logo
ಕನ್ನಡ ಸುದ್ದಿ  /  ಮನರಂಜನೆ  /  ಖುಷಿ ಸಿನಿಮಾ ಯಶಸ್ಸಿಗೆ ಖುಷಿಯೋ ಖುಷಿ; ದೇವಸ್ಥಾನಗಳಲ್ಲಿ ಹರಕೆ ತೀರಿಸಿದ ವಿಜಯ್‌ ದೇವರಕೊಂಡ

ಖುಷಿ ಸಿನಿಮಾ ಯಶಸ್ಸಿಗೆ ಖುಷಿಯೋ ಖುಷಿ; ದೇವಸ್ಥಾನಗಳಲ್ಲಿ ಹರಕೆ ತೀರಿಸಿದ ವಿಜಯ್‌ ದೇವರಕೊಂಡ

HT Kannada Desk HT Kannada

Sep 05, 2023 05:22 PM IST

ವಿಜಯ್‌ ದೇವರಕೊಂಡ ದೇವಸ್ಥಾನ ಭೇಟಿ

  • ವಿಜಯ್‌ ದೇವರಕೊಂಡ ಇತ್ತೀಚೆಗೆ ಕುಟುಂಬದೊಂದಿಗೆ ತೆಲಂಗಾಣದ ಯಾದಗಿರಿ ದೇವಸ್ಥಾನಕ್ಕೆ ತೆರಳಿ ಲಕ್ಷ್ಮಿ ನರಸಿಂಹಸ್ವಾಮಿಯ ದರ್ಶನ ಪಡೆದು ಹರಕೆ ತೀರಿಸಿ ಬಂದಿದ್ದಾರೆ. ದೇವಸ್ಥಾನ ಭೇಟಿಯ ಫೋಟೋಗಳನ್ನು ವಿಜಯ್‌ ದೇವರಕೊಂಡ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ವಿಜಯ್‌ ದೇವರಕೊಂಡ ದೇವಸ್ಥಾನ ಭೇಟಿ
ವಿಜಯ್‌ ದೇವರಕೊಂಡ ದೇವಸ್ಥಾನ ಭೇಟಿ (PC: Vijay Deverakonda)

ವಿಜಯ್‌ ದೇವರಕೊಂಡ ಹಾಗೂ ಸಮಂತಾ ಅಭಿನಯದ 'ಖುಷಿ' ಸಿನಿಮಾ ಸಕ್ಸಸ್‌ ಕಂಡಿದೆ. ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಅಮೆರಿಕಾಗೆ ತೆರಳಿದ್ದ ಸಮಂತಾ ಕೂಡಾ ವಾಪಸ್‌ ಬಂದಿದ್ದು ಈಗ ಚಿತ್ರತಂಡಕ್ಕೆ ಆನೆಬಲ ಬಂದಂತೆ ಆಗಿದೆ. ಈ ನಡುವೆ ವಿಜಯ್‌ ದೇವರಕೊಂಡ ದೇವಸ್ಥಾನಕ್ಕೆ ತೆರಳಿ ಹರಕೆ ತೀರಿಸಿ ಬಂದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Amruthadhaare: ರೌಡಿಗಳ ಕೈಯಿಂದ ಮಲ್ಲಿಯನ್ನು ಬಚಾವ್‌ ಮಾಡಿದ್ಲು ಮಹಿಮಾ; ಡುಮ್ಮ ಸರ್‌ ಟೈಟಾದ್ರು, ಐ ಅಂದ್ರು, ಲವ್‌ ಯು ಹೇಳ್ತಾರ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

ಸೆಪ್ಟೆಂಬರ್‌ 1 ರಂದು ತೆರೆ ಕಂಡ 'ಖುಷಿ'

ಖುಷಿ ಸಿನಿಮಾ ಸೆಪ್ಟೆಂಬರ್‌ 1 ರಂದು ತೆರೆ ಕಂಡಿತ್ತು. ಅದಕ್ಕೂ ಮುನ್ನ ಸಿನಿಮಾ ಹಾಡುಗಳು ಹಾಗೂ ಟ್ರೇಲರ್‌ನಿಂದ ಸದ್ದು ಮಾಡಿತ್ತು. ಸಿನಿಮಾ ಖಂಡಿತ ಸಕ್ಸಸ್‌ ಆಗುತ್ತದೆ ಎಂದು ಅಭಿಮಾನಿಗಳು ಕೂಡಾ ಭರವಸೆ ವ್ಯಕ್ತಪಡಿಸಿದ್ದರು. ಎಲ್ಲಾ ಅಂದುಕೊಂಡಂತೆ ಸಿನಿಮಾ ಗೆದ್ದಿದೆ. ಕಳೆದ ವರ್ಷ ತೆರೆ ಕಂಡಿದ್ದ ವಿಜಯ್‌ ದೇವರಕೊಂಡ ಅಭಿನಯದ ಲೈಗರ್‌ ಸಿನಿಮಾ ಹೀನಾಯ ಸೋಲು ಕಂಡಿತ್ತು. ಈ ಸಿನಿಮಾ ಬಗ್ಗೆ ವಿಜಯ್‌ ದೇವರಕೊಂಡ , ಅಭಿಮಾನಿಗಳು ಹಾಗೂ ಚಿತ್ರತಂಡಕ್ಕೆ ಭಾರೀ ಭರವಸೆ ಇತ್ತು. ಚಿತ್ರತಂಡ ಕೂಡಾ ದೇಶದ ವಿವಿಧ ನಗರಗಳಿಗೆ ತೆರಳಿ ಪ್ರಮೋಷನ್‌ ಮಾಡಿತ್ತು. ಆದರೆ ಸಿನಿಮಾ ರಿಲೀಸ್‌ ಆದ ನಂತರ ಎಲ್ಲರಿಗೂ ಭಾರೀ ನಿರಾಸೆ ಕಾದಿತ್ತು.

ಲೈಗರ್‌ ಸೋಲಿನ ನಂತರ ನಿರ್ದೇಶಕ ಪೂರಿ ಜಗನ್ನಾಥ್‌ ಹಾಗೂ ವಿಜಯ್‌ ದೇವರಕೊಂಡ ಜೊತೆ ಸೇರಿ ಮಾಡಬೇಕಿದ್ದ ಮತ್ತೊಂದು ಸಿನಿಮಾ ಜನಗಣಮನ ತಾತ್ಕಾಲಿಕವಾಗಿ ನಿಂತಿತ್ತು. ಇದರ ನಂತರ ಖುಷಿ ಸಿನಿಮಾ ಏನಾಗುವುದೋ, ಸಿನಿಪ್ರಿಯರು ಹೇಗೆ ಸ್ವೀಕರಿಸಲಿದ್ದಾರೋ ಎಂಬ ಭಯ ವಿಜಯ್‌ ದೇವರಕೊಂಡ ಹಾಗೂ ಅಭಿಮಾನಿಗಳಿಗೆ ಕಾಡುತ್ತಿತ್ತು. ಇದೀಗ ಸಿನಿಮಾ ಎಲ್ಲರಿಗೂ ಖುಷಿ ನೀಡಿದೆ. 4 ದಿನಗಳಲ್ಲಿ 75 ಕೋಟಿ ರೂಪಾಯಿ ಲಾಭ ಮಾಡಿದೆ. ಇದೇ ಸಂತೋಷಕ್ಕೆ ವಿಜಯ್‌ ದೇವರಕೊಂಡ ಚಿತ್ರದ ಸಂಭಾವನೆಯಲ್ಲಿ ಸ್ವಲ್ಪ ಹಣವನ್ನು ಅಗತ್ಯವಿರುವ ಕುಟುಂಬಗಳಿಗೆ ನೀಡುವುದಾಗಿ ಘೋಷಿಸಿದ್ದಾರೆ.

ತೆಲಂಗಾಣದ ಯಾದಗಿರಿ, ವಿಶಾಖಪಟ್ಟಣದ ದೇವಸ್ಥಾನಗಳಗೆ ಭೇಟಿ

ಇತ್ತೀಚೆಗೆ ಕುಟುಂಬದೊಂದಿಗೆ ತೆಲಂಗಾಣದ ಯಾದಗಿರಿ ದೇವಸ್ಥಾನಕ್ಕೆ ತೆರಳಿ ಲಕ್ಷ್ಮಿ ನರಸಿಂಹಸ್ವಾಮಿಯ ದರ್ಶನ ಪಡೆದು ಹರಕೆ ತೀರಿಸಿ ಬಂದಿದ್ದಾರೆ. ದೇವಸ್ಥಾನ ಭೇಟಿಯ ಫೋಟೋಗಳನ್ನು ವಿಜಯ್‌ ದೇವರಕೊಂಡ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಖುಷಿ ಚಿತ್ರದ ಸಕ್ಸಸ್‌ನಿಂದ ನನ್ನ ಕುಟುಂಬ ಬಹಳ ಖುಷಿಯಾಗಿದೆ. ಆದ್ದರಿಂದ ಕುಟುಂಬದೊಂದಿಗೆ ಸುಂದರ ಯಾದಗಿರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದೇನೆ. ಈ ದೇವಸ್ಥಾನ ಬಹಳ ಪವರ್‌ಫುಲ್.‌ ನಿಮ್ಮೆಲ್ಲರಿಗಾಗಿ ನಾನು ದೇವರ ಬಳಿ ಪ್ರಾರ್ಥಿಸುತ್ತೇನೆ. ನಮ್ಮ ಖುಷಿಗೆ ನೀವೇ ಕಾರಣ ಎಂದು ವಿಜಯ್‌ ದೇವರಕೊಂಡ ಬರೆದುಕೊಂಡಿದ್ದಾರೆ. ಮಂಗಳವಾರ ವಿಶಾಖಪಟ್ಟಣದ ಸಿಂಹಾಚಲಂ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಬಂದಿದ್ದಾರೆ.

ಶಿವ ನಿರ್ವಾಣ ಆಕ್ಷನ್‌ ಕಟ್‌ ಹೇಳಿರುವ 'ಖುಷಿ' ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್‌ ಬ್ಯಾನರ್‌ ಅಡಿ ನವೀನ್‌ ಯರನೇನಿ, ರವಿಶಂಕರ್‌ ಜೊತೆ ಸೇರಿ ನಿರ್ಮಿಸಿದ್ದಾರೆ. ಚಿತ್ರದ ಹಾಡುಗಳಿಗೆ ಹೇಷಮ್‌ ಅಬ್ದುಲ್‌ ವಾಹಬ್‌ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಮುರಳಿ ಶರ್ಮಾ, ಜಯರಾಮ್‌ ಸಚಿನ್‌ ಖೇಡೇಕರ್‌, ವೆನ್ನಿಲಾ ಕಿಶೋರ್‌, ಆಲಿ ಹಾಗೂ ಇನ್ನಿತರರು ನಟಿಸಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ