logo
ಕನ್ನಡ ಸುದ್ದಿ  /  ಮನರಂಜನೆ  /  Katrina Kaif: ಕತ್ರೀನಾ-ವಿಕ್ಕಿಗೆ ಜೀವಬೆದರಿಕೆ ಪ್ರಕರಣದಲ್ಲಿ ಬಿಗ್ ಟಿಸ್ಟ್​​​​​...ಆರೋಪಿ ಕೂಡಾ ಬಾಲಿವುಡ್ ನಟ ಅಂತೆ...!

Katrina Kaif: ಕತ್ರೀನಾ-ವಿಕ್ಕಿಗೆ ಜೀವಬೆದರಿಕೆ ಪ್ರಕರಣದಲ್ಲಿ ಬಿಗ್ ಟಿಸ್ಟ್​​​​​...ಆರೋಪಿ ಕೂಡಾ ಬಾಲಿವುಡ್ ನಟ ಅಂತೆ...!

HT Kannada Desk HT Kannada

Jul 26, 2022 07:55 PM IST

ಕತ್ರೀನಾ ಕೈಫ್ ಹಾಗೂ ವಿಕ್ಕಿ ಕೌಶಲ್

    • ಕತ್ರೀನಾ ಜೊತೆಗೆ ತಾವು ಇರುವಂತೆ ಅನೇಕ ಫೋಟೋಗಳನ್ನು ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದ ಆತ ಕತ್ರೀನಾ ಕೈಫ್ ಅವರನ್ನು ಮದುವೆಯಾಗುವ ಕನಸು ಕಂಡಿದ್ದನಂತೆ. ಆದರೆ ತನಗೆ ಆಕೆ ದಕ್ಕದ ಕಾರಣ ಇತ್ತೀಚೆಗೆ ಕತ್ರೀನಾಗೆ ಒಂದೇ ಸಮ ಮೆಸೇಜ್ ಮಾಡುತ್ತಿದ್ದ ಆತ ಜೀವ ಬೆದರಿಕೆ ಒಡ್ಡಿದ್ಧಾನೆ.
ಕತ್ರೀನಾ ಕೈಫ್ ಹಾಗೂ ವಿಕ್ಕಿ ಕೌಶಲ್
ಕತ್ರೀನಾ ಕೈಫ್ ಹಾಗೂ ವಿಕ್ಕಿ ಕೌಶಲ್

ಬಾಲಿವುಡ್​​ ನಟ ನಟಿಯರಿಗೆ ಎಷ್ಟೋ ಬಾರಿ ಜೀವ ಬೆದರಿಕೆ ಕರೆಗಳು ಬಂದಿವೆ. ಭೂಗತ ಪಾತಕಿಗಳಿಂದ ನಟ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಬಂದಿದ್ದ ಪ್ರಕರಣದ ಹಿಂದೆಯೇ ಸ್ಟಾರ್ ದಂಪತಿ ಕತ್ರೀನಾ ಕೈಫ್ ಹಾಗೂ ವಿಕ್ಕಿ ಕೌಶಲ್​​​ಗೆ ಕೂಡಾ ಅನಾಮಿಕ ವ್ಯಕ್ತಿಯೊಬ್ಬ ಬೆದರಿಕೆಯೊಡ್ಡಿದ್ದ. ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಇದೀಗ ಶಾಕಿಂಗ್ ವಿಚಾರವೊಂದು ಬೆಳಕಿಗೆ ಬಂದಿದೆ.

ಟ್ರೆಂಡಿಂಗ್​ ಸುದ್ದಿ

Bhagyalakshmi Serial: 10ನೇ ತರಗತಿ ಪಾಸ್‌ ಆದ ಖುಷಿಗೆ ಮೊದಲ ದಿನವೇ ಕೆಲಸಕ್ಕೆ ತಡವಾಗಿ ಹೊರಟ ಭಾಗ್ಯಾ, ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

Amruthadhaare: ರೌಡಿಗಳ ಕೈಯಿಂದ ಮಲ್ಲಿಯನ್ನು ಬಚಾವ್‌ ಮಾಡಿದ್ಲು ಮಹಿಮಾ; ಡುಮ್ಮ ಸರ್‌ ಟೈಟಾದ್ರು, ಐ ಅಂದ್ರು, ಲವ್‌ ಯು ಹೇಳ್ತಾರ

ಬರಲಿದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಯೋಪಿಕ್‌; ಮೋದಿ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಬಾಹುಬಲಿಯ ಕಟ್ಟಪ್ಪ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

ಸೋಷಿಯಲ್ ಮೀಡಿಯಾದಲ್ಲಿ ಕತ್ರೀನಾ ಕೈಫ್​​ಗೆ ಅನಾಮಿಕ ವ್ಯಕ್ತಿಯೊಬ್ಬ ಇತ್ತೀಚೆಗೆ ಜೀವ ಬೆದರಿಕೆ ಒಡ್ಡಿದ್ದರ ಹಿನ್ನೆಲೆ ಕತ್ರೀನಾ ಹಾಗೂ ವಿಕ್ಕಿ ಇಬ್ಬರೂ ಮುಂಬೈನ ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇರೆಗೆ ಸಾಂತಾಕ್ರೂಜ್ ಪೊಲೀಸರು 506 (2), 354 (ಡಿ) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಚುರುಕಿನ ತನಿಖೆ ನಡೆಸಿದ್ದ ಪೊಲೀಸರು ಜೀವ ಬೆದರಿಕೆ ಒಡ್ಡಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಆತ ಯಾರೆಂದು ರಿವೀಲ್ ಮಾಡಿರಲಿಲ್ಲ. ಇದೀಗ ಕ್ಯಾಟ್ ಹಾಗೂ ವಿಕ್ಕಿಗೆ ಜೀವ ಬೆದರಿಕೆ ಒಡ್ಡಿದ್ದ ವ್ಯಕ್ತಿ ಯಾರೆಂದು ಬಹಿರಂಗಗೊಂಡಿದೆ. ಅಂದಹಾಗೆ ಆತ ಕೂಡಾ ನಟ ಅಂತೆ.

ಕತ್ರೀನಾ ಕೈಫ್ ಹಾಗೂ ವಿಕ್ಕಿ ಕೌಶಲ್​​​​​​ಗೆ ಜೀವ ಬೆದರಿಕೆ ಒಡ್ದಿದ್ದು ಮನ್ವಿಂದರ್ ಸಿಂಗ್ ಎಂಬ ನಟ ಎಂದು ತಿಳಿದುಬಂದಿದೆ. ಈ ವಿಚಾರ ಕೇಳಿ ಬಾಲಿವುಡ್ ಮಂದಿ ಶಾಕ್ ಆಗಿದ್ದಾರೆ. ಮನ್ವಿಂದರ್ ಸಿಂಗ್ ಈಗ ತಾನೇ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಆತ ಕೂಡಾ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ಎಂದು ತಿಳಿದುಬಂದಿದೆ. ಆತ ಕತ್ರೀನಾ ದೊಡ್ಡ ಅಭಿಮಾನಿಯಂತೆ. ಕತ್ರೀನಾ ಜೊತೆಗೆ ತಾವು ಇರುವಂತೆ ಅನೇಕ ಫೋಟೋಗಳನ್ನು ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದ ಆತ ಕತ್ರೀನಾ ಕೈಫ್ ಅವರನ್ನು ಮದುವೆಯಾಗುವ ಕನಸು ಕಂಡಿದ್ದನಂತೆ. ಆದರೆ ತನಗೆ ಆಕೆ ದಕ್ಕದ ಕಾರಣ ಇತ್ತೀಚೆಗೆ ಕತ್ರೀನಾಗೆ ಒಂದೇ ಸಮ ಮೆಸೇಜ್ ಮಾಡುತ್ತಿದ್ದ ಆತ ಜೀವ ಬೆದರಿಕೆ ಒಡ್ಡಿದ್ಧಾನೆ. ಇದನ್ನು ಗಂಭೀರವಾಗಿ ಪರಿಗಣಿಸಿದ ದಂಪತಿ ಪೊಲೀಸರಿಗೆ ದೂರು ನೀಡಿದ್ದರು. ಸದ್ಯಕ್ಕೆ ಮನ್ವಿಂದರ್ ಸಿಂಗ್ ಪೊಲೀಸ್ ಕಸ್ಟಡಿಯಲ್ಲಿದ್ದಾನೆ ಎನ್ನಲಾಗಿದೆ.

ಕಳೆದ ವರ್ಷ ಡಿಸೆಂಬರ್ 9 ರಂದು ಮದುವೆಯಾಗಿದ್ದ ಜೋಡಿ

ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಕಳೆದ ವರ್ಷ ಡಿಸೆಂಬರ್ 9 ರಂದು ಮದುವೆಯಾಗಿದ್ದರು. ಬಹಳ ಗುಟ್ಟಾಗೇ ಈ ಮದುವೆ ನಡೆದಿತ್ತು. ಎಷ್ಟರ ಮಟ್ಟಿಗೆ ಎಂದರೆ ನಿಜಕ್ಕೂ ಕತ್ರೀನಾ ಹಾಗೂ ವಿಕ್ಕಿ ಮದುವೆಯಾಗುತ್ತಿದ್ದಾರಾ...? ಅಥವಾ ಇದೆಲ್ಲಾ ಗಾಸಿಪ್ ಇರಬಹುದಾ ಎನ್ನುವಷ್ಟರ ಮಟ್ಟಿಗೆ ಪ್ರೈವೆಸಿ ಕಾಪಾಡಲಾಗಿತ್ತು. ಜೊತೆಗೆ ಇವರು ತಮ್ಮ ಮದುವೆಗೆ ಬರುವರಿಗೆ ಕೆಲವೊಂದು ಕಂಡಿಷನ್​​​ಗಳನ್ನು ಕೂಡಾ ಹಾಕಿದ್ದರಂತೆ.

ಇತ್ತೀಚೆಗೆ ಮಾಲ್ಡೀವ್ಸ್​​​​ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಕತ್ರೀನಾ

ಜುಲೈ 16 ರಂದು ಕತ್ರಿನಾ ಕೈಫ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಮದುವೆಯಾದ ನಂತರ ಇದು ಮೊದಲ ಹುಟ್ಟುಹಬ್ಬವಾಗಿದ್ದರಿಂದ ಈ ಬಾರಿ ವಿಕ್ಕಿ ಜೊತೆ ಮಾಲ್ಡೀವ್ಸ್​​ಗೆ ಹಾರಿದ್ದರು. ಅಲ್ಲಿ ತೆಗೆದ ಸುಂದರ ಫೋಟೋಗಳನ್ನು ಕತ್ರೀನಾ ಹಾಗೂ ವಿಕ್ಕಿ ಕೌಶಲ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ