logo
ಕನ್ನಡ ಸುದ್ದಿ  /  ಮನರಂಜನೆ  /  ರಜನಿಕಾಂತ್‌ ಎಂದರೆ ಬಾಲಿವುಡ್‌ ನಟರಿಗೂ ಅಕ್ಕರೆ, ತಲೈವಾ ಬಗ್ಗೆ ಅಮಿತಾಬ್‌, ಹೃತಿಕ್‌, ಅಮಿರ್‌ ಖಾನ್‌ ಏನ್‌ ಹೇಳಿದ್ದಾರೆ ಕೇಳಿ

ರಜನಿಕಾಂತ್‌ ಎಂದರೆ ಬಾಲಿವುಡ್‌ ನಟರಿಗೂ ಅಕ್ಕರೆ, ತಲೈವಾ ಬಗ್ಗೆ ಅಮಿತಾಬ್‌, ಹೃತಿಕ್‌, ಅಮಿರ್‌ ಖಾನ್‌ ಏನ್‌ ಹೇಳಿದ್ದಾರೆ ಕೇಳಿ

Praveen Chandra B HT Kannada

Dec 12, 2023 09:46 AM IST

ಇಂದು ರಜನಿಕಾಂತ್‌ ಹುಟ್ಟುಹಬ್ಬ

    • Happy Birthday Rajinikanth: ಕಾಲಿವುಡ್‌ನ ಸೂಪರ್‌ಸ್ಟಾರ್‌ ರಜನಿಕಾಂತ್‌ ಹುಟ್ಟುಹಬ್ಬವಿಂದು. ಬಾಲಿವುಡ್‌ನ ಪ್ರಮುಖ ನಟರು ರಜನಿಕಾಂತ್‌ ಕುರಿತು ಯಾವ ಅಭಿಪ್ರಾಯ ಹೊಂದಿದ್ದಾರೆ? ವಿಶೇಷವಾಗಿ ಅಮಿರ್‌ ಖಾನ್‌, ಅಮಿತಾಬ್‌ ಬಚ್ಚನ್‌, ಹೃತಿಕ್‌ ರೋಷನ್‌ ಏನು ಹೇಳಿದ್ದಾರೆ ಎಂದು ನೋಡೋಣ ಬನ್ನಿ.
ಇಂದು ರಜನಿಕಾಂತ್‌ ಹುಟ್ಟುಹಬ್ಬ
ಇಂದು ರಜನಿಕಾಂತ್‌ ಹುಟ್ಟುಹಬ್ಬ

Happy Birthday Rajinikanth: ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರ ವಯಸ್ಸು ಇಂದು (ಡಿಸೆಂಬರ್‌ 12) ಒಂದು ವರ್ಷ ಹೆಚ್ಚಾಗಿದೆ. ಆದರೆ, ವಯಸ್ಸು ಹೆಚ್ಚಾಗಿರುವ ಕುರಿತು ಯಾವುದೇ ಸಿನಿಮಾಗಳಲ್ಲಿಯೂ ಕಾಣಿಸದು. ಪಾತ್ರ ದೊರಕಿದರೆ ಹದಿಹರೆಯದ ಲವರ್‌ ಬಾಯ್‌ ಆಗಿ ಕಾಣಿಸಲು ರಜನಿಕಾಂತ್‌ ಸೈ. ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರು ಇತ್ತೀಚೆಗೆ ಜೈಲರ್‌ ಸಿನಿಮಾದ ಮೂಲಕ ಅಮೋಘವಾಗಿ ನಟಿಸಿದ್ದರು. ಇವರು ಹಿರಿಯ ನಟ ಎಂಬ ಯಾವುದೇ ಸುಳಿವು ಬಿಟ್ಟುಕೊಡದೆ ಯಾವುದೇ ಬಗೆಯ ಪಾತ್ರಗಳಲ್ಲಿಯೂ ಕಾಣಿಸಿಕೊಳ್ಳುತ್ತಾರೆ. ಆದರೆ, ಒಮ್ಮೆ ಸಿನಿಮಾದ ಶೂಟಿಂಗ್‌ ಮುಗಿದರೆ ಮೇಕಪ್‌ ಕಳಚಿಟ್ಟು ತಾನು ಹೇಗಿದ್ದೀನೋ ಅದೇ ರೀತಿ ಸಮಾಜದ ಜತೆ ಬೆರೆಯುತ್ತಾರೆ. ಇಂದು ರಜನಿಕಾಂತ್‌ ಹುಟ್ಟುಹಬ್ಬ. ಈ ಸಮಯದಲ್ಲಿ ಬಾಲಿವುಡ್‌ನ ಪ್ರಮುಖ ನಟರು ರಜನಿಕಾಂತ್‌ ಕುರಿತು ಹೀಗೆ ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ನಟಿ ಪವಿತ್ರಾ ಜಯರಾಮ್‌ಗೆ ನನ್ನ ಗಂಡ ಆರನೇಯವನು; ಅಕ್ರಮ ಸಂಬಂಧದ ಬಗ್ಗೆ ಮೌನ ಮುರಿದ ಮೃತ ಚಂದ್ರಕಾಂತ್‌ ಪತ್ನಿ ಶಿಲ್ಪಾ

Amruthadhaare: ಜೈದೇವ್‌ ಕಿಡ್ನ್ಯಾಪ್‌ ಕಥೆ ಕೇಳಿ ಹೆಸರಘಟ್ಟಕ್ಕೆ ಬಂದಳು ಮಲ್ಲಿ; ಚಿಕ್ಕಮಗಳೂರಿನಲ್ಲಿ ಹನಿಮೂನ್‌ ನಡುವೆಯೇ ಅಲರ್ಟ್‌ ಆದ ಭೂಮಿ

ನಾನಿನ್ನೂ ಅವನ ನೆನಪಿನಲ್ಲಿಯೇ ಇದ್ದೇನೆ! ವಯಸ್ಸು 50 ದಾಟಿದರೂ ಮದುವೆ ಆಗದಿರುವುದಕ್ಕೆ ಕಾರಣ ತಿಳಿಸಿದ ‘ಹಾಲುಂಡ ತವರು​’ ನಟಿ ಸಿತಾರಾ

ನಟಿ ಪವಿತ್ರಾ ಜಯರಾಮ್‌ ಅಪಘಾತದಲ್ಲಿ ಸಾವನ್ನಪ್ಪಿದಾಗ ಅದೇ ಕಾರ್‌ನಲ್ಲಿದ್ದ ನಟ ಚಂದ್ರಕಾಂತ್‌ ಆತ್ಮಹತ್ಯೆ!

ರಜನಿಕಾಂತ್‌ಗೆ ಯಾರೂ ಸಾಟಿಯಿಲ್ಲ: ಅಮಿರ್‌ ಖಾನ್‌

ಶಂಕರ್‌ ಅವರು ರೋಬೊ 2.0 ಸೀಕ್ವೆಲ್‌ನ ಪ್ರಮುಖ ಪಾತ್ರಕ್ಕಾಗಿ ಅಮಿರ್‌ ಖಾನ್‌ರನ್ನು ಸಂಪರ್ಕಿಸಿದ್ದರು ಎನ್ನುವ ಸಂಗತಿ ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ. ಆದರೆ, ಈ ಪಾತ್ರದಲ್ಲಿ ನಟಿಸಲು ಅಮಿರ್‌ ಖಾನ್‌ ನಿರಾಕರಿಸಿದರು. ವಸೀಗರನ್‌ ಮತ್ತು ಚಿಟ್ಟಿಯ ಪಾತ್ರವನ್ನು ರಜನಿಕಾಂತ್‌ ಅಲ್ಲದೆ ಬೇರೆ ಯಾರೂ ಮಾಡಬಾರದು ಎಂದು ಅಮಿರ್‌ ಖಾನ್‌ ಭಾವಿಸಿದರು. "ರೋಬೋ ಸೀಕ್ವೆಲ್‌ನಲ್ಲಿ ನಟಿಸಲು ರಜನಿಕಾಂತ್‌ ಅವರ ಆರೋಗ್ಯ ಉತ್ತಮವಾಗಿಲ್ಲ. ಅವರ ಹೆಲ್ತ್‌ ಸರಿ ಇಲ್ಲದೆ ಇರುವ ಕಾರಣ ಆ ಸಿನಿಮಾದಲ್ಲಿ ನಟಿಸುವಂತೆ ನನಗೆ ತಿಳಿಸಲಾಯಿತು. ನಾನು ಕಣ್ಣು ಮುಚ್ಚಿ ಯೋಚಿಸಿದೆ. ಚಿಟ್ಟಿ ಪಾತ್ರದಲ್ಲಿ ರಜನಿಕಾಂತ್‌ ಹೊರತು ಬೇರೆ ಯಾವುದೇ ವ್ಯಕ್ತಿಯೂ ಸೂಕ್ತವಾಗಿ ಕಾಣಲಿಲ್ಲ. ಈ ಪಾತ್ರಕ್ಕೆ ರಜನಿಕಾಂತ್‌ ಅವರೇ ಸೂಕ್ತ. ನಾನು ರಜನಿಕಾಂತ್‌ ಅಭಿಮಾನಿ. ಹೀಗಾಗಿ, ಆ ಪಾತ್ರವನ್ನು ಮಾಡಲು ನಿರಾಕರಿಸಿದೆ" ಎಂದು ರಜನಿಕಾಂತ್‌ರ ಕುರಿತು ಅಮಿರ್‌ ಖಾನ್‌ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ರಜನಿಕಾಂತ್‌ ನನ್ನ ಕುಟುಂಬದ ಸದಸ್ಯ ಎಂದು ಭಾವಿಸುವೆ: ಅಮಿತಾಬ್‌ ಬಚ್ಚನ್‌

ಗೋವಾದಲ್ಲಿ ನಡೆದ ಐಎಫ್‌ಎಫ್‌ಐ 2019ರಲ್ಲಿ ಅಮಿತಾಬ್‌ ಬಚ್ಚನ್‌ ಅವರು ರಜನಿಕಾಂತ್‌ ಕುರಿತು ತಮ್ಮ ಅಭಿಪ್ರಾಯವ್ಯಕ್ತಪಡಿಸಿದ್ದರು. 1991ರ ಹಮ್‌ ಚಿತ್ರದಲ್ಲಿ ರಜನಿಕಾಂತ್‌ ಮತ್ತು ಅಮಿತಾಬ್‌ ಬಚ್ಚನ್‌ ಜತೆಯಾಗಿ ನಟಿಸಿದ್ದರು. "ರಜನಿಕಾಂತ್‌ರನ್ನು ನನ್ನ ಕುಟುಂಬದ ಸದಸ್ಯ ಎಂದು ಭಾವಿಸುವೆ. ನಾವು ಸದಾ ಸಂಪರ್ಕದಲ್ಲಿ ಇದ್ದೇವೆ. ಆಗಾಗ ಮಾತನಾಡುತ್ತ ಇರುತ್ತೇವೆ. ಕೆಲವೊಮ್ಮೆ ಅವನು ನನ್ನ ಸಲಹೆ ಕೇಳುತ್ತಾನೆ. ನಾನೂ ಸಲಹೆ ಕೇಳುವೆ. ಇಬ್ಬರೂ ನಾವು ನೀಡಿರುವ ಸಲಹೆಗಳನ್ನು ಪಾಲಿಸುವುದಿಲ್ಲ" ಎಂದು ಅಮಿತಾಬ್‌ ಬಚ್ಚನ್‌ ಹಾಸ್ಯ ಮಾಡಿದ್ದಾರೆ. "ಕೆಲವೊಮ್ಮೆ ಅವನಿಗೆ ನೀನು ಇದನ್ನು ಮಾಡಬೇಡ ಎಂದು ಹೇಳುತ್ತೇನೆ. ಅವನು ಮುಂದೆ ಹೋಗಿ ಅದನ್ನೇ ಮಾಡುತ್ತಾನೆ. ರಜನಿ ನೀವು ಸ್ಪೂರ್ತಿದಾಯಕ ವ್ಯಕ್ತಿ. ನಿಮ್ಮ ವಿನಮ್ರತೆ ನಮಗೆ ಸ್ಪೂರ್ತಿದಾಯಕ" ಎಂದು ರಜನಿಕಾಂತ್‌ ಕುರಿತು ಅಮಿತಾಬ್‌ ಬಚ್ಚನ್‌ ಹೇಳಿದ್ದಾರೆ.

ನಾನು ಅವರಿಗೆ ಏನೂ ಬೇಕಾದರೂ ಹೇಳುತ್ತಿದ್ದೆ: ಹೃತಿಕ್‌ ರೋಷನ್‌

1986 ರಲ್ಲಿ ಬಿಡುಗಡೆಯಾದ ಭಗವಾನ್ ದಾದಾ ಚಿತ್ರದಲ್ಲಿ ರಜನಿಕಾಂತ್ ಜತೆಗೆ ಹೃತಿಕ್ ರೋಷನ್‌ ನಟಿಸಿದ್ದರು. ಈ ಕುರಿತು ಕೆಲವು ವರ್ಷಗಳ ಹಿಂದೆ ಹೃತಿಕ್‌ ರೋಷನ್‌ ಹೀಗೆ ಹೇಳಿದ್ದರು. "ಭಗವಾನ್‌ ದಾದಾ ಚಿತ್ರೀಕರಣದ ಸಮಯದಲ್ಲಿ ರಜನಿಕಾಂತ್‌ ಜತೆ ನಾನು ಫ್ರೆಂಡ್‌ ರೀತಿ ಇದ್ದೆ. ಅವರಿಗೆ ಏನೂ ಬೇಕಾದರೂ ಹೇಳುತ್ತಿದ್ದೆ. ನಾನು ಮಾಡಿದ, ಹೇಳಿದ ವಿಚಾರಗಳನ್ನು ಅವರು ಕ್ಷಮಿಸುತ್ತಿದ್ದರು. ಅವರು ಕರುಣಾಮಯಿ. ನಾನು ತಪ್ಪು ಮಾಡಿದಾಗ ನನ್ನ ಬದಲು ನಿರ್ದೇಶಕರಲ್ಲಿ ಅವರು ಕ್ಷಮೆ ಯಾಚಿಸುತ್ತಿದ್ದರು" ಎಂದು ಹೃತಿಕ್‌ ರೋಷಣ್‌ ಅವರು 2017ರಲ್ಲಿ ಹೇಳಿದ್ದರು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ