logo
ಕನ್ನಡ ಸುದ್ದಿ  /  ಮನರಂಜನೆ  /  ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್‌ ನಾಮನಿರ್ದೇಶನ; ಇಲ್ಲೂ ದರ್ಶನ್‌ ‘ಕಾಟೇರ’ನೇ ಮುಂದು, ಹೀಗಿದೆ ಸಂಪೂರ್ಣ ನಾಮಿನೇಷನ್‌ ಲಿಸ್ಟ್‌

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್‌ ನಾಮನಿರ್ದೇಶನ; ಇಲ್ಲೂ ದರ್ಶನ್‌ ‘ಕಾಟೇರ’ನೇ ಮುಂದು, ಹೀಗಿದೆ ಸಂಪೂರ್ಣ ನಾಮಿನೇಷನ್‌ ಲಿಸ್ಟ್‌

Jan 18, 2024 06:06 AM IST

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್‌ ನಾಮನಿರ್ದೇಶನ; ಇಲ್ಲೂ ದರ್ಶನ್‌ ಕಾಟೇರನೇ ಮುಂದು, ಹೀಗಿದೆ ಸಂಪೂರ್ಣ ನಾಮಿನೇಷನ್‌ ಲಿಸ್ಟ್‌

    • ಕಾಟೇರ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಷ್ಟೇ ಅಲ್ಲ ಅವಾರ್ಡ್‌ ನಾಮಿನೇಷನ್‌ನಲ್ಲೂ ಹೊಸ ದಾಖಲೆ ಬರೆದಿದ್ದಾರೆ. ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ 5ನೇ ವರ್ಷದ ಪ್ರಶಸ್ತಿಗಳ ನಾಮ ನಿರ್ದೇಶನ ಘೋಷಣೆ ಆಗಿದ್ದು, ಒಟ್ಟು 15 ವಿಭಾಗಗಳಲ್ಲಿ ಕಾಟೇರ ಸಿನಿಮಾ ನಾಮನಿರ್ದೇಶನಗೊಂಡಿದೆ. 
ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್‌ ನಾಮನಿರ್ದೇಶನ; ಇಲ್ಲೂ ದರ್ಶನ್‌ ಕಾಟೇರನೇ ಮುಂದು, ಹೀಗಿದೆ ಸಂಪೂರ್ಣ ನಾಮಿನೇಷನ್‌ ಲಿಸ್ಟ್‌
ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್‌ ನಾಮನಿರ್ದೇಶನ; ಇಲ್ಲೂ ದರ್ಶನ್‌ ಕಾಟೇರನೇ ಮುಂದು, ಹೀಗಿದೆ ಸಂಪೂರ್ಣ ನಾಮಿನೇಷನ್‌ ಲಿಸ್ಟ್‌

Chandanavana Film Critics Awards 2023: ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ 5ನೇ ವರ್ಷದ ಪ್ರಶಸ್ತಿಗಳ ನಾಮ ನಿರ್ದೇಶನ ಘೋಷಣೆ ಮತ್ತು ಟ್ರೋಫಿ ಅನಾವರಣ ಕಾರ್ಯಕ್ರಮ ಜನವರಿ 16ರಂದು ಬೆಂಗಳೂರಿನಲ್ಲಿ ನಡೆಯಿತು. ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತು ನಟಿ ಅಮೂಲ್ಯ ಟ್ರೋಫಿಯನ್ನು ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ 5ನೇ ವರ್ಷದ ಪ್ರಶಸ್ತಿಗಳಿಗಾಗಿ ನಾಮ ನಿರ್ದೇಶನ ಆಯ್ಕೆಗಳನ್ನು ಘೋಷಣೆ ಮಾಡಲಾಯಿತು.

ಟ್ರೆಂಡಿಂಗ್​ ಸುದ್ದಿ

ಪ್ರಮೋದ್ ನಾರಾಯಣ್ ನಿರ್ಮಾಣದ ನೂತನ ಚಿತ್ರದ ನಾಯಕರಾಗಿ ‌ರಿಷಿ; ಸದ್ಯದಲ್ಲಿಯೇ ಶೀರ್ಷಿಕೆ ಬಿಡುಗಡೆ

ಮಂಗ್ಲಿ ಕಂಠಕ್ಕೆ ಹುಚ್ಚೆದ್ದು ಕುಣಿದ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ, ಕಿಟ್ಟಿ, ರಚ್ಚು; ಇದು ಸಂಜು ವೆಡ್ಸ್ ಗೀತಾ-2 ಅಪ್‌ಡೇಟ್‌

ಈ ಆಗಸ್ಟ್‌ನಲ್ಲಿ ಸೆಟ್ಟೇರಲಿದೆ ಪ್ರಶಾಂತ್‌ ನೀಲ್‌ ನಿರ್ದೇಶನದ ಜೂನಿಯರ್‌ ಎನ್‌ಟಿಆರ್‌ ಸಿನಿಮಾ; ಇದು ಹೇಗೆ ಸಾಧ್ಯ? ಅಭಿಮಾನಿಗಳಿಗೆ ಅಚ್ಚರಿ

ಬೆಂಗಳೂರಿನಲ್ಲಿ ಭರ್ಜರಿ ರೇವ್‌ ಪಾರ್ಟಿ; ತೆಲುಗಿನ ಖ್ಯಾತ ನಟ ನಟಿಯರು ಭಾಗಿ, ನಾನು ಫಾರ್ಮ್‌ ಹೌಸ್‌ನಲ್ಲಿದ್ದೇನೆ ಅಂದ್ರು ನಟಿ ಹೇಮಾ

ದರ್ಶನ್ ನಟನೆಯ ಕಾಟೇರ ಚಿತ್ರವು ಅತೀ ಹೆಚ್ಚು ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದ್ದು, ರಕ್ಷಿತ್ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಎರಡನೇ ಸ್ಥಾನವನ್ನು ಅಲಂಕರಿಸಿದೆ. ಅತ್ಯುತ್ತಮ ನಟ (ದರ್ಶನ್) ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ (ತರುಣ್ ಸುಧೀರ್) ಸೇರಿದಂತೆ ಕಾಟೇರ ಸಿನಿಮಾ ಬರೋಬ್ಬರಿ 15 ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದ್ದು, ಅತ್ಯುತ್ತಮ ನಟ (ರಕ್ಷಿತ್ ಶೆಟ್ಟಿ) ಸೇರಿದಂತೆ ಸಪ್ತಸಾಗರದಾಚೆ ಎಲ್ಲೋ 13 ವಿಭಾಗಗಳಲ್ಲಿ ಕಾಣಿಸಿಕೊಂಡಿದೆ.

ಐದು ಚೊಚ್ಚಲ ಪ್ರಶಸ್ತಿಗಳು ಸೇರಿದಂತೆ ಒಟ್ಟು 25 ವಿಭಾಗಗಳಲ್ಲಿ ಈ ನಾಮ ನಿರ್ದೇಶನಗೊಂಡಿದ್ದು, ಚೊಚ್ಚಲ ವಿಭಾಗದಲ್ಲಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ, ಡೇರ್ ಡೆವಿಲ್ ಮುಸ್ತಫಾ, ಆಚಾರ್ ಅಂಡ್ ಕೋ ಚಿತ್ರಗಳು ಕೂಡ ನಾನಾ ವಿಭಾಗಗಳಲ್ಲಿ ಕಾಣಿಸಿಕೊಂಡು ಪೈಪೋಟಿ ನಡೆಸಿವೆ.

ಟ್ರೋಫಿ ಅನಾವರಣಗೊಳಿಸಿ ಮಾತನಾಡಿದ ಇಂದ್ರಜಿತ್ ಲಂಕೇಶ್, ನಾನೂ ಒಬ್ಬ ಪತ್ರಕರ್ತನಾಗಿ ಅಕಾಡಮಿ ಮತ್ತು ವಿಮರ್ಶಕರ ಪ್ರಶಸ್ತಿಗಳು ನಿಷ್ಪಕ್ಷಪಾತವಾಗಿ ಮತ್ತು ವಿಶ್ವಾಸ ಮೂಡಿಸುವಂತಹ ಆಯ್ಕೆಗಳು ಆಗಿವೆ. ಈ ಕುರಿತು ನನಗೆ ಹೆಮ್ಮೆ ಅನಿಸುತ್ತದೆ. ಕನ್ನಡದ ಅತ್ಯುತ್ತಮ ಮನರಂಜನೆಯನ್ನು ಗುರುತಿಸುವಲ್ಲಿ ಮತ್ತು ಚಿತ್ರೋದ್ಯಮವನ್ನು ಉತ್ತೇಜಿಸಲು ಚಲನಚಿತ್ರ ಪತ್ರಕರ್ತರು ಪ್ರಶಸ್ತಿಯನ್ನು ನೀಡುವ ಮೂಲಕ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ’ ಎಂದು ಶ್ಲ್ಯಾಘಿಸಿದರು.

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡಮಿ ಪ್ರಶಸ್ತಿ ಅಂದರೆ, ಅದೊಂದು ದೊಡ್ಡ ಗೌರವ. ಟೀಕಿಸುವ ಪತ್ರಕರ್ತರೇ ಮೆಚ್ಚಿ ಪ್ರಶಸ್ತಿ ಕೊಡುವಾಗ ಆಗುವ ಖುಷಿಯೇ ಬೇರೆ. ನಾಮ ನಿರ್ದೇಶನಗೊಂಡ ಎಲ್ಲರಿಗೂ ಮತ್ತು ಪ್ರಶಸ್ತಿ ಪಡೆಯುವ ಪ್ರತಿಯೊಬ್ಬರಿಗೂ ಶುಭಾಶಯಗಳು ಎಂದರು ನಟಿ ಅಮೂಲ್ಯ.

ಅಕಾಡೆಮಿಯು ಪ್ರಶಸ್ತಿಗಳನ್ನು ನೀಡುವುದರ ಜೊತೆ ಪ್ರಶಸ್ತಿ ಪ್ರತಿ ವರ್ಷವೂ ಸಮಾಜಮುಖಿ ಕೆಲಸಗಳನ್ನು ಉತ್ತೇಜಿಸುವಂತಹ ಕೆಲಸಕ್ಕೆ ಮುಂದಾಗಿದ್ದು ಗೊತ್ತೇ ಇದೆ. ಈ ಬಾರಿ ಕರ್ನಾಟಕ ಸರಕಾರದ ಆರೋಗ್ಯ ಇಲಾಖೆಯ ಜೊತೆ ಅಂಗಾಂಗ ದಾನ ಅಭಿಯಾನಕ್ಕೆ ಕೈ ಜೋಡಿಸಿದೆ. ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ನಮ್ಮ ಈ ಅಭಿಯಾನಕ್ಕೆ ಬೆಂಬಲ ಸೂಚಿಸಿ, ಮಾತನಾಡಿದ್ದಾರೆ.

ಅಂಗಾಂಗ ದಾನ ಅಭಿಯಾನಕ್ಕೆ ಅಕಾಡಮಿ ಜೊತೆ ಬೆಂಗಳೂರಿನ ಕಾವೇರಿ ಆಸ್ಪತ್ರೆ ಕೂಡ ಜೊತೆಯಾಗಿದ್ದು, ಈ ಕುರಿತಂತೆ ಮಾತನಾಡಿದ ಆಸ್ಪತ್ರೆಯ ಉಪಾಧ್ಯಕ್ಷ ವೆಲ್ ಫ್ರೆಡ್ ಸ್ಯಾಮ್ಸನ್, ‘ಅಂಗಾಂಗ ದಾನ ಪ್ರಚಾರಕ್ಕೆ ಚಿತ್ರೋದ್ಯಮದ ಕೊಡುಗೆ ಅಪಾರ. ಡಾ.ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಅವರು ಕಣ್ಣುದಾನ ಮಾಡುವ ಮೂಲಕ ಸಾಕಷ್ಟು ಜನರಿಗೆ ಪ್ರೇರಣೆ ನೀಡಿದ್ದಾರೆ. ಸಂಚಾರಿ ವಿಜಯ್ ಅವರು ಅಂಗಾಂಗ ದಾನ ಮಾಡಿದ್ದರೆ, ಲೋಕೇಶ್ ಹಾಗೂ ಲೋಹಿತಾಶ್ವ ಅವರು ದೇಹದಾನ ಮಾಡಿದ್ದಾರೆ. ಇಂತಹ ಉದ್ಯಮಕ್ಕೆ ಬೆಂಬಲವಾಗಿ ನಿಂತಿರುವ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡಮಿಯ ಕಾರ್ಯಕ್ರಮಕ್ಕೆ ನಾವು ಭಾಗವಾಗಿದ್ದು ಹೆಮ್ಮೆ ಅನಿಸುತ್ತದೆ ಎಂದರು.

ನಟ ಶರಣ್ ನಾಮ ನಿರ್ದೇಶನದ ಪಟ್ಟಿಯನ್ನು ಬಿಡುಗಡೆ ಮಾಡಿ, ವಿಮರ್ಶಕರು ನೀಡುವ ಪ್ರಶಸ್ತಿ ಅತ್ಯಂತ ಜವಾಬ್ದಾರಿಯಿಂದ ಕೂಡಿರುತ್ತದೆ. ಇಂತಹ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದು ಹೆಮ್ಮೆ ತಂದಿದೆ ಎಂದರು. ಪ್ರತಿ ವರ್ಷದಂತೆ ಈ ಬಾರಿಯೂ ಅಚ್ಚರಿ ಹೆಸರುಗಳು ನಾಮ ನಿರ್ದೇಶನ ಪಟ್ಟಿಯಲ್ಲಿದ್ದು, ಜನವರಿ 28 ರವಿವಾರದಂದು ಸಂಜೆ ನಡೆಯುವ ಅದ್ಧೂರಿ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.

ಅತ್ಯುತ್ತಮ ಚೊಚ್ಚಲ ನಿರ್ಮಾಣ - ಪುನೀತ್ ರಾಜಕುಮಾರ್ ಪ್ರಶಸ್ತಿ

೧. ಸ್ವಾತಿ ಮುತ್ತಿನ ಮಳೆ ಹನಿಯೇ (ರಮ್ಯ - ಆಪಲ್ ಬಾಕ್ಸ್ ಸ್ಟುಡಿಯೋಸ್)

೨. ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ (ವರುಣ್ ಸ್ಟುಡಿಯೋಸ್)

೩. ಡೇರ್‌ಡೆವಿಲ್ ಮುಸ್ತಫಾ (ಸಿನೆಮಾ ಮರ)

೪. ಸೌತ್ ಇಂಡಿಯನ್ ಹೀರೋ (ಶಿಲ್ಪಾ ಎಲ್.ಎಸ್)

೫. ಮಂಡಲ (ಅಜಯ್ ಸರ್ಪೆಷ್ಕರ್)

ಅತ್ಯುತ್ತಮ ಚೊಚ್ಚಲ ನಟಿ ~ ತ್ರಿಪುರಾಂಬ ಅವಾರ್ಡ್

೧. ಆರಾಧನಾ ರಾಮ್ (ಕಾಟೇರ)

೨. ನಿರೀಕ್ಷಾ ರಾವ್ (ರಾಜಯೋಗ)

೩. ಅಮೃತಾ ಪ್ರೇಮ್ (ಟಗರು ಪಲ್ಯ)

೪. ಚೈತ್ರ ಹೆಚ್.ಜಿ (ಮಾವು ಬೇವು)

೫. ಪ್ರೀತಿಕ ದೇಶಪಾಂಡೆ (ಪೆಂಟಗನ್)

ಅತ್ಯುತ್ತಮ ಚೊಚ್ಚಲ ನಟ ~ ಸಂಚಾರಿ ವಿಜಯ್ ಪ್ರಶಸ್ತಿ

೧. ಶಿಶಿರ ಬೈಕಾಡಿ (ಡೇರ್‌ಡೆವಿಲ್ ಮುಸ್ತಫಾ)

೨. ರಾಜೇಶ್ ಧ್ರುವ ( ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ)

೩. ಶಿವಣ್ಣ ಬೀರುಹುಂಡಿ (ದೊಡ್ಡಹಟ್ಟಿ ಬೋರೇಗೌಡ)

೪. ಕಿರಣ್ ನಾರಾಯಣ್ (ಸ್ನೇಹಶ್ರೀ)

೫. ಸಾರ್ಥಕ್ (ಸೌತ್ ಇಂಡಿಯನ್ ಹೀರೋ)

ಅತ್ಯುತ್ತಮ ಚೊಚ್ಚಲ ಬರಹಗಾರ ~ ಚಿ ಉದಯಶಂಕರ್ ಪ್ರಶಸ್ತಿ

೧. ರಾಮೇನಹಳ್ಳೀ ಜಗನ್ನಾಥ್ (ಹೊಂದಿಸಿ ಬರೆಯಿರಿ)

೨. ನಿತಿನ್ ಕೃಷ್ಣಮೂರ್ತಿ (ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ)

೩. ಸಿಂಧು ಶ್ರೀನಿವಾಸಮೂರ್ತಿ (ಆಚಾರ್ ಅಂಡ್ ಕೋ)

೪. ಉಮೇಶ್ ಕೃಪಾ (ಟಗರು ಪಲ್ಯ)

೫. ಅಜಯ್ ಸರ್ಪೆಶ್ಕರ್ (ಮಂಡಲ)

ಚೊಚ್ಚಲ ನಿರ್ದೇಶನ - ಶಂಕರ್‌ ನಾಗ ಪ್ರಶಸ್ತಿ

೧. ಸಿಂಧು ಶ್ರೀನಿವಾಸಮೂರ್ತಿ (ಆಚಾರ್ ಅಂಡ್ ಕೋ)

೨. ನಿತಿನ್ ಕೃಷ್ಣಮೂರ್ತಿ (ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ)

೩. ಶಶಾಂಕ್ ಸೋಗಲ್ (ಡೇರ್ ಡೆವಿಲ್ ಮುಸ್ತಾಫಾ)

೪. ದೇವೇಂದ್ರ ಬಡಿಗೇರ್ (ರುದ್ರಿ)

೫. ಉಮೇಶ್ ಕೃಪಾ (ಟಗರು ಪಲ್ಯ)

ಅತ್ಯುತ್ತಮ VFX

1. ಸಪ್ತಸಾಗರದಾಚೆ ಎಲ್ಲೋ (ಎಮತ್ತುಬಿ) ಪಿಂಕ್ ಸ್ಟುಡಿಯೋಸ್ – ರಾಹುಲ್ ವಿ. ಗೋಪಾಲಕೃಷ್ಣ

2. ಕಬ್ಜ – ಯೂನಿಫೈ ಮೀಡಿಯಾ

3. ಗುರುದೇವ್ ಹೊಯ್ಸಳ – ಡಿಜಿಟಲ್ ಟರ್ಬೋ ಮೀಡಿಯಾ, ಖುಷ್

4. ಕಾಟೇರ – ಗಗನ್ ಅಜೈ

5. ಘೋಸ್ಟ್ – ಆಸೋ ಸ್ಟುಡಿಯೋಸ್ (ಟೆಹರನ್), ಮೊಹಮ್ಮದ್ ಅಬ್ಡಿ

ಅತ್ಯುತ್ತಮ ಕಲಾ ನಿರ್ದೇಶನ

1. ಕಬ್ಜ, ಶಿವಕುಮಾರ್ ಜೆ

2. ಸಪ್ತ ಸಾಗರದಾಚೆ ಎಲ್ಲೋ (ಎ ಮತ್ತು ಬಿ) ಉಲ್ಲಾಸ್ ಹೈದರ್)

3. ಕಾಟೇರ – ಗುಣ

4. ಘೋಸ್ಟ್ – ಮೋಹನ್ ಬಿ ಕೆರೆ

5. ಕೈವ – ಧರಣಿ ಗಂಗೆಪುತ್ರ

ಅತ್ಯುತ್ತಮ ಸಾಹಸ ನಿರ್ದೇಶನ

1. ಸಪ್ತ ಸಾಗರದಾಚೆ ಎಲ್ಲೋ (ಬಿಸೈಡ್) ಚೇತನ್ ಡಿಸೋಜಾ, ವಿಕ್ರಮ್ ಮೋರ್

2. ಗುರುದೇವ್ ಹೊಯ್ಸಳ – ದಿಲೀಪ್ ಸುಬ್ರಮಣ್ಯ, ಅರ್ಜುನ್ ರಾಜ್

3. ಕಬ್ಜ – ರವಿ ವರ್ಮಾ, ವಿಕ್ರಮ್ ಮೋರ್

4. ಕೈವ – ಅರ್ಜುನ್ ರಾಜ್, ಡಿಫರೆಂಟ್ ಡ್ಯಾನಿ

5. ಕಾಟೇರ –ರಾಮ್ ಲಕ್ಷ್ಮಣ

ಅತ್ಯುತ್ತಮ ಛಾಯಾಗ್ರಹಣ

1. ಸಪ್ತ ಸಾಗರದಾಚೆ ಎಲ್ಲೋ ( ಸೈಡ್ ಬಿ) ಅದ್ವೈತ ಗುರುಮೂರ್ತಿ

2. ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ – ಅರವಿಂದ್ ಕಶ್ಯಪ್

3. ಸ್ವಾತಿ ಮುತ್ತಿನ ಮಳೆ ಹನಿಯೇ – ಪ್ರವೀಣ್ ಶ್ರೀಯಾನ್

4. ಘೋಸ್ಟ್ _ ಮಹೇಂದ್ರ ಸಿಂಹ

5. ಕಾಟೇರ – ಸುಧಾಕರ್ ಎಸ್. ರಾಜ್

ಅತ್ಯುತ್ತಮ ಸಂಕಲನ

1. ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ – ಸುರೇಶ್ ಎಮ್.

2. ಘೋಸ್ಟ್ – ದೀಪು ಎಸ್ ಕುಮಾರ್

3. ಶಿವಾಜಿ ಸುರತ್ಕಲ್ 2 – ಆಕಾಶ್ ಶ್ರೀವತ್ಸ್

4. ಕಾಟೇರ – ಕೆ.ಎಂ. ಪ್ರಕಾಶ್

5. ಕೈವ – ಕೆ.ಎಂ. ಪ್ರಕಾಶ್

ಅತ್ಯುತ್ತಮ ನೃತ್ಯ ನಿರ್ದೇಶನ

1. ಪುಷ್ಪವತಿ – ಕ್ರಾಂತಿ - ಗಣೇಶ್

2. ಪಸಂದಾಗವ್ಳೆ – ಕಾಟೇರ - ಭೂಷಣ್

3. ಬ್ಯಾಡ್ ಮ್ಯಾನರ್ಸ್ – ಬ್ಯಾಡ್ ಮ್ಯಾನರ್ಸ್ – ಬಿ. ಧನಂಜಯ್

4. ನೈಂಟಿ ಹಾಕು ಕಿಟ್ಟಪ್ಪ – ಕೌಸಲ್ಯ ಸುಪ್ರಜಾ ರಾಮ - ಕಲೈ

5. ಚುಮು ಚುಮು – ಕಬ್ಜ- ಜಾನಿ ಮಾಸ್ಟರ್

ಅತ್ಯುತ್ತಮ ಚಿತ್ರ ಸಾಹಿತ್ಯ

1. ಟಗರು ಪಲ್ಯ – ಸಂಬಂಜ ಅಂದ್ರೆ – ಡಾಲಿ ಧನಂಜಯ್

2. ಸಪ್ತ ಸಾಗರದಾಚೆ ಎಲ್ಲೋ – ನದಿಯೇ – ಧನಂಜಯ್ ರಂಜನ್

3. ಕೌಸಲ್ಯ ಸುಪ್ರಜಾ ರಾಮ – ಪ್ರೀತಿಸುವೆ – ಜಯಂತ್ ಕಾಯ್ಕಿಣಿ

4. ರಾಘವೇಂದ್ರ ಸ್ಟೋರ್ಸ್ – ಗಾಳಿಗೆ ಗಂಧ – ಗೌಸ್ ಪೀರ್

5. ಸ್ವಾತಿ ಮುತ್ತಿನ ಮಳೆ ಹನಿಯೇ – ಮೆಲ್ಲಗೆ - ಪೃಥ್ವಿ

ಅತ್ಯುತ್ತಮ ಹಿನ್ನೆಲೆ ಸಂಗೀತ

1. ಘೋಸ್ಟ್ – ಅರ್ಜುನ್ ಜನ್ಯ

2. ಸಪ್ತ ಸಾಗರದಾಚೆ ಎಲ್ಲೋ – ಚರಣ್ ರಾಜ್

3. ಕಾಟೇರ – ವಿ. ಹರಿಕೃಷ್ಣ

4. ವಿರಾಟಪುರದ ವಿರಾಟ – ಕದ್ರಿ ಮಣಿಕಾಂತ್

5. ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ – ಬಿ ಅಜನೀಶ್ ಲೋಕನಾಥ್

ಅತ್ಯುತ್ತಮ ಹಿನ್ನೆಲೆ ಗಾಯಕಿ

1. ಕಾಯೋಶಿವ ಕಾಪಾಡೋ ಶಿವ – ಪೆಂಟಾಗನ್ – ಸಂಗೀತಾ ಕಟ್ಟಿ

2. ಕೌಸಲ್ಯ ಸುಪ್ರಜಾ ರಾಮ – 90 ಹಾಕು ಕಿಟ್ಟಪ್ಪ – ಐಶ್ವರ್ಯ ರಂಗರಾಜನ್

3. ಪಸಂದಾಗವ್ನೆ – ಕಾಟೇರ - ಮಂಗ್ಲಿ

4. ಚುಮು ಚುಮು ಚಳಿ – ಕಬ್ಜ- ಐರಾ ಉಡುಪಿ

5. ಮೆಲ್ಲಗೆ – ಸ್ವಾತಿ ಮುತ್ತಿನ ಮಳೆ ಹನಿಯೇ – ಮಾಧುರಿ ಶೇಷಾದ್ರಿ

ಅತ್ಯುತ್ತಮ ಹಿನ್ನೆಲೆ ಗಾಯಕ

1. ನೋಡಲಾಗದೆ – ವೀರಾಟಪುರ ವಿರಾಗಿ – ರವೀಂದ್ರ ಸೊರಗಾಂವಿ

2. ಬೊಂಬೆ ಬೊಂಬೆ – ಕ್ರಾಂತಿ – ಸೋನು ನಿಗಂ

3. ಸಿಂಗಲ್ ಸುಂದರಿ – ರಾಘವೇಂದ್ರ ಸ್ಟೋರ್ಸ್ – ವಿಜಯ ಪ್ರಕಾಶ್ ಮತ್ತು ನವೀನ್ ಸಜ್ಜು

4. ನೊಂದುಕೋಬೇಡ – ಟಗರು ಪಲ್ಯ- ವಾಸುಕಿ ವೈಭವ್

5. ಸಪ್ತ ಸಾಗರದಾಚೆ ಎಲ್ಲೋ – ಟೈಟಲ್ ಟ್ರ್ಯಾಕ್ – ಸಪ್ತ ಸಾಗರದಾಚೆ ಎಲ್ಲೋ- ಕಪೀಲ್‍ ಕಪೀಲನ್

ಅತ್ಯುತ್ತಮ ಸಂಗೀತ ನಿರ್ದೇಶನ

1. ಸಪ್ತ ಸಾಗರದಾಚೆ ಎಲ್ಲೋ – ಚರಣ್ ರಾಜ್

2. ಕೌಸಲ್ಯ ಸುಪ್ರಜಾ ರಾಮ – ಅರ್ಜುನ್ ಜನ್ಯ

3. ಟಗರು ಪಲ್ಯ – ವಾಸುಕಿ ವೈಭವ್

4. ಕ್ರಾಂತಿ – ವಿ. ಹರಿಕೃಷ್ಣ

5. ಕೈವ – ಅಜನೀಶ್ ಲೋಕನಾಥ್

ಅತ್ಯುತ್ತಮ ಬಾಲ ಕಲಾವಿದ/ಕಲಾವಿದೆ

1. ಅಂಬುಜಾ - ಆಕಾಂಕ್ಷ

2. ಶಿವಾಜಿ ಸುರತ್ಕಲ್ 2 - ಆರಾಧ್ಯ

3. ಗೌಳಿ - ನಮನ

4. ಟೋಬಿ – ಸ್ನಿಗ್ಧ ಆರ್. ಶೆಟ್ಟಿ

5. ಓ ನನ್ನ ಚೇತನ – ಪ್ರತೀಕ ಮಂಜುನಾಥ್

ಅತ್ಯುತ್ತಮ ಪೋಷಕ ನಟಿ

1. ಹೇಮಾ ದತ್ತ - ತೋತಾಪುರಿ

2. ಶ್ರುತಿ - ಕಾಟೇರ

3. ತಾರಾ ಅನುರಾಧ – ಟಗರು ಪಲ್ಯ

4. ಸುಧಾ ಬೆಳವಾಡಿ – ಕೌಸಲ್ಯ ಸುಪ್ರಜಾ ರಾಮ

5. ಎಂ.ಡಿ. ಪಲ್ಲವಿ – 19.20.21

ಅತ್ಯುತ್ತಮ ಪೋಷಕ ನಟ

1. ಪೂರ್ಣಚಂದ್ರ ಮೈಸೂರು – ಡೇರ್ ಡೆವಿಲ್ ಮುಸ್ತಾಫಾ

2. ರಂಗಾಯಣ ರಘು – ಟಗರು ಪಲ್ಯ

3. ರಾಘು ಶಿವಮೊಗ್ಗ - ಕೈವ

4. ಮಹದೇವ ಹಡಪದ – 19.20.21

5. ರಮೇಶ್ ಇಂದಿರಾ – ಸಪ್ತ ಸಾಗರದಾಚೆ ಎಲ್ಲೋ

ಅತ್ಯುತ್ತಮ ನಟಿ

1. ರುಕ್ಮುಣಿ ವಸಂತ – ಸಪ್ತ ಸಾಗರದಾಚೆ ಎಲ್ಲೋ

2. ಅಕ್ಷತಾ ಪಾಂಡವಪುರ – ಪಿಂಕಿ ಎಲ್ಲಿ?

3. ಮಿಲನಾ ನಾಗರಾಜ್ – ಕೌಸಲ್ಯ ಸುಪ್ರಜಾ ರಾಮ

4. ಸಿರಿ ರವಿಕುಮಾರ್ – ಸ್ವಾತಿ ಮುತ್ತಿನ ಮಳೆ ಹನಿಯೇ

5. ಮೇಘಾ ಶೆಟ್ಟಿ - ಕೈವ

ಅತ್ಯುತ್ತಮ ನಟ

1. ರಕ್ಷಿತ್ ಶೆಟ್ಟಿ – ಸಪ್ತ ಸಾಗರದಾಚೆ ಎಲ್ಲೋ

2. ರಾಜ್ ಬಿ ಶೆಟ್ಟಿ, ಸ್ವಾತಿ ಮುತ್ತಿನ ಮಳೆ ಹನಿಯೇ

3. ರಮೇಶ್ ಅರವಿಂದ್ – ಶಿವಾಜಿ ಸುರತ್ಕಲ್ 2

4. ಶೃಂಗ ಬಿ.ವಿ – 19.20.21

5. ದರ್ಶನ್ - ಕಾಟೇರ

ಅತ್ಯುತ್ತಮ ಸಂಭಾಷಣೆ

1. ಕೈವ – ರಘು ನಿಡುವಳ್ಳಿ

2. ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ – ನಿತಿನ್ ಕೃಷ್ಣಮೂ‍ರ್ತಿ

3. ಕೌಸಲ್ಯ ಸುಪ್ರಜಾ ರಾಮ - ಯದುನಂದನ್

4. ಕಾಟೇರ - ಮಾಸ್ತಿ

5. ಟಗರು ಪಲ್ಯ – ಉಮೇಶ್ ಕೆ ಕೃಪಾ

ಅತ್ಯುತ್ತಮ ಚಿತ್ರಕಥೆ

1. ಶಿವಾಜಿ ಸುರತ್ಕಲ್ 2 – ಆಕಾಶ್ ಶ್ರೀವತ್ಸ- ಅಭಿಜಿತ್‍ ವೈ.ಆರ್

2. ಕೈವ - ಜಯತೀರ್ಥ

3. ಸ್ವಾತಿ ಮುತ್ತಿನ ಮಳೆಹನಿಯೇ - ರಾಜ್ ಬಿ ಶೆಟ್ಟಿ

4. ದೂರದರ್ಶನ – ಸುಕೇಶ್ ಶೆಟ್ಟಿ

5. ಕಾಟೇರ – ತರುಣ್ ಕಿಶೋರ್ ಸುಧೀರ್ – ಜಡೇಶ್ ಕೆ. ಹಂಪಿ

ಅತ್ಯುತ್ತಮ ನಿರ್ದೇಶಕ

1. ಜಯತೀರ್ಥ - ಕೈವ

2. ತರುಣ್ ಕಿಶೋರ್ ಸುಧೀರ್ - ಕಾಟೇರ

3. ನಿತೀನ್ ಕೃಷ್ಣಮೂರ್ತಿ _ ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ

4. ಮಂಸೋರೆ – 19.20.21

5. ರಾಜ್ ಬಿ ಶೆಟ್ಟಿ – ಸ್ವಾತಿ ಮುತ್ತಿನ ಮಳೆಹನಿಯೇ

ಅತ್ಯುತ್ತಮ ಚಿತ್ರ

1. ಸಪ್ತ ಸಾಗರದಾಚೆ ಎಲ್ಲೋ

2. ಡೇರ್ ಡೆವಿ‍ಲ್ ಮುಸ್ತಾಫಾ

3. 19.20.21

4. ಕಾಟೇರ

5. ಕೌಸಲ್ಯ ಸುಪ್ರಜಾ ರಾಮ

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ