್ಲಿ ಹಾಕಲಾದ ಸೆಟ್‌ನಲ್ಲಿ ಶೂಟಿಂಗ್‌ ನಡೆಯುತ್ತಿದೆ. ಆದರೆ ಬಾಂಬ್‌ ಬ್ಲಾಸ್ಟ್‌ ಮಾಡುವ ಸೀನ್‌ನಲ್ಲಿ ಸಂಜಯ್‌ ದತ್‌ ಮೊಣಕೈ ಹಾಗೂ ಮುಖಕ್ಕೆ ಗಾಯವಾಗಿದೆ. ಘಟನೆ ನಡೆದ ಕೂಡಲೇ ಸಂಜಯ್‌ ದತ್‌ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿಂದ ಅವರು ಮುಂಬೈಗೆ ವಾಪಸ್‌ ತೆರಳಿದ್ದಾರೆ ಎನ್ನಲಾಗಿದೆ. ಧ್ರುವ ಸರ್ಜಾ ಹಾಗೂ ಸಂಜಯ್‌ ದತ್‌ ನಡುವಿನ ಫೈಟ್‌ ಸೀನ್‌ ಚಿತ್ರೀಕರಣ ನಡೆಯುತ್ತಿತ್ತು ಎಂದು ಮೂಲಗಳಿಂದ ತಿಳಿದುಬಂದಿದೆ. ಸದ್ಯಕ್ಕೆ ಶೂಟಿಂಗ್‌ ನಿಲ್ಲಿಸಲಾಗಿದ್ದು, ಸಂಜಯ್‌ ದತ್‌ ಗುಣಮುಖರಾಗಿ ವಾಪಸ್‌ ಬರುತ್ತಿದ್ದಂತೆ ಅವರ ಭಾಗದ ಚಿತ್ರೀಕರಣವನ್ನು ಮತ್ತೆ ಮುಂದುವರೆಸುವುದಾಗಿ ನಿರ್ದೇಶಕ ಪ್ರೇಮ್‌ ಮಾಹಿತಿ ನೀಡಿದ್ದಾರೆ.

ಚಿತ್ರೀಕರಣದ ಸಮಯದಲ್ಲಿ ಇಂತಹ ಅವಘಡಗಳು ಸಂಭವಿಸುತ್ತಲೇ ಇರುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಆಕಸ್ಮಿಕವಾಗಿ, ಕೆಲವೆಡೆ ನಿರ್ಲಕ್ಷ್ಯದಿಂದ ಚಿತ್ರತಂಡದ ಸದಸ್ಯರು ಗಂಭೀರವಾಗಿ ಗಾಯಗೊಂಡಿರುವ, ಸಾವನ್ನಪ್ಪಿರುವ ಉದಾಹರಣೆ ಇದೆ. ಕನ್ನಡ ಚಿತ್ರರಂಗದಲ್ಲಿ ದುನಿಯಾ ವಿಜಯ್‌ ಅಭಿನಯದ ಮಾಸ್ತಿ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಯುವ ಪ್ರತಿಭೆಗಳಾದ ಅನಿಲ್‌ ಹಾಗೂ ಉದಯ್‌ ಹೆಲಿಕಾಪ್ಟರ್‌ ಮೇಲಿಂದ ಕೆರೆಗೆ ಧುಮುಕಿ ಸಾವನ್ನಪ್ಪಿದ್ದರು. ರಚಿತಾ ರಾಮ್‌ ಹಾಗೂ ಅಜಯ್‌ ರಾವ್‌ ಅಭಿನಯದ ಐ ಲವ್‌ ಯೂ ರಚ್ಚು ಸಿನಿಮಾ ಶೂಟಿಂಗ್‌ ವೇಳೆ ಸಹಾಯಕ ಸ್ಟಂಟ್‌ಮ್ಯಾನ್‌, ವಿದ್ಯುತ್‌ ವೈರ್‌ ತಗುಲಿ ಸಾವನ್ನಪ್ಪಿದ್ದರು. ಆದ್ದರಿಂದ ಸಾಹಸ ದೃಶ್ಯಗಳ ಸಮಯದಲ್ಲಿ ಬಹಳ ಮುನ್ನೆಚರಿಕೆ ವಹಿಸುವುದು ಮುಖ್ಯ.

5 ಭಾಷೆಗಳಲ್ಲಿ ತಯಾರಾಗುತ್ತಿರುವ ಕೆ.ಡಿ

ಬಹುಕೋಟಿ ವೆಚ್ಚದಲ್ಲಿ ಸಿದ್ಧವಾಗಲಿರುವ ಈ ಚಿತ್ರಕ್ಕೆ ಕೆವಿಎನ್‌ ಪ್ರೊಡಕ್ಷನ್ಸ್‌ ಬಂಡವಾಳ ಹೂಡಿದೆ. 70-80ರ ಕಾಲಘಟ್ಟದ ಭೂಗತ ಜಗತ್ತಿನ ಹಿನ್ನೆಲೆಯುಳ್ಳ ಈ ಚಿತ್ರ, ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ನಿರ್ಮಾಣವಾಗಲಿದೆ. ಈ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನೀಡುತ್ತಿದ್ದು, ವಿಕ್ರಾಂತ್ ರೋಣ ಖ್ಯಾತಿಯ ವಿಲಿಯಂ ಡೇವಿಡ್‌ ಛಾಯಾಗ್ರಹಣ ಮಾಡಲಿದ್ದಾರೆ. ಇದು ಧ್ರುವ ಸರ್ಜಾ ಮೊದಲ ಪ್ಯಾನ್‌ ಇಂಡಿಯಾ ಸಿನಿಮಾ.

17 ವರ್ಷಗಳ ನಂತರ ಮತ್ತೆ ಕನ್ನಡಕ್ಕೆ ಬಂದ ಶಿಲ್ಪಾ ಶೆಟ್ಟಿ

2005ರಲ್ಲಿ ತೆರೆ ಕಂಡ 'ಆಟೋ ಶಂಕರ್‌' ಚಿತ್ರದ ನಂತರ ಶಿಲ್ಪಾ ಶೆಟ್ಟಿ ಮತ್ತೆ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಇದೀಗ 17 ವರ್ಷಗಳ ನಂತರ ಮತ್ತೆ ಅವರು ಕೆ.ಡಿ ಚಿತ್ರದ ಮೂಲಕ ಕನ್ನಡಕ್ಕೆ ಬಂದಿದ್ಧಾರೆ. ಪ್ರೇಮ್‌ ನಿರ್ದೇಶನದಲ್ಲಿ ಧ್ರುವ ಸರ್ಜಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ, ಸತ್ಯವತಿ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸಲು ಇತ್ತೀಚೆಗೆ ಶಿಲ್ಪಾ ಶೆಟ್ಟಿ ಬೆಂಗಳೂರಿಗೆ ಬಂದಿದ್ದರು. ಈಗಾಗಲೇ ಶಿಲ್ಪಾಶೆಟ್ಟಿ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದು ಎರಡನೇ ಹಂತದ ಶೂಟಿಂಗ್‌ನಲ್ಲಿ ಭಾಗವಹಿಸಲು ಸಿಲಿಕಾನ್‌ ಸಿಟಿಗೆ ಬಂದು ಹೋಗಿದ್ದರು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ