logo
ಕನ್ನಡ ಸುದ್ದಿ  /  ಮನರಂಜನೆ  /  Sudeep On Dhananjaya: ವೇದಿಕೆ ಮೇಲೆ ಅಮೃತಾ ಅಯ್ಯಂಗಾರ್‌ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್; ನಾಚಿ ನೀರಾದ ಡಾಲಿ ಧನಂಜಯ್..

Sudeep on Dhananjaya: ವೇದಿಕೆ ಮೇಲೆ ಅಮೃತಾ ಅಯ್ಯಂಗಾರ್‌ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್; ನಾಚಿ ನೀರಾದ ಡಾಲಿ ಧನಂಜಯ್..

HT Kannada Desk HT Kannada

Mar 22, 2023 10:16 AM IST

ವೇದಿಕೆ ಮೇಲೆ ಅಮೃತಾ ಅಯ್ಯಂಗಾರ್‌ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್; ನಾಚಿ ನೀರಾದ ಡಾಲಿ ಧನಂಜಯ್..

  • ಸೋಷಿಯಲ್‌ ಮೀಡಿಯಾದಲ್ಲಿ ಧನಂಜಯ್ ಮತ್ತು ಅಮೃತಾ ನಡುವೆ ಏನೋ ನಡೆಯುತ್ತಿದೆ ಎಂದು ಅಭಿಮಾನಿಗಳು ಪ್ರಶ್ನೆ ಕೇಳುತ್ತಿದ್ದರು. ಇದೀಗ ಕಿಚ್ಚ ಸುದೀಪ್‌ ಸರದಿ. ಪರೋಕ್ಷವಾಗಿ ವೇದಿಕೆ ಮೇಲೆಯೇ ಈ ಜೋಡಿಯನ್ನು ಕಿಚಾಯಿಸಿದ್ದಾರೆ ಸುದೀಪ್.‌

ವೇದಿಕೆ ಮೇಲೆ ಅಮೃತಾ ಅಯ್ಯಂಗಾರ್‌ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್; ನಾಚಿ ನೀರಾದ ಡಾಲಿ ಧನಂಜಯ್..
ವೇದಿಕೆ ಮೇಲೆ ಅಮೃತಾ ಅಯ್ಯಂಗಾರ್‌ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್; ನಾಚಿ ನೀರಾದ ಡಾಲಿ ಧನಂಜಯ್..

Sudeep on Dhananjaya: ಸ್ಯಾಂಡಲ್‌ವುಡ್‌ ನಟ ಧನಂಜಯ್‌ ಹೋದಲ್ಲೆಲ್ಲ ಅವರಿಗೆ ಒಂದು ಪ್ರಶ್ನೆ ಇದ್ದೇ ಇರುತ್ತದೆ. ಅದು ಅವರ ಮದುವೆ ವಿಚಾರವೇ ಆಗಿರಬಹುದು.. ಇಲ್ಲ ಅಮೃತಾ ಅಯ್ಯಂಗಾರ್‌ ವಿಚಾರಕ್ಕಾದರೂ ಡಾಲಿ ಸುದ್ದಿಯಲ್ಲಿರುತ್ತಾರೆ. ಅದಕ್ಕೆ ಕಾರಣ ಹುಡುಕುತ್ತ ಹೊರಟರೆ, ಈ ಜೋಡಿ ಸಾಲು ಸಾಲು ಸಿನಿಮಾಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿರುವುದು. ಸೋಷಿಯಲ್‌ ಮೀಡಿಯಾದಲ್ಲಿ ಇಷ್ಟು ದಿನ ನಿಮ್ಮ ಮತ್ತು ಅಮೃತಾ ನಡುವೆ ಏನೋ ನಡೆಯುತ್ತಿದೆ ಎಂದು ಅಭಿಮಾನಿಗಳು ಈ ಪ್ರಶ್ನೆ ಕೇಳುತ್ತಿದ್ದರು. ಇದೀಗ ಕಿಚ್ಚ ಸುದೀಪ್‌ ಸರದಿ. ಪರೋಕ್ಷವಾಗಿ ವೇದಿಕೆ ಮೇಲೆಯೇ ಈ ಜೋಡಿಯನ್ನು ಕಿಚಾಯಿಸಿದ್ದಾರೆ ಸುದೀಪ್.‌

ಟ್ರೆಂಡಿಂಗ್​ ಸುದ್ದಿ

‘ಪೌಡರ್‌’ ಕೊಟ್ಟು ಪವರ್‌ ಹೆಚ್ಚಿಸಲು ಹೊರಟ ಗುಲ್ಟು ನಿರ್ದೇಶಕ ಜನಾರ್ದನ್‌ ಚಿಕ್ಕಣ್ಣ; ನಗು ಉಕ್ಕಿಸುವ ಟೀಸರ್‌ ಬಿಡುಗಡೆ

ಶಿಳ್ಳೆ, ಕೇಕೆ, ಚಪ್ಪಾಳೆ.. ಬೆಳ್ಳಿತೆರೆ ಮೇಲೆ ಮತ್ತೆ ಮಿನುಗಿದ ಕಲ್ಟ್‌ ಕ್ಲಾಸಿಕ್‌ A ಚಿತ್ರ; ಥಿಯೇಟರ್‌ ಮುಂದೆ ಹಬ್ಬ ಮಾಡಿದ ಉಪ್ಪಿ ಫ್ಯಾನ್ಸ್

ನಮ್ಮ ಚಿತ್ರದ ಹೆಸರು ದಿ ಜಡ್ಜ್‌ಮೆಂಟ್‌ ಆಗಿರಬಹುದು, ಪ್ರೇಕ್ಷಕರು ಕೊಡುವ ಜಡ್ಜ್‌ಮೆಂಟೇ ನಮಗೆ ಅಂತಿಮ; ರವಿಚಂದ್ರನ್

ಕೊನೆಗೂ ಮದುವೆ ಮುನ್ಸೂಚನೆ ನೀಡಿ, ಫ್ಯಾನ್ಸ್‌ ತಲೆಗೆ ಹುಳ ಬಿಟ್ಟ ಡಾರ್ಲಿಂಗ್‌ ಪ್ರಭಾಸ್‌; ಅಷ್ಟಕ್ಕೂ ಹುಡುಗಿ ಯಾರಿರಬಹುದು?

ಹೌದು, ಸ್ಯಾಂಡಲ್‌ವುಡ್‌ ಡಾಲಿ ಧನಂಜಯ್‌ ಇದೀಗ ‘ಗುರುದೇವ್‌ ಹೊಯ್ಸಳ’ ಸಿನಿಮಾ ಬಿಡುಗಡೆಯ ಖುಷಿಯಲ್ಲಿದ್ದಾರೆ. ಪ್ರಚಾರ ಕೆಲಸವನ್ನು ತುಸು ಬಿರುಸಾಗಿಯೇ ಮಾಡುತ್ತಿದ್ದಾರೆ. ಈಗಾಗಲೇ ಟೀಸರ್‌ ಮೂಲಕ ಸುದ್ದಿ ಮಾಡಿದ್ದ ಹೊಯ್ಸಳ, ಈಗ ಟ್ರೇಲರ್‌ ಹೊತ್ತು ಬಂದು ಸದ್ದು ಮಾಡುತ್ತಿದ್ದಾನೆ. ವಿಶೇಷ ಏನೆಂದರೆ, ಈ ಟ್ರೇಲರ್‌ ಅನ್ನು ಇತ್ತೀಚೆಗಷ್ಟೇ ನಟ ಕಿಚ್ಚ ಸುದೀಪ್‌ ರಿಲೀಸ್‌ ಮಾಡಿ ತಂಡಕ್ಕೆ ಶುಭಕೋರಿದ್ದಾರೆ. ಈ ವೇಳೆ ವೇದಿಕೆ ಮೇಲೆಯೇ ಧನಂಜಯ್‌ ಮತ್ತು ಅಮೃತಾ ಅಯ್ಯಂಗಾರ್‌ ಅವರ ಕಾಲೆಳೆದಿದ್ದಾರೆ..

ಸುದೀಪ್‌ ಏನಂದ್ರು…

"ಅಮೃತಾ ಅವ್ರು ವೇದಿಕೆ ಮೇಲೆ ಬಂದು ಸಿನಿಮಾ ಬಗ್ಗೆ ಹೆಚ್ಚು ಮಾತನಾಡದೆ, ಧನಂಜಯ್‌ ಬಗ್ಗೆ ಮಾತನಾಡಿದ್ರಿ. ಪಾತ್ರಕ್ಕೆ ಹೊಗಳುತ್ತಿದ್ರೋ, ವೈಯಕ್ತಿಕವಾಗಿ ಹೊಗಳುತ್ತಿದ್ರೋ ಗೊತ್ತಿಲ್ಲ. ಆದ್ರೆ ನೀವು ಮಾತ್ರ ತುಂಬ ಖುಷಿಯಲ್ಲಿದ್ರಿ. ಇಷ್ಟೆಲ್ಲ ನೀವು ಹೇಳಿದರೂ ನಿಮ್ಮ ಬಗ್ಗೆ ಧನಂಜಯ್‌ ಏನೂ ಹೇಳಲಿಲ್ಲ. ನನಗಿದು ಕೊಂಚ ಬೇಸರ ಅನಿಸಿತು. ಈ ವೇದಿಕೆ ಮೇಲೆ ಧನಂಜಯ್‌ ಚೆನ್ನಾಗಿ ಕಾಣ್ತಿದ್ದಾರೆ, ಲುಕ್‌ ಚೆನ್ನಾಗಿದೆ.. ಎಂದು ಅಮೃತಾ ನಾಲ್ಕು ಸಲ ಮೆನ್ಷನ್‌ ಮಾಡಿದ್ರು. ಆದ್ರೆ, ಧನಂಜಯ್‌ ಮಾತ್ರ ಹೆಚ್ಚೆನೂ ಹೊಗಳಲಿಲ್ಲʼ ಎಂದರು.

ಇದಕ್ಕೆ ಪ್ರತಿಯಾಗಿ ಪ್ರತಿಕ್ರಿಯೆ ನೀಡಿದ ಧನಂಜಯ್, “ನಾನೂ ಮತ್ತು ಅಮೃತಾ ಒಟ್ಟಿಗೆ ಮೂರು ಸಿನಿಮಾ ಮಾಡಿದ್ದೇವೆ. ಅದ್ಬುತವಾಗಿ ಅಭಿನಯಿಸಿದ್ದಾರೆ.. ಎನ್ನುತ್ತಿದ್ದಂತೆ, ಮತ್ತೆ ಮಧ್ಯೆ ಪ್ರವೇಶಿಸಿದ ಸುದೀಪ್‌, ”ನೀವೇಕೆ ಬರೀ ಧನಂಜಯ್‌ ಜತೆ ನಟಿಸ್ತೀರಾ? ಎಂದು ಅಮೃತಾಗೆ ಪ್ರಶ್ನಿಸಿದರು. ಇದಕ್ಕೆ ಪ್ರತಿಯಾಗಿ, ಸರ್‌.. ಅದನ್ನು ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಕೇಳಿ" ಎಂದರು ಧನಂಜಯ್.‌

"ಬೇರೆ ಕಲಾವಿದರಿಗೂ ಡೇಟ್ಸ್‌ ಕೊಡಿ, ಬೇರೆಯವರ ಜತೆಗೂ ಸಿನಿಮಾ ಮಾಡಿ. ಮೂರ್ಮೂರು ಸಿನಿಮಾ ಧನಂಜಯ್‌ ಜತೆಗೆ ಮಾಡಿದ್ರೆ, ಬೇರೆಯವ್ರಿಗೆ ನಿಮ್ಮ ಡೇಟ್ಸ್‌ ಹೇಗೆ ಸಿಗಬೇಕು? ಅಲ್ವಾ. ಇಷ್ಟೆಲ್ಲ ಆದ್ರೂ ನಿಮ್ಮ ಬಗ್ಗೆ ಧನಂಜಯ್‌ ಹೊಗಳುತ್ತಿಲ್ಲ. ನಮ್ಮೊಟ್ಟಿಗೆ ಕೆಲಸ ಮಾಡಿದ್ರೆ, ಅರ್ಧ ಗಂಟೆ ಹೊಗಳುತ್ತಿದ್ವಿ" ಎಂದು ಕಿಚ್ಚ ಸುದೀಪ್‌ ಹೇಳಿದ್ದಾರೆ.

ಇದನ್ನೂ ಓದಿ

Chetan Ahimsa: ಹಿಂದುತ್ವದ ಬಗ್ಗೆ ಟ್ವೀಟ್‌; ನಟ ಚೇತನ್‌ಗೆ 14 ದಿನ ನ್ಯಾಯಾಂಗ ಬಂಧನ, ಪರಪ್ಪನ ಅಗ್ರಹಾರಕ್ಕೆ ಶಿಫ್ಟ್‌..

Chetan ahimsa 14 days judicial custody: ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಹಂಚಿಕೊಂಡ ಕಾರಣ ನಟ ಚೇತನ ಅಹಿಂಸಾ ಅವರನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿ, ಕೋರ್ಟ್‌ಗೆ ಹಾಜರುಪಡಿಸಿದ್ದರು. ಇದೀಗ ಚೇತನ್‌ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕೋರ್ಟ್‌ ಆದೇಶಿಸಿದೆ. ತೀರ್ಪಿನ ಹಿನ್ನೆಲೆಯಲ್ಲಿ ನಟ ಚೇತನ್‌ ಅವರನ್ನು ಪರಪ್ಪನ ಅಗ್ರಹಾರಕ್ಕೆ ಕರೆದೊಯ್ಯಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಮಾಹಿತಿ ನೀಡಿದ್ದಾರೆ. ಪೂರ್ತಿ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ