logo
ಕನ್ನಡ ಸುದ್ದಿ  /  ಮನರಂಜನೆ  /  ಅಳಿಯನಿಂದ ದೂರ ಇರುವಂತೆ ಹೆಬ್ಬುಲಿ ನಟಿ ಅಮಲಾ ಪೌಲ್‌ಗೆ ಎಚ್ಚರಿಕೆ ನೀಡಿದ್ರಾ ರಜನಿಕಾಂತ್‌?

ಅಳಿಯನಿಂದ ದೂರ ಇರುವಂತೆ ಹೆಬ್ಬುಲಿ ನಟಿ ಅಮಲಾ ಪೌಲ್‌ಗೆ ಎಚ್ಚರಿಕೆ ನೀಡಿದ್ರಾ ರಜನಿಕಾಂತ್‌?

HT Kannada Desk HT Kannada

Sep 23, 2023 03:53 PM IST

ಹಿರಿಯ ನಟ ರಜನಿಕಾಂತ್‌, 'ವೇಳಯಿಲ್ಲ ಪಟ್ಟದಾರಿ' ಚಿತ್ರದಲ್ಲಿ ಅಮಲಾ ಪೌಲ್‌, ರಜನಿಕಾಂತ್‌

  • 'ವೇಳಯಿಲ್ಲ ಪಟ್ಟದಾರಿ' ಸಿನಿಮಾ ಹಾಗೂ ಅದರ ಸೀಕ್ವೆಲ್‌ನಲ್ಲಿ ಧನುಷ್‌ ಹಾಗೂ ಅಮಲಾ ಪೌಲ್‌ ಜೊತೆಯಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ನಟಿಸುವಾಗಿ ಇಬ್ಬರ ನಡುವೆ ಸ್ನೇಹ ಉಂಟಾಗಿ, ನಂತರ ಇನ್ನಷ್ಟು ಹತ್ತಿರವಾಗಿದ್ದರು. ಈ ವಿಚಾರ ರಜನಿಕಾಂತ್‌ಗೆ ಕೂಡಾ ತಿಳಿದಿತ್ತು.

ಹಿರಿಯ ನಟ ರಜನಿಕಾಂತ್‌, 'ವೇಳಯಿಲ್ಲ ಪಟ್ಟದಾರಿ' ಚಿತ್ರದಲ್ಲಿ ಅಮಲಾ ಪೌಲ್‌, ರಜನಿಕಾಂತ್‌
ಹಿರಿಯ ನಟ ರಜನಿಕಾಂತ್‌, 'ವೇಳಯಿಲ್ಲ ಪಟ್ಟದಾರಿ' ಚಿತ್ರದಲ್ಲಿ ಅಮಲಾ ಪೌಲ್‌, ರಜನಿಕಾಂತ್‌

ಕಳೆದ ವರ್ಷ ಜನವರಿಯಲ್ಲಿ ರಜನಿಕಾಂತ್‌ ಪುತ್ರಿ ಐಶ್ವರ್ಯ ಹಾಗೂ ಅಳಿಯ ಧನುಷ್‌ ತಾವು ಕಾನೂನಿನ ಮೂಲಕ ಬೇರಾಗುತ್ತಿರುವುದಾಗಿ ಅನೌನ್ಸ್‌ ಮಾಡಿದ್ದರು. 18 ವರ್ಷಗಳ ದಾಂಪತ್ಯ ಜೀವನದ ಬಳಿಕ ಇಬ್ಬರೂ ಹೀಗೆ ಡಿವೋರ್ಸ್‌ ಪಡೆಯುತ್ತಿರುವುದಕ್ಕೆ ಅಭಿಮಾನಿಗಳು ಆಘಾತ ವ್ಯಕ್ತಪಡಿಸಿದ್ದರು.

ಟ್ರೆಂಡಿಂಗ್​ ಸುದ್ದಿ

ಹಿಂದಿ ಚಿತ್ರರಂಗ ಫೇಕ್‌, ನಾನು ಅಲ್ಲಿರಲಾರೆ; ಲೋಕಸಭಾ ಚುನಾವಣೆ ಬಳಿಕ ಬಾಲಿವುಡ್‌ಗೆ ಗುಡ್‌ಬೈ ಹೇಳ್ತಾರಂತೆ ಕಂಗನಾ ರಣಾವತ್‌

ಸಂಭವಾಮಿ ಯುಗೇಯುಗೇ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆ; ಥ್ರಿಲ್ಲರ್, ಆಕ್ಷನ್, ಲವ್, ಸೆಂಟಿಮೆಂಟ್ ಗ್ಯಾರಂಟಿ

ಕಲರ್ಸ್‌ ಕನ್ನಡದ ನಿನಗಾಗಿ ಧಾರಾವಾಹಿ ಪ್ರಸಾರ ದಿನಾಂಕ ಪ್ರಕಟ; ದಿವ್ಯ ಉರುಡುಗ ನಟನೆಯ ಈ ಸೀರಿಯಲ್‌ ಕುರಿತು ಇಲ್ಲಿದೆ ಸಂಪೂರ್ಣ ವಿವರ

Blink Movie: ಬ್ಲಿಂಕ್‌ ಸಿನಿಮಾದ ಕುರಿತು ಮುಗಿಯದ ವಿಮರ್ಶೆ; ತೆಲುಗು, ತಮಿಳು, ಮಲಯಾಳಂ, ಹಿಂದಿಗೂ ಡಬ್‌ ಆಗುತ್ತಂತೆ ಬ್ಲಿಂಕ್‌

ಮಗಳು-ಅಳಿಯನನ್ನು ಒಂದುಗೂಡಿಸಲು ರಜನಿಕಾಂತ್‌ ಪ್ರಯತ್ನ

ರಜನಿಕಾಂತ್‌ ಹಾಗೂ ಧನುಷ್‌ ಮನೆಯವರು ಇಬ್ಬರನ್ನೂ ಒಂದು ಮಾಡಲು ಮತ್ತೆ ಪ್ರಯತ್ನಿಸುತ್ತಿದ್ದು ಹಿರಿಯರಿಗಾಗಿ ಇಬ್ಬರೂ ಮತ್ತೆ ಒಂದಾಗುತ್ತಾರೆ ಎನ್ನಲಾದರೂ ಇದುವರೆಗೂ ಆ ಸಮಯ ಬಂದಿಲ್ಲ. ಆದರೆ ಇಬ್ಬರ ಡಿವೋರ್ಸ್‌ಗೆ ಕಾರಣ ಏನು ಎಂಬುದು ಇಂದಿಗೂ ಕಗ್ಗಂಟಾಗಿ ಉಳಿದಿದೆ. ಧನುಷ್‌ ಹಾಗೂ ಐಶ್ವರ್ಯ ನಡುವೆ ಬೇರೆ ನಟಿ ಬಂದಿದ್ದೇ ಇದಕ್ಕೆ ಕಾರಣ ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ತಮಿಳಿನ ಖ್ಯಾತ ಪತ್ರಕರ್ತ ಮತ್ತು ಸಿನಿಮಾ ವಿಮರ್ಶಕ ಚೆಯ್ಯಾರು ಬಾಲು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಆ ನಟಿ ಯಾರು ಎಂಬುದನ್ನು ರಿವೀಲ್‌ ಮಾಡಿದ್ದಾರೆ.

'ವೇಳಯಿಲ್ಲ ಪಟ್ಟದಾರಿ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ಅಮಲಾ ಧನುಷ್

ಕಿಚ್ಚ ಸುದೀಪ್‌ ಜೊತೆ 'ಹೆಬ್ಬುಲಿ' ಚಿತ್ರದಲ್ಲಿ ನಟಿಸಿದ್ದ ಅಮಲಾ ಪೌಲ್‌ ಕನ್ನಡಿಗರಿಗೆ ಪರಿಚಯ. ಅಮಲಾ ಮೂಲತ: ಕೇರಳಕ್ಕೆ ಸೇರಿದವರು. ಮಲಯಾಳಂ ಸಿನಿಮಾಗಳ ಜೊತೆಗೆ ಆಕೆ ತಮಿಳು ಚಿತ್ರರಂಗದಲ್ಲೂ ಸಕ್ರಿಯರಾಗಿದ್ದಾರೆ. 'ವೇಳಯಿಲ್ಲ ಪಟ್ಟದಾರಿ' ಸಿನಿಮಾ ಹಾಗೂ ಅದರ ಸೀಕ್ವೆಲ್‌ನಲ್ಲಿ ಧನುಷ್‌ ಹಾಗೂ ಅಮಲಾ ಪೌಲ್‌ ಜೊತೆಯಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ನಟಿಸುವಾಗಿ ಇಬ್ಬರ ನಡುವೆ ಸ್ನೇಹ ಉಂಟಾಗಿ, ನಂತರ ಇನ್ನಷ್ಟು ಹತ್ತಿರವಾಗಿದ್ದರು. ಈ ವಿಚಾರ ರಜನಿಕಾಂತ್‌ಗೆ ಕೂಡಾ ತಿಳಿದಿತ್ತು. ಮಗಳ ಜೀವನ ಹಾಳಾಗಬಾರದು ಎಂಬ ಕಾರಣಕ್ಕೆ ಒಮ್ಮೆ ರಜನಿಕಾಂತ್‌ ಅವರೇ ಅಮಲಾ ಮನೆಗೆ ಹೋಗಿ, ಆಕೆಗೆ ಅಳಿಯನಿಂದ ದೂರ ಇರುವಂತೆ ವಾರ್ನಿಂಗ್‌ ಮಾಡಿ ಬಂದಿದ್ದರು ಎಂದು ಸೆಯ್ಯಾರು ಬಾಲು ಹೇಳಿಕೆ ನೀಡಿದ್ದಾರೆ. ಬಾಲು ಅವರ ಈ ಮಾತುಗಳು ಈಗ ಕಾಲಿವುಡ್‌ನಲ್ಲಿ ಬಹಳ ಚರ್ಚೆಯಾಗುತ್ತಿದೆ.‌

ಇಬ್ಬರೂ ಹೆಣ್ಣುಮಕ್ಕಳ ವೈವಾಹಿಕ ಜೀವನದಲ್ಲಿ ಬಿರುಕು

ರಜನಿಕಾಂತ್‌ ಹಾಗೂ ಲತಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ಮೊದಲ ಮಗಳು ಐಶ್ವರ್ಯ ಎರಡನೇ ಮಗಳು ಸೌಂದರ್ಯ.‌ ಸೌಂದರ್ಯ 2010ರಲ್ಲಿ ಅಶ್ವಿನ್‌ ರಾಮ್‌ ಕುಮಾರ್‌ ಎಂಬುವರನ್ನು ಮದುವೆ ಆಗಿದ್ದರು. ಆದರೆ ಈ ಜೋಡಿ 7 ವರ್ಷಗಳ ನಂತರ ಡಿವೋರ್ಸ್‌ ಪಡೆದಿದ್ದರು. 2019ರಲ್ಲಿ ಸೌಂದರ್ಯ, ವಿಶಾಖನ್‌ ವಂಗಮುಡಿ ಎಂಬುವರನ್ನು ಎರಡನೇ ಮದುವೆ ಆಗಿದ್ದಾರೆ. ಇದೀಗ ಮೊದಲ ಮಗಳ ಜೀವನ ಕೂಡಾ ಬಿರುಗಾಳಿಯಲ್ಲಿ ಸಿಲುಕಿದೆ. ಈ ಕಾರಣಕ್ಕೋ ಏನೋ ಒಮ್ಮೆ ರಜನಿಕಾಂತ್‌ ಕಾರ್ಯಕ್ರಮವೊಂದರಲ್ಲಿ, ನನಗೆ ಜೀವನದಲ್ಲಿ ದೇವರು ಎಲ್ಲವನ್ನೂ ಕೊಟ್ಟ ಆದರೆ ನೆಮ್ಮದಿ ಮಾತ್ರ ನೀಡಲಿಲ್ಲ ಎಂದು ಹೇಳಿದ್ದರು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ