logo
ಕನ್ನಡ ಸುದ್ದಿ  /  ಮನರಂಜನೆ  /  ವಿಜಯ್‌ ದೇವರಕೊಂಡ ಕಡೆಯಿಂದ ಶೀಘ್ರದಲ್ಲಿ ಸಿಹಿ ಸುದ್ದಿ; ರಶ್ಮಿಕಾ ಮಂದಣ್ಣ ಹೆಸರು ಮುನ್ನೆಲೆಗೆ

ವಿಜಯ್‌ ದೇವರಕೊಂಡ ಕಡೆಯಿಂದ ಶೀಘ್ರದಲ್ಲಿ ಸಿಹಿ ಸುದ್ದಿ; ರಶ್ಮಿಕಾ ಮಂದಣ್ಣ ಹೆಸರು ಮುನ್ನೆಲೆಗೆ

HT Kannada Desk HT Kannada

Aug 30, 2023 11:05 AM IST

ವಿಜಯ್‌ ದೇವರಕೊಂಡ ಕಡೆಯಿಂದ ಶೀಘ್ರದಲ್ಲಿ ಸಿಹಿ ಸುದ್ದಿ; ರಶ್ಮಿಕಾ ಮಂದಣ್ಣ ಹೆಸರು ಮುನ್ನೆಲೆಗೆ

    • ನಟ ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ಕುರಿತು ಟಾಲಿವುಡ್‌ ಅಂಗಳದಲ್ಲಿ ತರಹೇವಾರಿ ವದಂತಿಗಳು ಹರಿದಾಡುತ್ತಲೇ ಇರುತ್ತವೆ. ಇದೀಗ ಆ ಸಾಲಿಗೆ ಇನ್ನೊಂದು ಸೇರ್ಪಡೆಯಾಗುತ್ತಿದೆ.  
ವಿಜಯ್‌ ದೇವರಕೊಂಡ ಕಡೆಯಿಂದ ಶೀಘ್ರದಲ್ಲಿ ಸಿಹಿ ಸುದ್ದಿ; ರಶ್ಮಿಕಾ ಮಂದಣ್ಣ ಹೆಸರು ಮುನ್ನೆಲೆಗೆ
ವಿಜಯ್‌ ದೇವರಕೊಂಡ ಕಡೆಯಿಂದ ಶೀಘ್ರದಲ್ಲಿ ಸಿಹಿ ಸುದ್ದಿ; ರಶ್ಮಿಕಾ ಮಂದಣ್ಣ ಹೆಸರು ಮುನ್ನೆಲೆಗೆ

Vijay Deverakonda: ಇದೇ ಶುಕ್ರವಾರ (ಸೆ. 1) ಖುಷಿ ಸಿನಿಮಾ ತೆರೆಗೆ ಬರುತ್ತಿದೆ. ವಿಜಯ್‌ ದೇವರಕೊಂಡ ಮತ್ತು ಸಮಂತಾ ಜೋಡಿಯ ಸಿನಿಮಾ ಗ್ರ್ಯಾಂಡ್ ರಿಲೀಸ್‌ ಆಗುತ್ತಿದೆ. ಹೀಗಿರುವಾಗಲೇ ವಿಜಯ್ ದೇವರಕೊಂಡ, ಇನ್‌ಸ್ಟಾಗ್ರಾಂನಲ್ಲಿ ಇಂಟ್ರೆಸ್ಟಿಂಗ್‌ ವಿಚಾರವೊಂದನ್ನು ಪೋಸ್ಟ್ ಮಾಡಿದ್ದಾರೆ. ಹುಡುಗಿಯೊಬ್ಬಳ ಕೈ ಹಿಡಿದಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಫೋಟೋವನ್ನು ವಿಜಯ್ ಪೋಸ್ಟ್ ಮಾಡಿದ್ದು, "ಹೇಳುವುದಕ್ಕೆ ತುಂಬ ಇದೆ. ಆ ಪೈಕಿ ಇದು ತುಂಬ ವಿಶೇಷ.. ಶೀಘ್ರದಲ್ಲೇ ಘೋಷಿಸುತ್ತೇನೆ" ಎಂದಿದ್ದಾರೆ ವಿಜಯ್‌ ದೇವರಕೊಂಡ.

ಟ್ರೆಂಡಿಂಗ್​ ಸುದ್ದಿ

Bhagyalakshmi Serial: 10ನೇ ತರಗತಿ ಪಾಸ್‌ ಆದ ಖುಷಿಗೆ ಮೊದಲ ದಿನವೇ ಕೆಲಸಕ್ಕೆ ತಡವಾಗಿ ಹೊರಟ ಭಾಗ್ಯಾ, ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

Amruthadhaare: ರೌಡಿಗಳ ಕೈಯಿಂದ ಮಲ್ಲಿಯನ್ನು ಬಚಾವ್‌ ಮಾಡಿದ್ಲು ಮಹಿಮಾ; ಡುಮ್ಮ ಸರ್‌ ಟೈಟಾದ್ರು, ಐ ಅಂದ್ರು, ಲವ್‌ ಯು ಹೇಳ್ತಾರ

ಬರಲಿದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಯೋಪಿಕ್‌; ಮೋದಿ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಬಾಹುಬಲಿಯ ಕಟ್ಟಪ್ಪ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

ಇತ್ತೀಚೆಗೆ ಮದುವೆ ಬಗ್ಗೆ ಪದೇಪದೇ ಸುದ್ದಿಯಾಗುತ್ತಿರುವ ವಿಜಯ್‌, ಈಗ ಗೆಳತಿಯನ್ನು ಪರಿಚಯಿಸಲಿದ್ದಾರಾ ಅಥವಾ ಭಾವಿ ಪತ್ನಿಯನ್ನು ಪರಿಚಯಿಸಲಿದ್ದಾರಾ ಎಂಬುದು ಸದ್ಯ ಅಭಿಮಾನಿಗಳ ವಲಯದಲ್ಲಿನ ಚರ್ಚೆ. ಇನ್ನು ಕೆಲವರು ಖುಷಿ ಸಿನಿಮಾ ಪಬ್ಲಿಸಿಟಿ ಗಿಮಿಕ್‌ ಇರಬಹುದು ಎಂದೂ ಹೇಳುತ್ತಿದ್ದಾರೆ. ಇಲ್ಲವೇ ಹೊಸ ಸಿನಿಮಾವೊಂದರ ಘೋಷಣೆ ಎಂದೂ ಊಹಿಸುತ್ತಿದ್ದಾರೆ. ಇನ್ನು ಕೆಲವರು ರಶ್ಮಿಕಾ ಮಂದಣ್ಣ ಅವರ ಹೆಸರನ್ನೂ ಎಳೆದು ತರುತ್ತಿದ್ದಾರೆ.

ಗೀತ ಗೋವಿಂದಂ ನಿರ್ದೇಶಕ ಪರಶುರಾಮ್ ಅವರ ಮುಂದಿನ ಸಿನಿಮಾದ ಫಸ್ಟ್ ಲುಕ್ ಅಥವಾ ಟೈಟಲ್ ಪೋಸ್ಟರ್ ಬಿಡುಗಡೆ ಮಾಡುವ ಸಾಧ್ಯತೆಯೂ ಇದೆ ಎಂಬ ಚರ್ಚೆ ಸೋಷಿಯಲ್‌ ಮೀಡಿಯಾದಲ್ಲಿ ನಡೆಯುತ್ತಿದೆ. ಖುಷಿ ಸಿನಿಮಾ ಬಳಿಕ ವಿಜಯ್ ದೇವರಕೊಂಡ ತಮ್ಮ VD13 ಸಿನಿಮಾದ ಕಡೆ ಗಮನಹರಿಸಲಿದ್ದಾರೆ. ಮುಂದಿನ ವರ್ಷ ಸಂಕ್ರಾಂತಿ ವೇಳೆ ಆ ಸಿನಿಮಾ ರಿಲೀಸ್‌ ಆಗಲಿದೆ.

ವಿಶೇಷ ಏನೆಂದರೆ 2024ರ ಸಂಕ್ರಾಂತಿಗೆ ಗುಂಟೂರು ಖಾರಂ, ನಾಗಾರ್ಜುನ ಅವರ ನಾ ಸಾಮಿ ರಂಗ, ರವಿತೇಜ ಈಗಲ್ ಹಾಗೂ ತೇಜ ಸಜ್ಜ ಹನುಮಾನ್ ಸಿನಿಮಾಗಳು ಬಿಡುಗಡೆ ದಿನಾಂಕ ಘೋಷಿಸಿವೆ. ಇದೀಗ ವಿಜಯ್‌ ಸಿನಿಮಾ ಸಹ ಅದೇ ಸಮಯದಲ್ಲಿ ರಿಲೀಸ್‌ ಆಗಲಿದೆಯಂತೆ.

ಅದರ ಭಾಗವಾಗಿಯೇ ವಿಜಯ್ ಇನ್‌ಸ್ಟಾ ಸ್ಟೋರಿ ಮೂಲಕ ಹೊಸ ವಿಚಾರವನ್ನು ವಿಶೇಷ ಘೋಷಣೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ತೆಲುಗಿನ ಡಾನ್ಸ್‌ ರಿಯಾಲಿಟಿ ಶೋಗೆ ಖುಷಿ ಸಿನಿಮಾ ಪ್ರಚಾರಕ್ಕೆ ಹೋಗಿದ್ದ ವಿಜಯ್‌, ಮನೆಯಲ್ಲಿ ಅಪ್ಪ, ಅಮ್ಮ ಮೊಮ್ಮಕ್ಕಳು ಬೇಕು ಎಂದು ಒತ್ತಡ ಹೇರುತ್ತಿದ್ದಾರೆ ಎಂದೂ ಹೇಳಿಕೊಂಡಿದ್ದರು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ