logo
ಕನ್ನಡ ಸುದ್ದಿ  /  ಮನರಂಜನೆ  /  Uttarakaanda Movie Update: ‘ಉತ್ತರಕಾಂಡ’ಕ್ಕೆ ಇಳಿಯಲು ಡಾಲಿ ರೆಡಿ; ರೋಹಿತ್‌ ಪದಕಿ ಕೃತಿಗೀಗ ಮುಹೂರ್ತ ಸಡಗರ

Uttarakaanda Movie Update: ‘ಉತ್ತರಕಾಂಡ’ಕ್ಕೆ ಇಳಿಯಲು ಡಾಲಿ ರೆಡಿ; ರೋಹಿತ್‌ ಪದಕಿ ಕೃತಿಗೀಗ ಮುಹೂರ್ತ ಸಡಗರ

HT Kannada Desk HT Kannada

Nov 01, 2022 09:30 PM IST

: ‘ಉತ್ತರಕಾಂಡ’ಕ್ಕೆ ಇಳಿಯಲು ಡಾಲಿ ರೆಡಿ; ರೋಹಿತ್‌ ಪದಕಿ ಕೃತಿಗೀಗ ಮುಹೂರ್ತ ಸಡಗರ

    • ಡಾಲಿ ಧನಂಜಯ್‌ ಬತ್ತಳಿಕೆಯಲ್ಲಿನ ಸಿನಿಮಾವೊಂದೀಗ ಸದ್ದಿಲ್ಲದೆ, ಸೆಟ್ಟೇರುವ ತವಕದಲ್ಲಿದೆ. ಇನ್ನೇನು ಶೀಘ್ರದಲ್ಲಿ ಮುಹೂರ್ತ ಮುಗಿಸಿಕೊಂಡು ಶೂಟಿಂಗ್‌ಗೆ ಚಾಲನೆ ನೀಡಲಿದೆ.
: ‘ಉತ್ತರಕಾಂಡ’ಕ್ಕೆ ಇಳಿಯಲು ಡಾಲಿ ರೆಡಿ; ರೋಹಿತ್‌ ಪದಕಿ ಕೃತಿಗೀಗ ಮುಹೂರ್ತ ಸಡಗರ
: ‘ಉತ್ತರಕಾಂಡ’ಕ್ಕೆ ಇಳಿಯಲು ಡಾಲಿ ರೆಡಿ; ರೋಹಿತ್‌ ಪದಕಿ ಕೃತಿಗೀಗ ಮುಹೂರ್ತ ಸಡಗರ

ಡಾಲಿ ಧನಂಜಯ್‌ ಬತ್ತಳಿಕೆಯಲ್ಲಿನ ಸಿನಿಮಾವೊಂದೀಗ ಸದ್ದಿಲ್ಲದೆ, ಸೆಟ್ಟೇರುವ ತವಕದಲ್ಲಿದೆ. ಇನ್ನೇನು ಶೀಘ್ರದಲ್ಲಿ ಮುಹೂರ್ತ ಮುಗಿಸಿಕೊಂಡು ಶೂಟಿಂಗ್‌ಗೆ ಚಾಲನೆ ನೀಡಲಿದೆ. ಹಾಗಾದರೆ, ಯಾವುದಾ ಸಿನಿಮಾ? ರೋಹಿತ್‌ ಪದಕಿ ನಿರ್ದೇಶಕದಲ್ಲಿ ಮೂಡಿಬರಲಿರುವ ‘ಉತ್ತರಕಾಂಡ’.

ಟ್ರೆಂಡಿಂಗ್​ ಸುದ್ದಿ

10 ವರ್ಷಗಳಲ್ಲಿ ಭಾರತ ಬದಲಾಗಿದೆ ಎಂದಿದ್ದ ರಶ್ಮಿಕಾ ಮಂದಣ್ಣಗೆ ಪರೋಕ್ಷವಾಗಿ ‘ಅಜ್ಞಾನಿ’ ಎಂದು ತಿವಿದ ಚೇತನ್‌ ಅಹಿಂಸಾ

ನಿಮ್ಮಂಥವರ ಬಾಯಲ್ಲಿ ಮರ್ಯಾದಾ ಪುರುಷೋತ್ತಮ ರಾಮನ ಹೆಸರು ಬಂದರೂ ಅದು ಮಹಾಪಾಪ! ಮೋದಿ ವಿರುದ್ಧ ತಿರುಗಿ ಬಿದ್ದ ಕಿಶೋರ್‌

ಮಲಯಾಳಂ ಸಿನಿಮಾದವರು ಏನು ಮಾಡಿದ್ರೂ ಉಘೇ ಉಘೇ, ಕನ್ನಡ ಸಿನಿಮಾದಲ್ಲಿ ಟ್ಯೂನ್‌ ಹೋಲಿಕೆ ಇದ್ರೂ ಕೇಸ್‌, ಯಾಕೆ ಹೀಗೆ? ಕವಿರಾಜ್‌ ಪ್ರಶ್ನೆ

ಸಲಿಂಗಕಾಮಿ ಎಂದ ಮಾಜಿ ಪತ್ನಿ ಸುಚಿತ್ರಾಳಿಗೆ ಕಾರ್ತಿಕ್‌ ಕುಮಾರ್‌ ತಿರುಗೇಟು; ಯಾವುದೇ ಬಗೆಯ ಲೈಂಗಿಕತೆಯ ಕುರಿತು ಹೆಮ್ಮೆ ಇದೆ ಎಂದ ನಟ

ವಿಜಯ್ ಕಿರಗಂದೂರು ಪ್ರಸ್ತುತ ಪಡಿಸುತ್ತಿರುವ ಚಿತ್ರ ‘ಉತ್ತರಕಾಂಡ’ವನ್ನು ಕೆ.ಆರ್.ಜಿ. ಸ್ಟುಡಿಯೋಸ್‌ನ ಕಾರ್ತಿಕ್ ಮತ್ತು ಯೋಗಿ.ಜಿ.ರಾಜ್ ನಿರ್ಮಿಸುತ್ತಿದ್ದಾರೆ. ಡಾಲಿ ಧನಂಜಯ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಈ ಚಿತ್ರವನ್ನು ರೋಹಿತ್ ಪದಕಿ ನಿರ್ದೇಶಿಸುತ್ತಿದ್ದಾರೆ. ರತ್ನನ್ ಪ್ರಪಂಚ ಯಶಸ್ಸಿನ ನಂತರ ಕೆ.ಆರ್.ಜಿ ಸ್ಟುಡಿಯೋಸ್, ಡಾಲಿ ಧನಂಜಯ ಮತ್ತು ರೋಹಿತ್ ಪದಕಿ ಮತ್ತೊಮ್ಮೆ ಈ ಸಿನಿಮಾ ಮೂಲಕ ಒಂದಾಗಿದ್ದಾರೆ.

ಮುಹೂರ್ತಕ್ಕೆ ದಿನಗಣನೆ..

ರಾಜ್ಯೋತ್ಸವದ ದಿನದಂದೇ ಈ ಸಿನಿಮಾದಿಂದ ಹೊಸ ಅಪ್‌ಡೇಟ್‌ ಮಾಹಿತಿ ಹೊರಬಿದ್ದಿದೆ. ನವೆಂಬರ್‌ 6ರಂದು ಮಧ್ಯಾಹ್ನ 3.22ಕ್ಕೆ ಈ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ವಿಶೇಷ ಏನೆಂದರೆ, ಈ ಚಿತ್ರ ಉತ್ತರ ಕರ್ನಾಟಕದ ಹಿನ್ನೆಲೆಯಲ್ಲಿ ಚಿತ್ರೀಕರಿಸಲಾಗುತ್ತದೆ. ಆ ಭಾಷೆಯ ಸೊಗಡಿನಲ್ಲಿಯೇ ಸಿನಿಮಾ ಮೂಡಿಬರಲಿದೆ.

ಮನುಷ್ಯನ ಮನಸ್ಸಿನ ಒಳಗಿನ ಖೇದಗಳನ್ನು, ಗೊಂದಲಗಳನ್ನು, ತಳಮಳಗಳನ್ನು ಬಹಳ ಸುಂದರವಾಗಿ ಕಥೆಯ ರೂಪದಲ್ಲಿ ರೋಹಿತ್ ಅವರು ಈ ಚಿತ್ರದಲ್ಲಿ ಹೆಣೆದಿದ್ದಾರಂತೆ. ಚರಣ್ ರಾಜ್ ಅವರು ಸಂಗೀತ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಸ್ವಾಮಿ ಅವರು ಛಾಯಾಗ್ರಾಹಕರಾಗಿದ್ದಾರೆ. ದೀಪು ಎಸ್ ಕುಮಾರ್ ಸಂಕಲನ ಮತ್ತು ವಿಶ್ವಾಸ್ ಕಶ್ಯಪ್ ವಿನ್ಯಾಸದ ಜವಾಬ್ಧಾರಿ ವಹಿಸಿಕೊಂಡಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ