logo
ಕನ್ನಡ ಸುದ್ದಿ  /  ಮನರಂಜನೆ  /  ಕಾವೇರಿಗಾಗಿ ಜೀವ ಕೊಡಲೂ ಸಿದ್ಧನಿದ್ದೇನೆ; ರಾಘವೇಂದ್ರ ರಾಜ್‌ಕುಮಾರ್‌

ಕಾವೇರಿಗಾಗಿ ಜೀವ ಕೊಡಲೂ ಸಿದ್ಧನಿದ್ದೇನೆ; ರಾಘವೇಂದ್ರ ರಾಜ್‌ಕುಮಾರ್‌

HT Kannada Desk HT Kannada

Sep 23, 2023 09:11 PM IST

ಕಾವೇರಿ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ರಾಘವೇಂದ್ರ ರಾಜ್‌ಕುಮಾರ್‌

  • ಕನ್ನಡ ನೆಲ, ಜಲ, ಭಾಷೆ ವಿಚಾರವಾಗಿ ನಾವು ಯಾವಾಗಲೂ ಹೋರಾಟಕ್ಕೆ ಮುಂದೆ ಇರುತ್ತೇವೆ. ನನ್ನ ಜೀವದಿಂದ ಕಾವೇರಿ ವಿವಾದಕ್ಕೆ ಏನಾದರೂ ಪರಿಹಾರ ಸಿಗುವಂತಿದ್ದರೆ ಜೀವ ಬಿಡಲು ಕೂಡಾ ನಾನು ಸಿದ್ಧನಿದ್ದೇನೆ.

ಕಾವೇರಿ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ರಾಘವೇಂದ್ರ ರಾಜ್‌ಕುಮಾರ್‌
ಕಾವೇರಿ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ರಾಘವೇಂದ್ರ ರಾಜ್‌ಕುಮಾರ್‌ (PC: Twitter, Raghavendra Rajkumar)

ರಾಜ್ಯದಲ್ಲಿ ಬರದ ಛಾಯೆ ನಡುವೆಯೂ ಕಾವೇರಿ ನಿರ್ವಹಣಾ ಪ್ರಾಧಿಕಾರ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶಿಸಿದೆ. ಸುಪ್ರೀಂ ಕೋರ್ಟ್‌ ಕೂಡಾ CWMA ಆದೇಶ ಪಾಲಿಸಲು ಸೂಚಿಸಿ ತಮಿಳು ನಾಡಿಗೆ 15 ದಿನಗಳ ಕಾಲ ಪ್ರತಿದಿನ 5 ಸಾವಿರ ಕ್ಯೂಸೆಕ್ಸ್‌ ನೀರು ಹರಿಸುವಂತೆ ಸೂಚಿಸಿದೆ. ಇದು ಕನ್ನಡಿಗರ ಬೇಸರಕ್ಕೆ ಕಾರಣವಾಗಿದೆ.

ಟ್ರೆಂಡಿಂಗ್​ ಸುದ್ದಿ

ಗಂಡು ಮಗುವಿಗೆ ಜನ್ಮ ನೀಡಿದ ಯಾಮಿ ಗೌತಮ್‌; ಆರ್ಟಿಕಲ್‌ 370 ನಟಿಯ ಮಗುವಿನ ಹೆಸರು ವೇದವಿದ್‌, ಮಗುವಿನ ಹೆಸರಿನ ಅರ್ಥ ತಿಳಿಯಿರಿ

OTT Movies: ಗುರುವಾಯೂರ್ ಅಂಬಲನಡಯಿಲ್‌ ಒಟಿಟಿಯಲ್ಲಿ ಬಿಡುಗಡೆ ಯಾವಾಗ? ಇದು ಪೃಥ್ವಿರಾಜ್‌ ಸುಕುಮಾರನ್‌ ಸಿನಿಮಾ

ರೇವ್‌ ಪಾರ್ಟಿ ಮೇಲೆ ಬೆಂಗಳೂರು ಸಿಸಿಬಿ ಪೊಲೀಸರ ದಾಳಿ; ತೆಲುಗು ನಟಿಯರು, ಮಾಡೆಲ್‌ಗಳು, ಆರ್‌ಜೆಗಳು, ರಾಜಕಾರಣಿಗಳು ಭಾಗಿ? ಇಲ್ಲಿದೆ ವಿವರ

ಕಾಂತಾರದ ಕಂಬಳ ಕೋಣ ಬಳಸೋಣ ಅಲ? ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹೊಸ ಅಧ್ಯಾಯದ ಕುರಿತು ರಿಷಬ್‌ ಶೆಟ್ಟಿ ಪ್ರತಿಕ್ರಿಯೆ

ಕಾವೇರಿ ವಿಚಾರವಾಗಿ ದನಿ ಎತ್ತಿದ ಸೆಲೆಬ್ರಿಟಿಗಳು

ಕಾವೇರಿ ನೀರಿನ ವಿಚಾರವಾಗಿ ಪದೇ ಪದೆ ತಮಿಳುನಾಡು ಕ್ಯಾತೆ ತೆಗೆಯುವುದು ಕನ್ನಡಿಗರನ್ನು ಕೆರಳಿಸಿದೆ. ಜನ ಸಾಮಾನ್ಯರ ಜೊತೆ ಸಿನಿಮಾ ಸೆಲೆಬ್ರಿಟಿಗಳು ಕೂಡಾ ಕಾವೇರಿ ವಿಚಾರವಾಗಿ ದನಿ ಎತ್ತಿದ್ದಾರೆ. ಈಗಾಗಲೇ ದರ್ಶನ್‌, ಸುದೀಪ್‌, ಶಿವರಾಜ್‌ ಕುಮಾರ್‌, ಜಗ್ಗೇಶ್‌, ಪೂಜಾ ಗಾಂಧಿ, ರಿಷಬ್‌ ಶೆಟ್ಟಿ, ನಿಖಿಲ್‌ ಕುಮಾರಸ್ವಾಮಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕಾವೇರಿ ನದಿ ನೀರಿನ ವಿವಾದದ ಬಗ್ಗೆ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಮಾತನಾಡಿದ್ದಾರೆ. ನಿಖಿಲ್‌ ಕುಮಾರಸ್ವಾಮಿ ಇಂದು ಕೃಷ್ಣರಾಜ ಸಾಗರ ಅಣೆಕಟ್ಟಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೆಲವು ಸೆಲೆಬ್ರಿಟಿಗಳು ವಿಡಿಯೋ ಮಾಡಿ ಮಾತನಾಡಿದ್ದಾರೆ. ಇದೀಗ ರಾಘವೇಂದ್ರ ರಾಜ್‌ಕುಮಾರ್‌ ಕೂಡಾ ಮಾತನಾಡಿ ಕಾವೇರಿಗಾಗಿ ನಾನು ಜೀವ ಕೊಡಲೂ ಸಿದ್ದನಿದ್ದೇನೆ ಎಂದಿದ್ದಾರೆ.

ಕಾವೇರಿಗಾಗಿ ಜೀವ ಕೊಡುತ್ತೇನೆ ಎಂದ ರಾಘವೇಂದ್ರ ರಾಜ್‌ಕುಮಾರ್‌

ಇಂದು ನಡೆದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆಯಲ್ಲಿ ಮತದಾನ ಮಾಡಿದ ನಂತರ ಮಾತನಾಡಿದ ರಾಘವೇಂದ್ರ ರಾಜ್‌ಕುಮಾರ್‌, ''ಕನ್ನಡ ನೆಲ, ಜಲ, ಭಾಷೆ ವಿಚಾರವಾಗಿ ನಾವು ಯಾವಾಗಲೂ ಹೋರಾಟಕ್ಕೆ ಮುಂದೆ ಇರುತ್ತೇವೆ. ನನ್ನ ಜೀವದಿಂದ ಕಾವೇರಿ ವಿವಾದಕ್ಕೆ ಏನಾದರೂ ಪರಿಹಾರ ಸಿಗುವಂತಿದ್ದರೆ ಜೀವ ಬಿಡಲು ಕೂಡಾ ನಾನು ಸಿದ್ಧನಿದ್ದೇನೆ. ರಾಜ್ಯಕ್ಕೆ ಒಳ್ಳೆಯದಾಗುವ ವಿಚಾರಕ್ಕೆ ನಾನು ಹಾಗೂ ನನ್ನ ಕುಟುಂಬ ಸದಾ ಮುಂದಿರುತ್ತೇವೆ'' ಎಂದು ಹೇಳಿದ್ದಾರೆ.

ಆಡಿಸಿದಾತ ಚಿತ್ರದಲ್ಲಿ ರಾಘಣ್ಣ ಬ್ಯುಸಿ

ರಾಘವೇಂದ್ರ ರಾಜ್‌ಕುಮಾರ್‌ ಸಿನಿಮಾಗಳ ಬಗ್ಗೆ ಹೇಳುವುದಾದರೆ ಕಳೆದ ಶುಕ್ರವಾರ ರಾಘಣ್ಣ ಹಾಘೂ ಶ್ರುತಿ ನಟಿಸಿದ್ದ '13' ಸಿನಿಮಾ ರಿಲೀಸ್‌ ಆಗಿತ್ತು. 25 ವರ್ಷಗಳ ನಂತರ ರಾಘವೇಂದ್ರ ರಾಜ್‌ಕುಮಾರ್‌ ಹಾಗೂ ಶ್ರುತಿ ಜೊತೆಯಾಗಿ ನಟಿಸಿದ್ದಾರೆ. 1996ರಲ್ಲಿ ಈ ಜೋಡಿ 'ಗೆಲುವಿನ ಸರದಾರ' ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. '13' ಚಿತ್ರವನ್ನು ಮಂಜುನಾಥ್‌ ನಿರ್ಮಿಸಿದ್ದು ಕೆ ನರೇಂದ್ರ ಬಾಬು ಆಕ್ಷನ್‌ ಕಟ್‌ ಹೇಳಿದ್ದಾರೆ. ಇದನ್ನು ಹೊರತುಪಡಿಸಿ ರಾಘವೇಂದ್ರ ರಾಜ್‌ಕುಮಾರ್‌ 'ಆಡಿಸಿದಾತ' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಇದು ರಾಘವೇಂದ್ರ ರಾಜ್‌ಕುಮಾರ್‌ ಅವರ 25ನೇ ಸಿನಿಮಾ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ