DK Shivakumar on Election : ಮಂಗಳಸೂತ್ರಕ್ಕೆ ಕೈ ಹಾಕಿರುವ ಬಿಜೆಪಿ ಈ ಬಾರಿ ಚುನಾವಣೆಯಲ್ಲಿ ಬೆಲೆ ತೆರಲಿದೆ
ಮಹಿಳೆಯರ ಮಂಗಳ ಸೂತ್ರದ ಬಗ್ಗೆ ಮಾತನಾಡಿ ಕೆಲವು ಸಮುದಾಯಗಳಲ್ಲಿ ಅಸ್ಥಿರತೆ ಮೂಡಿಸಿರುವ ಪ್ರಧಾನಿ ಮೋದಿ ಇದಕ್ಕೆ ಬೆಲೆ ತೆರಲಿದ್ದಾರೆ. ಬಿಜೆಪಿ ಈ ಬಾರಿ ಸೋಲು ಕಾಣಲಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ದಿಗ್ವಿಜಯ ಸಾಧಿಸಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಭವಿಷ್ಯ ನುಡಿದ್ದಾರೆ. ಮಂಗಳಸೂತ್ರದ ಬಗ್ಗೆ ಭಾವುಕರಾಗಿರುವ ಪ್ರಿಯಾಂಕ ಗಾಂಧಿ ತಮ್ಮ ತಾಯಿ ಸೋನಿಯಾ ಗಾಂಧಿ ದೇಶಕ್ಕಾಗಿ ಮಂಗಳ ಸೂತ್ರವನ್ನ ತ್ಯಾಗ ಮಾಡಿರುವ ಬಗ್ಗೆ ಮಾತನಾಡಿದ್ದಾರೆ. ಅಲ್ಲಿಗೆ ನಮ್ಮ ದೇಶದ ಮಹಿಳೆಯರಿಗೆ ಇದು ಎಷ್ಟು ಭಾವನಾತ್ಮಕ ವಿಚಾರ ಎಂಬುದನ್ನ ಅರಿತುಕೊಳ್ಳಬೇಕು ಎಂದಿದ್ದಾರೆ.