logo
ಕನ್ನಡ ಸುದ್ದಿ  /  ಮನರಂಜನೆ  /  Tejasswi Prakash On Kantara: ಕನ್ನಡಿಗರ ಮನಗೆದ್ದ ಹಿಂದಿ ನಟಿ; ‘ಕಾಂತಾರ’ ಚಿತ್ರದ ಗೀತೆಯನ್ನು ಕನ್ನಡದಲ್ಲಿಯೇ ಹಾಡಿದ ತೇಜಸ್ವಿ ಪ್ರಕಾಶ್‌

Tejasswi Prakash on Kantara: ಕನ್ನಡಿಗರ ಮನಗೆದ್ದ ಹಿಂದಿ ನಟಿ; ‘ಕಾಂತಾರ’ ಚಿತ್ರದ ಗೀತೆಯನ್ನು ಕನ್ನಡದಲ್ಲಿಯೇ ಹಾಡಿದ ತೇಜಸ್ವಿ ಪ್ರಕಾಶ್‌

HT Kannada Desk HT Kannada

Mar 02, 2023 07:54 AM IST

ಕನ್ನಡಿಗರ ಮನಗೆದ್ದ ಹಿಂದಿ ನಟಿ; ‘ಕಾಂತಾರ’ ಚಿತ್ರದ ಗೀತೆಯನ್ನು ಕನ್ನಡದಲ್ಲಿಯೇ ಹಾಡಿದ ತೇಜಸ್ವಿ ಪ್ರಕಾಶ್‌

    • ಹಿಂದಿ ಕಿರುತೆರೆಯಲ್ಲಿ ತಮ್ಮದೇ ಆದ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ನಟಿ ತೇಜಸ್ವಿ ಪ್ರಕಾಶ್‌, ‘ಕಾಂತಾರ’ ಚಿತ್ರದ ಹಾಡಿಗೆ ಧ್ವನಿಯಾಗಿದ್ದಾರೆ. ಸಾಹಿತ್ಯವನ್ನು ಎಲ್ಲಿಯೂ ತಪ್ಪದೇ ಅಚ್ಚ ಕನ್ನಡದಲ್ಲಿಯೇ ಹಾಡಿದ್ದಾರೆ.
ಕನ್ನಡಿಗರ ಮನಗೆದ್ದ ಹಿಂದಿ ನಟಿ; ‘ಕಾಂತಾರ’ ಚಿತ್ರದ ಗೀತೆಯನ್ನು ಕನ್ನಡದಲ್ಲಿಯೇ ಹಾಡಿದ ತೇಜಸ್ವಿ ಪ್ರಕಾಶ್‌
ಕನ್ನಡಿಗರ ಮನಗೆದ್ದ ಹಿಂದಿ ನಟಿ; ‘ಕಾಂತಾರ’ ಚಿತ್ರದ ಗೀತೆಯನ್ನು ಕನ್ನಡದಲ್ಲಿಯೇ ಹಾಡಿದ ತೇಜಸ್ವಿ ಪ್ರಕಾಶ್‌

Tejasswi Prakash on Kantara: ಕಳೆದ ವರ್ಷ ಬಿಡುಗಡೆಯಾಗಿದ್ದ ‘ಕಾಂತಾರ’ ಸಿನಿಮಾದ ಕ್ರೇಜ್‌ ಇನ್ನೂ ಮುಗಿದಂತಿಲ್ಲ. ಈಗಲೂ ಆ ಚಿತ್ರಕ್ಕೆ ಸಂಬಂಧಿಸಿದ ಒಂದಲ್ಲ ಒಂದು ಸುದ್ದಿ ಇಂಟರ್‌ನೆಟ್‌ ಅಂಗಳದಲ್ಲಿ ಓಡಾಡುತ್ತಲೇ ಇರುತ್ತದೆ. ದಕ್ಷಿಣದವರ ಜತೆಗೆ ಉತ್ತರ ಭಾರತದವರನ್ನೂ ಸೆಳೆದ ಈ ಸಿನಿಮಾ, ಆ ಭಾಗದಲ್ಲಿಯೂ ದೊಡ್ಡ ಮಟ್ಟದ ಕಮಾಯಿ ಮಾಡಿದ್ದು ಈ ಚಿತ್ರದ ಹಿರಿಮೆಗೆ ಸಾಕ್ಷಿ. ಅನೇಕ ಬಾಲಿವುಡ್‌ ಸೆಲೆಬ್ರಿಟಿಗಳು ಈ ಚಿತ್ರ ನೋಡಿ ಕೊಂಡಾಡಿದ್ದಾರೆ. ಇದೀಗ ಇದೇ ಚಿತ್ರದ ಹಾಡನ್ನು ಕನ್ನಡದಲ್ಲಿಯೇ ಹಾಡಿದ್ದಾರೆ ಹಿಂದಿ ನಟಿ.

ಟ್ರೆಂಡಿಂಗ್​ ಸುದ್ದಿ

ಕೊನೆಗೂ ಮದುವೆ ಮುನ್ಸೂಚನೆ ನೀಡಿ, ಫ್ಯಾನ್ಸ್‌ ತಲೆಗೆ ಹುಳ ಬಿಟ್ಟ ಡಾರ್ಲಿಂಗ್‌ ಪ್ರಭಾಸ್‌; ಅಷ್ಟಕ್ಕೂ ಹುಡುಗಿ ಯಾರಿರಬಹುದು?

ಮೋದಿ ಕೆಲಸ ಹೊಗಳುವಂತೆ ರಶ್ಮಿಕಾ ಮಂದಣ್ಣಗೆ ಸಿಕ್ಕಿದೆ 10 ಕೋಟಿ ರೂ!? ‘ಇನ್ನೊಬ್ಬಳು ಕಂಗನಾ ಬಂದಳು’ ಎನ್ನುತ್ತ ನಟಿಯನ್ನು ಝಾಡಿಸಿದ ನೆಟ್ಟಿಗರು

Seetha Rama Serial: ಅಶೋಕನ ಮೇಲೆ ಮಾರಣಾಂತಿಕ ಹಲ್ಲೆ, ಇದು ಭಾರ್ಗವಿ ಸಂಚೋ, ರುದ್ರಪ್ರತಾಪನ ಕೈವಾಡವೋ?

Brundavana Serial: ಮನೆಯವರ ಮುಂದೆ ತಗ್ಲಾಕ್ಕೊಂಡ ಆಕಾಶ್‌, ಸುನಾಮಿ ಬಾಯಿಂದ ಸತ್ಯ ಹೇಳಿಸ್ತಾರಾ ಮಾವ ಸತ್ಯಮೂರ್ತಿ?

ಹಿಂದಿ ಕಿರುತೆರೆಯಲ್ಲಿ ತಮ್ಮದೇ ಆದ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ನಟಿ ತೇಜಸ್ವಿ ಪ್ರಕಾಶ್‌, ಕೇವಲ ನಟಿ ಮಾತ್ರವಲ್ಲ ಸಿಂಗರ್‌ ಕೂಡ. ಅದಕ್ಕೆ ಸಾಕ್ಷಿ ಎಂಬಂತೆ ಇದೀಗ ‘ಕಾಂತಾರ’ ಚಿತ್ರದ ಹಾಡು ಮೂಡಿಬಂದಿದೆ. ಈ ಚಿತ್ರದ ಕನ್ನಡದ ಸಾಹಿತ್ಯವನ್ನೇ ಎಲ್ಲಿಯೂ ತಪ್ಪದೇ ಅಚ್ಚ ಕನ್ನಡದಲ್ಲಿಯೇ ಹಾಡಿದ್ದಾರೆ. ನಟಿಯ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ, ಕರುನಾಡಿನ ಜನರಿಂದಲೂ ಮೆಚ್ಚುಗೆ ಸಂದಾಯವಾಗಿದೆ. ಲೈಕ್ಸ್‌ ಕಮೆಂಟ್‌ ಮೂಲಕ ಪ್ರೋತ್ಸಾಹಿಸುತ್ತಿದ್ದಾರೆ.

ಕಾಂತಾರ ಚಿತ್ರದ ಹಿಟ್‌ ಹಾಡುಗಳಲ್ಲಿ ಒಂದಾದ, ‘ಕರ್ಮದ ಕಲ್ಲನು ಎಡವಿದ ಮನುಜನ.. ಬೆರಳಿನ ಗಾಯವು ಮಾಯದು.. ಹಗೆಯಲಿ ಕೋವಿಗೆ ತಲೆ ಕೊಡೊ ಮರುಳರ.. ಗುಡಿಯಲಿ ದೈವವು ಕಾಯದು.. ಕತ್ತಲನು ಮನಿಸೋಕೆ ಹಚ್ಚಿ ಇಟ್ಟ ದೀಪ.. ಊರನ್ನೇ ಸುಡುವಂಥ ಜ್ವಾಲೆ ಆಯಿತೇನೋ..’ ಹಾಡಿಗೆ ತೇಜಸ್ವಿ ಧ್ವನಿಯಾಗಿದ್ದಾರೆ. ಈ ಹಾಡಿಗೆ ಬರೋಬ್ಬರಿ 3ಲಕ್ಷಕ್ಕೂ ಅಧಿಕ ಲೈಕ್ಸ್‌ ಬಂದಿದ್ದು, 21 ಲಕ್ಷ ಜನ ವೀಕ್ಷಣೆ ಮಾಡಿದ್ದಾರೆ.

ಅಂದಹಾಗೆ, ತೇಜಸ್ವಿ ಪ್ರಕಾಶ್‌ ಹಿಂದಿ ಕಿರುತೆರೆಯಲ್ಲಿ ಮತ್ತು ಮರಾಠಿ ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಸಂಸ್ಕಾರ್‌ ಧರೋಹರ ಅಪ್ನೋನ್‌ ಕೀ 2 ಮತ್ತು ಸ್ವರಾಗಿನಿ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. ಕೇವಲ ಧಾರಾವಾಹಿಯಿಂದ ಮಾತ್ರವಲ್ಲದೇ ಹಿಂದಿಯ ರಿಯಾಲಿಟಿ ಶೋಗಳಾದ ಕತ್ರೋಂಕಿ ಕಿಲಾಡಿ, ಜೀ ಕಾಮಿಡಿ ಶೋನಲ್ಲಿ ಭಾಗವಹಿಸಿದ್ದಾರೆ.ಬಿಗ್‌ಬಾಸ್‌ ಸೀಸನ್‌ 15ರ ವಿಜೇತೆಯಾಗಿಯೂ ತೇಜಸ್ವಿ ಹೆಸರು ಮಾಡಿದ್ದಾರೆ. ಸದ್ಯ ನಾಗಿನಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ವೆಬ್‌ ಸಿರೀಸ್‌, ಮ್ಯೂಸಿಕ್‌ ಆಲ್ಬಂಗಳಲ್ಲಿಯೂ ನಟಿಸಿದ್ದಾರೆ.

ಈ ಸುದ್ದಿಯನ್ನೂ ಓದಿ

Sapthami Gowda Maldives Dairy: ಮಾಲ್ಡೀವ್ಸ್‌ ಬೀಚ್‌ನಲ್ಲಿ ಬಿಕಿನಿ ಬಿಟ್ಟು ಸೀರೆಯುಟ್ಟ ಸಪ್ತಮಿ; ‘ಛೇ ಅದು ಬೇಡ ಇದೇ ಇರಲಿ’ ಎಂದ ಫ್ಯಾನ್ಸ್

ಸ್ಯಾಂಡಲ್‌ವುಡ್‌ ನಟಿ ಸಪ್ತಮಿ ಗೌಡ ಸರಣಿ ಫೋಟೋಗಳ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ. ಕಾಂತಾರ ಸಿನಿಮಾ ಬಿಡುಗಡೆ ಬಳಿಕ ನಿತ್ಯ ಒಂದಲ್ಲ ಒಂದು ಫೋಟೋ ಗೊಂಚಲನ್ನು ಹಂಚಿಕೊಳ್ಳುವ ಲೀಲಾ, ಇದೀಗ ಮಾಲ್ಡೀವ್ಸ್‌ ಪ್ರವಾಸದಲ್ಲಿದ್ದಾರೆ. ಅಲ್ಲಿನ ಫೋಟೋಗಳು ಹೀಗಿವೆ.. ಫೋಟೋ ನೋಡಲು ಇಲ್ಲಿ ಕ್ಲಿಕ್‌ ಮಾಡಿ

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ