logo
ಕನ್ನಡ ಸುದ್ದಿ  /  ಮನರಂಜನೆ  /  ಅಭಿಮಾನಿಯ ಕತ್ತು ಹಿಡಿದು ತಳ್ಳಿದ ವಿಜಯ್‌ ದೇವರಕೊಂಡ ಬೌನ್ಸರ್‌; ದುರಹಂಕಾರಿ ಎಂದ ನೆಟಿಜನ್ಸ್‌

ಅಭಿಮಾನಿಯ ಕತ್ತು ಹಿಡಿದು ತಳ್ಳಿದ ವಿಜಯ್‌ ದೇವರಕೊಂಡ ಬೌನ್ಸರ್‌; ದುರಹಂಕಾರಿ ಎಂದ ನೆಟಿಜನ್ಸ್‌

HT Kannada Desk HT Kannada

Aug 31, 2023 01:14 PM IST

'ಖುಷಿ' ಸಿನಿಮಾ ಇವೆಂಟ್

  • ವೇದಿಕೆ ಮೇಲೆ ವಿಜಯ್‌ ದೇವರಕೊಂಡ ಎಲ್ಲಾ ಫ್ಯಾನ್ಸ್‌ ಫೋಟೋ ತೆಗೆಸಿಕೊಳ್ಳುತ್ತಿದ್ದರು. ಆಗ ಅಭಿಮಾನಿಯೊಬ್ಬನನ್ನು ವಿಜಯ್‌ ದೇವರಕೊಂಡ ಸೆಕ್ಯೂರಿಟಿಗಳು ಬೇಗ ಅಲ್ಲಿಂದ ಹೋಗುವಂತೆ ಕತ್ತು ಹಿಡಿದು ತಳ್ಳಿದ್ದಾರೆ. ವೇದಿಕೆ ಕೆಳಗಿದ್ದ ಇಬ್ಬರು ಈ ವಿಡಿಯೋ ಶೂಟ್‌ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ ಲೋಡ್‌ ಮಾಡಿದ್ದಾರೆ.

'ಖುಷಿ' ಸಿನಿಮಾ ಇವೆಂಟ್
'ಖುಷಿ' ಸಿನಿಮಾ ಇವೆಂಟ್

ವಿಜಯ್‌ ದೇವರಕೊಂಡ ಹಾಗೂ ಸಮಂತಾ ಅಭಿನಯದ 'ಖುಷಿ' ಸಿನಿಮಾ ಸೆಪ್ಟೆಂಬರ್‌ 1 ರಂದು ತೆರೆ ಕಾಣುತ್ತಿದೆ. ಚಿತ್ರತಂಡ ಭರ್ಜರಿ ಪ್ರಮೋಷನ್‌ನಲ್ಲಿ ಬ್ಯುಸಿ ಇದೆ. ಸಮಂತಾ ವಿದೇಶಕ್ಕೆ ತೆರಳಿದ್ದು ವಿಜಯ್‌ ದೇವರಕೊಂಡ ಒಬ್ಬರೇ ಚಿತ್ರತಂಡದೊಂದಿಗೆ ಪಬ್ಲಿಸಿಟಿಯಲ್ಲಿ ತೊಡಗಿಸಿದ್ಧಾರೆ.

ಟ್ರೆಂಡಿಂಗ್​ ಸುದ್ದಿ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ಖುಷಿ ಪ್ರಮೋಷನ್‌ನಲ್ಲಿ ವಿಜಯ್‌ ದೇವರಕೊಂಡ

ಇನ್ನು ವಿಜಯ್‌ ದೇವರಕೊಂಡ ಎಲ್ಲಿ ಹೋದರೂ ಅಲ್ಲಿ ಫ್ಯಾನ್‌ ಫಾಲೋಯಿಂಗ್‌ ಇದ್ದೇ ಇರುತ್ತದೆ. ಅಭಿಮಾನಿಗಳು ಆತನೊಂದಿಗೆ ಫೋಟೋ ತೆಗೆಸಿಕೊಳ್ಳಲು ಕಾಯುತ್ತಿರುತ್ತಾರೆ. ಇತ್ತೀಚೆಗೆ ಹೈದಾರಾಬಾದ್‌ನಲ್ಲಿ ಇದೇ ರೀತಿ ಅಭಿಮಾನಿಗಳು ವಿಜಯ್‌ ದೇವರಕೊಂಡ ಜೊತೆ ಫೋಟೋ ತೆಗೆಸಿಕೊಳ್ಳಲು ಮುಂದಾಗಿದ್ದಾರೆ. ಈ ಸಮಯದಲ್ಲಿ ವಿಜಯ್‌ ದೇವರಕೊಂಡ ಬೌನ್ಸರ್‌, ಅಭಿಮಾನಿಯೊಬ್ಬರ ಕತ್ತು ಹಿಡಿದು ತಳ್ಳಿದ ಘಟನೆ ನಡೆದಿದೆ.

ಫೋಟೋ ತೆಗೆಸಿಕೊಳ್ಳಲು ಬಂದ ಅಭಿಮಾನಿ

ವೇದಿಕೆ ಮೇಲೆ ವಿಜಯ್‌ ದೇವರಕೊಂಡ ಎಲ್ಲಾ ಫ್ಯಾನ್ಸ್‌ ಫೋಟೋ ತೆಗೆಸಿಕೊಳ್ಳುತ್ತಿದ್ದರು. ಆಗ ಅಭಿಮಾನಿಯೊಬ್ಬನನ್ನು ವಿಜಯ್‌ ದೇವರಕೊಂಡ ಸೆಕ್ಯೂರಿಟಿಗಳು ಬೇಗ ಅಲ್ಲಿಂದ ಹೋಗುವಂತೆ ಕತ್ತು ಹಿಡಿದು ತಳ್ಳಿದ್ದಾರೆ. ವೇದಿಕೆ ಕೆಳಗಿದ್ದ ಇಬ್ಬರು ಈ ವಿಡಿಯೋ ಶೂಟ್‌ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ ಲೋಡ್‌ ಮಾಡಿದ್ದಾರೆ. ವಿಡಿಯೋ ವೈರಲ್‌ ಆಗುತ್ತಿದ್ದಂತೆ ನೆಟಿಜನ್ಸ್‌ ಬೇಸರದಿಂದಲೇ ಕಾಮೆಂಟ್‌ ಮಾಡುತ್ತಿದ್ಧಾರೆ. ಫೋಟೋ ತೆಗೆಸಿಕೊಳ್ಳಲು ಬಂದ ಅಭಿಮಾನಿಯೊಂದಿಗೆ ಇಂತಹ ದುರಹಂಕಾರದ ವರ್ತನೆ ಸರಿ ಇಲ್ಲ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.

ವೈಯಕ್ತಿಕ ವಿಚಾರಗಳಿಂದಲೂ ಸುದ್ದಿಯಾಗುವ ನಟ

ವಿಜಯ್‌ ದೇವರಕೊಂಡ ಸಿನಿಮಾಗಳಿಂದ ಮಾತ್ರವಲ್ಲ ತಮ್ಮ ವೈಯಕ್ತಿಕ ವಿಚಾರಗಳಿಂದ ಕೂಡಾ ಆಗ್ಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಮೊನ್ನೆಯಷ್ಟೇ ಹುಡುಗಿಯೊಬ್ಬಳ ಕೈ ಹಿಡಿದಿರುವ ಫೋಟೋವನ್ನು ವಿಜಯ್‌ ದೇವರಕೊಂಡ ಹಂಚಿಕೊಂಡು ಆದಷ್ಟು ಬೇಗ ಗುಡ್‌ ನ್ಯೂಸ್‌ ಕೊಡುವುದಾಗಿ ಹೇಳಿದ್ದರು. ಆ ಹುಡುಗಿ ರಶ್ಮಿಕಾ ಮಂದಣ್ಣ ಅವರದ್ದೇ ಎಂದು ನೆಟಿಜನ್ಸ್‌ ಮಾತನಾಡಿಕೊಳ್ಳುತ್ತಿದ್ಧಾರೆ.

ಶಿವ ನಿರ್ವಾಣ ನಿರ್ದೇಶನದ 'ಖುಷಿ'

'ಖುಷಿ' ಸಿನಿಮಾ ನಾಳೆ (ಸೆಪ್ಟೆಂಬರ್‌ 1) ರಂದು ತೆರೆ ಕಾಣುತ್ತಿದೆ. ಈ ಚಿತ್ರಕ್ಕೆ ಶಿವ ನಿರ್ವಾಣ ಆಕ್ಷನ್‌ ಕಟ್‌ ಹೇಳಿದ್ದಾರೆ. ಸಮಂತಾ ಆರೋಗ್ಯ ಸಮಸ್ಯೆ ಇರುವುದರಿಂದ ಆಕೆ ಪ್ರಮೋಷನ್‌ ಕಾರ್ಯಗಳಲ್ಲಿ ಹೆಚ್ಚು ಭಾಗಿಯಾಗುತ್ತಿಲ್ಲ. ಮೈತ್ರಿ ಮೂವಿ ಮೇಕರ್ಸ್‌ ಬ್ಯಾನರ್‌ ಅಡಿ ನವೀನ್‌ ಯರನೇನಿ, ರವಿಶಂಕರ್‌ ಜೊತೆ ಸೇರಿ ನಿರ್ಮಾಣ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಹೇಷಮ್‌ ಅಬ್ದುಲ್‌ ವಾಹಬ್‌ ಸಂಗೀತ ನೀಡಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ